ಮತ್ತೆ ಕೊರೋನಾ ಭಯ ಹೆಚ್ಚಾಗಿದೆ. ಅದರ ಜೊತೆಗೇ ಒಮಿಕ್ರಾನ್ ಕೂಡಾ ಹಬ್ಬುತ್ತಿದೆ. ಸರ್ಕಾರಿ ದಾಖಲೆಗಳ ಪ್ರಕಾರ ಪ್ರತೀ ದಿನ ರೋಗದ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಸರ್ಕಾರವಾಗಿ ಈ ರೋಗ ನಿಯಂತ್ರಣ ಮಾಡಲೇಬೇಕಿದೆ. ಮತ್ತೆ ಲಾಕ್ಡೌನ್ ಆದರೆ ಜನ ಅದರಲ್ಲೂ ಸಾಮಾನ್ಯ ಜನರು ಸಂಕಷ್ಟ ಅನುಭವಿಸುವುದು ಖಚಿತ. ಹೀಗಾಗಿ ಲಾಕ್ಡೌನ್ ಬದಲಾಗಿ ಪರ್ಯಾಯ ದಾರಿಗಳು ಏನಿದೆ ? ರೋಗ ಹರಡುವುದು ತಪ್ಪಿಸಲು ಏನು ಮಾಡಬಹುದು ? ಗ್ರಾಮೀಣ ಭಾಗದಿಂದ ತೊಡಗಿ ನಗರದವರೆಗೆ ಏನು ಮಾಡಬಹುದು ? ಇಂತಹದ್ದೊಂದು ಯೋಚನೆ ಇದ್ದರೆ ಹೇಳಿ ಸರ್ಕಾರಕ್ಕೆ ನಾವೆಲ್ಲರೂ ಸೇರಿ ಗಮನಕ್ಕೆ ತರೋಣ.
ಏಕೆಂದರೆ ಸರ್ಕಾರಕ್ಕೂ, ಆಡಳಿತಕ್ಕೂ ಕೊರೋನಾ ಲಾಕ್ಡೌನ್ ಈಗ ಬೇಕಾಗಿಲ್ಲ. ಆದರೆ ಜವಾಬ್ದಾರಿ ಹಾಗೂ ನಾಗರಿಕರ ಹಿತದೃಷ್ಟಿಯಿಂದ ಅನಿವಾರ್ಯ ಸ್ಥಿತಿ ಇದೆ. ಅಂತರಾಷ್ಟ್ರೀಯ ಮಟ್ಟದಲ್ಲೂ ರೋಗ ಹರಡದಂತೆ ಲಾಕ್ಡೌನ್ ಮಾತ್ರವೇ ಪರಿಹಾರ ಎಂದು ಹೇಳಲಾಗುತ್ತಿದೆ. ಈ ಕಾರಣದಿಂದ ಲಾಕ್ಡೌನ್ ಹೊರತಾದ ಯಾವ ಮಾರ್ಗ ಇದ್ದರೂ ಸರ್ಕಾರ ಪರಿಗಣಿಸುವುದು ಕಷ್ಟವಾದರೂ ಸಡಿಲಿಕೆ ಮಾಡಬಹುದು. ಅಂತಹ ಯೋಚನೆಗಳು ಇದ್ದರೆ ಎಲ್ಲರೂ ಸರ್ಕಾರದ ಗಮನಕ್ಕೆ ತರಬಹುದು. ಪ್ರತಿಭಟನೆಗಳ ಬದಲಾಗಿ ರಚನಾತ್ಮಕ ಸಲಹೆ, ಯೋಚನೆಗಳನ್ನು ಹೇಳುವ ಅವಕಾಶ ಪ್ರಜಾಪ್ರಭುತ್ವದಲ್ಲಿ ಇದೆ. ಈಗ ಈ ಪ್ರಯತ್ನ ನಾವೆಲ್ಲರೂ ಮಾಡೋಣ, ಏಕೆಂದರೆ ನಮ್ಮೆಲ್ಲರ ಹಿತಕ್ಕಾಗಿ…
ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಇಳಿಮುಖವಾಗುತ್ತಿದ್ದು, ಕರಾವಳಿ–ಮಲೆನಾಡಿನಲ್ಲಿ ಸೆ.8ರಿಂದ 10ರವರೆಗೆ ಅಲ್ಲಲ್ಲಿ…
ಭಾರತ–ಜಪಾನ್ JCM ಮೂಲಕ ಭಾರತದಲ್ಲಿ ಕಡಿಮೆ-ಇಂಗಾಲ ಯೋಜನೆಗಳಿಗೆ ಜಪಾನ್ ಹೂಡಿಕೆ ಮತ್ತು ತಂತ್ರಜ್ಞಾನ…
ಸಿಕ್ಕಿಂನಲ್ಲಿ 40 ಹೆಚ್ಚಿನ ಅಪಾಯದ ಹಿಮನದಿ ಸರೋವರಗಳನ್ನು ಗುರುತಿಸಲಾಗಿದ್ದು, 16 ಸರೋವರಗಳು ಅತ್ಯಂತ…
2026ರ ಆಗಸ್ಟ್ ವೇಳೆಗೆ ಎಲ್ ನಿನೊ ಆರಂಭವಾಗಿದ್ದು , ವರ್ಷಾಂತ್ಯದ ವೇಳೆಗೆ ಅತ್ಯಂತ…
ನಾಗಾಲ್ಯಾಂಡ್ನಲ್ಲಿ ರಬ್ಬರ್ ಕೃಷಿ ಸುಮಾರು 29,794 ಹೆಕ್ಟೇರ್ಗೆ ವಿಸ್ತರಿಸಿರುವ ಬೆನ್ನಲ್ಲೇ ಜಾರ್ಖಂಡ್ನಲ್ಲಿ ಸೂಕ್ತ…
ದಾವಣಗೆರೆ ಜಿಲ್ಲೆಯಲ್ಲಿ 15 ದಿನಗಳಿಂದ ಮಳೆ ಕೊರತೆಯಾಗಿದ್ದು, ಮುಂದಿನ ಕೆಲ ದಿನಗಳಲ್ಲೂ ಮಳೆಯಾಗದಿದ್ದರೆ…