ಇಬ್ಬನಿ ಸುಳ್ಯ: ಪ್ರಬಂಧ ಸ್ಪರ್ದೆ

January 27, 2020
11:08 AM

ಸುಳ್ಯ: ಇಬ್ಬನಿ ಸುಳ್ಯ ಕನ್ನಡ ರಾಜ್ಯೋತ್ಸವದ ಸಲುವಾಗಿ ಪ್ರಸ್ತುತಪಡಿಸಿದ ಸುಳ್ಯ ತಾಲೂಕು ಮಟ್ಟದ ಪ್ರಬಂಧ ಸ್ಪರ್ದೆಯ ಬಹುಮಾನ ವಿತರಣೆ ಕಾರ್ಯಕ್ರಮ ಖಾದರ್ ಜಟ್ಟಿಪಳ್ಳ ಇವರ ಅಧ್ಯಕ್ಷತೆಯಲ್ಲಿ ಗಾಂಧೀನಗರದಲ್ಲಿ ನಡೆಯಿತು.

‘ಕನ್ನಡ ಬಾಷೆಯ ಬೆಳವಣಿಗೆಯಲ್ಲಿ ಸಂಘಟನೆಗಳ ಪಾತ್ರ’ ಎಂಬ ವಿಷಯದಲ್ಲಿ ಪ್ರಬಂಧಗಳನ್ನು ಆಹ್ವಾನಿಸಲಾಗಿತ್ತು. 51 ಪ್ರಬಂಧಗಳು ಸ್ವೀಕೃತಗೊಂಡು 15 ಪ್ರಬಂಧಗಳು ಬಹುಮಾನಕ್ಕೆ ಆಯ್ಕೆಯಾಗಿತ್ತು.

ಪ್ರಥಮ ಬಹುಮಾನವನ್ನು ಶ್ರೀ ಶಾರದಾ ಮಹಿಳಾ ಪದವಿ ಪೂರ್ವ ಕಾಲೇಜು ವಿಧ್ಯಾರ್ಥಿನಿ ಫಾತಿಮತ್ ಶಮೀರಾ ಪಡೆದುಕೊಂಡಿದ್ದಾರೆ. ದ್ವಿತೀಯ ಬಹುಮಾನವನ್ನು ಕೆ.ಎಸ್.ಎಸ್ ಪ್ರಥಮ ದರ್ಜೆ ಕಾಲೇಜು ಪ್ರಥಮ ವರ್ಷ ಬಿ.ಕಾಂ ವಿಧ್ಯಾರ್ಥಿನಿ ಸಿಂಧು ಬೈರವಿ ದೇರಳ ಪಡೆದರು.

ಉತ್ತಮ ಬರಹ, ಪ್ರೋತ್ಸಾಹಕ ಬಹುಮಾನಕ್ಕೆ 13 ಸ್ಪರ್ಧಾರ್ಥಿಗಳ ಬರಹ ಆಯ್ಕೆಮಾಡಿ ಬಹುಮಾನ ವಿತರಿಸಲಾಯಿತು. ಅರ್ಫಿನಾ ಆಸಿಫ್ ಪನ್ನೆ, ರಮ್ಯ ಎಂ ಮರ್ಕಂಜ ಎಸ್ ಆರ್ ಓಲ್ಡ್ ಗೇಟ್, ಆಶಯ್ ಕೆ.ಎ ಅಮರ ಜ್ಯೋತಿ ಕಾಲೇಜು , ಫಾರಿಸ ಜಿ.ಎಚ್, ಮಹಮ್ಮದ್ ರಿಲ್ವಾನ್ ಜಿ, ಫಾತಿಮತ್ ಝಿಹಾನ ಕೆ.ಎಚ್, ಪರಿಷ್ಮ ಎ.ಪಿ ದ್ವಿತೀಯ ವಿಜ್ಞಾನ ವಿಭಾಗ ನೆ.ಸ್ಮಾ.ಪ.ಪೂ ಕಾಲೇಜು ಅರಂತೋಡು, ಜಾಹಿರ್ ಪೆರಾಜೆ, ಲಿಖಿತ ಎಂ ಸ.ಪ.ಪೂ.ಕಾ ಸುಳ್ಯ, ಹಸೀನ ಎ.ಎಂ ಜಯನಗರ, ಸೌಜನ್ಯ ಎಸ್ ಪ್ರಥಮ ಪಿ.ಯು.ಸಿ ವಾಣಿಜ್ಯ ಬಿಭಾಗ ಶ್ರೀ ಶಾರದಾ ಮಹಿಳಾ ಕಾಲೇಜು ಸುಳ್ಯ, ಹನ್ನತ್ ಸಿದ್ದೀಕ್ ಜಯನಗರ ಪಡೆದಿರುತ್ತಾರೆ.

ಮುಖ್ಯ ಅಥಿತಿಗಳಾಗಿ ಹರೀಶ್ ಬಂಟ್ವಾಳ್, ಬೀಮರಾವ್ ವಾಸ್ಠರ್, ಹರ್ಷಿತ್ ಮಿತ್ತಡ್ಕ, ಶರೀಫ್ ಜಟ್ಟಿಪಳ್ಳ, ರಷೀದ್ ಜಟ್ಟಿಪಳ್ಳ, ಆಸಿಫ್ ಪನ್ನೆ ಹಾಗೂ ನಾಸಿರ್ ಸಿ.ಎ ಉಪಸ್ಥಿತರಿದ್ದರು. ಹಜರತ್ ಖಲೀಲ್ ನಿರೂಪಿಸಿ ಸ್ವಾಗತಿಸಿ ವಂದಿಸಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಗ್ರಾಮೀಣ ಸಂಪರ್ಕಕ್ಕೆ 15 ಸಾವಿರ ಹೊಸ ಬಸ್‌ಗಳು: ಸಾರಿಗೆ ಸಚಿವ
August 16, 2026
7:30 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 15-08-2026 | ಕರಾವಳಿಯಲ್ಲಿ ಮುಂದಿನ 10 ದಿನವೂ ಮಳೆ ಚದುರಿಕೆ; ಒಳನಾಡಿನಲ್ಲಿ ಆಗಸ್ಟ್ 18–19ರಿಂದ ಮಳೆ ಸಾಧ್ಯತೆ
August 15, 2026
2:07 PM
by: ಸಾಯಿಶೇಖರ್ ಕರಿಕಳ
ಎತ್ತುಗಳಿಂದ ಡ್ರೋನ್‌ವರೆಗೆ… ಇದು ಭಾರತದ ಕೃಷಿಯ 79 ವರ್ಷಗಳ ಪಯಣ..!
August 15, 2026
7:42 AM
by: ದ ರೂರಲ್ ಮಿರರ್.ಕಾಂ
ತೀವ್ರ ವಿರೋಧದ ಹಿನ್ನೆಲೆ – ರಾಜ್ಯದಲ್ಲಿ ಗುಟ್ಕಾ ನಿಷೇಧ ಹಿಂತೆಗೆದುಕೊಳ್ಳಲು ಸರ್ಕಾರ ನಿರ್ಧಾರ – ಹೊರಬೀಳದ ಅಧಿಕೃತ ಆದೇಶ..!
August 15, 2026
7:18 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror