Advertisement
MIRROR FOCUS

ಇಸ್ರೋ ವಿಜ್ಞಾನಿಗಳ ಜೊತೆ ಭಾರತವಿದೆ : ಇದು ಮುಂದೆ ಹಾಕಿರುವ ಗೆಲುವಷ್ಟೇ….

Share

ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದ್ದ ಕ್ಷಣ ಅದು.ಇನ್ನೇನು ಯಶಸ್ಸು ಹತ್ತಿರವಾಗಿತ್ತು. ಕೇವಲ 2.1 ಕಿಮೀ ದೂರ ಇರುವಾಗ ಅರ್ಬಿಟರ್ ನಿಂದ ಬೇರ್ಪಟ್ಟಿದ್ದ ವಿಕ್ರಂ ಲ್ಯಾಂಡರ್ ನಿಂದ ಡೇಟಾಗಳನ್ನುಸ್ವೀಕರಿಸುವುದನ್ನು ಆರಂಭಿಸಿದ ನೌಕೆ, ಇದ್ದಕ್ಕಿದ್ದಂತೆ ಸಂವಹನ ಕಳೆದುಕೊಂಡಿತ್ತು. ಈ ಹೊತ್ತಿಗೆ 6000 ಕಿಮೀ ವೇಗದಲ್ಲಿ ಇರುವ ನೌಕೆಯ ವೇಗವೂ ಕಡಿಮೆಗೊಂಡು ಸರಿಯಾದ ಪಥದಲ್ಲಿ ಸಾಗಬೇಕು. ಇದೆಲ್ಲಾ ಸವಾಲಿನ ಕೆಲಸ.  ಚಂದ್ರಯಾನ-2 ಮಿಷನ್ ನಲ್ಲಿ ಇಸ್ರೋ ತೆಗೆದುಕೊಂಡಿರುವ ರಿಸ್ಕ್ ಪ್ರಮಾಣ ಬಹುದೊಡ್ಡದಿದೆ. ಏಕೆಂದರೆ ಚಂದ್ರನ ಮೇಲೆ ನೌಕೆಯ ಸಾಫ್ಟ್ ಲ್ಯಾಂಡಿಂಗ್ ನ ಸಕ್ಸಸ್ ರೇಟ್ ಜಾಗತಿಕ ಮಟ್ಟದಲ್ಲಿ ಶೇ.37 ಅಷ್ಟೇ. ಹೀಗಾಗಿ ಭಾರತದ ಪ್ರಯತ್ನ, ಇಸ್ರೋ ವಿಜ್ಞಾನಿಗಳ ಪ್ರಯತ್ನದಲ್ಲಿ ಸೋಲಲ್ಲ, ಗೆಲವು ಮುಂದೆ ಹಾಕಿರುವುದಷ್ಟೇ. ಹಾಗಂತ ಯಶಸ್ಸೇ ಆಗಿಲ್ಲ ಅಂತ ಅಲ್ಲ. ಚಂದ್ರನ ಸುತ್ತ ಅರ್ಬಿಟರ್ ಸುತ್ತುತ್ತದೆ, ಅಲ್ಲಿನ ಫೋಟೋಗಳು ಇಸ್ರೋ ತಲಪುತ್ತದೆ. ಆದರೆ ವಿಕ್ರಮ ಮಾತ್ರಾ ಸಂಪರ್ಕ ಕಡಿದುಕೊಂಡಿದೆಯಷ್ಟೇ. ಇಸ್ರೋ ವಿಜ್ಞಾನಿಗಳ ಪರ ಭಾರತ ಇದೆ. ಇಡೀ ರಾತ್ರಿ ಕಾತರದಿಂದ ಕಾಯುತ್ತಿದ್ದ ಹಲವಾರು ಮನಸ್ಸುಗಳು ವಿಜ್ಞಾನಿಗಳ ಜೊತೆಗಿದೆ. 


ಎಲ್ಲವೂ ಸರಿಯಾಗಿದ್ದರೆ ಇದೇ ಜಾಗದಲ್ಲಿ “ವಿಶ್ವದಲ್ಲಿ ಭಾರತದ ವಿಕ್ರಮ” ಎನ್ನುವ ಶೀರ್ಷಿಕೆ ಇರಬೇಕಾಗಿತ್ತು. ಆದರೆ ಇದನ್ನು ಕೆಲ ಕಾಲ ಮುಂದೆ ಹಾಕಬೇಕಾಗಿ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುತ್ತಾ ಭಾರತವು ಅಮೃತ ಸಂತಾನ , ಬಿಡೆವು ಎಂದು ಹೇಳುತ್ತಾ ವಿಜ್ಞಾನಿಗಳ ಬೆನ್ನು ತಟ್ಟಿದ್ದಾರೆ. ಹೌದು, ಚಂದ್ರಯಾನ-2 ತಾಂತ್ರಿಕ ಕಾರಣದಿಂದ ನಿರೀಕ್ಷಿತ ಯಶಸ್ಸು ಕಂಡಿಲ್ಲ. ಉದ್ದೇಶ ಈಡೇರಿಲ್ಲ, ಆದರೆ ಚಂದ್ರನ ಫೋಟೊ ಆರ್ಬಿಟ್ ಕಳುಹಿಸುತ್ತಲೇ ಇರುತ್ತದೆ. ಹಾಗೆ ನೋಡಿದರೆ ಭಾರತದ ವಿಜ್ಞಾನಿಗಳು, ಇಸ್ರೋ ತೆಗೆದುಕೊಂಡಿರು ರಿಸ್ಕ್ ದೊಡ್ಡದೇ ಇತ್ತು. ಏಕೆಂದರೆ ಚಂದ್ರನ ಮೇಲೆ ನೌಕೆಯ ಸಾಫ್ಟ್ ಲ್ಯಾಂಡಿಂಗ್ ನ ಸಕ್ಸಸ್ ರೇಟ್ ಜಾಗತಿಕ ಮಟ್ಟದಲ್ಲಿ ಶೇ.37 ಅಷ್ಟೇ. ಹಾಗಿದ್ದರೂ  ಇಸ್ರೋ ಇಲ್ಲಿ  ಈ ಬಾಹ್ಯಾಕಾಶ ನೌಕೆಯಲ್ಲಿ ಬಳಕೆ ಮಾಡಲಾಗಿರುವ 4 ಥ್ರಸ್ಟರ್ ಗಳು ಹಾಗೂ ಸೆನ್ಸರ್ ಗಳು ಹೊಸತಾದ ತಂತ್ರಜ್ಞಾನ ಅಳವಡಿಕೆ ಮಾಡಿತ್ತು.

 

ಶನಿವಾರ ಬೆಳಗ್ಗಿನ ಜಾವ 1:37 ರ ವೇಳೆಗೆ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಪ್ರಕ್ರಿಯೆಯನ್ನು ನಿರೀಕ್ಷೆಯಂತೆಯೇ ಆರಂಭಿಸಿತ್ತು. 1:49 ರ ವೇಳೆಗೆ ರಫ್ ಬ್ರೇಕಿಂಗ್ ಫೇಸ್ ಅನ್ನು ಯಶಸ್ವಿಯಾಗಿ ಪೂರೈಸಿದ ನಂತರ 2.04 ರ ಹೊತ್ತಿಗೆ ಆರ್ಬಿಟರ್ ನಿಂದ ಬೇರ್ಪಟ್ಟಿದ್ದ ವಿಕ್ರಂ ಲ್ಯಾಂಡರ್ ನಿಂದ ಡೇಟಾಗಳನ್ನುಸ್ವೀಕರಿಸುವುದನ್ನು ಆರಂಭಿಸಿದ ನೌಕೆ, ಇದ್ದಕ್ಕಿದ್ದಂತೆ ಸಂವಹನ ಕಳೆದುಕೊಂಡಿತ್ತು. 2.10 ರ ಹೊತ್ತಿಗೆ ಲ್ಯಾಂಡರ್ ಸಂಪರ್ಕಕ್ಕೆ ಸಿಕ್ಕಿದರೂ ವಿಕ್ರಂ ಸಂಪರ್ಕಕ್ಕೆ ಸಿಗಲಿಲ್ಲ. ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿ ಇಳಿಯುವ ಮುನ್ಸೂಚನೆ ನೀಡಿತಾದರೂ, ಲ್ಯಾಂಡಿಂಗ್ ಗೆ ಇನ್ನೂ ಕೇವಲ 2.1 ಕಿಮೀ ಅಂತರವಿದ್ದಾಗ ಸಿಗ್ನಲ್ ಕಡಿತವಾಯಿತು. ಹೀಗಾಗಿ ನಿಯಂತ್ರಣ ಕೊಠಡಿಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ವಿಜ್ಞಾನಿಗಳು ವಿಕ್ರಮ್ ಲ್ಯಾಂಡರ್ ಅನ್ನು ಸಂಪರ್ಕಿಸುವ ಸತತ ಪರಿಶ್ರಮ ಪಟ್ಟರಾದರೂ ಸಾಧ್ಯವಾಗಲಿಲ್ಲ. ಅಂತಿಮವಾಗಿ ಇಸ್ರೋ ಅಧ್ಯಕ್ಷ ಕೆ ಶಿವನ್ ವಿಕ್ರಮ್ ಲ್ಯಾಂಡರ್ ನ ಸಂಪರ್ಕ ಕಡಿತವಾಗಿರುವ ಕುರಿತು ಘೋಷಣೆ ಮಾಡಿದರು.ಇದಕ್ಕೂ ಮೊದಲು ವಿಕ್ರಮ್ ಲ್ಯಾಂಡರ್ ನ ಒಟ್ಟು ನಾಲ್ಕು ಎಂಜಿನ್ ಗಳನ್ನು ಉರಿಸುವ ಮೂಲಕ ಲ್ಯಾಂಡರ್ ಅನ್ನು ಸುರಕ್ಷಿತ ಲ್ಯಾಂಡಿಂಗ್ ಹಂತಕ್ಕೆ ತರಲಾಗಿತ್ತು. ಆದರೆ ಲ್ಯಾಂಡರ್ ಸುರಕ್ಷಿತ ಲ್ಯಾಂಡಿಂಗ್ ಹಂತದ ತಲುಪುತ್ತಿದ್ದಂತೆಯೇ ನೌಕೆಯ ಸಂಪರ್ಕ ಕಡಿತವಾಯಿತು. ಸಂಪರ್ಕ ಕಡಿತಗೊಂಡಿರುವ ವಿಕ್ರಮ್ ಲ್ಯಾಂಡರ್ ಮತ್ತು ಅದರೊಳಗಿರುವ ಪ್ರಜ್ಞಾನ್ ರೋವರ್ ಕುರಿತು ಸ್ಥಿತಿಗತಿ ವರದಿಗಾಗಿ ವಿಜ್ಞಾನಿಗಳು ಸತತ ಪ್ರಯತ್ನ ನಡೆಸುತ್ತಿದ್ದು, ಮತ್ತೆ ನೌಕೆಯ ಸಂವಹನ ಸಾಧಿಸಲು ಪ್ರಯತ್ನಿಸಿದರೂ ಯಶಸ್ಸು ಆಗಲಿಲ್ಲ.
ಇಸ್ರೋದ ಈ ಸಾಧನೆಯ ಜೊತೆ ಪ್ರಧಾನಿ ಮೋದಿ ಅವರು ಸಹ ಮಧ್ಯ ರಾತ್ರಿ ಇಸ್ರೋಕ್ಕೆ ಆಗಮಿಸಿದ್ದರು. ಎಲ್ಲಾ ಕಾರ್ಯಗಳನ್ನು ರಾತ್ರಿಯೇ ಕುಳಿತು ವೀಕ್ಷಣೆ ಮಾಡುತ್ತಿದ್ದರು ಇಸ್ರೊದೊಂದಿಗೆ ನೌಕೆ ಸಂವಹನ ಕಡಿದುಕೊಂಡ ಕೆಲವು ನಿಮಿಷದಲ್ಲಿಯೇ ಮೋದಿ ಬಳಿಗೆ ತೆರಳಿದ ಇಸ್ರೊ ಅಧ್ಯಕ್ಷ ಶಿವನ್ ಅವರು ಪರಿಸ್ಥಿತಿ ವಿವರಿಸಿದರು. ತಕ್ಷಣ ಪ್ರಧಾನಿಗಳು  ನಿರಾಸೆ, ಬೇಸರದ ಮಡುವಲ್ಲಿದ್ದ ಇಸ್ರೋ ವಿಜ್ಞಾನಿಗಳಿಗೆ ಹುರುಪು ತುಂಬುವ ಕಾರ್ಯವನ್ನು ಮಾಡಿದರು. ನಮ್ಮ ಕಲಿಕೆ ನಾಳೆ ನಮ್ಮನ್ನು ಗಟ್ಟಿಗೊಳಿಸುತ್ತದೆ, ಹತಾಶರಾಗಬೇಡಿ. ನಿಮ್ಮೊಂದಿಗೆ ನಾವಿದ್ದೇವೆ, ಇಡೀ ಭಾರತವಿದೆ ಎಂದು ಇಸ್ರೋ ವಿಜ್ಞಾನಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು  ಆತ್ಮಸ್ಥೈರ್ಯ ತುಂಬಿದ್ದಾರೆ.ರಾಷ್ಟ್ರಪತಿ ರಾಮನಾಥ ಕೋವಿಂದ್ ಸಂದೇಶ ನೀಡಿ, ಕೊನೆಯ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡಿರಬಹುದು. ಆದರೆ ನಿಮ್ಮೊಂದಿಗೆ ಇಡೀ ದೇಶವೂ ಇದೆ. ಈ ಸಾಧನೆಯೇನು ಕಡಿಮೆಯಲ್ಲ. ನಿಮ್ಮ ಕಾರ್ಯತತ್ಪರತೆಗೆ ನಮ್ಮ ಸಲಾಂ, ನೀವು ನಮ್ಮ ಹೃದಯ ಗೆದ್ದಿದ್ದೀರಿ’ ಎಂದು ಭಾರತೀಯರು ಇಸ್ರೋ ಸಾಧನೆಗೆ ಬೆನ್ನು ತಟ್ಟಿದ್ದಾರೆ.
ಪ್ರಧಾನಿಗಳು ಸಂತೈಸಿದ್ದು ಹೀಗೆ…
ಕೊನೆಯ ಕ್ಷಣ ಅತ್ಯಂತ ಮಹತ್ವ, ಲ್ಯಾಂಡಿಂಗ್ ಭಾರೀ ಸವಾಲು: ಇದೊಂದು ಕ್ಲಿಷ್ಟಕರ ಅತ್ಯಂತ ನಾಜೂಕಾದ ಪ್ರಕ್ರಿಯೆ. ಈ ಬಾಹ್ಯಾಕಾಶ ನೌಕೆ ಬಳಸಿಕೊಳ್ಳುವ ಸೆನ್ಸರ್ ಗಳು, ಅತ್ಯಾಧುನಿಕ ಸೆನ್ಸರ್ ಇದು. ಈ ಅತ್ಯಾಧುನಿಕ ಸೆನ್ಸರ್ ಗಳು ವಿಕ್ರಮ್ ಲ್ಯಾಂಡರ್ ಗೆ ಸಾಫ್ಟ್-ಲ್ಯಾಂಡಿಂಗ್ ಗೆ ಸಹಕಾರಿಯಾಗುವಂತೆ ಅತ್ಯಂತ ಸೂಕ್ತವಾದ ಮೇಲ್ಮೈ ನ್ನು ಗುರುತಿಸುತ್ತದೆ. ಸ್ವಯಂ ಚಾಲಿತವಾಗಿ ಲ್ಯಾಂಡ್ ಆಗುವ ಬಾಹ್ಯಾಕಾಶ ನೌಕೆಯಲ್ಲಿರುವ ಸೆನ್ಸರ್ ಗಳಿಗೆ ಭೂಮಿಯಲ್ಲಿರುವ ನಿಯಂತ್ರಣ ಕೇಂದ್ರದಿಂದ  ಯಾವುದೇ ಕಮಾಂಡ್ ನೀಡುವುದಿದ್ದರೂ ಅದು ಪ್ರಕ್ರಿಯೆ ಪ್ರಾರಂಭವಾಗುವುದಕ್ಕೂ ಒಂದು ಗಂಟೆ ಮುನ್ನ ನೀಡಬೇಕಷ್ಟೆ. ಪ್ರಕ್ರಿಯೆ ಪ್ರಾರಂಭವಾಗಿ ಈ ನಿರ್ಣಾಯಕ 15 ನಿಮಿಷಗಳ ಅವಧಿಯಲ್ಲಿ ಭೂಮಿಯಲ್ಲಿರುವ ನಿಯಂತ್ರಣ ಕೇಂದ್ರಕ್ಕೆ ಬಾಹ್ಯಾಕಾಶ ನೌಕೆಯಲ್ಲಿರುವ ಸೆನ್ಸರ್ ಗಳ ಮೇಲೆ ಯಾವುದೇ ನಿಯಂತ್ರಣವಿರುವುದಿಲ್ಲ. ಈ 15 ನಿಮಿಷಗಳ 1 ಸೆಕೆಂಡ್ ಹೆಚ್ಚು ಕಡಿಮೆ ಆದರೂ, ಅಥವಾ ಸೆನ್ಸರ್ ಗಳಲ್ಲಿ ಯಾವುದೇ ಸಮಸ್ಯೆ ಎದುರಾದರು ಇಡೀ ಮಿಷನ್ ಯಶಸ್ವಿಯಾಗುವುದು ಕಷ್ಟ ಇದೆ.ಒಮ್ಮೆ ಪ್ರಕ್ರಿಯೆ ಪ್ರಾರಂಭವಾಯಿತೆಂದರೆ ಮರುಪರಿಶೀಲನೆ, ಪ್ರಕ್ರಿಯೆ ಹಿಂತೆಗೆದುಕೊಳ್ಳುವುದಕ್ಕೆ ಅವಕಾಶವಿಲ್ಲ. ಈ ಪ್ರಕ್ರಿಯೆ ವೇಳೆ ವಿಕ್ರಮ್ ತನ್ನ ವೇಗವನ್ನು, ಮೇಲ್ಮೈನಿಂದ 800 ಮೀಟರ್ ಎತ್ತರದಲ್ಲೇ ಥ್ರಸ್ಟರ್‌ ಗಳ ಸಹಾಯದಿಂದ ನಿಯಂತ್ರಿತ ವಿಧಾನದಲ್ಲಿ ಸೆಕೆಂಡ್ ಗೆ 1.6 ಕಿ.ಮೀ ನಿಂದ ಶೂನ್ಯಕ್ಕೆ ಇಳಿಸಿಕೊಳ್ಳಬೇಕಾಗುತ್ತದೆ.
( ಮಾಹಿತಿ – ವಿವಿಧ ಮೂಲಗಳು)
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಜಾಗತಿಕ ಮಾರುಕಟ್ಟೆಯಲ್ಲಿ ರಬ್ಬರ್‌ಗೆ ಐತಿಹಾಸಿಕ ದರ – ಕೆಜಿಗೆ ₹300 ಗಡಿ ದಾಟಿದ ಬೆಲೆ, ಭಾರತದಲ್ಲಿ RSS-4 ರಬ್ಬರ್‌ ಗೆ ಏರಿಕೆ

ಜಾಗತಿಕ ಮಾರುಕಟ್ಟೆಯಲ್ಲಿ ನೈಸರ್ಗಿಕ ರಬ್ಬರ್ ಬೆಲೆ ಮೊದಲ ಬಾರಿಗೆ ಕೆಜಿಗೆ ₹300 ಗಡಿ…

1 hour ago

ಹಣ್ಣುಗಳಲ್ಲಿ ಕೀಟನಾಶಕ ಅವಶೇಷಗಳ ಭಯವೇ? ನೈಸರ್ಗಿಕವಾಗಿ ಸ್ವಚ್ಛಗೊಳಿಸುವ ಸರಳ ವಿಧಾನಗಳು

ಬೇಸಿಗೆಯ ಹಣ್ಣುಗಳನ್ನು ತಿನ್ನುವ ಮೊದಲು ಹರಿಯುವ ನೀರು, ಬೇಕಿಂಗ್ ಸೋಡಾ ಅಥವಾ ವಿನೆಗರ್…

2 hours ago

Facebook, Instagram ಏಕಾಏಕಿ ಸ್ಥಗಿತ – ಜಾಗತಿಕವಾಗಿ ಲಕ್ಷಾಂತರ ಬಳಕೆದಾರರಿಗೆ ತೊಂದರೆ

ಮೆಟಾ ಒಡೆತನದ Facebook, Instagram ಮತ್ತು Messenger ಸೇವೆಗಳು ಜಾಗತಿಕ ಮಟ್ಟದಲ್ಲಿ ತಾಂತ್ರಿಕ…

12 hours ago

ಉತ್ತರ ಪ್ರದೇಶದಲ್ಲಿ ಅಡಿಕೆ ಮೇಲಿನ ಮಂಡಿ ತೆರಿಗೆ ರದ್ದುಪಡಿಸಿ – ಯೋಗಿ ಆದಿತ್ಯನಾಥ್‌ಗೆ ಕ್ಯಾಂಪ್ಕೊ ಮನವಿ

ಉತ್ತರ ಪ್ರದೇಶದಲ್ಲಿ ಅಡಿಕೆ ವ್ಯಾಪಾರದ ಮೇಲೆ ವಿಧಿಸಲಾಗುತ್ತಿರುವ ಮಂಡಿ ತೆರಿಗೆಯನ್ನು ರದ್ದುಗೊಳಿಸುವಂತೆ ಕ್ಯಾಂಪ್ಕೊ…

13 hours ago

ವಿದ್ಯಾರ್ಥಿ- ರೈತರ ವಾಕಥಾನ್ | ಪ್ರಕೃತಿ, ಯುವಜನತೆ ಮತ್ತು ಆರ್ಥಿಕತೆ – ಜೂನ್ 14 ರಂದು ಬೆಂಗಳೂರಿನಲ್ಲಿ ವಿಶೇಷ ಕಾರ್ಯಕ್ರಮ

ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ಜೂನ್ 14 ರಂದು "ಸ್ಟೂಡೆಂಟ್ಸ್ ಫಾರ್ಮರ್ಸ್ ವಾಕಥಾನ್ "…

20 hours ago