Advertisement
ಸಾಧನೆ

50000 ಪ್ಲಾಸ್ಟಿಕ್ ಚೀಲಗಳು, 48000 ಬಾಟಲಿಗಳ ಮರುಬಳಕೆ…! | ಪರಿಸರ ಸ್ನೇಹಿ ಯೋಜನೆ ರೂಪಿಸಿದ ಯುವಕ | ಪರಿಸರ ಸ್ನೇಹಿ ಜೊತೆಗೆ ಟ್ರೆಂಡಿಯಾಗಿದೆ ಈ ಐಡಿಯಾ |

Share

ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಅದರಿಂದ ಏನು ಪ್ರಯೋಜನಾ..? ನಮಗೆ ಎಷ್ಟು ಅನುಕೂಲಕರವಾಗಿದೆ..? ಹಾಗೆ ಇದರಿಂದ ಪರಿಸರಕ್ಕೆ ಏನಾದರು ತೊಂದರೆ ಅಥವಾ ಲಾಭ ಇದೆಯೇ..? ಅನ್ನೋ ಯೋಚನೆಗಳು ಹಾಗೆ ಬಂದು ಹೋಗುತ್ತವೆ. ಆದರೆ ಇಲ್ಲೊಬ್ಬ ಯುವಕ ಮಾಡಿರೂ ಹೊಸ ಆವಿಷ್ಕಾರ ನಿಜಕ್ಕೂ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ. ಪರಿಸರ ಉಳಿಸುವ ಯೋಜನೆಯಾಗಿದೆ.

ಆಶಯ್ ಭಾವೆ ಎಂಬ 24 ವರ್ಷದ ನವ ತರುಣ,  ‘ಥೇಲಿ’ ಎಂಬ ಪರಿಸರ ಸ್ನೇಹಿ ಶೂ ಬ್ರಾಂಡ್ ಅನ್ನು ಆರಂಭಿಸಿದ್ದಾರೆ. ಆಶಯ್, ಪ್ಲಾಸ್ಟಿಕ್ ಚೀಲಗಳು, ಬಾಟಲಿಗಳು ಮತ್ತು ರಬ್ಬರ್ ಬಳಸಿ  ಮಾಡಿದಂತಹ ಚರ್ಮದ ರೀತಿಯ ಬಟ್ಟೆಯಿಂದ ಶೂಗಳನ್ನು ಕೈಯಿಂದ ತಯಾರಿಸಿ ಅಭಿವೃದ್ಧಿಪಡಿಸಿದ್ದಾರೆ.  ಇದಕ್ಕಾಗಿ 50000 ಪ್ಲಾಸ್ಟಿಕ್ ಚೀಲಗಳು, 48000 ಬಾಟಲಿಗಳನ್ನು ಮರುಬಳಕೆ ಮಾಡಲಾಗಿದೆ.

ಆಶಯ್ ಭಾವೆ, ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ನಲ್ಲಿ ಸ್ನಾತಕೋತ್ತರ  ಓದುತ್ತಿರುವ ವಿದ್ಯಾರ್ಥಿ.  2017 ರಲ್ಲಿ, ಆತನಿಗೆ ಮನಸ್ಸಿನಲ್ಲಿ ಒಂದು ಕಲ್ಪನೆ ಬೇರೂರಿತು. ಪ್ಲಾಸ್ಟಿಕ್ ಚೀಲಗಳು ಮತ್ತು ಬಾಟಲಿಗಳನ್ನು ಉಪಯೋಗಿಸಿ ಶೂಗಳನ್ನು ವೈಯಕ್ತಿಕವಾಗಿ ವಿನ್ಯಾಸ ಗೊಳಿಸಿ ಸ್ನೀಕರ್ಸ್ ಅನ್ನು ನೈತಿಕ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕೆಂದು.

“ಪ್ರತಿ ವರ್ಷ 12 ಮಿಲಿಯನ್ ಬ್ಯಾರೆಲ್ ತೈಲ ಬಳಕೆಯಿಂದ “100 ಶತಕೋಟಿ ಪ್ಲಾಸ್ಟಿಕ್ ಚೀಲಗಳ ಬಳಕೆ ಮಾಡಲಾಗುತ್ತಿದೆ. ಇದರಿಂದ ವಾರ್ಷಿಕವಾಗಿ 100,000 ಸಮುದ್ರ ಪ್ರಾಣಿಗಳ ಮಾರಣ ಹೋಮ ನಡೆಯುತ್ತಿದೆ. ಈ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯುವುದೇ ನನ್ನ ಮೊದಲ ಗುರಿ ಎಂದು ಆಶಯ್ ದೃಢ ನಿರ್ಧಾರ ತೆಗೆದುಕೊಂಡ.

ಆಶಯ್ ಮುಂದಿನ ಎರಡು ವರ್ಷಗಳ ಕಾಲ ಪ್ಲಾಸ್ಟಿಕ್ ತ್ಯಾಜ್ಯದಿಂದ ಚರ್ಮದಂತಹ ಬಟ್ಟೆಯನ್ನು ಸಂಶೋಧಿಸಲು ಮತ್ತು ವಿನ್ಯಾಸಗೊಳಿಸಲು ಸಮಯ ತೆಗೆದುಕೊಂಡರು. ನಂತರ ಆಶಯ್ ಮುಂಬೈನಲ್ಲಿ ಸ್ಥಳೀಯ ಶೂ ರಿಪೇರಿ ಮಾಡುವವರನ್ನು ಸಂಪರ್ಕಿಸಿ ಒರಟು ಮಾದರಿಯನ್ನು ರಚಿಸಲು ಮತ್ತು ಸಾಂಪ್ರದಾಯಿಕ ಚರ್ಮದ ಬದಲಿಗೆ ಈ ಹೊಸದಾಗಿ ಅಭಿವೃದ್ಧಿಪಡಿಸಿದ ಬಟ್ಟೆಯನ್ನು ಬಳಸುವ ಪ್ರಾಯೋಗಿಕತೆಯನ್ನು ತಿಳಿದುಕೊಂಡರು.‌

ಅವರ ಶ್ರಮ, ಪರೀಕ್ಷೆ ಯಶಸ್ವಿಯಾಯಿತು. ಸಿದ್ಧಪಡಿಸಿದ ಕೃತಕ ಚರ್ಮವು ಮೂಲ ಮಾದರಿಯು ಲೆದರ್ ನಂತೆ ಕಾರ್ಯನಿರ್ವಹಿಸಿತು. ಶೂ ಸಾಂಪ್ರದಾಯಿಕ ಚರ್ಮದ ಸ್ನೀಕರ್‌ನಂತೆ ಕಾಣಿಸಿತು ಎಂದು ಆಶಯ್ ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದ್ದಾನೆ.

ಅವರ ಈ ಪರಿಶ್ರಮಕ್ಕೆ ಮೂರ್ತರೂಪ ಕೊಟ್ಟು 2021 ರಲ್ಲಿ, ಆಶಯ್ ತನ್ನ ಬ್ರಾಂಡ್ ‘ಥೇಲಿ’ ಅನ್ನು ಬಿಡುಗಡೆ ಮಾಡಿದರು. ಥೇಲಿ ಅಂದ್ರೆ ಹಿಂದಿಯಲ್ಲಿ ಪ್ಲಾಸ್ಟಿಕ್ ಚೀಲ ಅಂತ ಅರ್ಥ. ತ್ಯಾಜ್ಯ ನಿರ್ವಹಣಾ ಘಟಕದಿಂದ ಬೇಡದ ಪ್ಲಾಸ್ಟಿಕ್ ಚೀಲಗಳನ್ನು ತರಲಾಗುತ್ತದೆ. ನಂತರ ಅದನ್ನು ಸ್ವಚ್ಛ ಮಾಡಿ, ಹಾಳೆಗಳ ರೀತಿಯಲ್ಲಿ ತುಂಡು ಮಾಡಲಾಗುತ್ತದೆ ನಂತರ ಶಾಖ ಮತ್ತು ಒತ್ತಡದಿಂದ ಅದನ್ನು ಬೆಸೆಯಲಾಗುತ್ತದೆ.

ಒಂದು ಜೋಡಿ ಶೂಗಳನ್ನು ತಯಾರಿಸಲು 10 ಪ್ಲಾಸ್ಟಿಕ್ ಚೀಲಗಳು ಮತ್ತು 15 ಪ್ಲಾಸ್ಟಿಕ್ ಬಾಟಲಿಗಳನ್ನು ಮರುಬಳಕೆ ಮಾಡಲಾಗುತ್ತದೆ.  ಈ ವಿಶೇಷವಾದ ಶೂ ನ ಒಂದು  ಜೋಡಿಯ ಬೆಲೆ 8,000 ರೂಪಾಯಿ.

ಆಶಯ್ ಈವರೆಗೆ ತಿರಸ್ಕರಿಸಿದ 50,000 ಕ್ಕೂ ಹೆಚ್ಚು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳನ್ನು ಹಾಗೂ 48,000 ಪ್ಲಾಸ್ಟಿಕ್ ಬಾಟಲಿಗಳನ್ನು ನವೀಕರಿಸಿದ್ದಾರೆ. ಒಂದು ವೇಳೆ ಪ್ಲಾಸ್ಟಿಕ್ ಮತ್ತು ಬಾಟಲಿಗಳು ಸಾಕಾಗದೆ ಇದ್ರೆ  ಗ್ರಾಹಕರಿಗೆ ಪ್ಲಾಸ್ಟಿಕ್ ಹಾಗೂ ಬಾಟಲಿ ತ್ಯಾಜ್ಯಗಳನ್ನು ತಮ್ಮ ಕಂಪೆನಿಗೆ ಕೊಟ್ಟು ಶೂ ಖರೀದಿಯಲ್ಲಿ ರಿಯಾಯಿತಿ ದರವನ್ನು ನೀಡಲಾಗುತ್ತದೆ.

ಅಶಯ್ ತನ್ನ ಮಾರುಕಟ್ಟೆಯನ್ನು ಭಾರತದಲ್ಲಿ ಮಾತ್ರವಲ್ಲದೆ ದುಬೈ, ಯುರೋಪ್, ಅಮೇರಿಕಾ ಮತ್ತು ಆಸ್ಟ್ರೇಲಿಯಾದಂತಹ ವಿದೇಶಿ ಮಾರುಕಟ್ಟೆಗಳಲ್ಲೂ ಈ ಶೂಗಳನ್ನು ಮಾರಾಟ ಮಾಡುವತ್ತ ಗಮನ ಹರಿಸಲು ಯೋಜಿಸುತ್ತಿದ್ದಾರೆ.

ಇಂತಹ ಸಂಶೋದನೆಗಳು ಯಾವತ್ತು ಪರಿಸರ ವಿನಾಶವನ್ನು ತಡೆಯುವಂತವು. ಈ ನಿಟ್ಟಿನಲ್ಲಿ ಇನ್ನಷ್ಟು ಯುವಕರು ಇಂತಹ ಪರಿಸರ ಸ್ನೇಹಿ ಸಂಶೋದನೆಗಳನ್ನು ಮಾಡಬೇಕು. ಸರ್ಕಾರ ಕೂಡ ಇತ್ತೀಚೆಗೆ ಮೇಕ್ ಇನ್ ಇಂಡಿಯಾ,  ಸ್ಟಾರ್ಟ್ ಅಪ್ ಗಳಿಗೆ ಭಾರಿ ಉತ್ತೇಜನಗಳನ್ನು ನೀಡುತ್ತಿದೆ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 03-09-2026 | ಕರಾವಳಿ–ಮಲೆನಾಡಿನಲ್ಲಿ ಮತ್ತೆ ಮಳೆಯ ಸಾಧ್ಯತೆ…?

ಕರ್ನಾಟಕದ ಹಲವು ಭಾಗಗಳಲ್ಲಿ ಸೆ.5ರಿಂದ ಕೆಲವು ದಿನ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿವೆ.…

8 hours ago

ಹಿಮಾಲಯದಲ್ಲಿ ಹಿಮ ಕರಗಿದರೆ ಅದರ ಪರಿಣಾಮ ಎಲ್ಲಿಗೆ ತಲುಪುತ್ತದೆ? – ಹಿಮಾಲಯದ ದುರಂತದ ಬಳಿಕ ನೇಪಾಳದ ಪ್ರಧಾನಿ ಎಚ್ಚರಿಕೆ

ಹಿಮನದಿ ಕುಸಿತದಿಂದ ಸಂಭವಿಸಿದ ಭೀಕರ ಪ್ರವಾಹದ ಬಳಿಕ ನೇಪಾಳ ಪ್ರಧಾನಿ ಬಾಲೆಂದ್ರ ಶಾ…

14 hours ago

ನಾವು ತಿನ್ನುವ ಆಹಾರದಲ್ಲಿ ಕೀಟನಾಶಕ – ಕರ್ನಾಟಕದಲ್ಲಿ 9,176 ಮಾದರಿಗಳಲ್ಲಿ 334 ಮಿತಿ ಮೀರಿವೆ – ದೇಶದ ಅಂಕಿ ಏನು ಹೇಳುತ್ತದೆ?

2023ರಿಂದ 2026ರವರೆಗೆ ದೇಶದ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರೀಕ್ಷಿಸಿದ 70,652…

22 hours ago

ಒಂದೇ ತೆಂಗಿನ ಮರದಿಂದ ₹10,000 ಆದಾಯ? ಮೌಲ್ಯವರ್ಧನೆಗೆ ಹೊಸ ದಾರಿ ತೋರಿದ ವಿಶ್ವ ತೆಂಗು ದಿನ

ಕಾಸರಗೋಡಿನ ICAR-CPCRIನಲ್ಲಿ ವಿಶ್ವ ತೆಂಗು ದಿನ–2026 ಆಚರಿಸಿ, ಹವಾಮಾನ ಅನಿಶ್ಚಿತತೆಯ ನಡುವೆ ತೆಂಗು…

1 day ago

ಹವಾಮಾನ ವರದಿ | 02-09-2026 | ಉತ್ತರ ಭಾರತದ ವಾಯುಭಾರ ಕುಸಿತ ದುರ್ಬಲವಾಗುವ ಸಾಧ್ಯತೆ

ಕರಾವಳಿಯಲ್ಲಿ ಮುಂದಿನ ಎರಡು ದಿನ ಅಲ್ಲಲ್ಲಿ ಸಾಮಾನ್ಯ ಮಳೆಯಾದರೂ ಜೋರು ಮಳೆಯ ಸಾಧ್ಯತೆ…

1 day ago

ಕೃಷಿಗೆ ಸಾಲ ಹೆಚ್ಚಿಸಿ – ಅಲ್ಪಾವಧಿ ಮಾತ್ರವಲ್ಲ, ದೀರ್ಘಾವಧಿ ಸಾಲವೂ ಬೇಕು – ಬ್ಯಾಂಕ್‌ಗಳಿಗೆ ನಿರ್ಮಲಾ ಸೀತಾರಾಮನ್ ಸೂಚನೆ

ಕೃಷಿ ಉತ್ಪಾದನೆ ಹೆಚ್ಚಿಸಲು ಬ್ಯಾಂಕ್‌ಗಳು ರೈತರಿಗೆ ಹೆಚ್ಚಿನ ಸಾಂಸ್ಥಿಕ ಸಾಲ ನೀಡಬೇಕು ಎಂದು…

2 days ago