1998 OR2 ಎಂಬ ಹೆಸರಿನ ಕ್ಷುದ್ರ ಗ್ರಹವೊಂದು ಭಾರತೀಯ ಕಾಲಮಾನ ಪ್ರಕಾರ ಈ ಮಧ್ಯಾಹ್ನ 3.26 ಕ್ಕೆ ಭೂಮಿಯ ಸಮೀಪ ಹಾದು ಹೋಗಲಿದೆ ಎಂದು ನಾಸಾ ತಿಳಿಸಿದೆ.
ವಿಶ್ವದಾದ್ಯಂತ ಕೊರೊನಾ ಸೋಂಕು ಬಾಧಿಸಿರುವ ಈ ಸಮಯದಲ್ಲಿ ವಿಚಿತ್ರವೆಂದರೆ ಮುಖಕವಚ ಧರಿಸಿದಂತೆ ದೂರದರ್ಶಕದಲ್ಲಿ ಮಾತ್ರ ಕಾಣಬಹುದಾದ ಈ ಕ್ಷುದ್ರ ಗ್ರಹ ಭೂಕಕ್ಷೆಗಿಂತ 6.2 ಮಿಲಿಯನ್ ಕಿ.ಮೀ.ದೂರದಲ್ಲಿ ಹಾದುಹೋಗಲಿದ್ದು , ಭೂಮಿಗೆ ಯಾವುದೇ ಹಾನಿ ತಂದೊಡ್ಡದು ಎಂದು ನಾಸಾ ತಿಳಿಸಿದೆ.
ಎವರೆಸ್ಟ್ ಶಿಖರದಷ್ಟು ಅಂದರೆ ಹೆಚ್ಚು ಕಡಿಮೆ 1.5 ಕಿ.ಮೀ.ನಷ್ಟು ದೊಡ್ಡದಾದ ಈ ಕ್ಷುದ್ರ ಗ್ರಹದ ಪಥವನ್ನು ಅಮೇರಿಕಾದ ಬಾಹ್ಯಾಕಾಶದಿಂದ ಸಂಸ್ಥೆ – ನಾಸಾ ಅನೇಕ ದಿನಗಳಿಂದ ಗಮನಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಭೂಕಕ್ಷೆಯ ಸಮೀಪ ಹಾದುಹೋಗುತ್ತಿರುವ ದೊಡ್ಡಮಟ್ಟಿನ ಕ್ಷುದ್ರ ಗ್ರಹ ಇದೆಂದು ಹೇಳಲಾಗುತ್ತಿದೆ. ಸಹಸ್ರಾರು ವರ್ಷಗಳ ಹಿಂದೆ ಭೂಮಿಯ ಮೇಲೆ ಕ್ಷುದ್ರ ಗ್ರಹ ಪತನದಿಂದಾಗಿ ಡೈನೋಸಾರ್ ನಂತಹ ಬೃಹತ್ ಜೀವಿಗಳ ನಾಶ ಆಗಿರಹುದು ಎಂದು ಅಂದಾಜಿಸಲಾಗಿದೆ. ಇಷ್ಟೊಂದು ದೊಡ್ಡಪ್ರಮಾಣದ ಕ್ಷುದ್ರ ಗ್ರಹ ಪತನವಾದರೆ ಅಣುಬಾಂಬಿಗಿಂತಲೂ ಅದಷ್ಟೋ ಅಧಿಕ ಪ್ರಮಾಣದ ಹಾನಿ ಸಂಭವಿಸಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ.
ಮಾಹಿತಿ :
ಪಿ ಜಿ ಎಸ್ ಎನ್ ಪ್ರಸಾದ್
ಹಿಂದೂ ಮಹಾಸಾಗರದ ಹವಾಮಾನ ಬದಲಾವಣೆ ಹಾಗೂ ಸಕಾರಾತ್ಮಕ IOD ಪರಿಣಾಮದಿಂದ ಕರ್ನಾಟಕದಲ್ಲಿ ಮುಂಗಾರು…
ರಾಜ್ಯದ ಹಲವೆಡೆ ಭಾರೀ ಮಳೆಯ ಹಿನ್ನೆಲೆಯಲ್ಲಿ ಕೆಲವು ಜಿಲ್ಲೆಗಳಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.…
ಉತ್ತಮ ಆರೋಗ್ಯಕ್ಕೆ ಸರಿಯಾದ ಆಹಾರ ಮತ್ತು ನಿದ್ರೆ ಎರಡೂ ಅವಿಭಾಜ್ಯ ಎಂದು ಶ್ರೀ…
ಮಳೆ ಮಾಹಿತಿ ಮೂಲಕ ಕೃಷಿಕರಿಗೆ ನೆರವಾಗುತ್ತಿರುವ ಸಾಯಿಶೇಖರ್ ಕರಿಕಳ ಅವರಿಗೆ ರೈತ ರತ್ನ…
ಮಂಗಳೂರಿನಲ್ಲಿ ರಾಷ್ಟ್ರೀಯ ಅಂಡರ್-11 ಚೆಸ್ ಚಾಂಪಿಯನ್ಶಿಪ್ಗೆ ಭವ್ಯ ಚಾಲನೆ ದೊರೆತಿದ್ದು, ದೇಶದ 28…
ರಾಜ್ಯದ ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆಯ ತೀವ್ರತೆ ಇಳಿಮುಖವಾಗಲಿದ್ದು, ಆಗಸ್ಟ್ 3ರಿಂದ ತೋಟದ…