Advertisement
ವಿಶೇಷ ವರದಿಗಳು

ಪಾಸಿಟಿವ್ ನ್ಯೂಸ್ | ಗ್ರಾಮೀಣ ಭಾಗದ ಅಂಬುಲೆನ್ಸ್ ಸೇವೆ | ಲಾಕ್ಡೌನ್ ಸಂದರ್ಭ ನಿರಂತರ ಸೇವೆ | ಇದು ಪಂಜದ “ಯುವ ತೇಜಸ್ಸು” |

Share

ಪಂಜ: ನಗರ ಪ್ರದೇಶದಲ್ಲಿ ನಿರಂತರ ಅಂಬುಲೆನ್ಸ್ ಸೇವೆ ಇದ್ದೇ ಇರುತ್ತದೆ. ಆದರೆ ಗ್ರಾಮೀಣ ಭಾಗದಲ್ಲಿ  ಎಲ್ಲಾ ಸವಾಲುಗಳ ನಡುವೆ ಅಂಬುಲೆನ್ಸ್ ಸೇವೆ ಅಷ್ಟು ಸುಲಭದ ಮಾತಲ್ಲ. ಆದರೆ ಇದನ್ನು  ಮಾಡಿ ತೋರಿಸಿದೆ ಪಂಜದ ಯುವಕರ ತಂಡ ನಡೆಸಿರುವ ಅಂಬುಲೆನ್ಸ್ ಸೇವೆ. ಕೊರೊನಾ ಲಾಕ್ಡೌನ್ ಸಂದರ್ಭದಲ್ಲಂತೂ ಯುವಕರ ಸೇವೆ ಗಮನಾರ್ಹವಾಗಿದೆ. ಇದೀಗ ಸೇವೆಗಾಗಿಯೇ ನಿರಂತರ 600 ಕಿಮೀ ದೂರ ಸಾಗಿ ಮತ್ತೆ ಬಂದು ಗ್ರಾಮೀಣ ಭಾಗದಲ್ಲಿ  ಸೇವೆಗೆ ಸಿದ್ಧವಾಗಿರುವುದು  ಮತ್ತೊಮ್ಮೆ ಗುರುತಿಸುವಂತೆ ಮಾಡಿದೆ.

ಕೊರೊನಾ ಮಹಾಮಾರಿಗೆ ಇಡೀ ಜಗತ್ತೇ ನರಳುತ್ತಿರುವ ಸಂದರ್ಭ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪುಟ್ಟ ಊರು ಸುಳ್ಯದ  ಯುವ ತೇಜಸ್ಸು ಟ್ರಸ್ಟ್ (ರಿ) ಹಾಗೂ ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ (ರಿ) ಪಂಜದ ಸಹಯೋಗದೊಂದಿಗೆ ಎರಡು ತಿಂಗಳ ಹಿಂದಷ್ಟೇ ಲೋಕಾರ್ಪಣೆಗೊಂಡ ಅಂಬ್ಯುಲೆನ್ಸ್ ಇದೀಗ ಮತ್ತೊಮ್ಮೆ ಗುರುತಿಸಿದೆ. ಪಂಜದದಂತಹ ಗ್ರಾಮದಿಂದ ಪುತ್ತೂರು-ಮಂಗಳೂರುಗೆ ಲಾಕ್ಡೌನ್ ಸಂದರ್ಭದಲ್ಲಿ ರೋಗಿಗಳನ್ನು ಕರೆದೊಯ್ಯಲು ಹಾಗು ಮಂಗಳೂರಿನಿಂದ ಪಂಜಕ್ಕೆ ಅಗತ್ಯ ಔಷಧಿಗಳ ಸರಬರಾಜು ಮಾಡಲು ನೆರವಿಗೆ ಬಂದದ್ದು  ಪಂಚ ಶ್ರೀ ಅಂಬ್ಯುಲೆನ್ಸ್. ಸರಿಸುಮಾರು ಎರಡೂವರೆ ತಿಂಗಳ ಅವಧಿಯಲ್ಲೇ ಸುಮಾರು 75 ರೋಗಿಗಳಿಗೆ ನೆರವಾದ ಹೆಗ್ಗಳಿಕೆ ಈ ಅಂಬ್ಯುಲೆನ್ಸ್ ನದು.

ಯುವ ತೇಜಸ್ಸು ಸಂಸ್ಥೆ ಆರಂಭವಾದ ನಂತರ ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಭಾಗದ ಯುವಕರನ್ನು ಒಗ್ಗೂಡಿಸಿಕೊಂಡು ಹಲವಾರು ಯೋಜನೆಗಳು, ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಸಂಪೂರ್ಣ ಯಶಸ್ವಿಯಾಗಿತ್ತು.‌ ಪಂಜ ಭಾಗದ ಜನರ ಬಹುದಿನಗಳ ಬೇಡಿಕೆಯಾದ ಅಂಬ್ಯುಲೆನ್ಸ್ ನ ಈಡೇರಿಕೆಗೆ ಅದೇ ಯುವ ತೇಜಸ್ಸಿನ ಯುವಕರು ಹೆಗಲು ಕೊಡಲು ಮುಂದಾಗಿದ್ದು, ಪಂಚಶ್ರೀ ಪಂಜದ ಪಾಲಿಗೆ ಬಲು ಮಹತ್ವವೂ ಆಗಿತ್ತು, ಈಗಲೂ ಅಷ್ಟೇ ಪಂಚಶ್ರೀ ಪಂಜ ಮತ್ತು ಯುವ ತೇಜಸ್ಸು ಟ್ರಸ್ಟ್ ಒಂದು ನಾಣ್ಯದ ಎರಡು ಮುಖಗಳಿದ್ದಂತೆ.‌ ಹೆಸರು ಬೇರೆ ಬೇರೆಯಾದರೂ ಎರಡೂ ಸಂಸ್ಥೆಗಳಲ್ಲಿಯೂ ಇದೇ ಯುವಕರೇ ಸಕ್ರಿಯರಾಗಿದ್ದಾರೆ. ಅಂಬ್ಯುಲೆನ್ಸ್ ನ ಯಶಸ್ಸಿಗೆ ಇದೂ ಒಂದು ಪ್ರಮುಖ ಕಾರಣ, ಹಾಗಾಗಿ ಯಶಸ್ಸಿನ ಶ್ರೇಯ ಎರಡೂ ಸಂಸ್ಥೆಗೂ ಸಲ್ಲುತ್ತದೆ.

ಈ ಎಲ್ಲದರ ನಡುವೆ  ಕುಕ್ಕೆ ಸುಬ್ರಹ್ಮಣ್ಯ ದಿಂದ ಬೆಂಗಳೂರಿಗೆ ಚಿಕಿತ್ಸೆಗಾಗಿ ವ್ಯಕ್ತಿಯೊಬ್ಬರು ತೆರಳಲು ವಾಹನ ಸೇವೆಗಾಗಿ ಎಲ್ಲಾ ಪ್ರಯತ್ನ ಮಾಡಿ ಅದರಲ್ಲಿ ಯಾವುದೇ ಫಲ ಕಾಣದಾದಾಗ ಪಂಜ ಪಂಚಲಿಂಗೇಶ್ವರ ದೇವಾಲಯದ ಆಡಳಿತ ಅಧಿಕಾರಿಗಳಾದ ಡಾ.ದೇವಿಪ್ರಸಾದ್ ಕಾನತ್ತೂರು ಜೊತೆಯಲ್ಲಿ ಸಹಾಯ ಕೇಳಿದಾಗ ತಕ್ಷಣವೇ ಊರಿನ ಜನರಿಗೆ ತೊಂದರೆ ಆಗದಂತೆ ರಾತ್ರಿ 11 ರ ನಂತರ ಬೆಂಗಳೂರಿನ ಬನಶಂಕರಿ ಗೆ ಕಳುಹಿಸಿ ಪುನಃ ಬೆಳಗ್ಗೆ ಪಂಜದ ಜನತೆಯ ಸಹಾಯಕ್ಕಾಗಿ ಬೆಳಗ್ಗೆ 7 ಗಂಟೆಯ ಮೊದಲು ಪಂಜಕ್ಕೆ ತಲುಪುವಂತೆ ವ್ಯವಸ್ಥೆ ಮಾಡಿರುತ್ತಾರೆ. ಕೇವಲ 8 ಗಂಟೆಯಲ್ಲಿ ಸುಮಾರು 600 ಕಿಮೀ ಗಿಂತಲೂ ಹೆಚ್ಚು ದೂರವನ್ನು ಕ್ರಮಿಸಿದೆ. ಮರುದಿನ ಪಂಜದಂತಹ ಗ್ರಾಮೀಣ ಭಾಗದಲ್ಲಿ ಸೇವೆಗೆ ಸಿದ್ಧವಾಗಿ ನಿಂತಿದೆ. ಈ ಸಾಮಾಜಿಕ ಕಾಳಜಿ ಇದೀಗ ಗಮನಸೆಳೆದಿದೆ. ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ನಿರಂತರ ಸೇವೆ ಮಾಡುತ್ತಿರುವ ಈ ತಂಡದ ಶ್ರಮ ಗುರುತಿಸಲಾಗುತ್ತಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕೊಂಬೆಯಲ್ಲ, ಕಾಂಡದಲ್ಲೇ ಗೊಂಚಲು ಗೊಂಚಲಾಗಿ ಹಣ್ಣು! ಪಶ್ಚಿಮ ಘಟ್ಟದ ಅಪರೂಪದ ‘ಕೋಳಿಜುಟ್ಟು’ ಹಣ್ಣಿನ ಕಥೆ

ಪಶ್ಚಿಮ ಘಟ್ಟದ ಅಪರೂಪದ ಕೋಳಿಜುಟ್ಟು ಕಾಡು ಹಣ್ಣು ಇದೀಗ ರೈತರ ತೋಟಗಳಲ್ಲೂ ಫಲ…

7 hours ago

ಕಾಡು ಹಣ್ಣು…. ಕೋಳಿ ಜುಟ್ಟು ಹಣ್ಣು…!

ಪಶ್ಚಿಮ ಘಟ್ಟದ ಅಪರೂಪದ ಕೋಳಿಜುಟ್ಟು ಹಣ್ಣು ಕಾಂಡದ ಮೇಲೆಯೇ ಗೊಂಚಲು ಗೊಂಚಲಾಗಿ ಬೆಳೆಯುವ…

8 hours ago

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಒಡಿಶಾದಲ್ಲಿ ಭಾರಿ ಮಳೆ, ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ ಒಡಿಶಾದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ…

18 hours ago

ಭರ್ತಿಯಾಗುವ ಹಂತಕ್ಕೆ ಆಲಮಟ್ಟಿ ಜಲಾಶಯ – 114.896 ಟಿಎಂಸಿ ನೀರು ಸಂಗ್ರಹ, 73 ಸಾವಿರ ಕ್ಯೂಸೆಕ್ ಒಳಹರಿವು

ಆಲಮಟ್ಟಿ ಕೃಷ್ಣಾ ಜಲಾಶಯದಲ್ಲಿ 114.896 ಟಿಎಂಸಿ ನೀರು ಸಂಗ್ರಹವಾಗಿದ್ದು, ಜಲಾಶಯ ಭರ್ತಿಯಾಗಲು ಕೆಲವೇ…

18 hours ago

ಹವಾಮಾನ ವರದಿ | 28-07-2026 | ಕರಾವಳಿ, ಮಲೆನಾಡಿನಲ್ಲಿ ಸಾಮಾನ್ಯ ಮಳೆ ಮುಂದುವರಿಕೆ

ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಬಿಟ್ಟುಬಿಟ್ಟು ಮಳೆ ಮುಂದುವರಿಯುವ…

18 hours ago

ಮಳೆ ಕೊರತೆ ತೀವ್ರ – ಬೆಂಗಳೂರು ಗ್ರಾಮಾಂತರದಲ್ಲಿ ಕೇವಲ ಶೇ. 3 ಬಿತ್ತನೆ; ನೀರಿನ ಬಳಕೆಗೆ ಕಟ್ಟುನಿಟ್ಟಿನ ಕ್ರಮ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇಕಡಾ 66 ರಷ್ಟು ಮಳೆ ಕೊರತೆಯಿಂದ ಕೇವಲ ಶೇ.…

23 hours ago