ಸುಳ್ಯ : ತಾಲೂಕಿನ ಪ್ರಥಮ ನೋಂದಾಯಿತ ಯುವಕ ಮಂಡಲವಾಗಿದ್ದು ಸುವರ್ಣ ಮಹೋತ್ಸವದ ಸಂಭ್ರಮದ ಪೂರ್ವಭಾವಿ ಸಭೆಯು ಯುವಕ ಮಂಡಲದ ಅಧ್ಯಕ್ಷರಾದ ವಿಜಯಕುಮಾರ್ ಉಬರಡ್ಕರವರ ಅಧ್ಯಕ್ಷತೆಯಲ್ಲಿ ಡಿ. 8ರಂದು ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಗ್ರಾಮಪಂಚಾಯತ್ ಅಧ್ಯಕ್ಷರಾದ ಹರಿಪ್ರಸಾದ್ ಪಾನತ್ತಿಲ, ಯುವಕಮಂಡಲದ ಪೂರ್ವಧ್ಯಕ್ಷರಾದ ಶ್ಯಾಮ್ ಪಾನತ್ತಿಲರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸುವರ್ಣ ಮಹೋತ್ಸವ ಸಮಿತಿಯನ್ನು ರಚಿಸಲಾಯಿತು. ಸುವರ್ಣ ಮಹೋತ್ಸವ ಸಮಿತಿಯ ಗೌರವಧ್ಯಕ್ಷರಾಗಿ ಚಂದ್ರಶೇಖರ್ ಗೌಡ ಪಾನತ್ತಿಲ, ಗೌರವ ಕಾರ್ಯದರ್ಶಿಯಾಗಿ ಸೋಮಪ್ಪ ಗೌಡ ಪಾನತ್ತಿಲ, ಅಧ್ಯಕ್ಷ ರಾಜೇಶ್ ಭಟ್ ನೆಕ್ಕಿಲ, ಪ್ರಧಾನಕಾರ್ಯದರ್ಶಿ ಆನಂದ ಮೊಂಟಡ್ಕ, ಕೋಶಾಧಿಕಾರಿ ಮನೋಹರ ಕಾಚೇಲು, ಕಾರ್ಯಾಧ್ಯಕ್ಷ ಹರೀಶ್ ಉಬರಡ್ಕ, ಉಪಾಧ್ಯಕ್ಷರು ಶ್ಯಾಮ್ ಪಾನತ್ತಿಲ, ಶಾರಧ ಡಿ ಶೆಟ್ಟಿ , ರಾಘವ ಬಿ ರಾವ್, ನವೀನ್ ರೈ, ಕಾರ್ಯದರ್ಶಿ ಗಳು ಹರಿಪ್ರಸಾದ್ ಪಾನತ್ತಿಲ, ಗಂಗಾಧರ ನಾಯರ್
ನಿರ್ದೇಶಕರು ಶಿವಾನಂದ ಪಾಪನಡ್ಕ , ಸದಾನಂದ ಕೊರಂಬಡ್ಕ, ಪ್ರಸಾಂತ್ ಉಬರಡ್ಕ, ಗಂಗಾಧರ್ ಬರ್ಜೆರಿ ಗುಂಡಿ, ಪ್ರಶಾಂತ್ ಪಾನತ್ತಿಲ, ದಿನೇಶ್ ಬೈತಡ್ಕ, ಶಶಿಧರ್ ನಾಯರ್, ದಿವಾಕರ್ ಸೆಟ್ಟಿಹಿತ್ಲು, ಉದಯಕುಮಾರ್ ಮಾಣಿಬೆಟ್ಟು, ರಾಜೇಶ್ ರೈ ಉಬರಡ್ಕ ಇವರುಗಳನ್ನು ಆಯ್ಕೆ ಮಾಡಲಾಯಿತು.
ರಾಜೇಶ್ ಭಟ್ ಸ್ವಾಗತಿಸಿದ ಕಾರ್ಯಕ್ರಮವನ್ನು ಸದಾನಂದ ಕೊರಂಬಡ್ಕ ನಿರೂಪಿಸಿದರು. ಆನಂದ ಮೊಂಟಡ್ಕ ಕೊನೆಯಲ್ಲಿ ವಂದಿಸಿದರು.
ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಇಳಿಮುಖವಾಗುತ್ತಿದ್ದು, ಕರಾವಳಿ–ಮಲೆನಾಡಿನಲ್ಲಿ ಸೆ.8ರಿಂದ 10ರವರೆಗೆ ಅಲ್ಲಲ್ಲಿ…
ಭಾರತ–ಜಪಾನ್ JCM ಮೂಲಕ ಭಾರತದಲ್ಲಿ ಕಡಿಮೆ-ಇಂಗಾಲ ಯೋಜನೆಗಳಿಗೆ ಜಪಾನ್ ಹೂಡಿಕೆ ಮತ್ತು ತಂತ್ರಜ್ಞಾನ…
ಸಿಕ್ಕಿಂನಲ್ಲಿ 40 ಹೆಚ್ಚಿನ ಅಪಾಯದ ಹಿಮನದಿ ಸರೋವರಗಳನ್ನು ಗುರುತಿಸಲಾಗಿದ್ದು, 16 ಸರೋವರಗಳು ಅತ್ಯಂತ…
2026ರ ಆಗಸ್ಟ್ ವೇಳೆಗೆ ಎಲ್ ನಿನೊ ಆರಂಭವಾಗಿದ್ದು , ವರ್ಷಾಂತ್ಯದ ವೇಳೆಗೆ ಅತ್ಯಂತ…
ನಾಗಾಲ್ಯಾಂಡ್ನಲ್ಲಿ ರಬ್ಬರ್ ಕೃಷಿ ಸುಮಾರು 29,794 ಹೆಕ್ಟೇರ್ಗೆ ವಿಸ್ತರಿಸಿರುವ ಬೆನ್ನಲ್ಲೇ ಜಾರ್ಖಂಡ್ನಲ್ಲಿ ಸೂಕ್ತ…
ದಾವಣಗೆರೆ ಜಿಲ್ಲೆಯಲ್ಲಿ 15 ದಿನಗಳಿಂದ ಮಳೆ ಕೊರತೆಯಾಗಿದ್ದು, ಮುಂದಿನ ಕೆಲ ದಿನಗಳಲ್ಲೂ ಮಳೆಯಾಗದಿದ್ದರೆ…