ಚಾರ್ಮಾಡಿ ಘಾಟಿಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಅನುವು

September 15, 2019
6:03 PM

ಮಂಗಳೂರು: ಭಾರೀ ಮಳೆಯ ಕಾರಣದಿಂದ ಆ.8 ರಂದು ಚಾರ್ಮಾಡಿ ಘಾಟಿಯ 14 ಕಡೆ ಕುಸಿತವಾಗಿತ್ತು. ಹೀಗಾಗಿ ಒಂದು ತಿಂಗಳ ಕಾಲ ವಾಹನ ಸಂಚಾರ ಬಂದ್ ಮಾಡಲು ಲೋಕೋಪಯೋಗಿ ಇಲಾಖೆ ಜಿಲ್ಲಾಡಳಿತಕ್ಕೆ ಮನವಿ ಮಾಡಿತ್ತು. ಹೀಗಾಗಿ ಆ.15 ರಿಂದ ಸೆ.14 ರವರೆಗೆ ವಾಹನ ಸಂಚಾರ ನಿಷೇಧವಾಗಿತ್ತು. ಇದೀಗ ಸೆ.15 ರಿಂದ ಲಘು ವಾಹನಗಳ ಓಡಾಟಕ್ಕೆ ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಜಿಲ್ಲಾಡಳಿತ ಅನಿಮತಿ ನೀಡಿದೆ.

ರಾತ್ರಿ 6 ಗಂಟೆಯಿಂದ ಎಲ್ಲಾ ರೀತಿಯ ವಾಹನ ಓಡಾಟಕ್ಕೆ ನಿಷೇಧ ಹೇರಲಾಗಿದೆ. ಘಾಟಿ ಪ್ರದೇಶದಲ್ಲಿ 20 ಕಿಮೀ ವೇಗದ ಮಿತಿಯನ್ನು ನಿಗದಿಪಡಿಸಲಾಗಿದೆ. ರಸ್ತೆ ಹಾನಿಯಾಗಿರುವುದಿಂದ ಜಾಗರೂಕತೆಯ ಚಾಲನೆಗೆ ಸೂಚನೆ ನೀಡಲಾಗಿದ್ದು, ಮುಂಜಾಗ್ರತಾ ಕ್ರಮಕ್ಕಾಗಿ ಫೋಟೊ ಹಾಗೂ ಸೆಲ್ಪೀ ತೆಗೆಯುವುದು  ನಿಷೇಧವಿದೆ ಎಂದು ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ಅವರು ಅಧಿಸೂಚನೆಯಲ್ಲಿ  ತಿಳಿಸಿದ್ದಾರೆ.

ಭಾರೀ ಮಳೆಯ ಕಾರಣದಿಂದಾಗಿ ಚಾರ್ಮಾಡಿ ಘಾಟಿ ಭಾರೀ ಕುಸಿತವಾಗಿ ಮುಂದೆ ವಾಹನ ಸಂಚಾರವೇ ಕಷ್ಟ ಎಂದೇ ಹೇಳಲಾಗಿತ್ತು. ಘಾಟಿ ರಸ್ತೆ ಕುಸಿತ ನೋಡಿದ ಎಲ್ಲರೂ ವಾಹನ ಸಂಚಾರ ಬಹಳ ವರ್ಷ ಸಾಧ್ಯವಿಲ್ಲ ಎಂದು ಅನೇಕರು ಹೇಳಿದ್ದರೆ, ಕೆಲವರು ಇನ್ನು ವಾಹನ ಸಂಚಾರ ಶಾಶ್ವತವಾಗಿ ಬಂದ್ ಎಂದು ಹೇಳಿದ್ದರು. ಆದರೆ ನಮ್ಮ ರಸ್ತೆಯನ್ನು ಸುಸ್ಥಿತಿಗೆ ತಂದು ಸದ್ಯ ಲಘುವಾಹನ ಓಡಾಟಕ್ಕೆ ಸಾಧ್ಯವಾಗುವಂತೆ ಮಾಡಿದ್ದಾರೆ. ಸಂಪಾಜೆ ಘಾಟಿಯಲ್ಲೂ ಕಳೆದ ಬಾರಿ ಕುಸಿತವಾದಾಗ ತಕ್ಷಣ ಕ್ರಮ ಕೈಗೊಂಡು ವಾಹನ ಓಡಾಡುವಂತೆ ಮಾಡಿದ್ದಾರೆ. ಇಂಜಿಯರ್ ದಿನದಂದೇ ವಾಹನ ಓಡಾಟಕ್ಕೆ ಅನುವು ಆಗುವಂತೆ ಮಾಡಿರುವುದು  ನಮ್ಮ ಇಂಜಿನಿಯರ್ ಗಳ ಹೆಮ್ಮೆ ಹಾಗೂ ಭರವಸೆ ಹುಸಿಯಾಗಲಿಲ್ಲ.

 

ಆ.14 ರಂದು ಹಿಂದೆ ಸುಳ್ಯ ನ್ಯೂಸ್ ಮಾಡಿರುವ ಪಾಸಿಟಿವ್  ವರದಿ :

ನಮ್ಮ ಇಂಜಿನಿಯರ್ ಗಳು ಚಾರ್ಮಾಡಿ ರಸ್ತೆ ದುರಸ್ತಿ ಮಾಡುತ್ತಾರೆ…..

 

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ನಾವು ತಿನ್ನುವ ಆಹಾರದಲ್ಲಿ ಕೀಟನಾಶಕ ಅವಶೇಷ – ಕರ್ನಾಟಕದಲ್ಲಿ 9,176 ಮಾದರಿಗಳಲ್ಲಿ 334 ಮಿತಿ ಮೀರಿವೆ – ದೇಶದ ಅಂಕಿ ಏನು ಹೇಳುತ್ತದೆ?
September 2, 2026
10:52 PM
by: ದ ರೂರಲ್ ಮಿರರ್.ಕಾಂ
ಒಂದೇ ತೆಂಗಿನ ಮರದಿಂದ ₹10,000 ಆದಾಯ? ಮೌಲ್ಯವರ್ಧನೆಗೆ ಹೊಸ ದಾರಿ ತೋರಿದ ವಿಶ್ವ ತೆಂಗು ದಿನ
September 2, 2026
7:32 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 02-09-2026 | ಉತ್ತರ ಭಾರತದ ವಾಯುಭಾರ ಕುಸಿತ ದುರ್ಬಲವಾಗುವ ಸಾಧ್ಯತೆ
September 2, 2026
2:30 PM
by: ಸಾಯಿಶೇಖರ್ ಕರಿಕಳ
ಕೃಷಿಗೆ ಸಾಲ ಹೆಚ್ಚಿಸಿ – ಅಲ್ಪಾವಧಿ ಮಾತ್ರವಲ್ಲ, ದೀರ್ಘಾವಧಿ ಸಾಲವೂ ಬೇಕು – ಬ್ಯಾಂಕ್‌ಗಳಿಗೆ ನಿರ್ಮಲಾ ಸೀತಾರಾಮನ್ ಸೂಚನೆ
September 2, 2026
7:49 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror