Advertisement
ಸುದ್ದಿಗಳು

ಪರಿಸರ ದಿನದ ಮೋಹಕ ದೃಶ್ಯ : ಹಸಿರು ಸೂಸುವ ಸೀತಾವನ

Share

ಸುಳ್ಯ: ಎರಡು ವರ್ಷದ ಹಿಂದೆ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ನೆಟ್ಟ ಗಿಡಗಳು ಫಸಂದಾಗಿ ಬೆಳೆದು ಹಸಿರು ಸೂಸುತಿದೆ. ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕಲ್ಲೆಂಬಿಯಲ್ಲಿ ಭುವಿಯನ್ನೇ ಹಸಿರಾಗಿಸಿರುವ ಸೀತಾವನ ಈ ವಿಶ್ವ ಪರಿಸರ ದಿನಾಚರಣೆ ಸಂದರ್ಭದ ಮನಮೋಹಕ ದೃಶ್ಯ. ಪರಿಸರ ದಿನದಂದು ಹೆಸರಿಗೊಂದು ಗಿಡ ನೆಟ್ಟು ಅದನ್ನು ಅಲ್ಲಿಗೇ ಮರೆಯುವವರು ನೋಡಲೇ ಬೇಕಾದ ದೃಶ್ಯ.

ಸುಳ್ಯ-ಬಂದಡ್ಕ ಅಂತಾರಾಜ್ಯ ರಸ್ತೆ ಬದಿಯಲ್ಲಿ ಕಣ್ಣಿಗೆ ಮತ್ತು ಮನಸಿಗೆ ಹಸಿರ ಸೌಂಧರ್ಯ ಧಾರೆಯೆರೆಯುವ ಸೀತಾವನ ಕಂಡು ಬರುತ್ತಿದೆ. ಯುವ ಕೃಷಿಕ ಪ್ರವೀಣ್ ಕಲ್ಲೆಂಬಿ ಅವರ ಸ್ಥಳದಲ್ಲಿ ಗಿಡಗಳನ್ನು ನೆಟ್ಟು ಬೆಳೆಸಿ ಹಸಿರು ಲೋಕ ಸೃಷ್ಠಿಸಲಾಗಿದೆ. ಗ್ರಾಮ ವಿಕಾಸ ಸಮಿತಿ ಮತ್ತು ಅರಣ್ಯ ಇಲಾಖೆಯ ಸಹಕಾರದಲ್ಲಿ ಒಂದು ಏಕ್ರೆ ಸ್ಥಳದಲ್ಲಿ ಸೀತಾ ವನ ನಿರ್ಮಿಸಲಾಗಿದೆ. ಸುಳ್ಯದಲ್ಲಿ 2017ರಲ್ಲಿ ಗ್ರಾಮ ವಿಕಾಸ ಸಮಿತಿಯ ನೇತೃತ್ವದಲ್ಲಿ ವೃಕ್ಷಾಂದೋಲನ ನಡೆಸಿ ತಾಲೂಕಿನಾದ್ಯಂತ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆ ಸಂದರ್ಭದಲ್ಲಿ ಸೀತಾ ವನ ಮಾಡುವ ಆಶಯ ಉಂಟಾಯಿತು. ಅದಕ್ಕಾಗಿ ಸ್ಥಳ ನೀಡಲು ಪ್ರವೀಣ್ ಕಲ್ಲೆಂಬಿ ಮುಂದೆ ಬಂದರು. ಸುಮಾರು ಮುನ್ನೂರು ಗಿಡಗಳನ್ನು ನೆಡಲಾಯಿತು. ಅದರಲ್ಲಿ ಬಹುತೇಕ ಗಿಡಗಳು ಚೆನ್ನಾಗಿ ಬೆಳೆದು ಬಂದಿದೆ. ಅದಕ್ಕಿಂತ ಹಿಂದಿನ ವರ್ಷಗಳಲ್ಲಿ ನೆಟ್ಟ ಗಿಡಗಳು ಸೇರಿ ಸುಮಾರು ಏಂಟು ನೂರಕ್ಕೂ ಮಿಕ್ಕಿ ಗಿಡಗಳು ಸೀತಾವನದಲ್ಲಿ ರಾರಾಜಿಸುತಿದೆ. ಹಲಸು, ಮಾವು, ಮಹಾಗಣಿ, ಸಾಗುವಾನಿ, ಸಿಲ್ವರ್ ಓಕ್, ರಕ್ತ ಚಂದನ, ಹೀಗೆ ವಿವಿಧ ಜಾತಿಯ ಗಿಡಗಳನ್ನು ನೆಡಲಾಗಿದೆ. ತಮ್ಮ ಕುಟುಂಬದ ಐದು ಏಕ್ರೆ ಸ್ಥಳಲ್ಲಿ ಒಂದು ಎಕ್ರೆ ಸ್ಥಳವನ್ನು ಹಸಿರು ವನಕ್ಕಾಗಿ ಪ್ರವೀಣ್ ಮತ್ತು ಕುಟುಂಬದವರು ಸೇರಿ ಮೀಸಲಿಟ್ಟಿದ್ದಾರೆ. ಇವರ ಸ್ಥಳಪೂರ್ತಿಯಾಗಿ ಅಡಕೆ ತೋಟವಾಗಿತ್ತು. ಆದರೆ ಹಳದಿ ರೋಗ ಬಂದು ಅಡಕೆ ಕೃಷಿ ನಾಶವಾದಾಗ ರಬ್ಬರ್ ಕೃಷಿ ಮಾಡಿದ್ದರು. ಬೆಲೆಯಿಲ್ಲದೆ ರಬ್ಬರ್ ಕೃಷಿಯೂ ಕೈಕೊಟ್ಟಾಗ ತಮ್ಮ ಸ್ಥಳದ ಒಂದು ಎಕ್ರೆಯಲ್ಲಿ ಮರ ಗಿಡ ಬೆಳೆಸಲು ನಿರ್ಧರಿಸಲಾಯಿತು. ಕಳೆದ ಕೆಲವು ವರ್ಷಗಳಿಂದ ಇಲ್ಲಿ ಗಿಡ ನೆಡುತ್ತಾ ಬಂದಿದ್ದರೂ ಕಳೆದ ವರ್ಷದಿಂದ ಅದನ್ನು ಪೂರ್ತಿಯಾಗಿ ವನವಾಗಿ ಮಾರ್ಪಾಡು ಮಾಡಲಾಗಿದೆ.

 

ನೆಟ್ಟ ಗಿಡಗಳಿಗೆ ಆರಂಭದ ವರ್ಷಗಳಲ್ಲಿ ಗೊಬ್ಬರ, ನೀರು ಹಾಕಿ ಪೋಷಿಸಲಾಗುತ್ತದೆ. ಗಿಡಗಳು ಚೆನ್ನಾಗಿ ಬೆಳೆದು ಹಸಿರ ರಾಶಿಯಂತಾಗಿದೆ. ಪ್ರವೀಣ್ ಕಲ್ಲೆಂಬಿಯವರೇ ಇದರ ನಿರ್ವಹಣೆ ಮಾಡುತ್ತಾರೆ. ಗಿಡ ನಾಶವಾದ ಸ್ಥಳದಲ್ಲಿ ಮತ್ತು ಇದರಲ್ಲಿ ಉಳಿದ ಸ್ಥಳದಲ್ಲಿಯೂ ಕಳೆದ ವರ್ಷವೂ ಗಿಡಗಳನ್ನು ನೆಡಲಾಗಿದೆ.

 

ಈ ಬಗ್ಗೆ ಸುಳ್ಯನ್ಯೂಸ್.ಕಾಂ ಜೊತೆ ಮಾತನಾಡಿದ ಪ್ರವೀಣ್ ಕಲ್ಲೆಂಬಿ, “ಅಡಕೆ ಹಳದಿ ರೋಗ ಬಂದು ಕೃಷಿ ನಾಶವಾದಾದ ಭೂಮಿಯಲ್ಲಿ ಸ್ವಲ್ಪ ಭಾಗದಲ್ಲಿ ಅರಣ್ಯ ಬೆಳೆಯುವ ಯೋಜನೆ ಹಾಕಿ ಕೊಳ್ಳಲಾಗಿತ್ತು. ಅದನ್ನು ಇನ್ನಷ್ಟು ವಿಸ್ತರಿಸಿ ಸೀತಾ ವನ ನಿರ್ಮಿಸಲಾಗಿದೆ. ಇದರಿಂದ ಪರಿಸರ, ಕಾಡು ವೃದ್ದಿಯಾಗುವುದರ ಜೊತೆಗೆ ನಮ್ಮ ಭೂಮಿಗೆ ಇದೊಂದು ಆಸ್ತಿಯೂ ಆಗಬಹುದು” ಎನ್ನುತ್ತಾರೆ. 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ತಳಿಗಳ ಬಗ್ಗೆ ಹೊಸ ವೈಜ್ಞಾನಿಕ ಅಧ್ಯಯನ – ಅಡಿಕೆ ತಳಿಗಳಲ್ಲೂ ಆಲ್ಕಲಾಯ್ಡ್ ಪ್ರಮಾಣದಲ್ಲಿ ವ್ಯತ್ಯಾಸ

ICAR-CPCRI ಸಂಶೋಧನೆಯ ಪ್ರಕಾರ ಅಡಿಕೆ ತಳಿಗಳಲ್ಲಿ ಆಲ್ಕಲಾಯ್ಡ್ ಪ್ರಮಾಣದಲ್ಲಿ ಗಣನೀಯ ವ್ಯತ್ಯಾಸವಿದೆ. ಮಂಗಳ…

28 minutes ago

ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ – ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಯಲ್ಲಿ ಜು.25ರಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ…

9 hours ago

ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: ಜುಲೈ 30ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

ಮಂಗಳೂರಿನಲ್ಲಿ ಜುಲೈ 30ರಂದು ವಿವಿಧ ಖಾಸಗಿ ಸಂಸ್ಥೆಗಳ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನ…

10 hours ago

ರಸಗೊಬ್ಬರದಲ್ಲಿ ಆತ್ಮನಿರ್ಭರತೆ ಅನಿವಾರ್ಯ – ಸಂಕಷ್ಟದಿಂದ ಅವಕಾಶದತ್ತ ಭಾರತ ಸಾಗಬೇಕಿದೆ

ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿರುವ ಭಾರತ, ರಸಗೊಬ್ಬರದಲ್ಲಿ ಇನ್ನೂ ಆಮದು ಅವಲಂಬಿತವಾಗಿದೆ. ದೇಶೀಯ…

14 hours ago

ಹವಾಮಾನ ವರದಿ | 24-07-2026 | ಕರಾವಳಿಯಲ್ಲಿ ಮುಂದುವರಿಯುವ ಮಳೆ, ಜುಲೈ ಅಂತ್ಯದ ವೇಳೆಗೆ ಮುಂಗಾರು ಹೇಗೆ..?

ಕರಾವಳಿ ಮತ್ತು ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಯಲಿದ್ದು, ಸುಳ್ಯ-ಮಡಿಕೇರಿ ಘಾಟಿ ಭಾಗಗಳಲ್ಲಿ ಮಳೆ…

15 hours ago

18 ಕರಿಮೆಣಸು ತಳಿಗಳ ನರ್ಸರಿ ನಿರ್ಮಿಸಿ ಯಶಸ್ಸು ಕಂಡ ಯುವ ರೈತ

ಕಣ್ಣೂರಿನ ಜಿನೇಶ್ ಕಲಿಯಾಣಿ 18 ಕರಿಮೆಣಸು ತಳಿಗಳ ನರ್ಸರಿ, ಮಿಶ್ರ ಕೃಷಿ ಮತ್ತು…

1 day ago