Advertisement
ಸುದ್ದಿಗಳು

ಶಾಸಕ ಅಂಗಾರರಿಗೆ ಸಚಿವ ಸ್ಥಾನ ತಪ್ಪಿಸಿ ಸಮುದಾಯಕ್ಕೆ ಅನ್ಯಾಯ- ಮೊಗೇರ ಸಮುದಾಯ ಮುಖಂಡರ ಖಂಡನೆ

Share

ಸುಳ್ಯ:ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ಮತ್ತು ಮೊಗೇರ ಸಮುದಾಯದ ಪ್ರತಿನಿಧಿಯಾದ ಶಾಸಕ ಎಸ್‌.ಅಂಗಾರ ಅವರಿಗೆ ಈ ಬಾರಿ ಸಚಿವ ಸ್ಥಾನ ತಪ್ಪುವ ಮೂಲಕ ಮೊಗೇರ ಸಮುದಾಯಕ್ಕೆ ಮತ್ತು ಸುಳ್ಯದ ಜನತೆಗೆ ಅನ್ಯಾಯವಾಗಿದೆ. ಇದನ್ನು ಮೊಗೇರ ಸಮುದಾಯವು ಖಂಡಿಸುತ್ತದೆ ಎಂದು ಮೊಗೇರ ಸಮುದಾಯದ ಮುಖಂಡರು ಹೇಳಿದ್ದಾರೆ.

ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೊಗೇರ ಸಮುದಾಯದ ಮುಖಂಡ ಕೇಶವ ಮಾಸ್ತರ್ ಹೊಸಗದ್ದೆ
‘ಮೊಗೇರ ಸಮುದಾಯದಲ್ಲಿ ಹುಟ್ಟಿ ಬೆಳೆದು ನಿರಂತರ ಆರು ಬಾರಿ ಶಾಸಕರಾದ ಅಂಗಾರರು ತನ್ನ ಸಜ್ಜನಿಕೆಯ ನಡವಳಿಕೆ, ಸರಳ ಜೀವನ, ಅಭಿವೃದ್ಧಿ ಪರ ಕಾಳಜಿ ಹಾಗೂ ಭ್ರಷ್ಟಾಚಾರ ರಹಿತ ಕಾರ್ಯಶೈಲಿಯಿಂದ ಜನಪ್ರೀತಿ ಗಳಿಸಿದ್ದಾರೆ‌. ಅಂಗಾರರು ಈ ಎಲ್ಲಾ ಅರ್ಹತೆಯ ಆಧಾರದಲ್ಲಿ ಎಂದೋ ಸಚಿವರಾಗಬೇಕಿತ್ತು. ಆದರೆ ಈ ಬಾರಿಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಅಂಗಾರರು ಮಂತ್ರಿಯಾಗುತ್ತಾರೆ ಎಂದು ತಿಳಿದು ಸಂತೋಷಗೊಂಡಿದ್ದ ನಮಗೆ ಕೊನೆಯ ಕ್ಷಣದಲ್ಲಿ ಅವರಿಗೆ ಸಚಿವ ಸ್ಥಾನ ತಪ್ಪಿದ್ದರಲ್ಲಿ ತೀವ್ರ ನೋವು, ಅಸಮಾಧಾನ, ಮತ್ತು ಆಕ್ರೋಶವಿದೆ. ಓರ್ವ ಶಾಸಕನನ್ನು ಹೀಗೆ ನಡೆಸಿಕೊಂಡ ಕಾರಣ ಅವರಿಗೆ ಮತ್ತು ಆ ಮೂಲಕ ಮೊಗೇರ ಸಮುದಾಯ ಮತ್ತು ಸುಳ್ಯಕ್ಕೆ ಅನ್ಯಾಯ ಆಗಿದೆ ಎಂದು ಅವರು ಹೇಳಿದರು.

ಅಂಗಾರರು ಸುಳ್ಯ ವಿಧಾನಸಭಾ ಕ್ಷೇತ್ರದ ಪ್ರತಿನಿಧಿಯಾದರೂ ನಮ್ಮ ಸಮುದಾಯದವರು ಎನ್ನುವ ಕಾರಣಕ್ಕೆ ಸಮುದಾಯದ ಅಭಿವೃದ್ಧಿಗೆ ಆನೇಕ ವಿಧದಲ್ಲಿ ಶ್ರಮಿಸಿದ್ದಾರೆ. ಇಂಥ ನಾಯಕನನ್ನು ಸಚಿವನ್ನಾಗಿ ಮಾಡಿದ್ದರೆ ಸುಳ್ಯ ಕ್ಷೇತ್ರಕ್ಕೆ ಗೌರವ ಕೊಡುವುದರ ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿರುವ ರಾಜ್ಯದ ಮೊಗೇರ ಸಮುದಾಯಕ್ಕೂ ಗೌರವ ಕೊಟ್ಟಂತಾಗುತ್ತಿತ್ತು. ಆದರೆ ಜವಾಬ್ದಾರಿ ಉಳ್ಳವರು ಇದನ್ನು ಅರಿತುಕೊಳ್ಳದೇ ಸಮುದಾಯಕ್ಕೆ ನಷ್ಟ ಉಂಟುಮಾಡಿದ್ದಾರೆ ಎಂದರು.

ನಮ್ಮ ಸಮುದಾಯ ರಾಜಕಾರಣದಲ್ಲಿ, ಆನೇಕ ವಿಧಾನ ಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕ ಶಕ್ತಿಯಾಗಿದ್ದಾರೆ. ನಮ್ಮ ಸಹನೆ ಮತ್ತು ತಾಳ್ಮೆಯನ್ನು ದೌರ್ಬಲ್ಯ ಎಂದು ತಿಳಿದರೆ ಯಾವುದೇ ರಾಜಕೀಯ ಪಕ್ಷಗಳು ಅದಕ್ಕೆ ತಕ್ಕ ಬೆಲೆಯನ್ನು ತೆರಬೇಕಾದ ದಿನಗಳು ದೂರವಿಲ್ಲ. ಇನ್ನಾದರೂ ನಮ್ಮ ಆಕ್ರೋಶವನ್ನು ಅರ್ಥಮಾಡಿಕೊಂಡು ಅಂಗಾರರನ್ನು ಸಚಿವರನ್ನಾಗಿ ಮಾಡುತ್ತಾರೆ ಎಂಬ ವಿಶ್ವಾಸ ನಮಗಿದೆ. ಒಂದು ವೇಳೆ ನಮ್ಮ ನಿರೀಕ್ಷೆಗೆ ತಕ್ಕ ನ್ಯಾಯ ದೊರಕುವುದಿಲ್ಲವಾದರೆ ಮುಂದಿನ ದಿನಗಳಲ್ಲಿ ಇಡೀ ಮೊಗೇರ ಸಮುದಾಯ ಇದಕ್ಕೆಉಗ್ರ ಪ್ರತಿಭಟನೆಯನ್ನೂ ಮಾಡುತ್ತದೆ ಎಂದು ಅವರು ಹೇಳಿದರು.

ಶಾಸಕರ ಅಂಗಾರರು ನಿಷ್ಕಲ್ಮಶ ವ್ಯಕ್ತಿತ್ವದವರು. ಇವರಿಗೆ ಮಂತ್ರಿಸ್ಥಾನ ನೀಡದೆ ಅನ್ಯಾಯ ಮಾಡಲಾಗಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದೂ ಈ ಕಡೆಗಣನೆ ನಡೆಸಿರುವುದು ಖಂಡನೀಯ. ಜಿಲ್ಲೆಯ ಇತರ ಶಾಸಕರು ಅವರ ಬೆಂಬಲಕ್ಕೆ ಬರಲಿಲ್ಲ ಎಂಬ ನೋವೂ ನಮಗೆ ಇದೆ ಎಂದು ಅವರು ಹೇಳಿದರು.

ಇನ್ನೋರ್ವ ಮುಖಂಡ ಕೃಷ್ಣ ಸುಳ್ಳಿ ಮಾತನಾಡಿ ‘ರಾಜ್ಯದಲ್ಲಿ ಮೊಗೇರ ಸಮುದಾಯದ ಮತದಾರರು ನಿರ್ಣಾಯಕ ಶಕ್ತಿಯಾಗಿದ್ದಾರೆ. ಹೀಗಾಗಿ ಇನ್ನಾದರೂ ನ್ಯಾಯ ದೊರಕಿಸಿಕೊಡುವ ಕೆಲಸವಾಗಬೇಕು. ಅಂಗಾರರು ಈ ಬಾರಿ ಮಂತ್ರಿಯಾಗಿಯೇ ಆಗುತ್ತಾರೆ ಎಂದು ನಮಗೆ ಖಂಡಿತ ಭರವಸೆ ಇತ್ತು. ಸುಳ್ಯದ ಎಲ್ಲಾ ಪಕ್ಷದವರೂ ಅವರನ್ನು ಈ ವಿಚಾರದಲ್ಲಿ ಬೆಂಬಲಿಸಿದ್ದರು ಎಂದು ಹೇಳಿದರು.

ಹರಿಶ್ಚಂದ್ರ ಹಾಸನಡ್ಕ ಮಾತನಾಡಿ ‘ನಮ್ಮ ನೋವನ್ನು ಮೊಗೇರ ಸಂಘದವರಿಗೂ ತಿಳಿಸಿ ಸಂಘಟನೆಯ ಮೂಲಕವೂ ಸಚಿವ ಸ್ಥಾನ ದೊರಕಿಸುವ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪ್ರಶಾಂತ್ ದಾಸನಕಜೆ, ಕಿರಣ್ ಕೊನ್ನಡ್ಕ ಉಪಸ್ಥಿತರಿದ್ದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 10-06-2026 | ಕರ್ನಾಟಕದಲ್ಲಿ ಮುಂಗಾರು ದುರ್ಬಲ – ಮುಂದಿನ 10 ದಿನ ಭಾರೀ ಮಳೆ ಸಾಧ್ಯತೆ ಕಡಿಮೆ, ಅಲ್ಲಲ್ಲಿ ಮಾತ್ರ ಮಳೆ

ರಾಜ್ಯದಲ್ಲಿ ಮುಂಗಾರು ದುರ್ಬಲಗೊಂಡಿದ್ದು ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಸಾಧ್ಯತೆ ಕಡಿಮೆ…

9 minutes ago

ರಬ್ಬರ್ ಬೆಲೆ ಇತಿಹಾಸದಲ್ಲೇ ದಾಖಲೆ- ಕೆ.ಜಿಗೆ ₹263 ತಲುಪಿದ ರಬ್ಬರ್ ಧಾರಣೆ..!

ನೈಸರ್ಗಿಕ ರಬ್ಬರ್ ಬೆಲೆ ಪ್ರತಿ ಕೆ.ಜಿಗೆ ₹263 ತಲುಪಿ ಹೊಸ ದಾಖಲೆ ನಿರ್ಮಿಸಿದೆ.…

3 hours ago

₹2.34 ಕೋಟಿ ಮೌಲ್ಯದ ಅಡಿಕೆ ಜಪ್ತಿ – ಶಿವಮೊಗ್ಗದ 8 ಮಂದಿಯ ವಿರುದ್ಧ ಕೇಸ್..!

ಮಹಾರಾಷ್ಟ್ರದ ಹಿಂಗೋಲಿಯಲ್ಲಿ ₹2.34 ಕೋಟಿ ಮೌಲ್ಯದ 88,544 ಕೆ.ಜಿ. ಅಡಿಕೆಯನ್ನು ಆಹಾರ ಸುರಕ್ಷತಾ…

8 hours ago

ಹಲಸು ಅಭಿವೃದ್ಧಿಗೆ ರಾಷ್ಟ್ರೀಯ ಮಂಡಳಿ ಸ್ಥಾಪಿಸಲು ಮಾಜಿ ಪ್ರಧಾನಿ ದೇವೇ ಗೌಡ ಒತ್ತಾಯ

ಬೆಂಗಳೂರು ಹಣ್ಣು ಮೇಳಕ್ಕೆ ಭೇಟಿ ನೀಡಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು…

8 hours ago

ಕಾಪುವಿನಲ್ಲಿ ಆಹ್ವಾನಿತರ ಮುಕ್ತ ಚೆಸ್ ಸ್ಪರ್ಧೆ ಯಶಸ್ವಿ – ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್ ಆಯೋಜನೆ

ಕಾಪುವಿನ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆದ ಆಹ್ವಾನಿತರ ಮುಕ್ತ ಚೆಸ್ ಸ್ಪರ್ಧೆಯಲ್ಲಿ…

15 hours ago