ರಾಜ್ಯ

ಕ್ಯಾಂಪ್ಕೋ ಹೊಸ ಚಾಕೋಲೇಟ್ “ಸ್ಪೈಸ್ ಟೋಫಿ” ಬಿಡುಗಡೆ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಮಂಗಳೂರು: ಕ್ಯಾಂಪ್ಕೋ ವತಿಯಿಂದ ನೂತನ ಚಾಕೋಲೇಟ್ ಸ್ಪೈಸ್ ಟೋಫಿ ಬುಧವಾರ ಬಿಡುಗಡೆಗೊಂಡಿದೆ. ನೂತನ ಉತ್ಪನ್ನವು ಸಕ್ಕರೆ ಆಧಾರಿತ ಸಿರಪ್ ಗಳಿಂದ ಮತ್ತು  ಸೈಸರ್ಗಿಕ ಕಾಳುಮೆಣಸು ಪುಡಿ ಹಾಗೂ ಶಂಠಿ ಸಾರಗಳಿಂದ ತಯಾರಿಸಲ್ಪಟ್ಟ ಉತ್ಪನ್ನವಾಗಿದೆ.

Advertisement
Advertisement

ನೂತನ ಉತ್ಪನ್ನ ಸ್ಪೈಸ್ ಟೋಫಿ ಯಲ್ಲಿ ಗ್ಲೂಕೋಸ್ ನೊಂದಿಗೆ ಶುಂಠಿ ಸಾರ ಹಾಗೂ ಕಾಳುಮೆಣಸು ಪುಡಿ ಇರುವುದರಿಂದ ಇದು  ದೇಹದ ಸಮತೋಲನ ಕಾಪಾಡುವಲ್ಲಿ ಹಾಗೂ ದೇಹವನ್ನು ತಂಪಾಗಿರಿಸುವಲ್ಲಿ  ಮತ್ತು  ದಣಿವನ್ನು ನಿವಾರಿಸುವಲ್ಲಿ  ಸಹಕಾರಿಯಾಗುತ್ತದೆ ಅಲ್ಲದೆ ಮೌತ್ ಫ್ರೆಶ್ನರ್ ಆಗಿಯೂ ಕೂಡಾ ಕೆಲಸ ಮಾಡುತ್ತದೆ. ಕ್ಯಾಂಪ್ಕೋದಿಂದ ತಯಾರಿಸಲ್ಪಟ್ಟ ವಿಶಿಷ್ಟ ಉತ್ಪನ್ನ ಇದಾಗಿದೆ. ಆರಂಭಿಕ ಹಂತದಲ್ಲೇ ಉತ್ತಮ ಪ್ರತಿಕ್ರೆಯೆ ವ್ಯಕ್ತವಾಗಿದೆ.

ಮಂಗಳೂರಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಸ್ಪೈಸ್ ಟೋಫಿ ಬಿಡುಗಡೆಗೊಳಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ  ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ , ಉಪಾಧ್ಯಕ್ಷ ಶಂ.ನಾ ಖಂಡಿಗೆ, ಕ್ಯಾಂಪ್ಕೋ ಆಡಳಿತ ನಿರ್ದೇಶಕ ಸುರೇಶ್ಚಂದ್ರ ಭಂಡಾರಿ ಮೊದಲಾದವರು ಮಾತನಾಡಿದರು.

Advertisement

ಕೃಷಿಕರು ಸ್ವಾವಲಂಬನೆ ಸಾಧಿಸುವ ಹೆಬ್ಬಯಕೆಯೊಂದಿಗೆ ಆರಂಭವಾದ ಸಹಕಾರಿ  ಸಂಸ್ಥೆ ಕ್ಯಾಂಪ್ಕೋ. ಅಡಿಕೆ ಮಾತ್ರವಲ್ಲ ಇಂದು ಕೊಕೋ, ಕಾಳುಮೆಣಸು, ರಬ್ಬರ್ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಚಾಕೋಲೇಟ್ ತಯಾರಿಕೆಯ ಮೂಲಕ ಕೊಕೋ ಮೌಲ್ಯವರ್ಧನೆಯನ್ನೂ ಮಾಡಿದೆ.  ಈಗ ಚಾಕೋಲೇಟ್ ಮಾರುಕಟ್ಟೆಯಲ್ಲೂ ದೇಶದಲ್ಲೇ ಕ್ಯಾಂಪ್ಕೋ ಹೆಸರು ಮಾಡಿದೆ. ಇದೀಗ ಚಾಕೋಲೇಟ್ ಬಗ್ಗೆ ವಿಶಿಷ್ಟ ಸೃಜನಾತ್ಮಕ ಪ್ರಚಾರ ಅಭಿಯಾನವನ್ನು  ಕೈಗೊಳ್ಳಲಾಗಿದೆ. 60 ಸೆಕೆಂಡ್ ಡಿಜಿಟಲ್ ಚಿತ್ರದ ಮೂಲಕ ಮುದ್ರಣ, ರೇಡಿಯೋ, ದೃಶ್ಯಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ  ವ್ಯಾಪಕ ಪ್ರಚಾರ ಅಭಿಯಾನ ನಡೆಸಲಾಗುತ್ತಿದೆ, ಜನಸಾಮಾನ್ಯರು ಕ್ಯಾಂಪ್ಕೋ ಚಾಕಲೇಟ್ ನೊಂದಿಗೆ ಸಂಭ್ರಮಿಸುವಂತೆ ಪ್ರೇರಣೆ ನೀಡುವುದು  ಈ ಅಭಿಯಾನದ ಉದ್ದೇಶವಾಗಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್ ಆರ್ ಸತೀಶ್ಚಂದ್ರ ತಿಳಿಸಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 10-06-2025 | ಜೂ.11 ರಿಂದ ರಾಜ್ಯದ ವಿವಿದೆಡೆ ಉತ್ತಮ ಮಳೆಯ ಮುನ್ಸೂಚನೆ

ಜೂನ್ 12ರಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಉತ್ತಮ ಹಾಗೂ ಕೆಲವು ಭಾಗಗಳಲ್ಲಿ ಭಾರಿ…

7 minutes ago

ಮುಂದಿನ 4-5 ದಿನಗಳಲ್ಲಿ ದೇಶದ ವಾಯುವ್ಯ ಭಾಗಗಳಲ್ಲಿ ತೀವ್ರ ತಾಪಮಾನ | ದಕ್ಷಿಣದಲ್ಲಿ ಉತ್ತಮ ಮಳೆ |

ಜೂನ್‌ 12 ರಿಂದ 15 ರವರೆಗೆ ಕರ್ನಾಟಕದಲ್ಲಿ  ಮತ್ತು ಜೂನ್ 13 ರಿಂದ…

7 hours ago

ಈರುಳ್ಳಿ ಮತ್ತು ಕೆಂಪುಮೆಣಸಿನಕಾಯಿ ಬೆಳೆಗಳಿಗೆ ವಿಮಾ ಸೌಲಭ್ಯ ಅಧಿಸೂಚನೆ

ಗದಗ ಜಿಲ್ಲೆಯಲ್ಲಿ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯಡಿ ತೋಟಗಾರಿಕೆ ಬೆಳೆಗಳಾದ…

7 hours ago

11 ವರ್ಷಗಳಲ್ಲಿ ಭಾರತದ ಕಡು ಬಡವರ ಸಂಖ್ಯೆ ತಗ್ಗಿದೆ – ಸಚಿವ ಪ್ರಹ್ಲಾದ್ ಜೋಶಿ

ಕಳೆದ 11 ವರ್ಷಗಳಲ್ಲಿ ಭಾರತದ ಕಡು ಬಡವರ ಸಂಖ್ಯೆ ಶೇಕಡ 21.1 ರಿಂದ…

7 hours ago

25 ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್ ಹೆದ್ದಾರಿಗಳ ನಿರ್ಮಾಣ -ಸಚಿವ ನಿತಿನ್‌ ಗಡ್ಕರಿ

ಬಂದರು ಸಂಪರ್ಕಕ್ಕಾಗಿ ಮತ್ತು ಧಾರ್ಮಿಕ ಪ್ರವಾಸೋದ್ಯಮಕ್ಕಾಗಿ 3 ಸಾವಿರ ಕಿಲೋ ಮೀಟರ್‌ಗಿಂತ  ಹೆಚ್ಚಿನ…

7 hours ago

ಧನ, ಧಾನ್ಯ, ಸಂಪತ್ತಿಗಾಗಿ ಇಂತಹ ಕೆಲಸಗಳನ್ನು ಮಾಡಿ…

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

7 hours ago