The Rural Mirror ಫಾಲೋಅಪ್

ಮಳೆಕೊಯ್ಲು ಬಾವಿ ಉಳಿಸಿತು – ಕೃಷಿಕನ ಸುಲಭ ಪ್ರಯತ್ನ ಪರಿಣಾಮ ನೀಡಿತು

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಗುತ್ತಿಗಾರು: ಮಳೆನೀರನ್ನು ಬಾವಿಗೆ ಬಿಡುವ ಮೂಲಕ ಬತ್ತಿ ಹೋಗುವ ಬಾವಿಯನ್ನು  ಮತ್ತೆ ಜೀವ ಮಾಡಿರುವ ಯಶೋಗಾಥೆ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಏರಣಗುಡ್ಡೆ ಬಳಿಯ ಮಲ್ಕಜೆಯ ಬಿಟ್ಟಿ ನೆಡುನೀಲಂ ಅವರದು.

Advertisement
Advertisement

ಕಳೆದ ಕೆಲವು ವರ್ಷಗಳಿಂದ ಅವರು ಮಳೆಕೊಯ್ಲು ಮಾಡುತ್ತಿದ್ದಾರೆ. ಯಾವುದೇ ದೊಡ್ಡ ಸಾಧನಗಳು ಇಲ್ಲದೆ, ತಮ್ಮ ಮನೆಯಲ್ಲೇ ಇರುವ ಸಾಮಾಗ್ರಿ ಬಳಸಿ ಮಳೆನೀರನ್ನು ಸೋಸಿ ಬಾವಿಗೆ ಬಿಡುತ್ತಿದ್ದಾರೆ. ಇದೀಗ ಬಾವಿಯಲ್ಲಿ ನೀರು ಉಳಿದಿದೆ. ಕಳೆದ 2 ವರ್ಷಗಳಲ್ಲಿ  ಬಿಟ್ಟಿ ನೆಡುನೀಲಂ ಅವರ ಈ ಯಶೋಗಾಥೆಯನ್ನು ವಿವಿಧ ಮಾಧ್ಯಮಗಳು ಫೋಕಸ್ ಮಾಡಿತ್ತು. ಮನೆಯ ಟೆರೇಸ್, ಛಾವಣಿ ನೀರನ್ನು 200 ಲೀಟರ್  ಬ್ಯಾರೆಲ್ ಮೂಲಕ ಸೋಸುವಂತೆ ಮಾಡಿ ಶುದ್ಧವಾದ ಬಳಿಕ ಬಾವಿಗೆ ಬಿಡುತ್ತಿದ್ದಾರೆ. ಹಿಂದೆಲ್ಲಾ ಸುಮಾರು ಮಾರ್ಚ್-ಎಪ್ರಿಲ್ ವೇಳೆಗೆ ಬಾವಿಯಲ್ಲಿ ನೀರು ಬರಿದಾಗುತ್ತಿತ್ತು. ಮಳೆಕೊಯ್ಲು ಮಾಡಿದ ಬಳಿಕ ನೀರು ಬತ್ತುವುದಕ್ಕೆ ತಡೆಯಾಗಿದೆ. ಅಲ್ಲದೆ ಬಾವಿಗಿಂತ ಕೆಳಗಿನ ಭಾಗದ ಕೆರೆಯಲ್ಲೂ ನೀರು ಹೆಚ್ಚಾಗಿದೆ ಎನ್ನುತ್ತಾರೆ ಬಿಟ್ಟಿ ನೆಡುನೀಲಂ.  ಬ್ಯಾರೆಲ್ ಒಳಗಡೆ ಜಲ್ಲಿ , ಮಸಿ ಹಾಗೂ ಮರಳನ್ನು  ಹಾಕಿ ನೀರು ಸೋಸುವಂತೆ ಮಾಡಿ ಬಾವಿಗೆ ಬಿಡುತ್ತಾರೆ. ಮಳೆಗಾಲ ಪೂರ್ತಿ ಈ ರೀತಿಯಾಗಿ ಬಾವಿಗೆ ನೀರು ಇಂಗುತ್ತದೆ.  ಈ ಮಾದರಿಯನ್ನು  ಎಲ್ಲಾ ಮನೆಗಳಲ್ಲೂ ಮಾಡಬಹುದಾಗಿದೆ.

 

ನಿಮಗೆ ತಿಳಿದಿರುವ ಮಳೆ ಕೊಯ್ಲು , ಜಲಸಂರಕ್ಷಣೆಯ ಸುಲಭ ಉಪಾಯಗಳನ್ನು , ಕೃಷಿಕರ ಮಾದರಿಗಳನ್ನು , ಸಣ್ಣ ಖರ್ಚಿನಲ್ಲಿ  ಮಾಡಬಹುದಾದ , ಮಾಡಿರುವ ಉದಾಹರಣೆಗಳು, ಯಾವುದೇ ಉಪಕರಣಗಳು ಇಲ್ಲದೆ ಮಾಡಬಹುದಾದ ಪ್ರಯತ್ನಗಳು ಇದ್ದರೆ ನಮಗೆ  ಇಮೈಲ್ ಅಥವಾ ವ್ಯಾಟ್ಸಪ್ ಮಾಡಿ ( sullianews@gmail.com ಅಥವಾ 9449125447 )  ತಿಳಿಸಿ. ನಾವು ಸಮಾಜಕ್ಕೆ ತಿಳಿಸುತ್ತೇವೆ. 

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕೇರಳಕ್ಕೆ ನೈಋತ್ಯ ಮಾನ್ಸೂನ್ ಪ್ರವೇಶ | ಇಂದಿನಿಂದಲೇ ಮುಂಗಾರು ಆರಂಭ | 8 ದಿನ ಮುಂಚಿತವಾಗಿ ಆರಂಭವಾದ ಮಳೆಗಾಲ |

ಕಳೆದ 16 ವರ್ಷಗಳ ದಾಖಲೆಗಳ ಪ್ರಕಾರ ನಿಗದಿತ ದಿನಕ್ಕಿಂತ ಮೊದಲೇ ಈ ಬಾರಿ…

4 hours ago

ಉತ್ತಮ ಮಳೆಯಿಂದ ಹಸಿರಾದ ವನ್ಯಜೀವಿ ತಾಣ | ಚಾಮರಾಜನಗರ ಜಿಲ್ಲೆಯ ಹಲವೆಡೆ ಹಸಿರು ಸಂಭ್ರಮ

ಉತ್ತಮ ಮಳೆಗೆ ಅರಣ್ಯ ಪ್ರದೇಶವೆಲ್ಲ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ, ಮಳೆ ಹನಿಗಳಿಗೆ ಮೈಯೊಡ್ಡಿದ…

9 hours ago

50 ಕೋಟಿಗೂ ಹೆಚ್ಚು ಜನರು ಕೃಷಿ ಕ್ಷೇತ್ರದಲ್ಲಿದ್ದಾರೆ , ಜಿಡಿಪಿಗೆ ಕೃಷಿಯ ಕೊಡುಗೆ ಶೇಕಡಾ 18

ರಾಜ್ಯದ ಅಡಿಕೆ ಬೆಳೆ ಅತ್ಯಂತ ಉತ್ಕೃಷ್ಟ ಗುಣಮಟ್ಟದ್ದಾಗಿದ್ದು, ಇದರಲ್ಲಿ ಯಾವುದೇ ರಾಸಾಯನಿಕ ಇಲ್ಲ.…

10 hours ago

ಅಡಿಕೆ ಹಾಳೆ ರಫ್ತು ನಿರ್ಬಂಧದ ಸಂಕಷ್ಟದಿಂದ ಪಾರಾಗಲು ಕೈಗೊಳ್ಳಬಹುದಾದ ಪರಿಹಾರೋಪಾಯಗಳು

ನಿಷೇಧವು ಶಾಶ್ವತವಲ್ಲ, ಮತ್ತು ವೈಜ್ಞಾನಿಕ, ತಾಂತ್ರಿಕ, ಮತ್ತು ವಾಣಿಜ್ಯ ರಾಜತಾಂತ್ರಿಕ ಮಾರ್ಗದಿಂದ ಈ…

11 hours ago

ಅಡಿಕೆ ಎನ್ನುವ ಚಿನ್ನದ ಮೊಟ್ಟೆ ಇಡುವ ಕೋಳಿ | ವರವೋ ಶಾಪವೋ?

ಆಹಾರ ಧಾನ್ಯಗಳನ್ನು ಬೆಳೆಸುತ್ತಿದ್ದ ಕೃಷಿಕರು ಅಡಿಕೆ ಕೃಷಿಗೆ ಪರಿವರ್ತನೆ ಆಗಿ ಆಹಾರಕ್ಕಾಗಿ ಪರಾವಲಂಬಿಗಳು…

11 hours ago

ಹೊಸರುಚಿ | ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ರೊಟ್ಟಿ

ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ರೊಟ್ಟಿಗೆ ಬೇಕಾಗುವ ಸಾಮಗ್ರಿಗಳು: ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ…

13 hours ago