ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅನೇಕ ವರ್ಷಗಳಿಂದ ಇದ್ದ ಬ್ರಹ್ಮರಥದ ಜಾಗದಲ್ಲಿ ಈಗ ನೂತನ ಬ್ರಹ್ಮರಥ ಇರಿಸಲಾಯಿತು. ಇದುವರೆಗೆ ಇದ್ದ ಹಳೆಯ ಬ್ರಹ್ಮರಥವನ್ನು ಸವಾರಿ ಮಂಟಪದ ಬಳಿ ಇಡುವ ಕಾರ್ಯ ನಡೆಯುತ್ತಿದೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಳೆದ ಹಲವಾರು ವರ್ಷಗಳಿಂದ ಚಂಪಾಷ್ಠಿ ಸಂದರ್ಭ ಎಳೆಯಲಾಗುವ ಬ್ರಹ್ಮರಥ ದೇಶದಲ್ಲೇ ಅತ್ಯಂತ ವಿಶಿಷ್ಠ ಎನಿಸಿದೆ. ಇದೀಗ ನೂತನ ಬ್ರಹ್ಮರಥ ನಿರ್ಮಾಣದ ಬಳಿಕ ಕೋಟೇಶ್ವರದಿಂದ ವಿಜೃಂಭಣೆಯಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ತರಲಾಗಿತ್ತು. ಈ ಬಾರಿಯ ಚಂಪಾ ಷಷ್ಠಿಗೆ ನೂತನ ಬ್ರಹ್ಮರಥ ಎಳೆಯಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಹಳೆಯ ಬ್ರಹ್ಮರಥ ತೆರವು ಕಾರ್ಯ ಮಂಗಳವಾರ ಕ್ರೇನ್ ಮೂಲಕ ನಡೆಯಿತು. ಹಳೆಯ ಬ್ರಹ್ಮರಥವನ್ನು ಸದ್ಯ ಸವಾರಿ ಮಂಟಪದ ಬಳಿ ಇರಿಸಲಾಗುತ್ತಿದೆ. ಮುಂದೆ ಆದಿ ಸುಬ್ರಹ್ಮಣ್ಯಕ್ಕೆ ತೆರಳುವ ರಸ್ತೆ ಬದಿ ಭಕ್ತಾದಿಗಳಿಗೆ ಕಾಣುವಂತೆ ಇರಿಸಬೇಕು ಎಂಬುದು ಭಕ್ತಾದಿಗಳ ಬೇಡಿಕೆಯಾಗಿದೆ.
ಅಡಿಕೆಯ ಆರೋಗ್ಯ ಸುರಕ್ಷತೆ ಮತ್ತು ಎಲೆಚುಕ್ಕೆ ರೋಗ ನಿಯಂತ್ರಣ ಕುರಿತು ಕ್ಯಾಂಪ್ಕೋ ನಿಯೋಗವು…
ರಾಜ್ಯದಲ್ಲಿ ಮುಂಗಾರು ದುರ್ಬಲಗೊಂಡಿದ್ದು ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಸಾಧ್ಯತೆ ಕಡಿಮೆ…
ನೈಸರ್ಗಿಕ ರಬ್ಬರ್ ಬೆಲೆ ಪ್ರತಿ ಕೆ.ಜಿಗೆ ₹263 ತಲುಪಿ ಹೊಸ ದಾಖಲೆ ನಿರ್ಮಿಸಿದೆ.…
2026 ರ ಮುಂಗಾರು ಉತ್ತಮ ಆರಂಭ ಕಂಡಿದ್ದರೂ ಎಲ್ನಿನೊ, ಋಣಾತ್ಮಕ IOD ಹಾಗೂ…
ಮಹಾರಾಷ್ಟ್ರದ ಹಿಂಗೋಲಿಯಲ್ಲಿ ₹2.34 ಕೋಟಿ ಮೌಲ್ಯದ 88,544 ಕೆ.ಜಿ. ಅಡಿಕೆಯನ್ನು ಆಹಾರ ಸುರಕ್ಷತಾ…
ಬೆಂಗಳೂರು ಹಣ್ಣು ಮೇಳಕ್ಕೆ ಭೇಟಿ ನೀಡಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು…