Advertisement
ಅನುಕ್ರಮ

ಆಧುನಿಕ ಹಾಲಿನ ಗುಣಮಟ್ಟ | ದೇಸೀ ದನಗಳ ಶ್ರೇಷ್ಟತೆ ಏನು ? | ಕೃಷಿಕ ಎ ಪಿ ಸದಾಶಿವ ಹೇಳುತ್ತಾರೆ ಇಲ್ಲಿ.. |

Share

ಆಧುನಿಕ ಹಸುಗಳ ಹಾಲು ಹಾಲಾಹಲ, ದೇಸಿ ದನಗಳ ಹಾಲು ಅಮೃತ ಸಮಾನ ಇಂತಹ ಮಾತುಗಳು ಅಲ್ಲಲ್ಲಿ ಆಗಾಗ ಲೇಖನಗಳ ಮೂಲಕ ಭಾಷಣಗಳ ಮೂಲಕ ಕೇಳಿಬರುತ್ತವೆ. ಒಂದಷ್ಟು ಜನರಿಗೆ ಇರಿಸು ಮುರುಸಾಗಿ ಆಧುನಿಕ ಹಾಲನ್ನು ಸಮರ್ಥಿಸಿಕೊಳ್ಳಲು ಪ್ರಯತ್ನ ಪಡುತ್ತಾರೆ. ಕಳೆದ ಐದು ವರ್ಷದ ಹಿಂದಿನ ವರೆಗೆ ನಾನು ಇದೇ ಸಮರ್ಥನೆಯನ್ನು ಮಾಡುತ್ತಿದ್ದೆ. ಯಾವಾಗ ಕೃಷಿ ಸಹಾಯಕರ ಸಮಸ್ಯೆ ತೀವ್ರವಾಯಿತೋ, ಆಗ ಹಸುಗಳ ಅನಾರೋಗ್ಯವು ಬೆಟ್ಟದಷ್ಟು ದೊಡ್ಡ ಸಮಸ್ಯೆಯಾಯಿತು.

ಆದರೆ, ನಾನು ನಂಬಿದ ಸಾವಯವ ಕೃಷಿಗೆ,ಸ್ವಾವಲಂಬಿ ಕೃಷಿಗೆ ಹಸುವಿನ ಗೊಬ್ಬರಕ್ಕೆ ಸಮಾನವಾದ ಬೇರೆ ಯಾವುದೂ ನನಗೆ ಕಂಡುಬರಲಿಲ್ಲ. ಹಾಗಾಗಿ ಅನಿವಾರ್ಯವಾಗಿ ದೇಶಿ ಹಸು ಗಳನ್ನು ಸಾಕುವ ಕಡೆಗೆ ಮುಖ ಮಾಡಿದೆ. ದೇಶಿ ಹಸುಗಳ ಒಳಿತು-ಕೆಡುಕುಗಳ ಬಗ್ಗೆ ಆಧುನಿಕ ಹಸುಗಳ ಸಮಸ್ಯೆಯ ಬಗ್ಗೆ ನಾನು ಈಗಾಗಲೇ ಬರೆದಿರುತ್ತೇನೆ. ಆಧುನಿಕ ಹಾಲಿನ ಗುಣಮಟ್ಟದ ಬಗ್ಗೆ ನನ್ನ ತರ್ಕಕ್ಕೆ ನಿಲುಕಿದ ಕೆಲವು ವಿಷಯಗಳನ್ನು ಪ್ರಸ್ತಾಪಿಸಬೇಕು ಅನಿಸಿತು…

  • ತೋಟದಲ್ಲಿ ಅಡಿಕೆ ಗಿಡಗಳಿಗೆ ಬೀಜಗಳನ್ನು ಆಯ್ಕೆಮಾಡುವಾಗ ರೋಗರಹಿತ ಮರಗಳನ್ನು, ವರುಷ ವರುಷವೂ ಚೆನ್ನಾದ ಫಸಲು ಬರುವ ಮರಗಳನ್ನು, ನಡು ಪ್ರಾಯದ ಮರಗಳನ್ನು ಆಯ್ಕೆ ಮಾಡುವುದು ಯಾಕೆ?
  • ತರಕಾರಿ ಬೀಜಗಳನ್ನು ಸಂಗ್ರಹಿಸುವಾಗ ಆರಂಭದ ಫಸಲಿನ ಕಾಯಿಗಳ ಬೀಜವನ್ನು ಸಂಗ್ರಹಿಸುವುದಲ್ಲದೆ ಕೊನೆಯಲ್ಲಿ ಬಂದ,ರೋಗ ಬಂದ ಮೇಲಿನ ಬೀಜಗಳನ್ನು ಸಂಗ್ರಹಿಸುವ ಕ್ರಮ ಇದೆಯೇ?
  • ದನಕರುಗಳಲ್ಲಿಯೇ ಆಗಲಿ ಹೋರಿಯನ್ನು ಆಯ್ಕೆಮಾಡುವಾಗ ರೋಗರಹಿತ, ಉತ್ತಮ ಹಾಲು ಕೊಡುವ ದನಗಳ ಕರುಗಳನ್ನು ಆಯ್ಕೆ ಮಾಡುವುದು ಯಾಕೆ?
  • ವಧು ವರರ ಆಯ್ಕೆಮಾಡುವಾಗ ದುಶ್ಚಟಗಳಿಲ್ಲದ,ಅನುವಂಶಿಕ ಕಾಯಿಲೆಗಳು ಇಲ್ಲದ ಕುಟುಂಬವನ್ನು ಆಯ್ಕೆ ಮಾಡುವುದು ಯಾಕೆ?
  • ತಂದೆ-ತಾಯಿಗಳಿಗೆ ತೀವ್ರ ಅನಾರೋಗ್ಯ ಸಮಸ್ಯೆ ಬರುವುದಕ್ಕೆ ಮೊದಲೇ ಮಕ್ಕಳಾಗಬೇಕು ಎಂದು ಹೇಳುವುದು ಯಾಕೆ?
  • ಅತಿಯಾದ ಅಮಲು ಪದಾರ್ಥ ಸೇವಿಸಿ ಪ್ರತಿನಿತ್ಯ ಜಗಳವಾಡಿಕೊಂಡು ಬೆಳೆಯುವ ಸಂಸಾರದಲ್ಲಿ ಬೆಳೆದ ಮಕ್ಕಳು ಅದೇ ರೀತಿ ಆಗುವುದು ಯಾಕೆ?
  • ಕಲಬೆರಕೆ ಇಲ್ಲದ ಶುದ್ಧವಾದ ಆಹಾರವನ್ನು ಬಯಸುವುದು ಯಾಕೆ?

ಇಂತಹ ಹಲವಾರು ಪ್ರಶ್ನೆಗಳು ನಮ್ಮ ಮುಂದೆ ಪ್ರತಿನಿತ್ಯ ಕಾಣುತ್ತದೆ. ಅಲ್ಲೆಲ್ಲಾ ಉತ್ತಮವಾದುದನ್ನೇ ಶುದ್ಧವಾದುದನ್ನೇ ಬಯಸುವ ನಾವು ತಾಯಿ ಹಾಲಿನ ನಂತರದ ಅತ್ಯಂತ ಉತ್ಕೃಷ್ಟ ಆಹಾರವಾದ ಹಾಲಿನಲ್ಲಿ ಶುದ್ಧತೆಯನ್ನು ಪರಿಗಣಿಸಬೇಡವೇ?

ಅನುದಿನವು ಒಂದಲ್ಲ ಒಂದು ಸಮಸ್ಯೆಗಳಿಂದ( ನಾನು ಈ ಹಿಂದೆ ಬರೆದಂತೆ) ಬಳಲುವ ದನಗಳ ಹಾಲು ಯಾವುದೇ ಸಮಸ್ಯೆಗಳಿಲ್ಲದೆ, ಯಾವುದೇ ಔಷಧೀಯ ಪರಿಹಾರಗಳಿಲ್ಲದೆ ಬದುಕುವ ದನಗಳ ಹಾಲಿಗೆ ಸಮವಾದೀತೇ? ಸ್ವಲ್ಪ ಬಿಸಿಲಿಗೆ ಹೋದರೂ ಏದುಸಿರು ಬಿಡುವ ಅಥವಾ ಸೂರ್ಯಾಘಾತಕ್ಕೆ ಒಳಗೊಳ್ಳುವ ದನಗಳ ಹಾಲು ಎಂತಹ ಬಿಸಿಲನ್ನಾದರೂ ಜೀರ್ಣಿಸಿಕೊಂಡು ಮೇದು ಬರುವ ದನಗಳ ಹಾಲಿಗೆ ಸಮವಾಗಬಹುದೇ?

ದೇಸಿ ದನಗಳನ್ನು ಸಾಕಿದ ಮೇಲಿನ ಅನುಭವ ಮತ್ತೆ ಮತ್ತೆ ಅದರ ಶ್ರೇಷ್ಠತೆಯನ್ನು ಸಾರಿ ಹೇಳುತ್ತದೆ.

# ಎ.ಪಿ. ಸದಾಶಿವ ಮರಿಕೆ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಎ ಪಿ ಸದಾಶಿವ ಮರಿಕೆ

ಸಾವಯವ ಕೃಷಿಕರು, ಪುತ್ತೂರು ಕಳೆದ ಹಲವಾರು ವರ್ಷಗಳಿಂದ ಸಾವಯವ ಕೃಷಿ, ಗೋಆಧಾರಿತ ಕೃಷಿಯ ಮೂಲಕ ಗಮನ ಸೆಳೆದ ಕೃಷಿಕ ಇವರು.

Published by
ಎ ಪಿ ಸದಾಶಿವ ಮರಿಕೆ

Recent Posts

ಕೃಷಿಗೆ ಸಾಲ ಹೆಚ್ಚಿಸಿ – ಅಲ್ಪಾವಧಿ ಮಾತ್ರವಲ್ಲ, ದೀರ್ಘಾವಧಿ ಸಾಲವೂ ಬೇಕು – ಬ್ಯಾಂಕ್‌ಗಳಿಗೆ ನಿರ್ಮಲಾ ಸೀತಾರಾಮನ್ ಸೂಚನೆ

ಕೃಷಿ ಉತ್ಪಾದನೆ ಹೆಚ್ಚಿಸಲು ಬ್ಯಾಂಕ್‌ಗಳು ರೈತರಿಗೆ ಹೆಚ್ಚಿನ ಸಾಂಸ್ಥಿಕ ಸಾಲ ನೀಡಬೇಕು ಎಂದು…

6 hours ago

E20 ಎಫೆಕ್ಟ್‌ – ಪಶು ಆಹಾರದ ಬೆಲೆ ಏರಿಕೆ, ಹೈನುಗಾರರ ಲೆಕ್ಕಾಚಾರವೇ ಬದಲು..!

E20 ನೀತಿಯಡಿ ಎಥನಾಲ್ ಉತ್ಪಾದನೆಗೆ ಜೋಳ ಸೇರಿದಂತೆ ಧಾನ್ಯಗಳ ಬೇಡಿಕೆ ಹೆಚ್ಚುತ್ತಿರುವ ನಡುವೆ…

15 hours ago

ಬರದ ನಡುವೆ ರೈತರ ಜಮೀನಿಗೆ ಸಿಎಂ ಭೇಟಿ – ಬೆಳೆ ಹಾನಿ ಪರಿಶೀಲನೆ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗದಗ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ…

22 hours ago

ಹವಾಮಾನ ವರದಿ | 01-09-2026 | ಯಾವ ಜಿಲ್ಲೆಗಳಲ್ಲಿ ಇನ್ನೂ ಮಳೆಯ ಸಾಧ್ಯತೆ…?

ಕರ್ನಾಟಕದಲ್ಲಿ ಮಳೆಯ ತೀವ್ರತೆ ಕ್ರಮೇಣ ಕಡಿಮೆಯಾಗುವ ಲಕ್ಷಣಗಳಿದ್ದು, ಸೆಪ್ಟೆಂಬರ್ 4ರಿಂದ ಕರಾವಳಿ ಮತ್ತು…

22 hours ago

ಬೆಂಗಳೂರಿನಲ್ಲಿ ಭಾರತದ ಅತಿದೊಡ್ಡ ಕಾಫಿ ಉತ್ಸವ- ತೋಟದಿಂದ ಕಪ್‌ವರೆಗೆ ಭಾರತದ ಕಾಫಿಯ ಹೊಸ ಪಯಣ

ಭಾರತದ ಅತಿದೊಡ್ಡ ಕಾಫಿ ಉತ್ಸವ 2027 ಫೆಬ್ರವರಿ 26ರಿಂದ 28ರವರೆಗೆ ಬೆಂಗಳೂರಿನಲ್ಲಿ ನಡೆಯಲಿದ್ದು,…

1 day ago

‘ಅರ್ಥ’ ಮತ್ತು ‘ಅಪಾರ್ಥ’ದ ನಡುವೆ ಇರುವ ‘ಪಾ’ ಯಾವುದು?

ಅಪಾರ್ಥವಾಗುವುದು ಮಾನವ ಸಹಜ; ಆದರೆ ಅಪಾರ್ಥವಾಯಿತೆಂಬ ಅರಿವು ಬಂದ ನಂತರ ಮತ್ತೆ ‘ಅರ್ಥ’ದೆಡೆಗೆ…

1 day ago