ಸುಳ್ಯ: ಎರಡು ವರ್ಷದ ಹಿಂದೆ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ನೆಟ್ಟ ಗಿಡಗಳು ಫಸಂದಾಗಿ ಬೆಳೆದು ಹಸಿರು ಸೂಸುತಿದೆ. ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕಲ್ಲೆಂಬಿಯಲ್ಲಿ ಭುವಿಯನ್ನೇ ಹಸಿರಾಗಿಸಿರುವ ಸೀತಾವನ ಈ ವಿಶ್ವ ಪರಿಸರ ದಿನಾಚರಣೆ ಸಂದರ್ಭದ ಮನಮೋಹಕ ದೃಶ್ಯ. ಪರಿಸರ ದಿನದಂದು ಹೆಸರಿಗೊಂದು ಗಿಡ ನೆಟ್ಟು ಅದನ್ನು ಅಲ್ಲಿಗೇ ಮರೆಯುವವರು ನೋಡಲೇ ಬೇಕಾದ ದೃಶ್ಯ.
ಸುಳ್ಯ-ಬಂದಡ್ಕ ಅಂತಾರಾಜ್ಯ ರಸ್ತೆ ಬದಿಯಲ್ಲಿ ಕಣ್ಣಿಗೆ ಮತ್ತು ಮನಸಿಗೆ ಹಸಿರ ಸೌಂಧರ್ಯ ಧಾರೆಯೆರೆಯುವ ಸೀತಾವನ ಕಂಡು ಬರುತ್ತಿದೆ. ಯುವ ಕೃಷಿಕ ಪ್ರವೀಣ್ ಕಲ್ಲೆಂಬಿ ಅವರ ಸ್ಥಳದಲ್ಲಿ ಗಿಡಗಳನ್ನು ನೆಟ್ಟು ಬೆಳೆಸಿ ಹಸಿರು ಲೋಕ ಸೃಷ್ಠಿಸಲಾಗಿದೆ. ಗ್ರಾಮ ವಿಕಾಸ ಸಮಿತಿ ಮತ್ತು ಅರಣ್ಯ ಇಲಾಖೆಯ ಸಹಕಾರದಲ್ಲಿ ಒಂದು ಏಕ್ರೆ ಸ್ಥಳದಲ್ಲಿ ಸೀತಾ ವನ ನಿರ್ಮಿಸಲಾಗಿದೆ. ಸುಳ್ಯದಲ್ಲಿ 2017ರಲ್ಲಿ ಗ್ರಾಮ ವಿಕಾಸ ಸಮಿತಿಯ ನೇತೃತ್ವದಲ್ಲಿ ವೃಕ್ಷಾಂದೋಲನ ನಡೆಸಿ ತಾಲೂಕಿನಾದ್ಯಂತ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆ ಸಂದರ್ಭದಲ್ಲಿ ಸೀತಾ ವನ ಮಾಡುವ ಆಶಯ ಉಂಟಾಯಿತು. ಅದಕ್ಕಾಗಿ ಸ್ಥಳ ನೀಡಲು ಪ್ರವೀಣ್ ಕಲ್ಲೆಂಬಿ ಮುಂದೆ ಬಂದರು. ಸುಮಾರು ಮುನ್ನೂರು ಗಿಡಗಳನ್ನು ನೆಡಲಾಯಿತು. ಅದರಲ್ಲಿ ಬಹುತೇಕ ಗಿಡಗಳು ಚೆನ್ನಾಗಿ ಬೆಳೆದು ಬಂದಿದೆ. ಅದಕ್ಕಿಂತ ಹಿಂದಿನ ವರ್ಷಗಳಲ್ಲಿ ನೆಟ್ಟ ಗಿಡಗಳು ಸೇರಿ ಸುಮಾರು ಏಂಟು ನೂರಕ್ಕೂ ಮಿಕ್ಕಿ ಗಿಡಗಳು ಸೀತಾವನದಲ್ಲಿ ರಾರಾಜಿಸುತಿದೆ. ಹಲಸು, ಮಾವು, ಮಹಾಗಣಿ, ಸಾಗುವಾನಿ, ಸಿಲ್ವರ್ ಓಕ್, ರಕ್ತ ಚಂದನ, ಹೀಗೆ ವಿವಿಧ ಜಾತಿಯ ಗಿಡಗಳನ್ನು ನೆಡಲಾಗಿದೆ. ತಮ್ಮ ಕುಟುಂಬದ ಐದು ಏಕ್ರೆ ಸ್ಥಳಲ್ಲಿ ಒಂದು ಎಕ್ರೆ ಸ್ಥಳವನ್ನು ಹಸಿರು ವನಕ್ಕಾಗಿ ಪ್ರವೀಣ್ ಮತ್ತು ಕುಟುಂಬದವರು ಸೇರಿ ಮೀಸಲಿಟ್ಟಿದ್ದಾರೆ. ಇವರ ಸ್ಥಳಪೂರ್ತಿಯಾಗಿ ಅಡಕೆ ತೋಟವಾಗಿತ್ತು. ಆದರೆ ಹಳದಿ ರೋಗ ಬಂದು ಅಡಕೆ ಕೃಷಿ ನಾಶವಾದಾಗ ರಬ್ಬರ್ ಕೃಷಿ ಮಾಡಿದ್ದರು. ಬೆಲೆಯಿಲ್ಲದೆ ರಬ್ಬರ್ ಕೃಷಿಯೂ ಕೈಕೊಟ್ಟಾಗ ತಮ್ಮ ಸ್ಥಳದ ಒಂದು ಎಕ್ರೆಯಲ್ಲಿ ಮರ ಗಿಡ ಬೆಳೆಸಲು ನಿರ್ಧರಿಸಲಾಯಿತು. ಕಳೆದ ಕೆಲವು ವರ್ಷಗಳಿಂದ ಇಲ್ಲಿ ಗಿಡ ನೆಡುತ್ತಾ ಬಂದಿದ್ದರೂ ಕಳೆದ ವರ್ಷದಿಂದ ಅದನ್ನು ಪೂರ್ತಿಯಾಗಿ ವನವಾಗಿ ಮಾರ್ಪಾಡು ಮಾಡಲಾಗಿದೆ.
ನೆಟ್ಟ ಗಿಡಗಳಿಗೆ ಆರಂಭದ ವರ್ಷಗಳಲ್ಲಿ ಗೊಬ್ಬರ, ನೀರು ಹಾಕಿ ಪೋಷಿಸಲಾಗುತ್ತದೆ. ಗಿಡಗಳು ಚೆನ್ನಾಗಿ ಬೆಳೆದು ಹಸಿರ ರಾಶಿಯಂತಾಗಿದೆ. ಪ್ರವೀಣ್ ಕಲ್ಲೆಂಬಿಯವರೇ ಇದರ ನಿರ್ವಹಣೆ ಮಾಡುತ್ತಾರೆ. ಗಿಡ ನಾಶವಾದ ಸ್ಥಳದಲ್ಲಿ ಮತ್ತು ಇದರಲ್ಲಿ ಉಳಿದ ಸ್ಥಳದಲ್ಲಿಯೂ ಕಳೆದ ವರ್ಷವೂ ಗಿಡಗಳನ್ನು ನೆಡಲಾಗಿದೆ.
ಈ ಬಗ್ಗೆ ಸುಳ್ಯನ್ಯೂಸ್.ಕಾಂ ಜೊತೆ ಮಾತನಾಡಿದ ಪ್ರವೀಣ್ ಕಲ್ಲೆಂಬಿ, “ಅಡಕೆ ಹಳದಿ ರೋಗ ಬಂದು ಕೃಷಿ ನಾಶವಾದಾದ ಭೂಮಿಯಲ್ಲಿ ಸ್ವಲ್ಪ ಭಾಗದಲ್ಲಿ ಅರಣ್ಯ ಬೆಳೆಯುವ ಯೋಜನೆ ಹಾಕಿ ಕೊಳ್ಳಲಾಗಿತ್ತು. ಅದನ್ನು ಇನ್ನಷ್ಟು ವಿಸ್ತರಿಸಿ ಸೀತಾ ವನ ನಿರ್ಮಿಸಲಾಗಿದೆ. ಇದರಿಂದ ಪರಿಸರ, ಕಾಡು ವೃದ್ದಿಯಾಗುವುದರ ಜೊತೆಗೆ ನಮ್ಮ ಭೂಮಿಗೆ ಇದೊಂದು ಆಸ್ತಿಯೂ ಆಗಬಹುದು” ಎನ್ನುತ್ತಾರೆ.
ಗುಟ್ಕಾ–ಪಾನ್ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…
ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…
ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…
ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುವ ಕ್ಯಾಂಪಿಲೋಬ್ಯಾಕ್ಟರ್ ಬ್ಯಾಕ್ಟೀರಿಯಾದ ಹರಡುವಿಕೆಯನ್ನು ವೇಗಗೊಳಿಸುತ್ತಿದೆ…
ದೇಶದ 651 ಕೃಷಿ ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ದುರ್ಬಲವೆಂದು…