ಶೂನ್ಯ ನೆರಳು ದಿನ | ಖಗೋಳ ವಿದ್ಯಮಾನ ನೋಡಲು-ಅನುಭವಿಸುವ ದಿನ ನಾಳೆ | ಎ.24 ಮಂಗಳೂರು – 25 ರಂದು ಉಡುಪಿ |

April 23, 2020
1:44 PM

ಮಂಗಳೂರು: ಪರಿಸರ ವೀಕ್ಷಣೆ ಮಾಡುವ, ಖಗೋಳದ ಬದಲಾವಣೆ ತಿಳಿಯುವ ಮಂದಿಗೆ ಎ.24 ಹಾಗೂ 25 ಆಸಕ್ತಿಯ ದಿನ. ಅಂದು ಕೆಲ ಹೊತ್ತು ಶೂನ್ಯ ನೆರಳು ದಿನ ಅಥವಾ ಜೀರೋ ಶ್ಯಾಡೋ ಡೇ. ಮಂಗಳೂರಿನಲ್ಲಿ ಎ.24 ರಂದು ಅಪರಾಹ್ನ 12.28 ಕ್ಕೆ ಹಾಗೂ ಉಡುಪಿಯಲ್ಲಿ ಎ.25 ರಂದು ಅಪರಾಹ್ನ 12.29 ಕ್ಕೆ ವೀಕ್ಷಿಸಬಹುದಾಗಿದೆ.

ಪ್ರತೀ ವರ್ಷವೂ ಈ ವಿದ್ಯಮಾನ ನಡೆಯುತ್ತದೆ. ಈಗ ಲಾಕ್ಡೌನ್ ಇರುವುದರಿಂದ ಎಲ್ಲರೂ ಈ ವಿದ್ಯಮಾನವನ್ನು ಅನುಭವಿಸಬಹುದು. ಪ್ರತೀ ವರ್ಷದಲ್ಲಿ ಎಪ್ರಿಲ್‌ ಹಾಗೂ ಆಗಸ್ಟ್‌ ತಿಂಗಳಲ್ಲಿ ಎರಡು ಬಾರಿ ಶೂನ್ಯ ನೆರಳು ಬರುತ್ತದೆ.  ಕರಾವಳಿಯಲ್ಲಿ ಎಪ್ರಿಲ್‌ 24 ಹಾಗೂ 25 ರಂದು ಶೂನ್ಯ ನೆರಳು ಸಂಭವಿಸುವ ದಿನ. ಮಂಗಳೂರಿನಲ್ಲಿ ಎ.24ರಂದು ಅಪರಾಹ್ನ 12.28ಕ್ಕೆ ಹಾಗೂ ಆಗಸ್ಟ್‌ನಲ್ಲಿ 18 ರಂದ ಅಪರಾಹ್ನ 12.33ಕ್ಕೆ ವೀಕ್ಷಿಸಬಹುದು. ಉಡುಪಿಯಲ್ಲಿ ಎ.25ರಂದು ಅಪರಾಹ್ನ 12.29ಕ್ಕೆ ಹಾಗೂ ಆಗಸ್ಟ್‌ 17 ರಂದು ಅಪರಾಹ್ನ 12.34ಕ್ಕೆ ವೀಕ್ಷಿಸಬಹುದಾಗಿದೆ.

ಬೆಂಗಳೂರಿನಲ್ಲಿ  12:17 ಕ್ಕೆ ವೀಕ್ಷಿಸಬಹುದು. ಮೂಡುಬಿದ್ರೆ, ಬಂಟ್ವಾಳ, ಸಕಲೇಶಪುರ ಹಾಗೂ ಹಾಸನದಲ್ಲಿ ಸಹ ಎ.24ರಂದು ಶೂನ್ಯ ನೆರಳು ದಿನ ಇರಲಿದೆ.

ಈ ಅಪರೂಪದ ಕ್ಷಣವನ್ನು ನೋಡಲು ಮರೆಬೇಡಿ. ಸಾಮಾನ್ಯವಾಗಿ ಬೆಳಗಿನಿಂದ ಮಧ್ಯಾಹ್ನವಾಗುತ್ತಲೇ ನೆರಳಿನ ಉದ್ದ ಕಡಿಮೆಯಾಗುತ್ತಾ, ಸಂಜೆಯಾದಂತೆ ಹೆಚ್ಚುತ್ತಾ ಹೋಗುತ್ತದೆ. ಆದರೆ ಈ ಶೂನ್ಯ ನೆರಳಿನ ದಿನದಂದು ನೆರಳು ಅಕ್ಕಪಕ್ಕದಲ್ಲಿ ಎಲ್ಲೂ ಕಾಣಿಸುವುದಿಲ್ಲ. ಆಕಾಶದಲ್ಲಿ ಸೂರ್ಯ ಲಂಬವಾಗಿ ಚಲಿಸುವಾಗ ನಮ್ಮ ನೆರಳು ನಮ್ಮ ಪಾದಕ್ಕೆ ಹೊಂದಿಕೊಂಡಂತೆ ರಚನೆಯಾಗುತ್ತದೆ.   ಆಗ ನಮ್ಮ ನೆರಳು ಸರಿಯಾಗಿ ನಮ್ಮ ಕೆಳಗೆ ಇರುತ್ತದೆ. ಹಾಗಾಗಿ ಅದು ಕಾಣುವುದಿಲ್ಲ. ಇದನ್ನು ಶೂನ್ಯ ನೆರಳು ಎಂದು ಕರೆಯಲಾಗುತ್ತದೆ.

ಕರ್ಕಾಟಕ ವೃತ್ತದ ಮತ್ತು ಮಕರ ಸಂಕ್ರಾಂತಿ ವೃತ್ತದ ನಡುವೆ ಇರುವ ಪ್ರದೇಶಗಳಲ್ಲಿ ವರ್ಷದಲ್ಲಿ ಎರಡು ಬಾರಿ ‘ಶೂನ್ಯ ನೆರಳಿನ ದಿನ’ ಕಾಣಬಹುದು. ಅಂದರೆ ಭೂಮಿ ಸೂರ್ಯನ ಸುತ್ತ ಚಲಿಸುತ್ತಿರುವಾಗ ಅದು 23.5 ಡಿಗ್ರಿ ದಕ್ಷಿಣ ಅಕ್ಷಾಂಶ (ಮಕರ ಸಂಕ್ರಾಂತಿ ವೃತ್ತ) ಮತ್ತು 23.5 ಡಿಗ್ರಿ ಉತ್ತರ (ಕರ್ಕಾಟಕ ವೃತ್ತ) ಇವುಗಳ ನಡುವೆ ಹಾದು ಹೋಗುವ ಸಂದರ್ಭದಲ್ಲಿ ಶೂನ್ಯ ನೆರಳಿನ ದಿನ ಉಂಟಾಗುತ್ತದೆ. ಈ ವೃತ್ತಗಳಿಂದಾಚೆ ಇರುವ ಪ್ರದೇಶಗಳಲ್ಲಿ ಶೂನ್ಯ ನೆರಳು ಉಂಟಾಗುವುದೇ ಇಲ್ಲ ಎಂದು ಖಗೋಳ ವಿಜ್ಞಾನಿಗಳು ಹೇಳುತ್ತಾರೆ.

ಹೀಗೂ ಗುರುತಿಸಬಹುದು : ಶೂನ್ಯ ನೆರಳಿನ ದಿನ ಗಮನಿಸಲು ಒಂದು  ಲೋಟ ಅಥವಾ ಯಾವುದಾದರೂ ಉದ್ದವಾದ ಕಂಬವನ್ನು  ಬಿಸಿಲಿನಲ್ಲಿ ನೆಟ್ಟು ಇದನ್ನು ಪತ್ತೆ ಹಚ್ಚಬಹುದಾಗಿದೆ. ಇಲ್ಲಿ ಅವುಗಳ ನೆರಳು ಅಕ್ಕಪಕ್ಕ ಎಲ್ಲೂ ಬೀಳುವುದಿಲ್ಲ. ಪ್ರತಿಯೊಬ್ಬರು ಇದನ್ನು ಪರೀಕ್ಷಿಸಬಹುದು.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಎತ್ತುಗಳಿಂದ ಡ್ರೋನ್‌ವರೆಗೆ… ಇದು ಭಾರತದ ಕೃಷಿಯ 79 ವರ್ಷಗಳ ಪಯಣ..!
August 15, 2026
7:42 AM
by: ದ ರೂರಲ್ ಮಿರರ್.ಕಾಂ
ತೀವ್ರ ವಿರೋಧದ ಹಿನ್ನೆಲೆ – ರಾಜ್ಯದಲ್ಲಿ ಗುಟ್ಕಾ ನಿಷೇಧ ಹಿಂತೆಗೆದುಕೊಳ್ಳಲು ಸರ್ಕಾರ ನಿರ್ಧಾರ – ಹೊರಬೀಳದ ಅಧಿಕೃತ ಆದೇಶ..!
August 15, 2026
7:18 AM
by: ದ ರೂರಲ್ ಮಿರರ್.ಕಾಂ
ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?
August 14, 2026
7:14 AM
by: ಮಹೇಶ್ ಪುಚ್ಚಪ್ಪಾಡಿ
ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ
August 13, 2026
2:01 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror