ಸುಳ್ಯ: ಭಾನುವಾರ ರಾತ್ರಿ 9 ಗಂಟೆಗೆ… 9 ನಿಮಿಷಗಳ ಕಾಲ ದೀಪ ಹಚ್ಚೋಣ. ಹಣತೆಯ ದೀಪವಾದರೆ ಉತ್ತಮ. ದೀಪ ಬೆಳಗುವುದು ಎಂದರೆ ಕೇವಲ ದೀಪವಲ್ಲ ಅದರಲ್ಲೊಂದು ಶಕ್ತಿ ಇದೆ. ಆತ್ಮಬಲ ಸಿಗಲಿದೆ. ಹೀಗೆಂದು ಜ್ಯೋತಿಷ್ಯದ ವಿವರಣೆಯೂ ಇದೆ.
ದೀಪ ಹಚ್ಚುವ ಸಮಯದಲ್ಲಿ ಸಾಧ್ಯವಿದ್ದವರು ಈ ಸಾಲುಗಳನ್ನು ಹೇಳಿದರೆ ಇನ್ನೂ ಉತ್ತಮ
ಪೃತನಾಜಿತಗ್ಂ ಸಹಮಾನಮುಗ್ರಮಗ್ನಿಗ್ಂ ಹುವೇಮ
ಪರಮಾತ್ ಸಧಸ್ಥಾತ್ | ಸ ನ: ಪರ್ಷದತಿ ದುರ್ಗಾಣಿ ವಿಶ್ವಾ
ಕ್ಷಾಮದ್ದೇವೋ ಅತಿ ದುರಿತಾತ್ಯಗ್ನಿ: |
ಅಂದರೆ ,ಈ ವಾಕ್ಯವು ಅಗ್ನಿದೇವನ ಸ್ತುತಿ.
ಶತ್ರುಸೇನೆಯನ್ನು ಪೃತನಾ ಎನ್ನುವರು. ಇದನ್ನು ಜಯಿಸುವವನು ಪೃತನಾಜಿತನು. ಸಹಾಮಾನವೆಂದರೆ ಶತ್ರುಗಳನ್ನು ಹಿಮ್ಮೆಟ್ಟಿಸುವವನು ಎಂದರ್ಥ. ಈ ಎರಡೂ ಗುಣಗಳುಳ್ಳ ಉಗ್ರನೂ ಆದ ಅಗ್ನಿಯು ಉತ್ಕೃಷ್ಟವಾದ ದೇಶದಲ್ಲಿ ತನ್ನ ಸೇವಕರೊಡಗೂಡಿನ ಇದ್ದುಕೊಂಡಿರುವನಷ್ಟೇ, ಅವನನ್ನು ಆಹ್ವಾನಿಸುವೆವು. ಅವನು ನಮ್ಮ ಅತಿ ಕಷ್ಟಕರವಾದ ಸನ್ನಿವೇಶಗಳನ್ನೆಲ್ಲ ನಾಶಗೊಳಿಸುವವನಾಗಲಿ ಮತ್ತು ಅಗ್ನಿ ದೇವನು ಅಪರಾಧಿಗಳಾದ ನಮ್ಮನ್ನು ಕ್ಷಮಿಸುವವನಾಗಿ ದುರಿತಗಳನ್ನೆಲ್ಲ ದೂರ ಮಾಡಿ ಶುದ್ದರಾಗುವಂತೆ ಮಾಡಲಿ ಎಂದರ್ಥ.
ಪ್ರಧಾನಿ ನರೇಂದ್ರ ಮೋದಿ ಅವರು ಹಣತೆ ಹಚ್ಚಲು ಹೇಳಿದ್ದಾರೆ, ಇದು ಭಾರತದಂತಹ ಆಧ್ಯಾತ್ಮ ಮೂಲದ ದೇಶದಲ್ಲಿ ಹೆಚ್ಚು ಪ್ರಭಾವ ಬೀರುವ ಸಂಗತಿಯಾಗಿದೆ. ಪ್ರತಿಯೊಬ್ಬರೂ ಇದರ ಆಚರಣೆ ಮಾಡಿದರೆ ದೈವೀಕ ಶಕ್ತಿ, ಆಯುರ್ವೇದ ಶಕ್ತಿ ಹೊಂದಿರುವ ಈ ದೇಶದಲ್ಲಿ ಹೆಚ್ಚು ಪರಿಣಾಮ ಬೀರಬಲ್ಲುದು ಎಂದು ಸುಳ್ಯದ ವಳಲಂಬೆಯ ವೇದ ವಿದ್ವಾಂಸರಾದ ಕರುವಜೆ ಕೇಶವ ಜೋಯಿಸರು ಹೇಳುತ್ತಾರೆ. ಪೃತನಾಜಿತಗ್ಂ….. ಸಾಲುಗಳು ಕೂಡಾ ದೇಶಕ್ಕೆ ಬಲ ತುಂಬಲಿದೆ ಎನ್ನುತ್ತಾರೆ ಕರುವಜೆ ಕೇಶವ ಜೋಯಿಸರು.
ಕರ್ನಾಟಕದ ಹಲವು ಭಾಗಗಳಲ್ಲಿ ಸೆ.5ರಿಂದ ಕೆಲವು ದಿನ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿವೆ.…
ಹಿಮನದಿ ಕುಸಿತದಿಂದ ಸಂಭವಿಸಿದ ಭೀಕರ ಪ್ರವಾಹದ ಬಳಿಕ ನೇಪಾಳ ಪ್ರಧಾನಿ ಬಾಲೆಂದ್ರ ಶಾ…
2023ರಿಂದ 2026ರವರೆಗೆ ದೇಶದ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರೀಕ್ಷಿಸಿದ 70,652…
ಕಾಸರಗೋಡಿನ ICAR-CPCRIನಲ್ಲಿ ವಿಶ್ವ ತೆಂಗು ದಿನ–2026 ಆಚರಿಸಿ, ಹವಾಮಾನ ಅನಿಶ್ಚಿತತೆಯ ನಡುವೆ ತೆಂಗು…
ಕರಾವಳಿಯಲ್ಲಿ ಮುಂದಿನ ಎರಡು ದಿನ ಅಲ್ಲಲ್ಲಿ ಸಾಮಾನ್ಯ ಮಳೆಯಾದರೂ ಜೋರು ಮಳೆಯ ಸಾಧ್ಯತೆ…
ಕೃಷಿ ಉತ್ಪಾದನೆ ಹೆಚ್ಚಿಸಲು ಬ್ಯಾಂಕ್ಗಳು ರೈತರಿಗೆ ಹೆಚ್ಚಿನ ಸಾಂಸ್ಥಿಕ ಸಾಲ ನೀಡಬೇಕು ಎಂದು…