ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅನೇಕ ವರ್ಷಗಳಿಂದ ಇದ್ದ ಬ್ರಹ್ಮರಥದ ಜಾಗದಲ್ಲಿ ಈಗ ನೂತನ ಬ್ರಹ್ಮರಥ ಇರಿಸಲಾಯಿತು. ಇದುವರೆಗೆ ಇದ್ದ ಹಳೆಯ ಬ್ರಹ್ಮರಥವನ್ನು ಸವಾರಿ ಮಂಟಪದ ಬಳಿ ಇಡುವ ಕಾರ್ಯ ನಡೆಯುತ್ತಿದೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಳೆದ ಹಲವಾರು ವರ್ಷಗಳಿಂದ ಚಂಪಾಷ್ಠಿ ಸಂದರ್ಭ ಎಳೆಯಲಾಗುವ ಬ್ರಹ್ಮರಥ ದೇಶದಲ್ಲೇ ಅತ್ಯಂತ ವಿಶಿಷ್ಠ ಎನಿಸಿದೆ. ಇದೀಗ ನೂತನ ಬ್ರಹ್ಮರಥ ನಿರ್ಮಾಣದ ಬಳಿಕ ಕೋಟೇಶ್ವರದಿಂದ ವಿಜೃಂಭಣೆಯಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ತರಲಾಗಿತ್ತು. ಈ ಬಾರಿಯ ಚಂಪಾ ಷಷ್ಠಿಗೆ ನೂತನ ಬ್ರಹ್ಮರಥ ಎಳೆಯಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಹಳೆಯ ಬ್ರಹ್ಮರಥ ತೆರವು ಕಾರ್ಯ ಮಂಗಳವಾರ ಕ್ರೇನ್ ಮೂಲಕ ನಡೆಯಿತು. ಹಳೆಯ ಬ್ರಹ್ಮರಥವನ್ನು ಸದ್ಯ ಸವಾರಿ ಮಂಟಪದ ಬಳಿ ಇರಿಸಲಾಗುತ್ತಿದೆ. ಮುಂದೆ ಆದಿ ಸುಬ್ರಹ್ಮಣ್ಯಕ್ಕೆ ತೆರಳುವ ರಸ್ತೆ ಬದಿ ಭಕ್ತಾದಿಗಳಿಗೆ ಕಾಣುವಂತೆ ಇರಿಸಬೇಕು ಎಂಬುದು ಭಕ್ತಾದಿಗಳ ಬೇಡಿಕೆಯಾಗಿದೆ.
ಸ್ವಾತಂತ್ರ್ಯದ 79 ವರ್ಷಗಳ ಭಾರತದ ಪಯಣದಲ್ಲಿ ಕೃಷಿ -ಎತ್ತು-ನೇಗಿಲಿನಿಂದ ಡ್ರೋನ್, ಡಿಜಿಟಲ್ ಮಾಹಿತಿ…
ತೀವ್ರ ವಿರೋಧ ಹಾಗೂ ಅಡಿಕೆ ಬೆಳೆಗಾರರ ಮೇಲಿನ ಪರಿಣಾಮದ ಆತಂಕದ ಹಿನ್ನೆಲೆಯಲ್ಲಿ ರಾಜ್ಯದ…
ಗುಟ್ಕಾ–ಪಾನ್ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…
ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…
ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…