ಸುಳ್ಯ: ಎಸ್ ಕೆಎಸ್ ಎಸ್ ಎಫ್ ವಿಖಾಯ ಸಮಿತಿಯ ವತಿಯಿಂದ ವಿಖಾಯ ಕಾರ್ಯಕರ್ತರ ಸ್ನೇಹಸಮ್ಮಿಲನ ಹಾಗೂ ನೂತನ ಶಾಖಾ ಪ್ರತಿನಿಧಿಗಳಿಗೆ ಅಭಿನಂದನಾ ಸಮಾರಂಭವು ಸುಳ್ಯ ಸುಪ್ರೀಂ ಕಾಂಪೌಂಡ್ ನಲ್ಲಿ ಜನವರಿ 17 ರಂದು ನಡೆಯಿತು.
ಐವರ್ನಾಡು ಮಸೀದಿಯ ಖತೀಬ್ ಉಸ್ತಾದ್, ಅಬ್ದುಲ್ ಲತೀಫ್ ಫೈಝಿ ಕಾರ್ಯಕ್ರಮ ಉದ್ಘಾಟಿಸಿದರು. ಸುಳ್ಯ ವಲಯ ಎಸ್ ಕೆಎಸ್ ಎಸ್ ಎಫ್ ಅಧ್ಯಕ್ಷರಾದ ಹಸ್ಸನ್ ಆರ್ಷದಿ ಸಮಸ್ಥದ ಕಾರ್ಯವೈಖರಿ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಕಾರ್ಯಕರ್ತರಿಗೆ ತರಭೇತಿ ನೀಡಿದರು. ವಿಖಾಯ ಕಾರ್ಯಕರ್ತರ ಹೊಣೆಗಾರಿಕೆ ಹಾಗೂ ಮಾಡಬೇಕಾದ ಕೆಲಸಕಾರ್ಯಗಳ ಬಗ್ಗೆ ಅಜ್ಜಾವರ ಖತೀಬ್ ಉಸ್ತಾದ್, ಉಮ್ಮರ್ ಫೈಝಿ ನೆಲ್ಯಾಡಿ
ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮದ್ರಸಾ ಮೆನೇಜ್ ಮೆಂಟ್ ಅಧ್ಯಕ್ಷರಾದ ತಾಜ್ ಮಹಮ್ಮದ್ ಸಂಪಾಜೆ, ಸುನ್ನಿ ಮಹಲ್ ಫೆಡರೇಷನ್ ಸುಳ್ಯ ಇದರ ಅಧ್ಯಕ್ಷರಾದ ಖತ್ತರ್ ಇಬ್ರಾಹಿಂ ಹಾಜಿ,ಎಸ್ ವೈ ಎಸ್ ಅಧ್ಯಕ್ಷರಾದ ಹಮೀದ್ ಹಾಜಿ ಸುಳ್ಯ, ಬೆಳ್ಳಾರೆ ಶಂಸುಲ್ ಉಲಮಾ ಟ್ರಸ್ಟ್ ಅಧ್ಯಕ್ಷರಾದ ಮಂಗಳ ಅಬೂಬಕ್ಕರ್, ರಝಾಕ್ ಉಸ್ತಾದ್ ಅಜ್ಜಾವರ, ಶಾಫಿ ಮುಕ್ರಿ,ಫಾರೂಕ್ ಅಡ್ಕ, ಕಳಂದರ್ ಎಲಿಮಲೆ,ಷರೀಫ್ ಅಜ್ಜಾವರ, ತಾಜುದ್ದೀನ್ ಅರಂತೋಡು ಹಾಗೂ ಸುಮಾರು ನೂರೈವತ್ತು ಜನ ವಿಖಾಯ ಕಾರ್ಯಕರ್ತರು ಭಾಗವಹಿಸಿದ್ದರು. ವಿಖಾಯ ಕನ್ವೀನರ್ ತಾಜುದ್ದೀನ್ ಟರ್ಲಿ ಸ್ವಾಗತಿಸಿ, ಚೇರ್ಮನ್ ಜಮಾಲ್ ಬೆಳ್ಳಾರೆ ವಂದಿಸಿದರು.
ಅಡಿಕೆ ಒಡೆದು ಬೀಳುವ ಸಮಸ್ಯೆಗೆ ಬೋರಾನ್ ಕೊರತೆ ಮಾತ್ರವಲ್ಲ, ಪೆರಿಯಾಂತ್ ಮೈಟ್ ಕೀಟದ…
ಭಾರತೀಯ ಹವಾಮಾನ ಇಲಾಖೆ ಎಲ್ ನಿನೋ ಆರಂಭಗೊಂಡಿರುವುದನ್ನು ಅಧಿಕೃತವಾಗಿ ದೃಢಪಡಿಸಿದೆ. ಕರಾವಳಿ ಕರ್ನಾಟಕದಲ್ಲಿ…
ಬರಗಾಲದ ಪರಿಸ್ಥಿತಿಗಳು ಮಣ್ಣಿನಲ್ಲಿನ ಬ್ಯಾಕ್ಟೀರಿಯಾಗಳಲ್ಲಿ ಆ್ಯಂಟಿಬಯೋಟಿಕ್ ಪ್ರತಿರೋಧ ಹೆಚ್ಚಿಸಲು ಕಾರಣವಾಗಬಹುದು ಎಂದು ಹೊಸ…
ಜೇನುನೊಣಗಳ ಸಂಖ್ಯೆ ಕುಸಿಯುತ್ತಿರುವುದು ಕೃಷಿ ಉತ್ಪಾದನೆ, ಆಹಾರ ಭದ್ರತೆ ಮತ್ತು ಪರಿಸರ ಸಮತೋಲನಕ್ಕೆ…
ವಿಟ್ಲದ ಆರ್. ಕೆ. ಪೈ ಅವರು ತಮ್ಮ 60ನೇ ಹುಟ್ಟುಹಬ್ಬವನ್ನು ಮಕ್ಕಳಲ್ಲಿ ಪ್ರಕೃತಿ…
ನಾಗ್ಪುರದ ಕಾಂಪ್ಟಿಯಲ್ಲಿ FDA ಹಾಗೂ ಪೊಲೀಸರು ನಡೆಸಿದ ದಾಳಿಯಲ್ಲಿ ₹1.11 ಕೋಟಿ ಮೌಲ್ಯದ…