ಚಾರ್ಲಿ ಸಿನಿಮಾ ನೋಡಿದವರಿಗೆ ನಾಯಿ ಪ್ರೀತಿಯ ಬಗ್ಗೆ ಅರಿವು ಇದೆ. ಆದರೆ ಗ್ರಾಮೀಣ ಭಾಗದಲ್ಲಿ ನಿತ್ಯವೂ ಅಂತಹದ್ದೇ ಹಲವು ಚಾರ್ಲಿ ಇದೆ. ಮನುಷ್ಯ ಪ್ರೀತಿ, ನಿಷ್ಟೆಯ ನಾಯಿಗಳು ಇವೆ. ಇಲ್ಲೊಂದು ನಾಯಿ 4 ಕಿಮೀ ದೂರು ಸ್ಕೂಟರ್ ಹಿಂದೆ ಓಡಿಕೊಂಡು ಬಂದಿದೆ. ಕಾರಣ ಪ್ರೀತಿ ಮಾತ್ರಾ…!. ಈ ಘಟನೆ ನಡೆದ್ದು ಸುಳ್ಯ ತಾಲೂಕಿನ ಬಳ್ಪ-ಕಮಿಲದಲ್ಲಿ.
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಕಮಿಲದ ಬಳಿಯ ರತನ್ ಅವರು ಬಳ್ಪಕ್ಕೆ ಹೋಗುತ್ತಿದ್ದರು. ಈ ಸಂದರ್ಭ ನಾಯಿಯೊಂದು ಬಳ್ಪದ ಗೋಪಾಲ್ ಎಂಬವರ ಗ್ಯಾರೇಜ್ ಬಳಿ ಇರುತ್ತಿತ್ತು. ಗ್ಯಾರೇಜ್ ಮಾಲಕರು ಈ ನಾಯಿಗೆ ತಿಂಡಿ ಹಾಕುತ್ತಿದ್ದ ಕಾರಣ ಅದೇ ಆಸುಪಾಸಲ್ಲಿ ಇರುತ್ತಿತ್ತು. ಈ ನಾಯಿಯನ್ನು ರತನ್ ಅವರು ಕೊಂಡೋಗುವಂತೆ ಗೋಪಾಲ್ ಹೇಳಿದ್ದರು. ನಿರಾಕರಿಸಿದ ರತನ್ ನಾಯಿಗೆ ಬಿಸ್ಕೇಟ್ ಹಾಕಿ ಸುಮ್ಮನಿರುತ್ತಿದ್ದರು. ಈಚೆಗೆ ಗ್ಯಾರೇಜಿಗೆ ಹೋಗಿದ್ದ ರತನ್ ವಾಪಾಸ್ ಮನೆಗೆ ಬರುವಾಗ ಸ್ಕೂಟರ್ ಹಿಂದೆಯೇ ಓಡಿ ಬಂದ ನಾಯಿ 4 ಕಿಮೀ ದೂರದಲ್ಲಿರುವ ರತನ್ ಅವರ ಮನೆ ಸೇರಿತು. ರಸ್ತೆ ಬದಿಯಲ್ಲಿ ಓಡುತ್ತಲೇ ಬಂದ ನಾಯಿ ಗಮನ ಸೆಳೆಯಿತು.
ಇದು ಹೆಣ್ಣು ನಾಯಿಯಾದ್ದರಿಂದ ರಸ್ತೆ ಬದಿ ಯಾರೋ ಬಿಟ್ಟು ತೆರಳಿದ್ದರು. ಆದರೆ ನಾಯಿಯ ಪ್ರೀತಿ ಹಾಗೂ ನಿಷ್ಟೆ ಗಮನ ಸೆಳೆಯಿತು. ಈಗ ರತನ್ ಅವರು ಮನೆಯಿಂದ ಹೊರಹೋಗುತ್ತಿವಾಗ ಜೊತೆಯಲ್ಲೇ ಬರುತ್ತದೆ.
ರತನ್ ಅವರು ಪ್ರಾಣಿ ಪ್ರೇಮಿಯೂ ಆಗಿದ್ದಾರೆ. ಬಳ್ಪದ ಕಾಡಿನ ಬಳಿ ಯಾರೋ ಹೋರಿಯನ್ನು ಬಿಟ್ಟು ಹೋಗಿದ್ದರು. ಇದನ್ನು ಗಮನಿಸಿದ ಅವರು ಮನೆಗೆ ತಂದು ಸಾಕಿದ್ದಾರೆ. ಈಗ ಅವರ ತೋಟದ ಸುತ್ತೆಲ್ಲಾ ಹುಲ್ಲು ಮೇಯುತ್ತಿರುತ್ತದೆ. ಅಂಬು ಎಂದು ಹೆಸರಿಟ್ಟಿದ್ದಾರೆ. ಮನೆಯಿಂದ ಹೆಸರು ಕರೆದ ತಕ್ಷಣ ಅಂಗಳಕ್ಕೆ ಬರುವ ಈ ಕರುವಿನ ಪ್ರೀತಿ ಹೆಚ್ಚು ಗಮನ ಸೆಳೆಯುತ್ತದೆ.
ಬೇಸಿಗೆಯಲ್ಲಿ ದೇಹದಲ್ಲಿ ನೀರಿನಾಂಶ ಕಡಿಮೆಯಾಗುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.…
ಮಂಗಳೂರು ನಗರದಲ್ಲಿ ಮಳೆಗಾಲದ ಹಿನ್ನೆಲೆ ಜೂನ್ 1ರಿಂದ ಸೆಪ್ಟೆಂಬರ್ 30ರವರೆಗೆ ರಸ್ತೆ, ಗುಡ್ಡ…
ಈಶಾನ್ಯ ಭಾರತದಲ್ಲಿ ಡಿಆರ್ಐ ನಡೆಸಿದ ದಾಳಿಯಲ್ಲಿ ಸುಮಾರು 60 ಸಾವಿರ ಕೆಜಿ ಅಕ್ರಮ…
ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನೂ ಎರಡು ದಿನ ಸಂಜೆ ಹಾಗೂ ರಾತ್ರಿ ಮಳೆಯ…
ಅಡಿಕೆ ಮಾರುಕಟ್ಟೆಗೆ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ಬಂದರೆ ರೈತರಿಗೆ ಆರಂಭದಲ್ಲಿ ಲಾಭದ ಅನುಭವ…
“ಕಾಕ್ರೋಚ್ ಜನತಾ ಪಾರ್ಟಿ” ಬಳಿಕ ಇದೀಗ “ನ್ಯಾಷನಲ್ ಪ್ಯಾರಾಸಿಟಿಕ್ ಫ್ರಂಟ್” ಎಂಬ ಹೊಸ…