ನವದೆಹಲಿ: ಅರಬ್ಬೀ ಸಮುದ್ರದಲ್ಲಿ ಉಂಟಾದ ಈ ಬಾರಿಯ ಚಂಡಮಾರುತ ನಿಸರ್ಗ ಮಹಾರಾಷ್ಟ್ರದ ಮುಂಬೈ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಿ ಅಪಾಯದಿಂದ ಪಾರಾಗಿದೆ. ಆದರೆ ಈ ಚಂಡಮಾರುತ ಇನ್ನೊಂದು ಶುಭ ಸುದ್ದಿಯನ್ನೂ ನೀಡಿದೆ. ಇದು ಪರಿಶುದ್ಧವಾದ ಗಾಳಿ. ಇದಕ್ಕೆ ಕಾರಣ ಲಾಕ್ಡೌನ್. ಅಂದರೆ ಪರಿಸರ ಮಾಲಿನ್ಯದಿಂದ ಬಹುಪಾಲು ಮುಕ್ತಿ.
ಪರಿಸರ ಮಾಲಿನ್ಯ ಅಥವಾ ಗಾಳಿಯ ಶುದ್ಧತೆಯನ್ನು ಆಗಾಗ ಪರಿಶೀಲನೆ ಮಾಡಲಾಗುತ್ತದೆ. ಆದರೆ ಪ್ರತೀ ಬಾರಿ ಚಂಡಮಾರುತ ಹಾಗೂ ಭಾರೀ ಗಾಳಿ ಬಂದಾಗ ವಾಯು ಶುದ್ಧತೆಯನ್ನು ಅಥವಾ ವಾಯು ಗುಣಮಟ್ಟದ ಸೂಚ್ಯಂಕ (AQI) ಪರಿಶೀಲನೆ ಮಾಡಲಾಗುತ್ತದೆ. ಈ ಬಾರಿಯ ನಿಸರ್ಗ ಚಂಡಮಾರುತದ ಬಳಿಕ ಪರಿಶೀಲನೆ ಮಾಡಿದಾಗ ವಾಯು ಗುಣಮಟ್ಟದ ಸೂಚ್ಯಂಕ (ಎಕ್ಯೂಐ) 22 ಕ್ಕೆ ದಾಖಲಾಗಿದ್ದು ಇದು ಇತ್ತೀಚೆಗಿನ ವರದಿಯ ಪ್ರಕಾರ ಗಾಳಿಯ ಶುದ್ಧತೆ ಉತ್ತಮ ಗುಣಮಟ್ಟದ ವ್ಯಾಪ್ತಿಗೆ ಒಳಪಟ್ಟಿದೆ ಹಾಗೂ ಇದು ಈ ವರ್ಷದ ಅತ್ಯಂತ ಉತ್ತಮ ದಾಖಲಾತಿ ಎಂದು ಸಿಸ್ಟಂ ಆಫ್ ಏರ್ ಕ್ವಾಲಿಟಿ ವೆದರ್ ಫೋರ್ಕಾಸ್ಟಿಂಗ್ ಅಂಡ್ ರಿಸರ್ಚ್ (SAFAR) ಹೇಳಿದೆ.
ಸ್ವಚ್ಛವಾದ ಗಾಳಿಯು ಈಗ ಸಿಗುವಂತಾಗಿದೆ. ವಾಯು ಮಾಲಿನ್ಯದ ಪ್ರಮಾಣ ಕಡಿಮೆಯಾಗಿರುವುದು ಇದರ ಸಂಕೇತವಾಗಿದೆ. ವಾಯುಸಾಂದ್ರತೆ ಈ ಹಿಂದೆ 60 ಮೈಕ್ರೊಗ್ರಾಂಗಳಷ್ಟುಇದ್ದರೆ ಈಗ ತೀರಾ ಇಳಿಕೆಯಾಗಿದ್ದು 22 ಮೈಕ್ರೊಗ್ರಾಂಗಳಷ್ಟು ದಾಖಲಾಗಿದೆ.
ಆಗಸ್ಟ್ 2ರಿಂದ 8ರವರೆಗೆ ಮಂಗಳೂರಿನಲ್ಲಿ ರಾಷ್ಟ್ರೀಯ ಅಂಡರ್-11 ಮುಕ್ತ ಹಾಗೂ ಬಾಲಕಿಯರ ಚೆಸ್…
ICAR-CPCRI ಸಂಶೋಧನೆಯ ಪ್ರಕಾರ ಅಡಿಕೆ ತಳಿಗಳಲ್ಲಿ ಆಲ್ಕಲಾಯ್ಡ್ ಪ್ರಮಾಣದಲ್ಲಿ ಗಣನೀಯ ವ್ಯತ್ಯಾಸವಿದೆ. ಮಂಗಳ…
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ…
ಮಂಗಳೂರಿನಲ್ಲಿ ಜುಲೈ 30ರಂದು ವಿವಿಧ ಖಾಸಗಿ ಸಂಸ್ಥೆಗಳ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನ…
ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿರುವ ಭಾರತ, ರಸಗೊಬ್ಬರದಲ್ಲಿ ಇನ್ನೂ ಆಮದು ಅವಲಂಬಿತವಾಗಿದೆ. ದೇಶೀಯ…
ಕರಾವಳಿ ಮತ್ತು ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಯಲಿದ್ದು, ಸುಳ್ಯ-ಮಡಿಕೇರಿ ಘಾಟಿ ಭಾಗಗಳಲ್ಲಿ ಮಳೆ…