ನವದೆಹಲಿ: ಅರಬ್ಬೀ ಸಮುದ್ರದಲ್ಲಿ ಉಂಟಾದ ಈ ಬಾರಿಯ ಚಂಡಮಾರುತ ನಿಸರ್ಗ ಮಹಾರಾಷ್ಟ್ರದ ಮುಂಬೈ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಿ ಅಪಾಯದಿಂದ ಪಾರಾಗಿದೆ. ಆದರೆ ಈ ಚಂಡಮಾರುತ ಇನ್ನೊಂದು ಶುಭ ಸುದ್ದಿಯನ್ನೂ ನೀಡಿದೆ. ಇದು ಪರಿಶುದ್ಧವಾದ ಗಾಳಿ. ಇದಕ್ಕೆ ಕಾರಣ ಲಾಕ್ಡೌನ್. ಅಂದರೆ ಪರಿಸರ ಮಾಲಿನ್ಯದಿಂದ ಬಹುಪಾಲು ಮುಕ್ತಿ.
ಪರಿಸರ ಮಾಲಿನ್ಯ ಅಥವಾ ಗಾಳಿಯ ಶುದ್ಧತೆಯನ್ನು ಆಗಾಗ ಪರಿಶೀಲನೆ ಮಾಡಲಾಗುತ್ತದೆ. ಆದರೆ ಪ್ರತೀ ಬಾರಿ ಚಂಡಮಾರುತ ಹಾಗೂ ಭಾರೀ ಗಾಳಿ ಬಂದಾಗ ವಾಯು ಶುದ್ಧತೆಯನ್ನು ಅಥವಾ ವಾಯು ಗುಣಮಟ್ಟದ ಸೂಚ್ಯಂಕ (AQI) ಪರಿಶೀಲನೆ ಮಾಡಲಾಗುತ್ತದೆ. ಈ ಬಾರಿಯ ನಿಸರ್ಗ ಚಂಡಮಾರುತದ ಬಳಿಕ ಪರಿಶೀಲನೆ ಮಾಡಿದಾಗ ವಾಯು ಗುಣಮಟ್ಟದ ಸೂಚ್ಯಂಕ (ಎಕ್ಯೂಐ) 22 ಕ್ಕೆ ದಾಖಲಾಗಿದ್ದು ಇದು ಇತ್ತೀಚೆಗಿನ ವರದಿಯ ಪ್ರಕಾರ ಗಾಳಿಯ ಶುದ್ಧತೆ ಉತ್ತಮ ಗುಣಮಟ್ಟದ ವ್ಯಾಪ್ತಿಗೆ ಒಳಪಟ್ಟಿದೆ ಹಾಗೂ ಇದು ಈ ವರ್ಷದ ಅತ್ಯಂತ ಉತ್ತಮ ದಾಖಲಾತಿ ಎಂದು ಸಿಸ್ಟಂ ಆಫ್ ಏರ್ ಕ್ವಾಲಿಟಿ ವೆದರ್ ಫೋರ್ಕಾಸ್ಟಿಂಗ್ ಅಂಡ್ ರಿಸರ್ಚ್ (SAFAR) ಹೇಳಿದೆ.
ಸ್ವಚ್ಛವಾದ ಗಾಳಿಯು ಈಗ ಸಿಗುವಂತಾಗಿದೆ. ವಾಯು ಮಾಲಿನ್ಯದ ಪ್ರಮಾಣ ಕಡಿಮೆಯಾಗಿರುವುದು ಇದರ ಸಂಕೇತವಾಗಿದೆ. ವಾಯುಸಾಂದ್ರತೆ ಈ ಹಿಂದೆ 60 ಮೈಕ್ರೊಗ್ರಾಂಗಳಷ್ಟುಇದ್ದರೆ ಈಗ ತೀರಾ ಇಳಿಕೆಯಾಗಿದ್ದು 22 ಮೈಕ್ರೊಗ್ರಾಂಗಳಷ್ಟು ದಾಖಲಾಗಿದೆ.
ನಮ್ಮ ಮುಂದಿನ ಮಕ್ಕಳನ್ನು ಸ್ವಾವಲಂಬಿಗಳಾಗಿ ಮಾಡಬೇಕೇ ಹೊರತು ಪರಾವಲಂಬಿಗಳಾಗಿ ಮಾಡಬಾರದು. ಜನರು ಆತ್ಮಾಭಿಮಾನದಿಂದ…
ಯಕ್ಷ ಕಲಾಭಿಮಾನಿ ಮಿತ್ರರು ಎಲಿಮಲೆ-ಗುತ್ತಿಗಾರು ಇವರ ವತಿಯಿಂದ ಯಕ್ಷಗಾನ ಕಲಾವಿದ ಉಬರಡ್ಕ ಉಮೇಶ್…
ಮಲೆನಾಡಿನ ಸೊಗಬು ಕಣ್ಮರೆಯಾಗುತ್ತಿರುವುದು ಏಕೆ? ಈ ಬಗ್ಗೆ ಬರೆದಿದ್ದಾರೆ ಪ್ರಬಂಧ ಅಂಬುತೀರ್ಥ.
ಮೇ 9ರಿಂದ ಉತ್ತರ ಒಳನಾಡು ಭಾಗಗಳಲ್ಲಿಯೂ ಮಳೆಯಾಗುವ ಲಕ್ಷಣಗಳಿವೆ.ಕರಾವಳಿ ಭಾಗಗಳಲ್ಲಿ ಈಗಾಗಲೇ ಮಳೆ…
ಆಹಾರ ಬದಲಾವಣೆಯ ಕಾರಣದಿಂದ ವಾತಾವರಣದ ತಾಪಮಾನ ನಿಯಂತ್ರಣ ಸಾಧ್ಯ..ಹೀಗೆಂದು ಹೇಳಿದಾಗ, ಎಲ್ಲರೂ ಅಚ್ಚರಿ…
ಮೇ 7 ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆ…