The Rural Mirror ಫಾಲೋಅಪ್

ಮೊಣ್ಣಂಗೇರಿಯಲ್ಲಿ ಬಾಯ್ದೆರೆದು ನಿಂತಿದೆ ಬಂಡೆ ಕಲ್ಲುಗಳು…!

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸಂಪಾಜೆ : ಮೊಣ್ಣಂಗೇರಿ ಪ್ರದೇಶದಲ್ಲಿ ಬೃಹತ್ ಗಾತ್ರದ  ಬಂಡೆಕಲ್ಲುಗಳು ಬಾಯ್ದೆರೆದು ನಿಂತಿದೆ. ಒಂದೆರಡು ಮಳೆಗೆ ಕುಸಿಯುವ ಭೀತಿ ಇದೆ. ಆ ಪ್ರದೇಶದಲ್ಲಿ ಈಗ ನಡೆಯುವುದೇ ಭಯ…!.

Advertisement

ಕಳೆದ 3 ದಿನಗಳಲ್ಲಿ ಕಳೆದ ಬಾರಿ ಮೊಣ್ಣಂಗೇರಿ, ಜೋಡುಪಾಲದ  ಜಲಪ್ರಳಯದ ನೆನಪುಗಳು ಹಾಗೂ ಇಂದಿನವರೆಗಿನ ಸ್ಥಿತಿಯ ದರ್ಶನವಾಗಿದೆ. ಮನೆಗಳೇ ಇಲ್ಲ, ಕೃಷಿ ನಾಶ, ಮುಚ್ಚಿದ ಶಾಲೆ ಸೇರಿದಂತೆ ಅಲ್ಲಿನ ಜನರ ಇಂದಿನ ಬದುಕು ದರ್ಶನವಾಗಿದೆ. ಈಗ ಮುಂದಿನ ಸ್ಥಿತಿಯ ಬಗ್ಗೆ ಯೋಚಿಸಿದರೆ ಭಯವಾಗುತ್ತಿದೆ. ಆ ಜನರಿಗೆ ನಿತ್ಯವೂ ಭಯವಾದರೆ ಮೊಣ್ಣಂಗೇರಿಯ ಆ ರಸ್ತೆಯಲ್ಲಿ ಓಡಾಡಿದರೆ ಎದೆ ಢವ ಢವ ಎನ್ನುತ್ತದೆ. ಆ ಬಂಡೆಗಳು ಈಗ ಬೀಳುತ್ತೋ ಮತ್ತೆ ಬೀಳುತ್ತೋ ಎನ್ನುವ ಸ್ಥಿತಿ ಇದೆ. ಈ ನಡುವೆ ಸಾಕಷ್ಟು ನೀರು ಹರಿಯುತ್ತಿದೆ ಅಲ್ಲಿ, ಆದರೆ ಆ ನೀರು ಅಲ್ಲಿನ ಜನರಿಗೆ ಈಗ ಉಪಯೋಗಕ್ಕೆ ಬರುತ್ತಿಲ್ಲ. ತೋಟ, ಮನೆ ಎತ್ತರದಲ್ಲಾದರೆ , ನೀರು ಕೆಳಭಾಗದಲ್ಲಿ ಹರಿಯುತ್ತಿದೆ. ಅದರ ದೃಶ್ಯ ಹೀಗಿದೆ….

 

Advertisement

 

Advertisement

ಕಳೆದ ಬಾರಿಯ ಪ್ರಳಯದ ನಂತರ ರಸ್ತೆ ದುರಸ್ತಿಯಾಗಿದೆ. ಇದು ಇಲ್ಲಿನ ಜನರಿಗೆ ಪ್ರಯೋಜನವಾಗಿದೆ. ಆದರೆ ಅದಕ್ಕಿಂತಲೂ ಭಯಾನಕ ಸ್ಥಿತಿ , ಈ ವರ್ಷ ಹೇಗೆ ಎಂದು ? ಒಂದೆರಡು ಮಳೆ ಬಿದ್ದರೆ ಭಯ ಶುರುವಾಗುತ್ತದೆ.  ಗುಡ್ಡದ ಮಣ್ಣು ಕುಸಿಯುತ್ತದೆ, ಕಲ್ಲುಗಳು ಬೀಳುತ್ತದೆ. ಎರಡು ಕಲ್ಲುಗಳು ಉಜ್ಜಿಕೊಂಡು ಬೀಳುವ ವೇಳೆ ದೊಡ್ಡದಾದ ಸದ್ದು ಕೇಳುತ್ತದೆ. ಮಳೆ ಬಂದಾಗ ನೀರು ಹೆಚ್ಚಾಗಿ ಬಂದು  ಸಡಿಲವಾಗಿರುವ ಮಣ್ಣು ಕೊರೆದು ಹೋದಾಗ ಕಲ್ಲುಗಳೂ ಆಧಾರ ಕಳೆದುಕೊಂಡು ಬೀಳುತ್ತವೆ. ಹೀಗಾಗಿ ಭಯ ಎಂದು ಹೇಳುತ್ತಾರೆ ಮೊಣ್ಣಂಗೇರಿಯ ಸತೀಶ್ ನಾಯ್ಕ್.

 

ಈ ಬಾರಿಯ ಮಳೆಗಾಲದ ಮುನ್ನ ಸೂಕ್ತ ಮುಂಜಾಗ್ರತಾ ಕ್ರಮವಾಗಬೇಕು. ಈಗಿರುವ ಜನರಿಗೆ ಸೂಕ್ತ ರಕ್ಷಣೆ ಬೇಕು ಎನ್ನುವುದು ಅಲ್ಲಿಗೆ ಹೋದ ಯಾರು ಬೇಕಾದರೂ ಹೇಳಬಹುದು. ಇದನ್ನು ಅಧಿಕಾರಿಗಳು ಈಗಲೇ ಗಮನಿಸಬೇಕು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

15 ದಿನಗಳಿಗೊಮ್ಮೆ ಶಾಲೆ, ಅಂಗನವಾಡಿಗಳ ನೀರಿನ ತಪಾಸಣೆ – ಜಿ. ಪಂ ಸಿಇಒ ಸೂಚನೆ

ಪ್ರತಿ 15 ದಿನಗಳಿಗೊಮ್ಮೆ ಶಾಲೆ ಮತ್ತು ಅಂಗನವಾಡಿಗಳ ಕುಡಿಯುವ ನೀರನ್ನು ಪರೀಕ್ಷೆಗೊಳಪಡಿಸಿ  ತಪಾಸಣೆ…

58 minutes ago

ಹವಾಮಾನ ವರದಿ | 13-08-2025 | ಆ.21 ರವರೆಗೆ ಮಳೆ ವಿಸ್ತರಣೆ ಎಲ್ಲಿ ? ವಾಯುಭಾರ ಕುಸಿತದ ಕಾರಣದಿಂದ ಮಳೆ ಎಲ್ಲೆಲ್ಲಾ ಇದೆ..?

ಬಂಗಾಳಕೊಲ್ಲಿಯ ಆಂದ್ರಾ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಒಡಿಸ್ಸಾ ಕರಾವಳಿ ತನಕ ಸಾಗಿ,…

7 hours ago

ತೋಟಗಾರಿಕಾ ಬೆಳೆಗಳ ಅಭಿವೃದ್ಧಿಗೆ ಸಹಾಯಧನ |ವಿವಿಧ ಕಾರ್ಯಕ್ರಮಗಳ ಮೂಲಕ ರೈತರಿಗೆ ನೆರವು

ರಾಜ್ಯದಲ್ಲಿ ತೋಟಗಾರಿಕಾ ಬೆಳೆಗಳ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ತೋಟಗಾರಿಕಾ ಬೆಳೆಗಳಿಗೆ…

13 hours ago

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆ | ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದ ಕರಾವಳಿಯಲ್ಲಿ ವ್ಯಾಪಕ ಮಳೆಯಾಗಿದೆ. ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಕರಾವಳಿ ಹಾಗೂ ಉತ್ತರ…

14 hours ago

ತುಳುವರ ಆಟಿ ತಿಂಗಳು | ಆಟಿಯ ಕೊನೆಗೆ ಆಟಿಗೊಂದು ಸುತ್ತು….

ತುಳುನಾಡಿನಲ್ಲಿ ಆಟಿ ಬಹಳ ಮಹತ್ವದ ತಿಂಗಳು. ಈ ಸಮಯದಲ್ಲಿ ವಿವಿಧ ಆಚರಣೆಗಳು ಇರುತ್ತವೆ.…

14 hours ago

ಎತ್ತಿನಹೊಳೆ ಯೋಜನೆ ಕಾಮಗಾರಿ ಪೂರ್ಣಕ್ಕೆ ಕ್ರಮ | ವಿಧಾನಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿಕೆ

ಎತ್ತಿನಹೊಳೆ ಯೋಜನೆಯಡಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಮೊದಲ…

1 day ago