ಬೀಜಿಂಗ್: ಇಡೀ ಜಗತ್ತಿಗೆ ಕೊರೊನಾ ವೈರಸ್ ಹರಡಿದ ಚೀನಾದಲ್ಲಿ ಮೊದಲು ವೈರಸ್ ಕಂಡುಬಂದ ವುಹಾನ್ ಈಗ ಕಡಿಮೆ ಅಪಾಯದ ಪ್ರದೇಶ ಎಂದು ಚೀನಾ ಘೋಷಣೆ ಮಾಡಿದೆ. ಕಳೆದ ಕೆಲವು ದಿನಗಳ ನಿಗಾದ ಬಳಿಕ ಚೀನಾ ಈ ಘೋಷಣೆ ಮಾಡಿದೆ.
ಚೀನಾದ ಆರೋಗ್ಯ ಅಧಿಕಾರಿಗಳು ಭಾನುವಾರ ಈ ಮಾಹಿತಿ ತಿಳಿಸಿದ್ದು ಚೀನಾದ ಸ್ಟೇಟ್ ಕೌನ್ಸಿಲ್ ಹೊರಡಿಸಿದ ಮಾರ್ಗಸೂಚಿಯಲ್ಲಿ ವ್ಯಾಖ್ಯಾನಿಸಲಾದ ಅಪಾಯದ ಮಾನದಂಡಗಳ ಪ್ರಕಾರ, ಕಳೆದ 14 ದಿನಗಳಲ್ಲಿ ಹೊಸದಾಗಿ ಕೊರೊನಾ ವೈರಸ್ ದೃಢಪಟ್ಟ ಪ್ರಕರಣಗಳಿಲ್ಲದ ನಗರಗಳು ಮತ್ತು ಜಿಲ್ಲೆಗಳನ್ನು ಈಗ ಕಡಿಮೆ-ಅಪಾಯದ ಪ್ರದೇಶಗಳಾಗಿ ವರ್ಗೀಕರಿಸಲಾಗಿದೆ. ಇದರಲ್ಲಿ ಕೊರೊನಾ ವೈರಸ್ ತವರು ವುಹಾನ್ ಕೂಡಾ ಸೇರಿದೆ.
ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗವು (ಎನ್ಎಚ್ಸಿ) ಭಾನುವಾರ ದೇಶದಲ್ಲಿ 16 ಹೊಸ ಕೊರೊನಾ ಪ್ರಕರಣಗಳಿದೆ ಎಂದು ಪ್ರಕಟಿಸಿದೆ. ಶನಿವಾರ ಯಾವುದೇ ಮೃತಪಟ್ಟ ವರದಿಯಾಗಿಲ್ಲವಾದ್ದರಿಂದ ಸಾವಿನ ಸಂಖ್ಯೆ 4,632 ರಷ್ಟಿದೆ ಎಂದು ಅದು ಹೇಳಿದೆ. ಚೀನಾದಲ್ಲಿ ಒಟ್ಟಾರೆ ದೃಢಪಟ್ಟ ಕೊರೊನಾ ವೈರಸ್ ಪ್ರಕರಣಗಳು ಶನಿವಾರದ ವೇಳೆಗೆ 82,735 ಕ್ಕೆ ತಲುಪಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿರುವ 1,041 ರೋಗಿಗಳು, ಚೇತರಿಕೆಯ ನಂತರ ಬಿಡುಗಡೆಯಾದ 77,062 ಜನರು ಮತ್ತು ರೋಗದಿಂದ ಸಾವನ್ನಪ್ಪಿದವರ ಸಂಖ್ಯೆ 4,632 ಮಂದಿ ಎಂದು ವರದಿ ಹೇಳಿದೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ಮೊದಲ ಬಾರಿಗೆ ಕೊರೊನಾ ವೈರಸ್ ಚೀನಾದ ವುಹಾನ್ ನಲ್ಲಿ ಕಂಡುಬಂದಿತ್ತು. ನಂತರ ಅದು ಹರಡಿತ್ತು. ಏ.16 ರ ಹೊತ್ತಿಗೆ, ವುಹಾನ್ನಲ್ಲಿ 50,333 ಮಂದಿಗೆ ಕೊರೊನಾ ವೈರಸ್ ದೃಢಪಟ್ಟಿತ್ತು. 3,869 ಮಂದಿ ಸಾವನ್ನಪ್ಪಿದ್ದರು. ಆದರೆ ಇಡೀ ಚೀನಾದಲ್ಲಿ ಒಟ್ಟಾರೆ ಮೃತಪಟ್ಟವರು 4,632 ಜನ.
ಇದೀಗ ಅಧಿಕೃತ ಅಧಿಸೂಚನೆಗಳ ಪ್ರಕಾರ ವುಹಾನ್ ನಗರದಲ್ಲಿ ವೈರಸ್ ಹರಡಿದ ಪ್ರಕರಣಗಳು ಮತ್ತು ಸಾವುಗಳು ಕಡಿಮೆಯಾದ ಕಾರಣ ಕಡಿಮೆ ಅಪಾಯದ ಪ್ರದೇಶ ಎಂದು ಘೋಷಿಸಲಾಗಿದೆ. ಆದರೆ ವುಹಾನ್ ನಿಂದ ಹೊರಹೋಗುವ ಹಾಗೂ ಒಳಬರುವ ಜನರ ಮೇಲೆ ನಿಗಾ ಇಡಲಾಗುತ್ತಿದೆ ಎಂದು ಆರೋಗ್ಯ ಸಂಸ್ಥೆ ಹೇಳಿದೆ.
ಅಧಿಕ ಜನಸಂಖ್ಯೆ ಹೊಂದಿರುವ ಚೀನಾದ ಹುಬೈ ಹಾಗೂ ವುಹಾನ್ ಜ. 23 ರಿಂದ ಲಾಕ್ಡೌನ್ ನಲ್ಲಿತ್ತು. ಎ.8 ರಂದು ಸಡಿಲಿಕೆ ಮಾಡಿತ್ತು. ಇದೀಗ ಕಡಿಮೆ ಅಪಾಯದ ಪ್ರದೇಶ ಎಂದು ಗುರುತಿಸಲಾಗಿದೆ.
( ಪಿಟಿಐ ವರದಿ )
ಝಾರ್ಖಂಡ್ನ ಮಹಿಳಾ ರೈತರು ಬೆಳೆದ 1.5 ಮೆಟ್ರಿಕ್ ಟನ್ ಆಮ್ರಪಾಲಿ ಮಾವುಗಳು ಮೊದಲ…
ಕರ್ನಾಟಕದಲ್ಲಿ ಜೂನ್ 8ರಿಂದ 11ರವರೆಗೆ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ.
ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಜೂನ್ 9ರಿಂದ ಉತ್ತಮ ಮಳೆಯ ನಿರೀಕ್ಷೆ ಇದೆ.…
ದೇಶದಲ್ಲಿ ನೈಋತ್ಯ ಮುಂಗಾರು ಚುರುಕುಗೊಂಡಿದ್ದು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುವ…
ರಾಜಸ್ಥಾನದಲ್ಲಿ ಕಳೆದ ಎರಡು ವರ್ಷಗಳಲ್ಲಿ ಕೀಟನಾಶಕ ಬಳಕೆಯಿಂದ 535 ರೈತರು ಮೃತಪಟ್ಟಿರುವುದು ಬಹಿರಂಗವಾಗಿದೆ.…
ಕೊಟ್ಟಿಯೂರು ದೇವಸ್ಥಾನದಲ್ಲಿ ‘ಬಾವಳಿಕೆಟ್ಟು’ ಆಚರಣೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ವಿವಾದ ಹುಟ್ಟಿಕೊಂಡಿದೆ.…