*ಹುಚ್ಚನು ನಾನಲ್ಲ…* 

May 3, 2019
7:30 AM
ಹುಟ್ಟಿದಾಗ ಹುಚ್ಚನು ನಾನಲ್ಲ..
ನನ್ನಂತ ಸುಖಿ ಬೇರಾರು ಇರಲಿಲ್ಲ..
ಕಣ್ಣಿಗೆ ಕಂಡದ್ದನ್ನೇ ಸತ್ಯ ಅಂದುಕೊಂಡೆ ನಾನು
ಸುಖವೂ ಹೋಗಿ ದುಃಖ ಬಂತು ಮೋಸ ಹೋದೆ ನಾನು ||1||
ಜನರಾರು ಸೇರಿಸಲಿಲ್ಲ ಅವರ ಹತ್ತಿರ ನನ್ನನು
ಬೀದಿಯಲ್ಲಿ ಹುಚ್ಚನಾಗಿ ಅಲೆದಾಡಿದೆ ನಾನು
ನಾಯಿತಿಂದುಳಿದ ಆಹಾರವೇ ಮೃಷ್ಟಾನ್ನವೆಂದುಕೊಂಡೆ
ಹರಕಲು‌‌ಗೋಣಿಯಿಂದ ಮಾನ ಮುಚ್ಚಿಕೊಂಡೆ ||2||
ಹುಟ್ಟುತ್ತಾ ನಾನು ಹುಚ್ಚನಲ್ಲ,ಜನ ನನ್ನ ಹುಚ್ಚ ಅಂದ್ರು
ನನ್ನವರೇ ನನ್ನ ಬೀದಿಗಟ್ಟಿ, ಇದೇ ನಿನ್ನ ಜಾಗ ಅಂದ್ರು
ಪುಟಾಣಿ ಮಕ್ಕಳು‌‌ ನನ್ನ ನೋಡಿ ಕಲ್ಲು ಹೊಡೆದು ಬಿಟ್ರು
ಹಣೇಲಿ ಸುರಿದ ರಕ್ತ ನೋಡಿ,ಜನ ಕೇಕೇ ಹಾಕಿ ನಕ್ರು ||3||
ಹುಟ್ಟುತ್ತಾ ನಾನು ಹುಚ್ಚನಲ್ಲ,ನಿಮ್ಮಂತೆ ನಾನಿದ್ದೆ ಅಂದೆ
ಯಾರಿಗೂ ನನ್ನ ಮಾತು ಕೇಳಲೇ ಇಲ್ಲ
ಧಾರಕಾರ ಸುರಿದ  ಮಳೆಯಲಿ ಕಣ್ಣೀರು ಕೂಡಿ ಹೋಯ್ತು
ಒಂದಿಬ್ಬರು ಸಾಂತ್ವಾನ ಕೇಂದ್ರ ಸೇರಿಸಿ ಬಿಟ್ರು ||4||
ಹುಚ್ಚನಾದ ನಾನು ಮತ್ತೆ ಎಲ್ಲರಂತಾಗಿ ಬಿಟ್ಟೆ
ಜನ ಮತ್ತೆ ನನ್ನ ಸೇರಿಸ್ಕೋತಾರೆ ಅಂದುಕೊಂಡು ಬಿಟ್ಟೆ
ಎಲ್ರೂ ಮತ್ತೆ ಹುಚ್ಚ ಎಂದು ಕರೆದು ಬಿಟ್ರು
ಹುಚ್ಚ ಅನ್ನೋ ಹೆಸರೇ ನನಗೆ ಖಾಯಂ ಆಗೋಯ್ತು… ||5||
‌‌
Advertisement
Advertisement

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

ತಾಪಮಾನ – ಬರಗಾಲ – ಪೆನ್ ಡ್ರೈವ್ ಮತ್ತು ಸೆಕ್ಸ್… ಯಾವುದು ನಮ್ಮ ಆದ್ಯತೆಯಾಗಬೇಕು……. |
May 2, 2024
6:51 AM
by: ವಿವೇಕಾನಂದ ಎಚ್‌ ಕೆ
ತಾಪಮಾನದಿಂದ ಅಡಿಕೆ ಕೃಷಿ ರಕ್ಷಣೆ | ಗೋವು ಹಾಗೂ ಗೋಉತ್ಪನ್ನ ಪರಿಣಾಮಕಾರಿ ಹೇಗೆ..? | ಗೋ ಆಧಾರಿತ ಕೃಷಿಯ ಬಗ್ಗೆ ಜಾಗೃತಿ ಏಕೆ ಬೇಕು ?
May 2, 2024
6:38 AM
by: ಮುರಳಿಕೃಷ್ಣ ಕೆ ಜಿ
ಜೀವಕ್ಕೇ ಅಮೃತ – ಜೀವಾಮೃತ | ಜೀವಾಮೃತವು ಗಿಡ-ಮರಗಳನ್ನು ಬಿಸಿ ಮತ್ತು ಬರ, ನೀರಿನ ಕೊರತೆಯ ಸಹಿಷ್ಣುತೆ ಹೆಚ್ಚಿಸುತ್ತದೆ | |
May 1, 2024
5:44 PM
by: The Rural Mirror ಸುದ್ದಿಜಾಲ
ನಮ್ಮ ಮಕ್ಕಳಿಗಾಗಿ ಒಂದು ನೀತಿ ಕಥೆ | ಸಾಧ್ಯವಾದರೆ ಇದನ್ನು ಮಕ್ಕಳಿಗೆ ಓದಿ ಹೇಳಿ ಅಥವಾ ಓದಲು ಹೇಳಿ |
May 1, 2024
4:34 PM
by: ವಿವೇಕಾನಂದ ಎಚ್‌ ಕೆ

You cannot copy content of this page - Copyright -The Rural Mirror