ಸುಳ್ಯ: ನಗರ ಪಂಚಾಯತ್ ಚುನಾವಣೆಯಲ್ಲಿ ಬಿರುಸಿನ ಮತದಾನ ನಡೆದಿದ್ದು ಸುಳ್ಯದಲ್ಲಿ ಶೇ. 75.68 ಮತದಾನ ನಡೆದಿದೆ.
ನಗರದ 14,093 ಮತದಾರರಲ್ಲಿ 10,665 ಮಂದಿ ಮತದಾರರು ಮತ ಚಲಾಯಿಸಿದ್ದಾರೆ. ಎರಡನೇ ವಾರ್ಡ್ ಕೊಯಿಕುಳಿಯಲ್ಲಿ ಅತೀ ಹೆಚ್ಚು ಅಂದರೆ ಶೇ.86.46 ಮತದಾನವಾಗಿದೆ. ಇಲ್ಲಿ 743 ಮತದಾರರಲ್ಲಿ 638 ಮಂದಿ ಮತ ಚಲಾಯಿಸಿದ್ದಾರೆ. ಒಂದನೇ ವಾರ್ಡ್ ದುಗ್ಗಲಡ್ಕದಲ್ಲಿ ಹೆಚ್ಚು ಅಂದರೆ ಶೇ.85.87 ಮತದಾನವಾಗಿದೆ. ಇಲ್ಲಿ 606 ಮತದಾರರಲ್ಲಿ 524 ಮಂದಿ ಮತ ಚಲಾಯಿಸಿದ್ದಾರೆ. 13ನೇ ವಾರ್ಡ್ ಬೂಡುವಿನಲ್ಲಿ 85.15 ಶೇ. ಮತ ಚಲಾವಣೆಯಾಗಿದೆ. ಇಲ್ಲಿ 404 ಮತದಾರರಲ್ಲಿ 344 ಮಂದಿ ಮತ ಚಲಾವಣೆ ಮಾಡಿದ್ದಾರೆ. ಎಂಟನೇ ವಾರ್ಡ್ನಲ್ಲಿ ಶೇ.63.64, ಏಳನೇ ವಾರ್ಡ್ನಲ್ಲಿ ಶೇ.63.81 ಕಡಿಮೆ ಮತದಾನ. 2013ರ ನಗರ ಪಂಚಾಯತ್ ಚುನಾವಣೆಯಲ್ಲಿ ಶೇ. 80.09 ಮತದಾನ ನಡೆದಿತ್ತು.
ವಾರ್ಡ್ ವಾರು ಶೇಕಡಾವಾರು ಮತದಾನ:
1(ದುಗ್ಗಲಡ್ಕ)-85.87
2(ಕೊಯಿಕುಳಿ)-86.47,
3(ಜಯನಗರ)-84.14,
4(ಶಾಂತಿನಗರ)-73.24,
5(ಹಳೆಗೇಟು)-73.21,
6(ಬೀರಮಂಗಲ)-75.09,
7(ಬಿಡಿಒ-ಅಂಬೆಟಡ್ಕ)-63.81,
8(ಕುರುಂಜಿಭಾಗ್)-63.64,
9(ಕುರುಂಜಿಗುಡ್ಡೆ)-78.29,
10(ಪುರಭವನ-ಕೇರ್ಪಳ)-76.70,
11(ಕೇರ್ಪಳ-ಭಸ್ಮಡ್ಕ)-77.81,
12(ಕೆರೆಮೂಲೆ)-68.71
13(ಬೂಡು)-85.15,
14(ಕಲ್ಲುಮುಟ್ಲು)-77.65,
15(ನಾವೂರು)-78.53,
16(ಕಾಯರ್ತೋಡಿ)-75.62,
17(ಬೋರುಗುಡ್ಡೆ)-73.66,
18(ಜಟ್ಟಿಪಳ್ಳ)-75.46.
19(ಮಿಲಿಟ್ರಿ ಗ್ರೌಂಡ್)-75.88,
20(ಕಾನತ್ತಿಲ)-70.18 ಶೇಖಡಾ ಮತದಾನವಾಗಿದೆ.
ಅಡಿಕೆ ತೋಟಗಳಲ್ಲಿ ಹೆಚ್ಚುತ್ತಿರುವ ಎಲೆ ಚುಕ್ಕೆ, ಹಳದಿ ಎಲೆ ಮತ್ತು ಕೊಳೆ ರೋಗಗಳಿಗೆ…
ದೇಶಾದ್ಯಂತ ಮುಂಗಾರು ಮತ್ತಷ್ಟು ತೀವ್ರಗೊಂಡಿದ್ದು, ಉತ್ತರ ಭಾರತದ ಹಲವು ಭಾಗಗಳಿಗೆ ರೆಡ್ ಅಲರ್ಟ್…
ರಾಜ್ಯದಲ್ಲಿ ಮುಂಗಾರು ಮಳೆ 39% ಕೊರತೆಯಾಗಿದ್ದು, 26 ಜಿಲ್ಲೆಗಳ 178 ತಾಲ್ಲೂಕುಗಳಲ್ಲಿ ಬರದ…
ಪುತ್ತೂರಿನ ರಾಜಕೀಯದಲ್ಲಿ ವ್ಯಕ್ತಿತ್ವದ ಪ್ರಭಾವ ಹೆಚ್ಚುತ್ತಿರುವ ಕುರಿತು ಈ ವಿಶ್ಲೇಷಣೆ ಬೆಳಕು ಚೆಲ್ಲುತ್ತದೆ.…
ಕೊಪ್ಪರ ಬೆಲೆಯ ಏರಿಳಿತದಿಂದ ತುಮಕೂರಿನಲ್ಲಿ ರೈತರು ಅಡಿಕೆ ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ಇದರ…
ಜುಲೈ 20ರಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ಪ್ರಮಾಣ ಇಳಿಮುಖವಾಗುವ ಲಕ್ಷಣಗಳಿವೆ. ಉತ್ತರ…