ಸುಳ್ಯ: ಪ್ರಯಾಣಿಕರೊಬ್ಬರು ಪುತ್ತೂರು- ಸುಬ್ರಹ್ಮಣ್ಯ ರಾಜಹಂಸ ಬಸ್ಸಲ್ಲಿ ಕೂತಿದ್ದರು. ಅದು ಬೆಂಗಳೂರಿಗೆ ತೆರಳುವ ಬಸ್ಸು. ಕೂತಿದ್ದಾಗ ಜಿರಲೆಯೊಂದು ಮೇಲಿಂದಲೇ ಓಡಿತು. ಪರವಾಗಿಲ್ಲ, ಮಳೆಗಾಲವಲ್ಲಾ ಇದೆಲ್ಲಾ ಇರುತ್ತೆ ಎಂದು ಸುಮ್ಮನೆ ಕುಳಿತರು. ಸ್ವಲ್ಪ ಹೊತ್ತಲ್ಲ ಇನ್ನಷ್ಟು ಜಿರಲೆ ಮೇಲೆಲ್ಲಾ ಓಡಲು ಶುರು ಮಾಡಿತು, ಸಹವಾಸವೇ ಬೇಡವೆಂದು ಬೇರೆ ಸೀಟಲ್ಲಿ ಕುಳಿತರು…!
ಮಳೆಗಾಲ ಜಿರಲೆ ಸೇರಿದಂತೆ ಸಣ್ಣಪುಟ್ಟ ಕೀಟಗಳು ಇದ್ದೇ ಇರುತ್ತದೆ. ಆದರೆ ಇಷ್ಟೊಂದು ಪ್ರಮಾಣದಲ್ಲಿ ಜಿರಲೆ ಇದೆ ಎಂದರೆ ಅದು ನಿರ್ಲಕ್ಷ್ಯವೇ ಸರಿ. ಅದೂ ಬೆಂಗಳೂರಿಗೆ ತೆರಳುವ ಬಸ್ಸಲ್ಲಿ ಈ ಪರಿಯಾಗಿ ಜಿರಲೆ ಇದೆ ಎಂದರೆ ಬೆಂಗಳೂರಿಗೆ ತೆರಳುವ ಪ್ರಯಾಣಿಕನ ಗೋಳು ಯಾರಿಗೆ ಹೇಳಿ..? ಹೀಗಾಗಿ ಕೆ ಎಸ್ ಆರ್ ಟಿ ಸಿ ಈ ಕಡೆಗೆ ಕೊಂಚ ಗಮನಹರಿಸಬೇಕು ಎಂಬುದು ಪ್ರಯಾಣಿಕರ ಒತ್ತಾಯ.
ಸ್ವಾತಂತ್ರ್ಯದ 79 ವರ್ಷಗಳ ಭಾರತದ ಪಯಣದಲ್ಲಿ ಕೃಷಿ -ಎತ್ತು-ನೇಗಿಲಿನಿಂದ ಡ್ರೋನ್, ಡಿಜಿಟಲ್ ಮಾಹಿತಿ…
ತೀವ್ರ ವಿರೋಧ ಹಾಗೂ ಅಡಿಕೆ ಬೆಳೆಗಾರರ ಮೇಲಿನ ಪರಿಣಾಮದ ಆತಂಕದ ಹಿನ್ನೆಲೆಯಲ್ಲಿ ರಾಜ್ಯದ…
ಗುಟ್ಕಾ–ಪಾನ್ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…
ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…
ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…