Advertisement
Political mirror

ಅವೈಜ್ಞಾನಿಕ ತೆರಿಗೆ ನೀತಿ ಸಹಕಾರಿ ಸಂಘಗಳು ಮುಚ್ಚುವ ಭೀತಿ- ವೆಂಕಪ್ಪ ಗೌಡ ಆತಂಕ

Share

ಸುಳ್ಯ: ಕೇಂದ್ರ ಸರಕಾರವು ತನ್ನ ಅವೈಜ್ಞಾನಿಕ ತೆರಿಗೆ ವಸೂಲಾತಿಯ ನೀತಿಯಿಂದ ಈ ತನಕ ನಮ್ಮನ್ನು ಆಳಿದ ಯಾವ ಸರಕಾರವು ವಿಧಿಸದ ತೆರಿಗೆಯನ್ನು ಸಹಕಾರಿ ಸಂಘಗಳ ವಹಿವಾಟಿನ ಮೇಲೆ ಹೇರಿದರ ಪರಿಣಾಮ ಇನ್ನು ಮುಂದೆ ಎಲ್ಲಾ ಸಹಕಾರಿ ಸಂಘಗಳು ತಮ್ಮ ವಹಿವಾಟಿನ ಲಾಭದ ಮೇಲೆ ಶೇಕಡಾ 33% ತೆರಿಗೆಯನ್ನು ಹೇರಿರುವುದು ಅತ್ಯಂತ ಶೋಚನೀಯ ಮತ್ತು ಖಂಡನೀಯ ಕ್ರಮವಾಗಿರುತ್ತದೆ. ಇದರಿಂದ ಸಹಕಾರಿ ಸಂಘಗಳು ಅತಂತ್ರವಾಗುವ ಭೀತಿ ಇದೆ ಎಂದು ಕೆ.ಪಿ.ಸಿ.ಸಿ.ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ಹೇಳಿದ್ದಾರೆ.

ಈಗಾಗಲೇ ವರ್ಷವೊಂದಕ್ಕೆ ಲಕ್ಷ ಗಟ್ಟಲೆ ಆದಾಯ ತೆರಿಗೆ ಪಾವತಿಸುವಂತೆ ಎಲ್ಲಾ ಸಹಕಾರಿ ಸಂಘಗಳಿಗೂ ನೋಟಿಸು ಜಾರಿಯಾಗಿರುತ್ತದೆ. ಇದಕ್ಕೆ ಉದಾಹರಣೆ ಎಂಬಂತೆ ಸುಳ್ಯ ತಾಲೂಕಿನ ಒಂದು ಸಹಕಾರಿ ಬ್ಯಾಂಕ್‌ಗೆ 2017-18ರ ಸಾಲಿನ ವ್ಯವಹಾರದ ಮೇಲೆ ಸುಮಾರು 80ಲಕ್ಷದಷ್ಟು ವರ್ಷವೊಂದಕ್ಕೆ ಆದಾಯ ತೆರಿಗೆ ಕಟ್ಟಲು ನೋಟಿಸು ನೀಡಿರುವುದು ಬಹಳ ಆತಂಕವನ್ನು ಸೃಷ್ಠಿಸಿದೆ. ವಾಸ್ತವವಾಗಿ ದುಡಿದ ಸಂಘದ ಸದಸ್ಯರಿಗೆ ಲಾಭಾಂಶದಲ್ಲಿ ಕೇವಲ 25% ಮಾತ್ರ ಡಿವಿಡೆಂಟ್ ನೀಡಲು ಅವಕಾಶವಿದ್ದರೆ ದುಡಿಯದ ಸರಕಾರಕ್ಕೆ 33% ಆದಾಯ ತೆರಿಗೆ ಕಟ್ಟಬೇಕಾಗಿರುವುದು ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದರು.

ದ.ಕ. ಜಿಲ್ಲೆಯಲ್ಲಿ ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕ್‌ಗಳನ್ನು ಮೀರಿಸುವ ರೀತಿಯಲ್ಲಿ ಪ್ರತೀ ಗ್ರಾಮ ಅಥವಾ ಎರಡು, ಮೂರು ಗ್ರಾಮಗಳಿಗೆ ಒಂದರಂತೆ ಸಹಕಾರ ಸಂಘಗಳನ್ನು ಆಯಾ ಊರಿನ ಹಿರಿಯರ ನೇತೃತ್ವದಲ್ಲಿ ಕಟ್ಟಲಾಗಿದೆ. ನಮ್ಮ ಜಿಲ್ಲೆಯಲ್ಲೇ ಹುಟ್ಟಿದ್ದ ವಿಜಯಾ ಬ್ಯಾಂಕ್, ಕೆನರಾ ಬ್ಯಾಂಕ್, ಕಾರ್ಪೋರೇಶನ್ ಬ್ಯಾಂಕ್ ನಷ್ಟದಲ್ಲಿರುವ ಬ್ಯಾಂಕ್‌ಗಳೊಂದಿಗೆ ವಿಲೀನಗೊಂಡಿರುತ್ತವೆ. ಎಸ್.ಬಿ.ಐ ಬ್ಯಾಂಕ್‌ನೊಂದಿಗೆ ಎಸ್.ಬಿ.ಯಂ ವಿಲೀನಗೊಂಡಿರುವುದನ್ನು ಕಂಡಿದ್ದೇವೆ. ಈ ದೇಶದಲ್ಲಿ ಆರ್ಥಿಕ ಹಿಂಜರಿತದಿಂದ ಮುಂದೇನಾಗಬಹುದು ಎಂಬ ಆತಂಕ ಎಲ್ಲಾ ನಾಗರಿಕರಲ್ಲಿ ಮನೆ ಮಾಡಿದೆ. ದೇಶದಲ್ಲಿ ಇಂತಹ ಹದಗೆಟ್ಟ ವಾತಾವರಣ ಇದ್ದರೂ ಈವರೆಗೆ ನಮ್ಮ ಸರಕಾರಿ ಸಂಘಗಳು ಯಾವುದೇ ಅಡೆತಡೆ ಇಲ್ಲದೆ ತಮ್ಮ ವ್ಯವಹಾರವನ್ನು ಮಾಡಿಕೊಂಡು ಬಂದಿದ್ದು, ರೈತಾಪಿ ವರ್ಗದವರ ಆಶಾಕಿರಣದಂತಿದೆ. ಆದರೆ ಇದೀಗ ಕೇಂದ್ರ ಸರಕಾರವು ತನ್ನ ಅವೈಜ್ಞಾನಿಕ ತೆರಿಗೆ ವಸೂಲಾತಿಯ ನೀತಿಯಿಂದ ಈ ತನಕ ನಮ್ಮನ್ನು ಆಳಿದ ಯಾವ ಸರಕಾರವು ವಿಧಿಸದ ತೆರಿಗೆಯನ್ನು ಸಹಕಾರಿ ಸಂಘಗಳ ವಹಿವಾಟಿನ ಮೇಲೆ ಹೇರಿದರ ಪರಿಣಾಮ ಇನ್ನು ಮುಂದೆ ಎಲ್ಲಾ ಸಹಕಾರಿ ಸಂಘಗಳು ತಮ್ಮ ವಹಿವಾಟಿನ ಲಾಭದ ಮೇಲೆ ಶೇಕಡಾ 33% ತೆರಿಗೆಯನ್ನು ಹೇರಿರುವುದು ಅತ್ಯಂತ ಶೋಚನೀಯ ಮತ್ತು ಖಂಡನೀಯ ಕ್ರಮವಾಗಿರುತ್ತದೆ. ಈಗಾಗಲೇ ವರ್ಷವೊಂದಕ್ಕೆ ಲಕ್ಷ ಗಟ್ಟಲೆ ಆದಾಯ ತೆರಿಗೆ ಪಾವತಿಸುವಂತೆ ಎಲ್ಲಾ ಸಹಕಾರಿ ಸಂಘಗಳಿಗೂ ನೋಟಿಸು ಜಾರಿಯಾಗಿರುತ್ತದೆ.

ಹಾಗಾಗಿ ಬಿ.ಜೆ.ಪಿ ಸರಕಾರಗಳು ಈ ದೇಶ ಹಾಗೂ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರುವ ಮೊದಲು ಜನ ಸಾಮಾನ್ಯರಿಗೆ ಅಚ್ಚೇ ದಿನ ಬರುತ್ತದೆ ಅಂತ ಹೇಳಿದ್ದರು. ಈಗ ಜನಸಾಮಾನ್ಯ ಉಪಯೋಗಿಸುತ್ತಿರುವ ಆಹಾರ ಸಾಮಾಗ್ರಿ, ದಿನಬಳಕೆ ವಸ್ತು, ಔಷಧಿ, ಪೆಟ್ರೋಲ್, ಸಾರಿಗೆ, ತರಕಾರಿ, ಹಾಲು, ಹೀಗೆ ಪ್ರತಿಯೊಂದು ವಸ್ತುಗಳು ದುಬಾರಿ ಆಗಿ ಆರ್ಥಿಕ ಸಂಕಷ್ಟದಿಂದ ಜನ ಸಾಮಾನ್ಯ ಬದುಕು ಸುಮಾರು 10-15ವರ್ಷಗಳಷ್ಟು ಹಿಂದಕ್ಕೆ ಹೋಗಿರುವುದು ಎಲ್ಲರಿಗೂ ಅರಿವಾಗಿದೆ. ಈಗ ಇದರ ಜೊತೆ ಜೊತೆಗೆ ಆರ್ಥಿಕವಾಗಿ ಸದೃಢವಾಗಿದ್ದ ಹಣಕಾಸು ಸಂಸ್ಥೆಗಳು ಕೂಡಾ ಒಂದೊಂದಾಗಿ ಅಧಿಪತನದಂಚಿಗೆ ಸಾಗುತ್ತಿರುವುದು ಅತ್ಯಂತ ಕಳವಳಕಾರಿಯಾದ ಸಂಗತಿಯಾಗಿದೆ.

ಹಾಗಾಗಿ ತಕ್ಷಣ ನಮ್ಮ ಸಹಕಾರಿ ಸಂಘಗಳ ಮುಖ್ಯಸ್ಥರು ಎಚ್ಚೆತ್ತುಕೊಂಡು ಕೇಂದ್ರ ಸರಕಾರ ಸಹಕಾರಿ ಸಂಘಗಳ ಮೇಲೆ ಹೇರಲಾದ ಆದಾಯ ತೆರಿಗೆ ಕ್ರಮವನ್ನು ಹಿಂತೆಗೆದುಕೊಳ್ಳುವರೇ ಒತ್ತಾಯಿಸುವುದು ಅನಿವಾರ್ಯವಾಗಿದೆ. ಇಲ್ಲದಿದ್ದಲ್ಲಿ ನಮ್ಮೆಲ್ಲಾ ಸಹಕಾರ ಸಂಘಗಳು ಕೂಡಾ ಆರ್ಥಿಕ ಅಧಪತನದತ್ತ ಸಾಗುವುದರಲ್ಲಿ ಯಾವುದೇ ಸಂಶಯ ಬೇಡ ಎಂಬುದಾಗಿ ಎಂದು ಅವರು ಹೇಳಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

3,000 ವರ್ಷಗಳ ಹಿಂದೆಯೇ ರೈತರು ಹವಾಮಾನ ಬದಲಾವಣೆಗೆ ಹೊಂದಿಕೊಂಡಿದ್ದರು..! ಬಿಹಾರದ ಪುರಾತನ ಬೀಜಗಳು ಹೇಳಿದ ಕೃಷಿ ಪಾಠ

ಬಿಹಾರದ ಯುರೆನ್‌ನಲ್ಲಿ ಪತ್ತೆಯಾದ 5 ಲಕ್ಷಕ್ಕೂ ಹೆಚ್ಚು ಸುಟ್ಟ ಬೀಜಗಳ ಅಧ್ಯಯನವು ಭಾರತದ…

2 minutes ago

ಶ್ರೀಕೃಷ್ಣನನ್ನು ದೇವನಾಗಿ ಮಾತ್ರವಲ್ಲ, ಗುರುವಿನ ರೂಪದಲ್ಲೂ ಕಾಣುವ ದೃಷ್ಟಿ

ಶ್ರೀಕೃಷ್ಣನನ್ನು ಕೇವಲ ದೇವರ ಅವತಾರವಾಗಿ ನೋಡುವುದಕ್ಕಿಂತ, ಮನುಷ್ಯರ ನಡುವೆ ನಿಂತು ಉಪದೇಶಿಸಿದ ಮಾನವಶಿಕ್ಷಕನಾಗಿಯೂ…

6 hours ago

ಹವಾಮಾನ ವರದಿ | 04-09-2026 | ಮುಂಗಾರು ದುರ್ಬಲ… ಆದರೂ ಕರ್ನಾಟಕದಲ್ಲಿ ಗುಡುಗು ಮಳೆ ಮುಂದುವರಿಯುವ ಸಾಧ್ಯತೆ!

ಮುಂಗಾರು ದುರ್ಬಲಗೊಂಡಿದ್ದರೂ ಸ್ಥಳೀಯ ಮೋಡಗಳ ಬೆಳವಣಿಗೆಯಿಂದ ಮಲೆನಾಡು ಹಾಗೂ ಒಳನಾಡಿನಲ್ಲಿ ಗುಡುಗು ಸಹಿತ…

6 hours ago

ಕೃಷಿ ಸಂಕಷ್ಟ ಎಂದರೆ ರೈತನ ಸಾಲ ಮಾತ್ರವಲ್ಲ – ಕೃಷಿ ಕಾರ್ಮಿಕರ ರಕ್ಷಣೆಯೂ ಅಗತ್ಯ

2024ರಲ್ಲಿ ಭಾರತದಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರು ಸೇರಿ 10,546 ಮಂದಿ ಆತ್ಮಹತ್ಯೆಯಿಂದ…

14 hours ago

ಹಂತ ಹಂತವಾಗಿ 16 ಸಾವಿರ ಶಿಕ್ಷಕರ ನೇಮಕ – ಅನುದಾನಿತ ಶಾಲೆಗಳಿಗೂ 6 ಸಾವಿರ ಹುದ್ದೆ – ಸಚಿವ ಮಧು ಬಂಗಾರಪ್ಪ

ಕರ್ನಾಟಕದಲ್ಲಿ ಈಗಾಗಲೇ 13,500 ಶಿಕ್ಷಕರ ನೇಮಕಾತಿ ನಡೆದಿದ್ದು, ಶಿಕ್ಷಣ ಇಲಾಖೆಯಲ್ಲಿ ಇನ್ನೂ 16…

14 hours ago

ಹವಾಮಾನ ವರದಿ | 03-09-2026 | ಕರಾವಳಿ–ಮಲೆನಾಡಿನಲ್ಲಿ ಮತ್ತೆ ಮಳೆಯ ಸಾಧ್ಯತೆ…?

ಕರ್ನಾಟಕದ ಹಲವು ಭಾಗಗಳಲ್ಲಿ ಸೆ.5ರಿಂದ ಕೆಲವು ದಿನ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿವೆ.…

1 day ago