ವಿಷ ರಹಿತ ಆಹಾರದ ಅಹವಾಲಿಗೆ ದೇಶ ಕಾಯುತ್ತಿದೆ – ಆ ಶ್ರೀ ಆನಂದ್

January 4, 2020
12:23 PM

ಪುತ್ತೂರು: ವಿಷ ರಹಿತ‌ ಆಹಾರಕ್ಕೆ ಇಂದು‌ ಬೇಡಿಕೆ ಹೆಚ್ಚಾಗಿದೆ. ವಿಷ ರಹಿತ ಊಟ ಮಾಡುವ ದಿನ‌ಕ್ಕಾಗಿ ದೇಶದ ಜನ ಕಾಯುತ್ತಿದ್ದಾರೆ. ಈ ಬೇಡಿಕೆ ಪೂರೈಕೆಗೆ ಕೃಷಿಕರು ಸಜ್ಜಾಗಬೇಕು ಎಂದು‌ ಸಾವಯವ ಕೃಷಿ ಮಿಶನ್ ಅಧ್ಯಕ್ಷ ಆ ಶ್ರೀ ಆನಂದ ಹೇಳಿದರು.

ಅವರು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ‌ ವೇದಿಕೆಯಲ್ಲಿ ನವಚೇತನ ಸ್ನೇಹಸಂಗಮ,‌ ಜೇಸಿಐ ಪುತ್ತೂರು ವತಿಯಿಂದ ನಡೆಯುವ 2 ದಿನಗಳ ಸಾವಯವ ಹಬ್ಬ ಉದ್ಘಾಟಿಸಿ ಮಾತನಾಡಿದರು. ಇಂದು ಕಾಯಿಲೆ ಹೊತ್ತ ಮನೆಗಳ ಸಂಖ್ಯೆ ಹೆಚ್ಚಾಗುವುದು ಏಕೆ ? ಕಾಯಿಲೆಗಳು ಬರುವುದೇಕೆ ?
ಊಟದ ಬಟ್ಟಲು ವಿಷವಾಗಲು ಕಾರಣ ವಿಷ ಸಿಂಪಡಣೆ ಕಾರಣವಾಗಿದೆ. ಇದರ‌ ಬದಲಾವಣೆಗೆ
ಸರಕಾರ, ಸಂಘಸಂಸ್ಥೆಗಳಿಂದಲೇ ಸಾಧ್ಯವಿಲ್ಲ,‌ ಕೃಷಿಕರಿಂದ ಮಾತ್ರಾ ಸಾಧ್ಯ ಎಂದರು.‌ಈ ಬಗ್ಗೆ
ಗಂಭೀರ ಯೋಚನೆ ಅಗತ್ಯ ಎಂದರು.

ಶಾಸಕ ಸಂಜೀವ ಮಠಂದೂರು ಮಾತನಾಡಿ ದೇಶ ಜನರ ಆರೋಗ್ಯ ಕಾಪಾಡುವಲ್ಲಿ ಕೃಷಿಕರ ಪಾತ್ರ ಬಹುಮುಖ್ಯವಾಗಿದೆ.‌ಸಾವಯವ ಕೃಷಿ ಹಾಗೂ ಸ್ವಾವಲಂಬನೆಯ ಹಾದಿಯಲ್ಲಿ ‌ಸಾಗಬೇಕಾಗಿದೆ ಎಂದರು.
ಈ ಸಂದರ್ಭ ನಾ.ಕಾರಂತ ಪೆರಾಜೆ‌ ಅವರ ಜೀವಧಾನ್ಯ ಕೃತಿ ಲೋಕಾರ್ಪಣೆ ಮಾಡಲಾಯಿತು.

ಇದೇ ವೇಳೆ ನವತೇಜ ಟ್ರಸ್ಟ್‌ ಗೆ ಚಾಲನೆ ನೀಡಲಾಯಿತು. ಭತ್ತದ ಕೃಷಿಕ ದಂಪತಿಗಳಾದ ಉಷಾ ಮೆಹಂದಳೆ ಮತ್ತು ಸೀತಾರಾಮ‌ ಮೆಹಂದಳೆ ಅವರನ್ನು‌ ಸನ್ಮಾನಿಸಲಾಯಿತು.

ಜೇಸಿಐ ವಲಯ ಸಂಯೋಜಕರಾದ ಬಾದ್ ಶಾ ಸಂಬಾರತೋಟ,‌ಕೃಷಿಕರಾದ ಉಷಾ ಮೆಹಂದಳೆ ಮಾತನಾಡಿದರು.

ನವಚೇತನ‌ ಸ್ನೇಹ ಸಂಗಮ ಅಧ್ಯಕ್ಷ‌ ಅನಂತ ಪ್ರಸಾದ್ ನೈತಡ್ಕ‌ ಟ್ರಸ್ಟ್‌ ಬಗ್ಗೆ ಮಾತನಾಡಿದರು.

ಸುದಾನ ಶಿಕ್ಷಣ ಸಂಸ್ಥೆ ಸಂಚಾಲಕ ವಿಜಯ ಹಾರ್ವಿನ್ ಸಭಾಧ್ಯಕ್ಷತೆ ವಹಿಸಿದ್ದರು.

ನವಚೇತನ‌ ಸ್ನೇಹ ಸಂಗಮ ಕಾರ್ಯದರ್ಶಿ ಸುಹಾಸ ಮರಿಕೆ ಸ್ವಾಗತಿಸಿದರು. ಕೃತಿಯ ಬಗ್ಗೆ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ಮಾತನಾಡಿದರು. ‌ಪತ್ರಕರ್ತ ನಾ.ಕಾರಂತ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು.ಜೇಸಿಐ ಉಪಾಧ್ಯಕ್ಷ ನವೀನ್ ಕೊಯಿಲ ವಂದಿಸಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಚಂಡಮಾರುತಗಳು ಏಕೆ ಕಡಿಮೆಯಾಗುತ್ತಿವೆ? ಎಲ್ ನಿನೋದಿಂದ ಮಳೆ–ಬಿಸಿಲಿನ ಚಿತ್ರಣ ಬದಲಾಗುತ್ತಿದೆಯೇ?
September 11, 2026
8:34 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 11-09-2026 | ಸೆ.12ರಿಂದ ಬಿಸಿಲು ಹೆಚ್ಚಳ, ಕೆಲವೆಡೆ ಮಳೆ ಸಾಧ್ಯತೆ
September 11, 2026
4:00 PM
by: ಸಾಯಿಶೇಖರ್ ಕರಿಕಳ
ಕ್ಯಾಂಪ್ಕೊ ದಾಖಲೆ ಸಾಧನೆ – ₹3,735 ಕೋಟಿ ವಹಿವಾಟು, ₹49.62 ಕೋಟಿ ಲಾಭ – 14% ಡಿವಿಡೆಂಡ್ ಶಿಫಾರಸು
September 11, 2026
10:42 AM
by: ದ ರೂರಲ್ ಮಿರರ್.ಕಾಂ
ಸಂಪತ್ತು ಹೆಚ್ಚಾದರೆ ಬದುಕು ಶ್ರೀಮಂತವಾಗುತ್ತದೆಯೇ..?
September 10, 2026
10:45 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror