Advertisement
ಅನುಕ್ರಮ

ಆಕಾಶದತ್ತ ಒಮ್ಮೆಗಮನಿಸಿ ಅಚ್ಚರಿಯ ನೋಡಿ……….

Share

ಆಕಾಶ ಯಾವಾಗಲೂ ಅಚ್ಚರಿಯ ತಾಣ . ಕುತೂಹಲ ಕೆರಳಿಸುವ ಲೋಕ. ಕೊನೆ ಮೊದಲಿಲ್ಲದ ಆಕರ್ಷಣೆ.  ಬೆಳದಿಂಗಳಿಲ್ಲದ ರಾತ್ರಿಯಲ್ಲಿ  ಮನೆಯಂಗಳದಲ್ಲಿ ಮಲಗಿ ಆಕಾಶ ನೋಡುತ್ತಾ ಕುಳಿತರೆ ಸಮಯ ಹೋದದ್ದೇ ತಿಳಿಯದು.

ಬಾಲ್ಯದಲ್ಲಿ ಅಪ್ಪ ತೆಂಗಿನ ಗಿಡಗಳಿಗೆ ಪೈಪ್ ನಲ್ಲಿ ರಾತ್ರಿಯ ಹೊತ್ತು ನೀರು ಹಿಡಿಯುತ್ತಿದ್ದಾಗ ಅವರೊಂದಿಗೆ ನಾನು ,ತಂಗಿ ಇಬ್ಬರೂ ಹೋಗುತ್ತಿದ್ದೆವು. ಮಿನುಗುವ ನಕ್ಷತ್ರ, ಹೊಳೆಯುವ ಗ್ರಹಗಳು, ಚಲಿಸುವ ಉಪಗ್ರಹಗಳತ್ತ ಎಂದಿಗೂ ಕುಂದದ ಆಕರ್ಷಣೆ. ಆಕಾಶದಲ್ಲಿ ದಿನನಿತ್ಯ ಅಚ್ಚರಿಯ ಘಟನೆಗಳು ವೈಚಿತ್ರ್ಯ ಗಳು ‌ನಡೆಯುತ್ತಿರುತ್ತವೆ. ಅನಂತವಾಗಿರುವ  ಆಗಸ ದಿನದಿನವೂ  ಹೊಸಪ್ರಪಂಚವನ್ನು , ಕಲ್ಪನೆಯನ್ನು ತೆರೆದಿಡುತ್ತದೆ.  ನೋಡ ನೋಡುವಂತೆಯೇ ಬೀಳವ ಉಲ್ಕೆಗಳು  ನಮ್ಮ ಕನಸಿನ ಹಾದಿಗೆ ಆಶೀರ್ವಾದವೆಂದೇ ಅನಿಸುತ್ತದೆ.
ಅಗಣಿತ ನಕ್ಷತ್ರಗಳ ಲೋಕವೆಂದರೆ‌ ಊಹೆಗೆ  ನಿಲುಕದ  ವಿಸ್ಮಯ ಲೋಕ.
ಮನೆಯಲ್ಲಿ ಸಂಜೆ ಏಳು ಕಾಲು  ಗಂಟೆಯಾಗುತ್ತಿದ್ದಂತೆ  ನಮ್ಮೆಜಮಾನ್ರು ಹೊರಗೆ ಒಳಗೆ ಸುತ್ತಲಾರಂಭಿಸಿದರು. ಟೆರೇಸ್ ಮೇಲೆ  ಹೋಗಿ ಆಕಾಶದತ್ತ ಮುಖ ಮಾಡಿ ಏನೋ ಹುಡುಕುತ್ತಿದ್ದರು.  ಸುಮಾರು ಹೊತ್ತು ನೋಡಿದಾಗ ಅವರು ಕಂಡು ಹಿಡಿದೇ ಬಿಟ್ಟರು. ಅದುವೇ   ನಿಯೋವೈಸ್ ಧೂಮಕೇತು .  ಈ ಶತಮಾನದ ಅಪರೂಪದ ಧೂಮಕೇತು  ದೊಡ್ಡದಾದ ಆಕಾಶಕಾಯ. ನಮ್ಮ ಜೀವಿತಾವಧಿಯಲ್ಲಿ ಸಿಕ್ಕ ದೊಡ್ಡ ಅವಕಾಶ.  ಈಗ ನಾವು  ಆಕಾಶದಲ್ಲಿ ಕಾಣಬಹುದು.  ಬರಿಗಣ್ಣಿಗೇ ಗೋಚರಿಸುತ್ತಿದೆ.  ಸಪ್ತ ಋಷಿ ಮಂಡಲದ ಕೆಳಗೆ ವಾಯವ್ಯ ದಿಕ್ಕಿನಲ್ಲಿ  ನಿಯೋ ವೈಸ್ ಧೂಮಕೇತು ಕಾಣಿಸುತ್ತಿದೆ. ಮೋಡಗಳಿಲ್ಲದ ಶುಭ್ರ ಆಕಾಶದಲ್ಲಿ ಧೂಮಕೇತು  ಸಂಜೆ 7.30 ರ ಸುಮಾರಿಗೆ ಕಾಣಸಿಗುತ್ತದೆ. ಒಂದು ಗಂಟೆಗಳ ಕಾಲ  ನೋಡಲು ಸಾಧ್ಯ.  ಆಗಸ್ಟ್ 15 ರವರೆಗೂ ಈ ದೃಶ್ಯ ಲಭ್ಯ ವಿರಬಹುದೆಂಬ ಅಂದಾಜು.  ಈ ಧೂಮಕೇತು ವನ್ನು ಇನ್ನೊಮ್ಮೆ ನೋಡಬೇಕೆಂದರೆ 6800 ವರ್ಷಗಳು ಬೇಕಾಗುತ್ತದೆ. ಹಾಗಾಗಿ ಮೋಡವಿಲ್ಲದ ಆಕಾಶ ಲಭ್ಯವಾದರೆ  ಧೂಮಕೇತು ವನ್ನು  ತಪ್ಪದೆ ವೀಕ್ಷಿಸಿ ಆನಂದಿಸಿ
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ರಾಜ್ಯದಲ್ಲಿ ಭಾರೀ ಮಳೆ ಆರ್ಭಟ – ಕೆಲವು ಜಿಲ್ಲೆಗಳಲ್ಲಿ ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ರಾಜ್ಯದ ಹಲವೆಡೆ ಭಾರೀ ಮಳೆಯ ಹಿನ್ನೆಲೆಯಲ್ಲಿ ಕೆಲವು ಜಿಲ್ಲೆಗಳಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.…

2 hours ago

ಆಹಾರ-ನಿದ್ರೆ ಪರಸ್ಪರ ಪೂರಕ; ಉತ್ತಮ ನಿದ್ರೆಗೆ ಹಸಿವು ಅಗತ್ಯ: ರಾಘವೇಶ್ವರ ಶ್ರೀ

ಉತ್ತಮ ಆರೋಗ್ಯಕ್ಕೆ ಸರಿಯಾದ ಆಹಾರ ಮತ್ತು ನಿದ್ರೆ ಎರಡೂ ಅವಿಭಾಜ್ಯ ಎಂದು ಶ್ರೀ…

12 hours ago

ಕೃಷಿಕರ ಮಿತ್ರ ಸಾಯಿಶೇಖರ್‌ ಕರಿಕಳ ಅವರಿಗೆ ರೈತ ರತ್ನ ಪ್ರಶಸ್ತಿ

ಮಳೆ ಮಾಹಿತಿ ಮೂಲಕ ಕೃಷಿಕರಿಗೆ ನೆರವಾಗುತ್ತಿರುವ ಸಾಯಿಶೇಖರ್‌ ಕರಿಕಳ ಅವರಿಗೆ ರೈತ ರತ್ನ…

12 hours ago

ಮಂಗಳೂರಿನಲ್ಲಿ ರಾಷ್ಟ್ರೀಯ ಚೆಸ್ ಚಾಂಪಿಯನ್ ಶಿಪ್‌ಗೆ ಚಾಲನೆ – 28 ರಾಜ್ಯ–ಕೇಂದ್ರಾಡಳಿತ ಪ್ರದೇಶಗಳಿಂದ 644 ಬಾಲಕಿ-ಬಾಲಕಿಯರು

ಮಂಗಳೂರಿನಲ್ಲಿ ರಾಷ್ಟ್ರೀಯ ಅಂಡರ್‌-11 ಚೆಸ್ ಚಾಂಪಿಯನ್ಶಿಪ್‌ಗೆ ಭವ್ಯ ಚಾಲನೆ ದೊರೆತಿದ್ದು, ದೇಶದ 28…

13 hours ago

ಹವಾಮಾನ ವರದಿ | 02-08-2026 | ಕರಾವಳಿಯಲ್ಲಿ ಮಳೆ ಇಳಿಮುಖ ..? ರಾಜ್ಯದಲ್ಲಿ ಮುಂಗಾರು ಸ್ಥಿತಿ ಏನು..?

ರಾಜ್ಯದ ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆಯ ತೀವ್ರತೆ ಇಳಿಮುಖವಾಗಲಿದ್ದು, ಆಗಸ್ಟ್‌ 3ರಿಂದ ತೋಟದ…

15 hours ago

ಭಾರೀ ಮಳೆಯ ಎಚ್ಚರಿಕೆ : 24 ಗಂಟೆ ಸನ್ನದ್ಧವಾಗಿರಲು ಡಿಸಿ ಸೂಚನೆ, ಭೂಕುಸಿತ ಪ್ರದೇಶಗಳ ಮೇಲೆ ಕಟ್ಟೆಚ್ಚರ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳನ್ನು 24…

1 day ago