Advertisement
MIRROR FOCUS

ಹವಾಮಾನದ ವ್ಯತ್ಯಾಸ ಕುತೂಹಲಕಾರಿ….!

Share

ಮೊನ್ನೆ ಮೊನ್ನೆ ಕ್ಯಾರ್ ಚಂಡಮಾರುತದ ಭೀತಿ ಕರಾವಳಿಯಲ್ಲಿತ್ತು. ನಂತರ ಈ ಭಯ ದೂರವಾದ ಬಳಿಕ ಇನ್ನೆರಡು ಚಂಡಮಾರುತದ ಭೀತಿಯೂ ಇತ್ತು. ಸದ್ಯ ಈ ಭಯ ದೂರವಾಯಿತು. ಮಳೆ ಇನ್ನೂ ಒಂದೆರಡು ದಿನ ಇರುತ್ತದೆ. ಏಕೆಂದರೆ ಹವಾಮಾನದ ಬದಲಾವಣೆ ಕುತೂಹಲಕಾರಿ. ಹೀಗಾಗಿಯೇ  ಇಲಾಖೆಗಳು ಸನ್ನದ್ಧವಾಗಿರಬೇಕಾದ ಅನಿವಾರ್ಯತೆ ಇರುತ್ತದೆ.  ಮಳೆ ಹಾಗೂ ಹವಾಮಾನದ ವ್ಯತ್ಯಾಸ ಕಿಲೋಮೀಟರ್ ನಲ್ಲಿ ವ್ಯತ್ಯಾಸವಾಗುತ್ತದೆ. ಈ ಲೆಕ್ಕವನ್ನು  ಸುಳ್ಯನ್ಯೂಸ್.ಕಾಂ ನೀಡಬೇಕು ಎಂಬ ಉದ್ದೇಶ ಹೊಂದಿದೆ.

ಸುಳ್ಯ ಹಾಗೂ ದಕ್ಷಿಣ ಕನ್ನಡದಲ್ಲಿ ಅನೇಕ ವರ್ಷಗಳಿಂದ ಮಳೆ ಲೆಕ್ಕ ಹಾಗುವ ಕೃಷಿಕರು, ಆಸಕ್ತರು ಇದ್ದಾರೆ. ಇದಕ್ಕಾಗಿಯೇ ಮಳೆ ಲೆಕ್ಕ ಎಂಬ ವ್ಯಾಟ್ಸಪ್ ಗ್ರೂಪು ರಚನೆ ಮಾಡಿ ಜಿಲ್ಲೆಯ ವಿವಿದೆಡೆ ಮಳೆ ಲೆಕ್ಕವನ್ನು  ಕೃಷಿಕರೇ ಸಂಗ್ರಹಿಸುತ್ತಾರೆ. ಈ ಬಗ್ಗೆ ಮಾಹಿತಿ ಹೀಗಿದೆ…

ಸುಳ್ಯ ತಾಲೂಕಿನ  ಬಾಳಿಲ ಪಿ ಜಿ ಎಸ್ ಎನ್ ಪ್ರಸಾದ್ ಅವರು ಅನೇಕ ವರ್ಷಗಳಿಂದ ಮಳೆಯ ಲೆಕ್ಕ ಹಾಕುತ್ತಿದ್ದಾರೆ.

ಸುಳ್ಯ ತಾಲೂಕಿನ  ಕೊಲ್ಲಮೊಗ್ರದ ಕೇಶವ ಕಟ್ಟ ಅವರು ಕೂಡಾ ಮಳೆ ಲೆಕ್ಕ ಬರೆಯುತ್ತಾರೆ.

ಸುಳ್ಯ ತಾಲೂಕಿನ  ಕಲ್ಲಾಜೆಯ ಶಿಬಿ ಅಬ್ರಹಾಂ ಅವರೂ ಮಳೆ ದಾಖಲೆ ಬರೆಯುತ್ತಾರೆ.

ಸುಳ್ಯ ತಾಲೂಕಿನ  ಹಾಲೆಮಜಲಿನ ಉಣ್ಣಿಕೃಷ್ಣ ಅವರೂ ಮಳೆ ದಾಖಲೆ ಮಾಡುತ್ತಾರೆ

ಸುಳ್ಯ ತಾಲೂಕಿನ ಕಮಿಲ-ಪುಚ್ಚಪ್ಪಾಡಿಯಲ್ಲಿ  ಮಳೆ ಲೆಕ್ಕದ ಆಸಕ್ತಿ ಹೊಂದಿದವರು ಇದ್ದಾರೆ.

ಕಡಬ ತಾಲೂಕಿನ ಕಡಬದಲ್ಲಿನ ನಿವೃತ್ತ ಅರಣ್ಯಾಧಿಕಾರಿ ಸದಾಶಿವ ಭಟ್ ಅವರಲ್ಲಿ  ಮಳೆ ದಾಖಲೆ ಇದೆ

ಬೆಳ್ತಂಗಡಿ ತಾಲೂಕಿನ ಉರುವಾಲಿನ ಡಾ.ಕಿಶನ್ ಅವರು ಅನೇಕ ವರ್ಷಗಳಿಂದ ಮಳೆ ಲೆಕ್ಕ ಇದೆ

ಬಂಟ್ವಾಳ ತಾಲೂಕಿನ ವಿಟ್ಲಯ ಕೆಲಿಂಜದ ವೆಂಕಟಗಿರಿ ಅವರು ಮಳೆ ಲೆಕ್ಕ ಬರೆಯುತ್ತಾರೆ.

ಪೆರ್ಲ ಬಳಿಯ ಸ್ವರ್ಗದ ಪಡ್ರೆಯ ವಿವೇಕ್ ಅವರಲ್ಲಿ ಮಳೆ ಲೆಕ್ಕ ಇದೆ.

ಮುಂದೆ ಇಲ್ಲಿನ ಮಳೆ ದಾಖಲೆಗಳನ್ನು ಇಲ್ಲಿ ಪ್ರಕಟ ಮಾಡುವ ಇರಾದೆ ಇದೆ. ಇನ್ನಷ್ಟು ಮಳೆ ಲೆಕ್ಕ ಬರೆಯುವ ಆಸಕ್ತರಿದ್ದರೆ ಅದನ್ನೂ ಸೇರಿಸಿ ಮಳೆಯ ಮಾಪನ ಮಾಡಬಹುದಾಗಿದೆ. ಏಕೆಂದರೆ ಕಿಲೋಮೀಟರ್ ವ್ಯತ್ಯಾಸದಲ್ಲಿ ಬೀಳುವ ಮಳೆಯಲ್ಲಿ ವ್ಯತ್ಯಾಸ ಇರುತ್ತದೆ. ಹೀಗಾಗಿ ಮಳೆ ದಾಖಲೆ ಮಾಡುವವರು ಇದ್ದರೆ ತಿಳಿಸಿದರೆ ಸುಳ್ಯನ್ಯೂಸ್.ಕಾಂ ಗೆ ಮಾಹಿತಿ ನೀಡಬೇಕಾಗಿ ವಿನಂತಿ.

ಭಾನುವಾರದ ಮಳೆಯ ಲೆಕ್ಕ ಹೀಗಿದೆ:

ಕೊಲ್ಲಮೊಗ್ರ : 14 ಮಿಮೀ

ಕಲ್ಲಾಜೆ : 24 ಮಿಮೀ

ಅಡೆಂಜ-ಉರುವಾಲು : 48 ಮಿಮೀ

ಬಾಳಿಲ : 44 ಮಿಮೀ

ಕಡಬ : 23.5 ಮಿಮೀ

ಪಡ್ರೆ : 54 ಮಿಮೀ

ಕಮಿಲ-ಪುಚ್ಚಪ್ಪಾಡಿ : 27 ಮಿಮೀ

ಕೆಲಿಂಜ-ಕೋಡಪದವು :42 ಮಿಮೀ

ಹಾಲೆಮಜಲು : 29 ಮಿಮೀ

ಸೋಮವಾರ:

ಕೊಲ್ಲಮೊಗ್ರ : 19 ಮಿಮೀ

ಹಾಲೆಮಜಲು : 5 ಮಿಮೀ

ಅಡೆಂಜ-ಉರುವಾಲು : 1 ಮಿಮೀ

ಕಮಿಲ-ಪುಚ್ಚಪ್ಪಾಡಿ : 4 ಮಿಮೀ

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 14-09-2026 | ಸೆ.18ರ ಬಳಿಕ ಮಳೆ ಚಿತ್ರಣ ಬದಲಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.18ರಿಂದ ಮಳೆಯ ವ್ಯಾಪ್ತಿ ಹೆಚ್ಚಾಗುವ ಸೂಚನೆಗಳಿವೆ. ಸೆ.19ರಿಂದ…

13 hours ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಮೂಲಕ ಅರಳಿದ ಗಣೇಶ

ಬಣ್ಣಗಳ ಮೂಲಕ ಅರಳಿದ ಗಣೇಶ - ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ 8…

14 hours ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಲೋಕದಲ್ಲಿ ಪುಟ್ಟ ಮನಸ್ಸಿನ ಖುಷಿ

ನನ್ನ ಚಿತ್ರ – ನನ್ನ ಖುಷಿ | ಗಣೇಶನನ್ನು ಬಣ್ಣಗಳಲ್ಲಿ ಅರಳಿಸಿದ ಪುಟಾಣಿ…

15 hours ago

ವಿಘ್ನಗಳ ಆಚೆ ಕಾಣುವ ಗಣೇಶತತ್ತ್ವ

ಗಣೇಶ ಚತುರ್ಥಿಯನ್ನು ಕೇವಲ ಧಾರ್ಮಿಕ ಆಚರಣೆಯಾಗಿ ನೋಡುವುದಕ್ಕಿಂತ, ಗಣೇಶನ ರೂಪಲಕ್ಷಣಗಳಲ್ಲಿರುವ ಜೀವನದ ಸಂದೇಶಗಳನ್ನು…

18 hours ago

ಶಿರಾಡಿ ಘಾಟ್‌ನಲ್ಲಿ ಸೋಮವಾರ ಟ್ರಾಫಿಕ್‌ ಸಂಕಷ್ಟದ ಸಾಧ್ಯತೆ – ಮುಂಜಾಗ್ರತಾ ಕ್ರಮ ಅಗತ್ಯ

ಮೂರು ದಿನಗಳ ರಜೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಶಿರಾಡಿ ಘಾಟ್‌ನಲ್ಲಿ…

1 day ago