ಸರಣಿ ಶಿವಪೂಜಾ ಅಭಿಯಾನ : ಪೂರ್ವಭಾವಿ ಸಭೆ

June 3, 2019
7:00 PM
Advertisement

ಸುಳ್ಯ: ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಸುತ್ತಿರುವ ಶ್ರೀ ಕೇಶವಕೃಪಾ ವೇದ-ಯೋಗ-ಕಲಾ ಶಿಬಿರದಲ್ಲಿ ಮೂರು ವರ್ಷ ಪೂರೈಸಿರುವ ಎಲ್ಲಾ ವಿದ್ಯಾರ್ಥಿಗಳ ಮನೆಯಲ್ಲಿ ನಡೆಸಲ್ಪಡುವ ಸರಣಿ ಶಿವಪೂಜಾ ಅಭಿಯಾನವನ್ನು ಪ್ರಾರಂಭಿಸುವ ಸಲುವಾಗಿ ಪೋಷಕರ ಪೂರ್ವಭಾವಿ ಸಭೆಯು ಶ್ರೀ ಕೇಶವಕೃಪಾದಲ್ಲಿ ನಡೆಯಿತು.

Advertisement
Advertisement
Advertisement

ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ಶಿವಪೂಜೆಯ ಬಗ್ಗೆ ಮಾಹಿತಿ ಹಾಗೂ ಪ್ರಯೋಜನದೊಂದಿಗೆ ಧರ್ಮಜಾಗೃತಿಯ ಸಂದೇಶವನ್ನು ನೀಡುವ ಶಿವಾರಾಧನೆಯ ಮಹತ್ವವನ್ನು ವಿವರಿಸಿದರು.
ಈ ವರ್ಷದ ಅಭಿಯಾನದ ಪ್ರಧಾನ ಸಂಚಾಲಕರಾಗಿ ಉದಯಶಂಕರ ಭಟ್ ಕೊಡ್ಯಡ್ಕ ಹಾಗೂ ಸಹಸಂಚಾಲಕರಾಗಿ ಸತ್ಯನಾರಾಯಣ ಕರತಂಡ ಮತ್ತು ಮಹಿಳಾ ಸಂಚಾಲಕಿಯಾಗಿ  ಮಮತಾ ರಾಜಾರಾಮ ಅವರನ್ನು ಆಯ್ಕೆ ಮಾಡಲಾಗಿದೆ.
ಸದ್ರಿ ವರ್ಷದಲ್ಲಿ ರಾಜ್ಯ ಹಾಗೂ ಹೊರರಾಜ್ಯಗಳ ಸುಮಾರು 30 ಮನೆಗಳಲ್ಲಿ ಪ್ರತೀ ಭಾನುವಾರದಂದು ಶಿವಾರಾಧನೆ ನಡೆಯಲಿದ್ದು, ಈ ಹಿಂದಿನ ವರ್ಷಗಳಲ್ಲಿ ಒಟ್ಟು 406 ಶಿವಪೂಜಾ ನೆರವೇರಿಸಿದ್ದು, 407ನೇ ಅಭಿಯಾನದಿಂದ ಮುಂದುವರಿಯಲಿದೆ. ಸಪ್ಟಂಬರ್ ತಿಂಗಳ 15ರಂದು ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿಯಲ್ಲಿ ಸದ್ರಿ ವರ್ಷದ ಅಭಿಯಾನವು ಸಮಾರೋಪಗೊಳ್ಳಲಿದೆ.

Advertisement

ವೇದಿಕೆಯಲ್ಲಿ ರಾಜಗೋಪಾಲ ಭಟ್, ವೇ| ಮೂ| ಸುದರ್ಶನ ಭಟ್, ಕುಂಬ್ರ ರಾಮಚಂದ್ರ ಭಟ್ ಉಪಸ್ಥಿತರಿದ್ದರು. ಅಭಿಯಾನದ ನೂತನ ಸಂಚಾಲಕ ಉದಯಶಂಕರ ಭಟ್ ಕೊಡ್ಯಡ್ಕ ಎಲ್ಲರ ಸಹಕಾರವನ್ನು ಯಾಚಿಸಿ ಧನ್ಯವಾದ ಸಮರ್ಪಿಸಿದರು.

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

500 ವರ್ಷದ ಬಳಿಕ ಅಯೋಧ್ಯೆಯಲ್ಲಿ ರಾಮನವಮಿ | ಬಾಲ ರಾಮನನ್ನು ಸ್ಪರ್ಶಿಸಿದ ಸೂರ್ಯ ತಿಲಕ | ರಾಮನನ್ನು ನೋಡಲು ಬರುತ್ತಿದೆ ಭಕ್ತರ ದಂಡು |
April 17, 2024
2:45 PM
by: The Rural Mirror ಸುದ್ದಿಜಾಲ
ಅಯೋಧ್ಯೆ ಬಾಲರಾಮನಿಗೆ ಮೊದಲ ರಾಮನವಮಿ | 19 ಗಂಟೆ ಭಕ್ತರಿಗೆ ದರ್ಶನ ಭಾಗ್ಯ, VIP ಗಳಿಗೆ ನೋ ಎಂಟ್ರಿ | ದೂರದರ್ಶನದಲ್ಲಿ ರಾಮ ನವಮಿ ಆಚರಣೆಯ ನೇರಪ್ರಸಾರ |
April 16, 2024
2:16 PM
by: The Rural Mirror ಸುದ್ದಿಜಾಲ
ಕಾಶಿ, ಉತ್ತರ ಪ್ರದೇಶದ ಮರದ ಕಲಾ ಉದ್ಯಮಕ್ಕೆ ಹೆಚ್ಚಿದ ಬೇಡಿಕೆ | ಮರದಿಂದ ಕೆತ್ತಿದ ರಾಮಮಂದಿರಕ್ಕೆ ಮುಸ್ಲಿಂ ದೇಶದಿಂದಲೂ ಡಿಮ್ಯಾಂಡ್‌..!
April 13, 2024
2:41 PM
by: The Rural Mirror ಸುದ್ದಿಜಾಲ
ಎಲ್ಲೆಲ್ಲೂ ಯುಗಾದಿ ಹಬ್ಬದ ಸಂಭ್ರಮ | ವರ್ಷದ ಆದಿ ಪರ್ವವಾದ ಯುಗಾದಿಯಂದು ಚಂದ್ರ ದರ್ಶನ | ಏನಿದರ ಮಹತ್ವ?
April 8, 2024
11:40 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror