ಮಳೆಯದೊಂದು ಕಥೆ

June 15, 2019
10:30 AM
ಭುವಿಯಲ್ಲಿ ಸೂರ್ಯನ ತಾಪ ಹೆಚ್ಚಾಯಿತು
ನೀರು ಕಾದು ಆವಿಯಾಯ್ತು
ಮಳೆಗಾಗಿ ಮನುಜ ಬೇಡಿ ನಿಂತ
ಮನುಜನ ಬೇಡಿಕೆಗೆ ಮಣಿಯಲಿಲ್ಲ ವರುಣ…..
ಕಾಡನ್ನು ಕಡಿದ ಭೋಗ ಜೀವಿ
ಬಿಸಿಲನ್ನು ಕಂಡು ಶಪಿಸಿದ
ಭುವಿ ಕಾದು ಕೆಂಪಾಯ್ತು
ಹಸಿರೆಲ್ಲ ಒಣಗಿ ಬರಡಾಯ್ತು….
ನೀರಿಗಾಗಿ ಭೂತಾಯಿಯ ಒಡಲನ್ನೇ ಬಗೆದ
ಅಲ್ಲೂ ನೀರ ಪಸೆ ಕಾಣದಾದಾಗ ಭೂಮಿ ತಾಯಿ ಬಂಜೆಯೆಂದ….
ದಾರಿಕಾಣದಾದಾಗ ನರ ದೇವನ ಮೊರೆ ಹೋದ
ಕೊನೆಗೂ ಮಣಿದ ವರುಣ ಧರೆಗೆ ಅವತರಿಸಿದ
ಬಿಡದೆ ನೀರ ಹೊಳೆಯನ್ನೇ ಹರಿಸಿದ
ಸಾಕಿನ್ನು ಹೋಗೆಂದ ಬುದ್ದಿವಂತ
ಹೋಗಲೊಲ್ಲೆ ಎಂದಾಗ ಶಪಿಸುತ್ತಾ ಕುಳಿತ….
ಅವಮಾನ ಸಹಿಸದ ವರುಣ
ಮತ್ತೆ ಗುಡಿಯ ಸೇರಿದ
ಮತ್ತೆ ಭುವಿಯಲ್ಲಿ ಧಗೆಯೇರಿತು
ಮನುಜನದು ಮತ್ತದೇ ಚಾಳಿ ಶುರುವಾಯಿತು….
ಮನುಜನ ವರ್ತನೆ ಬದಲಾಗಲೇ ಇಲ್ಲ…
ಅದಕ್ಕಾಗಿ ಪ್ರಕೃತಿ ತಾನಾಗಿಯೇ ಬದಲಾಗುತ್ತಿದೆ…
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

ಅಪ್ಪ ಯಾಕೆ ವಿಚಿತ್ರವಾಗಿ ಕಾಣುತ್ತಾನೆ?
July 19, 2026
7:52 AM
by: ಮಹೇಶ್ ಪುಚ್ಚಪ್ಪಾಡಿ
ಆರೋಪದ ಆಚೆ ನಿಂತು ಒಮ್ಮೆ ಯೋಚಿಸಿದ್ದೀರಾ..?
July 12, 2026
11:57 AM
by: ಮಹೇಶ್ ಪುಚ್ಚಪ್ಪಾಡಿ
E20 ಪೆಟ್ರೋಲ್‌ : ದೇಶದ ಹಿತದ ಹೆಸರಿನಲ್ಲಿ ಸಾಮಾನ್ಯರ ಹೆಗಲಿನ ಮೇಲೆ ಹೆಚ್ಚು”ವರಿ”ಯೇ?
July 8, 2026
12:42 PM
by: ಮಹೇಶ್ ಪುಚ್ಚಪ್ಪಾಡಿ
ಬಾಳ ಮಧ್ಯಾಹ್ನದ ಲಹರಿ
July 5, 2026
3:10 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror