ಚಾರ್ಲಿ ಸಿನಿಮಾ ನೋಡಿದವರಿಗೆ ನಾಯಿ ಪ್ರೀತಿಯ ಬಗ್ಗೆ ಅರಿವು ಇದೆ. ಆದರೆ ಗ್ರಾಮೀಣ ಭಾಗದಲ್ಲಿ ನಿತ್ಯವೂ ಅಂತಹದ್ದೇ ಹಲವು ಚಾರ್ಲಿ ಇದೆ. ಮನುಷ್ಯ ಪ್ರೀತಿ, ನಿಷ್ಟೆಯ ನಾಯಿಗಳು ಇವೆ. ಇಲ್ಲೊಂದು ನಾಯಿ 4 ಕಿಮೀ ದೂರು ಸ್ಕೂಟರ್ ಹಿಂದೆ ಓಡಿಕೊಂಡು ಬಂದಿದೆ. ಕಾರಣ ಪ್ರೀತಿ ಮಾತ್ರಾ…!. ಈ ಘಟನೆ ನಡೆದ್ದು ಸುಳ್ಯ ತಾಲೂಕಿನ ಬಳ್ಪ-ಕಮಿಲದಲ್ಲಿ.
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಕಮಿಲದ ಬಳಿಯ ರತನ್ ಅವರು ಬಳ್ಪಕ್ಕೆ ಹೋಗುತ್ತಿದ್ದರು. ಈ ಸಂದರ್ಭ ನಾಯಿಯೊಂದು ಬಳ್ಪದ ಗೋಪಾಲ್ ಎಂಬವರ ಗ್ಯಾರೇಜ್ ಬಳಿ ಇರುತ್ತಿತ್ತು. ಗ್ಯಾರೇಜ್ ಮಾಲಕರು ಈ ನಾಯಿಗೆ ತಿಂಡಿ ಹಾಕುತ್ತಿದ್ದ ಕಾರಣ ಅದೇ ಆಸುಪಾಸಲ್ಲಿ ಇರುತ್ತಿತ್ತು. ಈ ನಾಯಿಯನ್ನು ರತನ್ ಅವರು ಕೊಂಡೋಗುವಂತೆ ಗೋಪಾಲ್ ಹೇಳಿದ್ದರು. ನಿರಾಕರಿಸಿದ ರತನ್ ನಾಯಿಗೆ ಬಿಸ್ಕೇಟ್ ಹಾಕಿ ಸುಮ್ಮನಿರುತ್ತಿದ್ದರು. ಈಚೆಗೆ ಗ್ಯಾರೇಜಿಗೆ ಹೋಗಿದ್ದ ರತನ್ ವಾಪಾಸ್ ಮನೆಗೆ ಬರುವಾಗ ಸ್ಕೂಟರ್ ಹಿಂದೆಯೇ ಓಡಿ ಬಂದ ನಾಯಿ 4 ಕಿಮೀ ದೂರದಲ್ಲಿರುವ ರತನ್ ಅವರ ಮನೆ ಸೇರಿತು. ರಸ್ತೆ ಬದಿಯಲ್ಲಿ ಓಡುತ್ತಲೇ ಬಂದ ನಾಯಿ ಗಮನ ಸೆಳೆಯಿತು.
ಇದು ಹೆಣ್ಣು ನಾಯಿಯಾದ್ದರಿಂದ ರಸ್ತೆ ಬದಿ ಯಾರೋ ಬಿಟ್ಟು ತೆರಳಿದ್ದರು. ಆದರೆ ನಾಯಿಯ ಪ್ರೀತಿ ಹಾಗೂ ನಿಷ್ಟೆ ಗಮನ ಸೆಳೆಯಿತು. ಈಗ ರತನ್ ಅವರು ಮನೆಯಿಂದ ಹೊರಹೋಗುತ್ತಿವಾಗ ಜೊತೆಯಲ್ಲೇ ಬರುತ್ತದೆ.
ರತನ್ ಅವರು ಪ್ರಾಣಿ ಪ್ರೇಮಿಯೂ ಆಗಿದ್ದಾರೆ. ಬಳ್ಪದ ಕಾಡಿನ ಬಳಿ ಯಾರೋ ಹೋರಿಯನ್ನು ಬಿಟ್ಟು ಹೋಗಿದ್ದರು. ಇದನ್ನು ಗಮನಿಸಿದ ಅವರು ಮನೆಗೆ ತಂದು ಸಾಕಿದ್ದಾರೆ. ಈಗ ಅವರ ತೋಟದ ಸುತ್ತೆಲ್ಲಾ ಹುಲ್ಲು ಮೇಯುತ್ತಿರುತ್ತದೆ. ಅಂಬು ಎಂದು ಹೆಸರಿಟ್ಟಿದ್ದಾರೆ. ಮನೆಯಿಂದ ಹೆಸರು ಕರೆದ ತಕ್ಷಣ ಅಂಗಳಕ್ಕೆ ಬರುವ ಈ ಕರುವಿನ ಪ್ರೀತಿ ಹೆಚ್ಚು ಗಮನ ಸೆಳೆಯುತ್ತದೆ.
2024ರಲ್ಲಿ ಭಾರತದಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರು ಸೇರಿ 10,546 ಮಂದಿ ಆತ್ಮಹತ್ಯೆಯಿಂದ…
ಕರ್ನಾಟಕದಲ್ಲಿ ಈಗಾಗಲೇ 13,500 ಶಿಕ್ಷಕರ ನೇಮಕಾತಿ ನಡೆದಿದ್ದು, ಶಿಕ್ಷಣ ಇಲಾಖೆಯಲ್ಲಿ ಇನ್ನೂ 16…
ಕರ್ನಾಟಕದ ಹಲವು ಭಾಗಗಳಲ್ಲಿ ಸೆ.5ರಿಂದ ಕೆಲವು ದಿನ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿವೆ.…
ಹಿಮನದಿ ಕುಸಿತದಿಂದ ಸಂಭವಿಸಿದ ಭೀಕರ ಪ್ರವಾಹದ ಬಳಿಕ ನೇಪಾಳ ಪ್ರಧಾನಿ ಬಾಲೆಂದ್ರ ಶಾ…
2023ರಿಂದ 2026ರವರೆಗೆ ದೇಶದ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರೀಕ್ಷಿಸಿದ 70,652…
ಕಾಸರಗೋಡಿನ ICAR-CPCRIನಲ್ಲಿ ವಿಶ್ವ ತೆಂಗು ದಿನ–2026 ಆಚರಿಸಿ, ಹವಾಮಾನ ಅನಿಶ್ಚಿತತೆಯ ನಡುವೆ ತೆಂಗು…