Advertisement
ಅನುಕ್ರಮ

ಶಿಕ್ಷಕ-ವಿದ್ಯಾರ್ಥಿ ಸಂಬಂಧ ಗಟ್ಟಿಯಾಗಲಿ

Share

ಅಂದು ಶಿಕ್ಷಕರ ದಿನಾಚರಣೆ. ನಾನು ನನ್ನ ಪುತ್ರನೊಂದಿಗೆ ಅವನು ಕಲಿತ ಪುತ್ತೂರಿನ ಅಂಬಿಕಾ ವಿದ್ಯಾಲಯದ ಸುಬ್ರಹ್ಮಣ್ಯ ನಟ್ಟೋಜರನ್ನು ಭೇಟಿ ಆಗುವ ಉದ್ದೇಶದಿಂದ ಅಂಬಿಕಾ ವಿದ್ಯಾಲಯಕ್ಕೆ ಹೋಗಿದ್ದೆವು.

ಅಲ್ಲಿ ಶಿಕ್ಷಕರ ಮತ್ತು ಮಕ್ಕಳ ಅದ್ಭುತವಾದ ,ಸಂಸ್ಕಾರಯುತ ಲೋಕ ನಮ್ಮ ಮುಂದೆ ತೆರೆದುಕೊಂಡಿತ್ತು.ಶಿಕ್ಷಕರ ದಿನಾಚರಣೆ ಆಚರಿಸಿಕೊಳ್ಳುತ್ತಿದ್ದ ಮಕ್ಕಳೊಂದಿಗೆ ನಾವೂ ಸಭಾಂಗಣದಲ್ಲಿ ಹೋಗಿ ಕುಳಿತೆವು.ಮಕ್ಕಳು ಶಿಕ್ಷಕರನ್ನು ಪಕ್ಕದಲ್ಲಿ ಕೂರಿಸಿ ತಮ್ಮದೇ ಕಲ್ಪನೆಯ ಶಿಕ್ಷಕರ ದಿನಾಚರಣೆಯನ್ನು ಆಚರಿಸುತ್ತಿದ್ದರು. ಪುಟ್ಟ ಮಕ್ಕಳು ಗುರು ಹಿರಿಯರ ಚರಣಗಳಿಗೆ ಶಿರಬಾಗಿ ನಮಿಸಿ ಆಶೀರ್ವಾದ ಪಡಕೊಳ್ಳುವ ದೃಶ್ಯ ಕಂಡು ನಿಬ್ಬೆರಗಾದೆವು. ಕೆಲವು ಮಕ್ಕಳಂತೂ ನಮ್ಮೆಡೆಗೂ ಬಂದು ಹೂವನ್ನಿತ್ತು ಶಿರಬಾಗಿ ನಮಿಸಿ ಪ್ರೀತಿಯ ನುಡಿಗಳನ್ನಾಡಿದ್ದು ನಮ್ಮನ್ನು ಮಂತ್ರ ಮುಗ್ಧರನ್ನಾಗಿಸಿದ್ದೂ ನಿಜ.

ಈವತ್ತಿನ ತಳಕು ಬಳುಕಿನ ಸ್ವೇಚ್ಚಾ ಸಮಾಜದಲ್ಲಿ ಪುಟ್ಟ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸಿದ,ಬೆಳೆಸುವ ಪರಿ ನಿಜಕ್ಕೂ ಪ್ರಶಂಸನೀಯ. ಭಾರತೀಯತೆ,ಸನಾತನತೆ ಅವಿನಾಶಿನಿ ಎಂಬುದ ಕಂಡು ಮನಸ್ಸು ಸಂತಸಗೊಂಡದ್ದೂ ಹೌದು.
ವಂದೇ ಗುರೂಣಾಂ ಚರಣಾರವಿಂದೇ
ಸಂಧರ್ಶಿತಸ್ವಾತ್ಮ ಸುಖಾವಬೋಧೇ
ಜನಸ್ಯಯೇ ಜಾಂಗಲಿಕಾಯಮಾನೇ
ಸಂಸಾರ ಹಾಲಹಲಮೋಹಶಾಂತ್ಯೈ…
ಎಂದು ಮಕ್ಕಳು ಶಿಕ್ಷಕ ಸಮಾಜವನ್ನು ಪೂಜಿಸಿದ ಆ ಕ್ಷಣಗಳಲ್ಲಿ ನಾವೂ ಅಲ್ಲಿದ್ದುದು ನಿಜಕ್ಕೂ ಅವಿಸ್ಮರಣೀಯ. ಇಂಥಹ ಧನ್ಯ ಶಿಕ್ಷಕ ವಿದ್ಯಾರ್ಥಿ ಸಮೂಹ ದೇಶದೆಲ್ಲೆಡೆ ಬೆಳೆದು ಬರಲೆಂಬ ಆಶಯ ನಮ್ಮೆಲ್ಲರದಾಗಲಿ.

 

  • ಸುರೇಶ್ಚಂದ್ರ ಕಲ್ಮಡ್ಕ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

‌ ಪ್ರಗತಿಪರ ಕೃಷಿಕ, ಬರಹಗಾರ

Published by
ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

Recent Posts

ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?

ಗುಟ್ಕಾ–ಪಾನ್‌ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…

16 hours ago

ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…

1 day ago

ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ

ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…

2 days ago

ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?

ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…

2 days ago

ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುತ್ತಿದೆಯೇ? – ಹೊಸ ಅಧ್ಯಯನದ ಎಚ್ಚರಿಕೆ

ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುವ ಕ್ಯಾಂಪಿಲೋಬ್ಯಾಕ್ಟರ್ ಬ್ಯಾಕ್ಟೀರಿಯಾದ ಹರಡುವಿಕೆಯನ್ನು ವೇಗಗೊಳಿಸುತ್ತಿದೆ…

2 days ago

ಹವಾಮಾನ ಬದಲಾವಣೆಯಿಂದ ರೈತರ ರಕ್ಷಣೆಗೆ ಸರ್ಕಾರದ ತಂತ್ರ – 310 ಜಿಲ್ಲೆಗಳು ಅಪಾಯದಲ್ಲಿ, 2,661 ಸಹಿಷ್ಣು ತಳಿಗಳ ಅಭಿವೃದ್ಧಿ

ದೇಶದ 651 ಕೃಷಿ ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ದುರ್ಬಲವೆಂದು…

2 days ago