Advertisement
MIRROR FOCUS

ಮಳೆಯೊಂದಿಗೆ ಮಾತುಕತೆ ನಡೆದಾಗ…. ಸೋಲು-ಗೆಲುವು ಕಂಡಿತು , ನಿರೀಕ್ಷೆಗಳು ತಲೆಕೆಳಗಾಯಿತು…!

Share

ಮಳೆಯೊಂದಿಗೆ ಮಾತುಕತೆ..!. ಈ ಮಾತುಕತೆಯಲ್ಲಿ ನಾವೆಲ್ಲರೂ ಮೊನ್ನೆ ಮೊನ್ನೆ ಭಾಗಿಯಾಗಿದ್ದೆವು.ಈಗ ಮತ್ತೆ ಮಳೆಯ ಜೊತೆಗಿನ ಮಾತುಕತೆಯ ಸಾರಾಂಶವನ್ನು ಬಾಳಿಲದ ಪಿ ಜಿ ಎಸ್ ಎನ್ ಪ್ರಸಾದ್ ತಿಳಿಸಿದ್ದಾರೆ. ಮಳೆ, ಪ್ರಕೃತಿಯ ಜೊತೆ ಮಾತನಾಡುವುದು ಎಂದರೆ ಅದೊಂದು ಸೂಕ್ಷ್ಮ ಸಂವೇದನೆ. ಪಿ ಜಿ ಎಸ್ ಎನ್ ಪ್ರಸಾದ್ ಜೊತೆ ಹಲವಾರು ಮಂದಿ ಈಗ ಸೇರಿಕೊಂಡಿದ್ದಾರೆ. ಪ್ರತಿದಿನವೂ ಮಳೆಯ ಬಗ್ಗೆ ಲೆಕ್ಕ ಬರೆಯುತ್ತಾರೆ, ಪರಿಸರವನ್ನು ವಾಚ್ ಮಾಡುತ್ತಾರೆ. ಮಳೆ ಲೆಕ್ಕ ಅಂತಹೇ ಒಂದು ಗ್ರೂಪ್ ಇದೆ. ಇಲ್ಲೆಲ್ಲಾ ಮಳೆಯದ್ದೇ ಮಾತುಕತೆ ಇರುತ್ತದೆ. ಸಾಯಿಶೇಖರ್ ಕರಿಕಳ ಅವರು ಮಳೆ ಯಾವಾಗ ಬರುತ್ತದೆ ಎಂದರೆ ಪಿ ಜಿ ಎಸ್ ಎನ್ ಪ್ರಸಾದ್ ಅವರು ಮಳೆಯ ಜೊತೆ ಮಾತಾಡಿ ನಮಗೆ ವಿವರ ನೀಡುತ್ತಾರೆ. ಹೀಗಾಗಿ ಈ ಬಾರಿಯ ಆಶ್ಲೇಷ ನಕ್ಷತ್ರವನ್ನು ಬೆಂಬೆತ್ತಿ ಮಾತನಾಡಿದಾಗ ಜನರ ನಿರೀಕ್ಷೆ ತಲೆಕೆಳಗಾದ ಬಗ್ಗೆ, ಸೋಲು-ಗೆಲುವಿನ ಬಗ್ಗೆ ಅವರು ತಿಳಿಸಿದ್ದಾರೆ, ಈ ಕಡೆಗೆ ನಮ್ಮ ಇಂದಿನ ಬೆಳಕು….


ಪಿ ಜಿ ಎಸ್ ಎನ್ ಪ್ರಸಾದ್ ಅವರ ಮಾತುಕತೆಯ  ಆರಂಭ ಹೀಗಾಗುತ್ತದೆ

ಗುಡ್ಡ ಗುಡ್ಡ ಸ್ಥಾವರ ಲಿಂಗ
ಅದಕಭ್ಯಂಗ ಎರಿತಾವನ್ನೋ ಹಂಗ
ಕೂಡ್ಯಾವ ಮೋಡ ಸುತ್ತಲೂ ನೋಡ ನೋಡ
                                                         …. ವರಕವಿ ದ.ರಾ.ಬೇಂದ್ರೆ

ಈಗ ಕರಾವಳಿ, ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಳೆಯನ್ನು ಕಣ್ತುಂಬಿಕೊಂಡು ನೋಡಲೂ ನಾವು ಭಯಪಡುವಂತಿದೆ.ಅನಾದಿ ಕಾಲದಲ್ಲಿ ಮಳೆ ಹೇಗಿತ್ತೋ ನಮ್ಮ ಊಹೆಗೂ ನಿಲುಕದು. ಮೊನ್ನೆ ಮೊನ್ನೆವರೆಗೂ ಇನ್ನೇನು ಮಳೆಗಾಲದ ವೈಭವ ಇನ್ನಿಲ್ಲ ಅಂದುಕೊಂಡಿದ್ದೆವು. ಯಾವಾಗ ಆಶ್ಲೇಷನ ಪಾದಾರ್ಪಣೆ ಆಯಿತೋ ಚಿತ್ರಣವೇ ಬದಲಾಯಿತು.

ಸಹೋದರರೆಂದೇ ಮಲೆನಾಡಿನಲ್ಲಿ ಗುರುತಿಸಲ್ಪಟ್ಟಿರುವ ಪುನರ್ವಸು, ಪುಷ್ಯ ನಕ್ಷತ್ರಗಳದ್ದು ಯಾವತ್ತೂ ಭರ್ಜರಿ ಆಟ.ಪುನರ್ವಸು ಹಿಂದೆ ಬೀಳದಿದ್ದರೂ,ಯಾಕೋ ಪುಷ್ಯ ಕಳೆದೈದು ವರ್ಷದಿಂದ ತನ್ನ ವೈಭವವನ್ನು ಕಳೆದುಕೊಂಡದ್ದನ್ನು ನಾವು ಗಮನಿಸುತ್ತಿದ್ದೇವೆ. ಆದರೆ ಕಳೆದೆರಡು ವರ್ಷದಿಂದ ಆಶ್ಲೇಷನ ( ಆಗಸ್ಟ್ 3 ರಿಂದ 16) ಆಟದ ವೈಖರಿಗೆ ನಾಡಿನ ಜನ ಕಂಗಾಲು!
ಕಳೆದ ವರ್ಷ ಗರಿಷ್ಟ ಪ್ರಮಾಣದ ಮಳೆ ಸತತ 5 ದಿನ 100 ಮಿ.ಮೀ.ಗಳಿಂದಲೂ ಹೆಚ್ಚು ಸುರಿಯುವ ಮೂಲಕ ಒಟ್ಟಾರೆ 958 ಮಿ.ಮೀ.ನಷ್ಟು ದಾಖಲಾಯಿತು.ಅದು ( 933 ಮಿ.ಮೀ..1982 ರಲ್ಲಿ ) ಆ ವರೆಗಿನ ಅತ್ಯಧಿಕ ಮಳೆಯಾಗಿ ಇತಿಹಾಸದ ಪುಟ ಸೇರಿತ್ತು.

ಈ ಸಲ ಹಿಂದಿನೆಲ್ಲ ದಾಖಲೆಗಳನ್ನು ಮುರಿಯಲೇ ಬೇಕೆಂದು ಹಠ ತೊಟ್ಟಂತಿದ್ದಾನೆ ಆಶ್ಲೇಷ. ಸತತ ಆರು ಶತಕಗಳು,ಮೂರು ಅರ್ಧ ಶತಕಗಳು. ಯಾವುದೇ ಒಂದು ಮಹಾ/ಮಳೆ ನಕ್ಷತ್ರದ ಅವಧಿಯಲ್ಲಿ ದಾಖಲಾದ ಗರಿಷ್ಟ ಮಳೆ ತನ್ನ ಹೆಸರಿಗೆ ಬರೆಯಿಸಿಕೊಳ್ಳಲು ಈತನಿಗೆ ಇನ್ನು ಬಾಕಿಯಿರುವುದು 1998 ರ ಆರ್ದ್ರಾ ನಕ್ಷತ್ರದ (ಜೂನ್ 22 ರಿಂದ ಜುಲೈ 5) 1319 ಮಿ.ಮೀ. ಮಾತ್ರ. ಕಾದು ನೋಡೋಣ  ಇವನಾಟ…

ನಮ್ಮ ಪೂರ್ವಜರು ಪ್ರಕೃತಿಯನ್ನು ಆರಾಧಿಸುತ್ತಿದ್ದರು.ಆದರೆ ನಾವು….? ಈಗ ಯೋಚಿಸಿ ಪ್ರಕೃತಿಯ ಈ ಆಟದಲ್ಲಿ ಗೆದ್ದವರಾರು ? ಸೋತವರಾರು ?

ನೆಲ ಜಲ ಕಾಡಿನ ಸಂಬಂಧ 

ಬಿಟ್ಟರೂ ಬಿಡಲಾಗದ ಬಂಧ
ನೀರಿದ್ದರೆ ಮಣ್ಣಿನ ಗಂಧ
ಹಸುರಿನ ಹೊದಿಕೆಯ ಆ ಚೆಂದ
                                                                 … ಸುಬ್ರಾಯ ಚೊಕ್ಕಾಡಿ

( ಅಂಕಿ ಅಂಶಗಳು ….ಸುಳ್ಯ ತಾಲೂಕಿನ ಬಾಳಿಲದಲ್ಲಿ ದಾಖಲಾದ ಮಳೆಯದ್ದು.)

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ದಾವಣಗೆರೆಯಲ್ಲಿ ಮಳೆ ಕೊರತೆ – ಮೆಕ್ಕೆಜೋಳ, ರಾಗಿ ಬೆಳೆ ಶೇ.50 ಹಾನಿ ಭೀತಿ

ದಾವಣಗೆರೆ ಜಿಲ್ಲೆಯಲ್ಲಿ 15 ದಿನಗಳಿಂದ ಮಳೆ ಕೊರತೆಯಾಗಿದ್ದು, ಮುಂದಿನ ಕೆಲ ದಿನಗಳಲ್ಲೂ ಮಳೆಯಾಗದಿದ್ದರೆ…

14 minutes ago

ಹವಾಮಾನ ವರದಿ | 05-09-2026 | ಕರಾವಳಿಯಲ್ಲಿ ತೇವಾಂಶ ಇಳಿಕೆ, ಬಳಿಕ ಒಣಹವೆ?

ಸೆ.8ರಿಂದ ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಮತ್ತೆ ಮಳೆ ಚಟುವಟಿಕೆ ಹೆಚ್ಚಾಗುವ ಸಾಧ್ಯತೆಯಿದೆ.…

6 hours ago

ಬೇರೊಬ್ಬರ ಬದುಕಿನ ಅಳತೆಯಲ್ಲಿ ನಮ್ಮ ಬದುಕನ್ನು ಅಳೆಯುತ್ತಿದ್ದೇವೆಯೇ?

ಬೇರೊಬ್ಬರ ಬದುಕಿನೊಂದಿಗೆ ನಿರಂತರ ಹೋಲಿಕೆ ನಮ್ಮ ನೆಮ್ಮದಿ ಮತ್ತು ಆತ್ಮವಿಶ್ವಾಸವನ್ನು ಕಸಿದುಕೊಳ್ಳಬಹುದು. ಮತ್ತೊಬ್ಬರ…

12 hours ago

ಗೂಗಲ್‌ ಮತ್ತು AIಯ ಕಾಲದಲ್ಲೂ ಗುರು ಏಕೆ ಬೇಕು..?

ಶಿಕ್ಷಕರ ದಿನಾಚರಣೆ ಶಿಕ್ಷಕರನ್ನು ಸನ್ಮಾನಿಸುವ ದಿನ ಮಾತ್ರವಲ್ಲ, ಶಿಕ್ಷಕತ್ವ ಮತ್ತು ಶಿಕ್ಷಣದ ನಿಜವಾದ…

13 hours ago

ಮಳೆ ಹೆಚ್ಚಿಸಲು ಮೋಡ ಬಿತ್ತನೆಗೆ ಚಾಲನೆ – ಮೋಡ ಬಿತ್ತನೆಯಿಂದ ಮಳೆ ಬರುತ್ತದೆಯೇ?

ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ₹28.52 ಕೋಟಿ ವೆಚ್ಚದ 60 ದಿನಗಳ…

21 hours ago

3,000 ವರ್ಷಗಳ ಹಿಂದೆಯೇ ರೈತರು ಹವಾಮಾನ ಬದಲಾವಣೆಗೆ ಹೊಂದಿಕೊಂಡಿದ್ದರು..! ಬಿಹಾರದ ಪುರಾತನ ಬೀಜಗಳು ಹೇಳಿದ ಕೃಷಿ ಪಾಠ

ಬಿಹಾರದ ಯುರೆನ್‌ನಲ್ಲಿ ಪತ್ತೆಯಾದ 5 ಲಕ್ಷಕ್ಕೂ ಹೆಚ್ಚು ಸುಟ್ಟ ಬೀಜಗಳ ಅಧ್ಯಯನವು ಭಾರತದ…

23 hours ago