Advertisement
ಅಂಕಣ

ಆಕಾಶದತ್ತ ಒಮ್ಮೆಗಮನಿಸಿ ಅಚ್ಚರಿಯ ನೋಡಿ……….

Share

ಆಕಾಶ ಯಾವಾಗಲೂ ಅಚ್ಚರಿಯ ತಾಣ . ಕುತೂಹಲ ಕೆರಳಿಸುವ ಲೋಕ. ಕೊನೆ ಮೊದಲಿಲ್ಲದ ಆಕರ್ಷಣೆ.  ಬೆಳದಿಂಗಳಿಲ್ಲದ ರಾತ್ರಿಯಲ್ಲಿ  ಮನೆಯಂಗಳದಲ್ಲಿ ಮಲಗಿ ಆಕಾಶ ನೋಡುತ್ತಾ ಕುಳಿತರೆ ಸಮಯ ಹೋದದ್ದೇ ತಿಳಿಯದು.

Advertisement
Advertisement
ಬಾಲ್ಯದಲ್ಲಿ ಅಪ್ಪ ತೆಂಗಿನ ಗಿಡಗಳಿಗೆ ಪೈಪ್ ನಲ್ಲಿ ರಾತ್ರಿಯ ಹೊತ್ತು ನೀರು ಹಿಡಿಯುತ್ತಿದ್ದಾಗ ಅವರೊಂದಿಗೆ ನಾನು ,ತಂಗಿ ಇಬ್ಬರೂ ಹೋಗುತ್ತಿದ್ದೆವು. ಮಿನುಗುವ ನಕ್ಷತ್ರ, ಹೊಳೆಯುವ ಗ್ರಹಗಳು, ಚಲಿಸುವ ಉಪಗ್ರಹಗಳತ್ತ ಎಂದಿಗೂ ಕುಂದದ ಆಕರ್ಷಣೆ. ಆಕಾಶದಲ್ಲಿ ದಿನನಿತ್ಯ ಅಚ್ಚರಿಯ ಘಟನೆಗಳು ವೈಚಿತ್ರ್ಯ ಗಳು ‌ನಡೆಯುತ್ತಿರುತ್ತವೆ. ಅನಂತವಾಗಿರುವ  ಆಗಸ ದಿನದಿನವೂ  ಹೊಸಪ್ರಪಂಚವನ್ನು , ಕಲ್ಪನೆಯನ್ನು ತೆರೆದಿಡುತ್ತದೆ.  ನೋಡ ನೋಡುವಂತೆಯೇ ಬೀಳವ ಉಲ್ಕೆಗಳು  ನಮ್ಮ ಕನಸಿನ ಹಾದಿಗೆ ಆಶೀರ್ವಾದವೆಂದೇ ಅನಿಸುತ್ತದೆ.
ಅಗಣಿತ ನಕ್ಷತ್ರಗಳ ಲೋಕವೆಂದರೆ‌ ಊಹೆಗೆ  ನಿಲುಕದ  ವಿಸ್ಮಯ ಲೋಕ.
ಮನೆಯಲ್ಲಿ ಸಂಜೆ ಏಳು ಕಾಲು  ಗಂಟೆಯಾಗುತ್ತಿದ್ದಂತೆ  ನಮ್ಮೆಜಮಾನ್ರು ಹೊರಗೆ ಒಳಗೆ ಸುತ್ತಲಾರಂಭಿಸಿದರು. ಟೆರೇಸ್ ಮೇಲೆ  ಹೋಗಿ ಆಕಾಶದತ್ತ ಮುಖ ಮಾಡಿ ಏನೋ ಹುಡುಕುತ್ತಿದ್ದರು.  ಸುಮಾರು ಹೊತ್ತು ನೋಡಿದಾಗ ಅವರು ಕಂಡು ಹಿಡಿದೇ ಬಿಟ್ಟರು. ಅದುವೇ   ನಿಯೋವೈಸ್ ಧೂಮಕೇತು .  ಈ ಶತಮಾನದ ಅಪರೂಪದ ಧೂಮಕೇತು  ದೊಡ್ಡದಾದ ಆಕಾಶಕಾಯ. ನಮ್ಮ ಜೀವಿತಾವಧಿಯಲ್ಲಿ ಸಿಕ್ಕ ದೊಡ್ಡ ಅವಕಾಶ.  ಈಗ ನಾವು  ಆಕಾಶದಲ್ಲಿ ಕಾಣಬಹುದು.  ಬರಿಗಣ್ಣಿಗೇ ಗೋಚರಿಸುತ್ತಿದೆ.  ಸಪ್ತ ಋಷಿ ಮಂಡಲದ ಕೆಳಗೆ ವಾಯವ್ಯ ದಿಕ್ಕಿನಲ್ಲಿ  ನಿಯೋ ವೈಸ್ ಧೂಮಕೇತು ಕಾಣಿಸುತ್ತಿದೆ. ಮೋಡಗಳಿಲ್ಲದ ಶುಭ್ರ ಆಕಾಶದಲ್ಲಿ ಧೂಮಕೇತು  ಸಂಜೆ 7.30 ರ ಸುಮಾರಿಗೆ ಕಾಣಸಿಗುತ್ತದೆ. ಒಂದು ಗಂಟೆಗಳ ಕಾಲ  ನೋಡಲು ಸಾಧ್ಯ.  ಆಗಸ್ಟ್ 15 ರವರೆಗೂ ಈ ದೃಶ್ಯ ಲಭ್ಯ ವಿರಬಹುದೆಂಬ ಅಂದಾಜು.  ಈ ಧೂಮಕೇತು ವನ್ನು ಇನ್ನೊಮ್ಮೆ ನೋಡಬೇಕೆಂದರೆ 6800 ವರ್ಷಗಳು ಬೇಕಾಗುತ್ತದೆ. ಹಾಗಾಗಿ ಮೋಡವಿಲ್ಲದ ಆಕಾಶ ಲಭ್ಯವಾದರೆ  ಧೂಮಕೇತು ವನ್ನು  ತಪ್ಪದೆ ವೀಕ್ಷಿಸಿ ಆನಂದಿಸಿ
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಬಹುಬೆಳೆ ಬೆಳೆದು ಉತ್ತಮ ಫಸಲು ಪಡೆದ ರೈತ | ಕೃಷಿಗೆ ರೈತ ಅನುಸರಿಸಿದ ಕ್ರಮಗಳಾವುವು..?

ಮಿಶ್ರ ಬೆಳೆ, ಪರ್ಯಾಯ ಬೆಳೆ, ಬಹು ಬೆಳೆ(Mixed cropping, alternating cropping, multiple…

4 hours ago

ಸ್ಟ್ರೀಟ್ ಫುಡ್ ವರ್ಸಸ್ ಆರೋಗ್ಯ | ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳಿ

ಆಹಾರ ಹಾಗೂಆಹಾರ ಪದ್ಧತಿಗಳ ಬಗ್ಗೆ ವಿವೇಕ್‌ ಆಳ್ವ ಅವರು ಬರೆದಿದ್ದಾರೆ.

4 hours ago

ಸಕ್ಕರೆ ತಿನ್ನುವುದಕ್ಕಿಂತ ಶುಗರ್ ಫ್ರೀ ಸೇವನೆ ಹೆಚ್ಚು ಅಪಾಯಕಾರಿ…! |

`ಶುಗರ್ ಫ್ರೀ’(Sugar Free) ಎಂಬ ಹೆಸರಿನಲ್ಲಿ ಕೃತಕ ಸಿಹಿಕಾರಕಗಳ(Artificial sweet) ಟ್ರೆಂಡ್(Trend) ಹೆಚ್ಚುತ್ತಿರುವ…

4 hours ago

Karnataka Weather | 14-05-2024 | ಹಲವು ಕಡೆ ಗುಡಗು ಸಹಿತ ಮಳೆ ಮುಂದುವರಿಕೆ | ಮೇ.20 ರ ನಂತರ ಮಳೆ ಅಬ್ಬರ ಕಡಿಮೆ |

ಮೇ 20 ರ ನಂತರ ರಾಜ್ಯದಲ್ಲಿ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿದ್ದು, ಕರಾವಳಿ…

5 hours ago

ಮರಗಿಡಗಳಿಲ್ಲದೇ ಭೂಮಿಗೆ ಶಕ್ತಿ ಬರಲು ಸಾಧ್ಯವೇ?

ಕೃಷಿ ನೆಲದಲ್ಲಿ ಸಾವಯವ ಇಂಗಾಲದ(Carbon) ಕೊರತೆ ಕಾಡುತ್ತಿದೆ. ಮರಗಿಡಗಳಿಲ್ಲದೇ ಭೂಮಿಗೆ ಶಕ್ತಿ ಬರಲು…

5 hours ago