Advertisement
ಮಾಹಿತಿ

ಕೃಷಿ ತ್ಯಾಜ್ಯಗಳನ್ನು ಬೆಂಕಿಗೆ ಹಾಕೋದಲ್ಲ, ಮಣ್ಣಿಗೆ ಹಾಕಬೇಕು

Share

ಭಾರತ(India) ದೇಶದಲ್ಲಿ ಒಟ್ಟು ಕೃಷಿ(Agriculture) ಹಿಡುವಳಿಯ(Land) ಪ್ರಮಾಣ ಸುಮಾರು ಅಂದಾಜು 155 MH(Million Hectare-ದಶಲಕ್ಷ Hectare) ಪ್ರದೇಶದಲ್ಲಿ ಪ್ರತಿ ವರ್ಷ  ಸುಮಾರು 17,000 ಟನ್‌ಗಳಷ್ಟು ಕೃಷಿ ತ್ಯಾಜ್ಯ(Crop Residues) ಉತ್ಪಾದನೆಯಾಗುತ್ತಿದೆ.

ಸಾಮಾನ್ಯವಾಗಿ ಯಾವುದೇ ಕೃಷಿ ತ್ಯಾಜ್ಯದಲ್ಲಿ ಎಲ್ಲಾ ರೀತಿಯ ಪೋಷಕಾಂಶ ಲಭ್ಯವಾಗುತ್ತದೆ,ಪ್ರಧಾನವಾಗಿ ಪರಿಗಣಿಸುವ NPK(ಸಾರಜನಕ, ರಂಜಕ, ಪೊಟಾಷ್) ತೆಗೆದುಕೊಂಡರೆ, ಪ್ರತಿ ಟನ್ ಒಂದಕ್ಕೆ 5.5 ಕೆಜಿ ಸಾರಜನಕ,2.5 ಕೆಜಿ ರಂಜಕ,25 ಕೆಜಿ ಪೊಟ್ಯಾಸಿಯಂ ರೀತಿ 04 ಟನ್ ಕೃಷಿ ತ್ಯಾಜ್ಯದಲ್ಲಿ 22 ಕೆಜಿ ಸಾರಜನಕ,10 ಕೆಜಿ ರಂಜಕ ,100 ಕೆಜಿ ಪೊಟ್ಯಾಸಿಯಂ ಲಭ್ಯವಾಗುತ್ತದೆ.

  • ಈ ಪ್ರಮಾಣದ NPK ಯನ್ನು ರಸಗೊಬ್ಬರದ ಮೂಲಕ ಬೆಳೆಗಳಿಗೆ ನೀಡಬೇಕಾದರೆ ಯೂರಿಯಾ :100 ಕೆಜಿ, ಡಿ.ಎ.ಪಿ:20 ಕೆಜಿ,ಮ್ಯೂರೇಟ್ ಆಫ್ ಪೊಟಾಷ್ (MOP):167 ಕೆಜಿ ನೀಡಬೇಕಾಗುತ್ತದೆ.
  • ಈ ಪ್ರಮಾಣದ ರಾಸಾಯನಿಕ ಗೊಬ್ಬರಕ್ಕೆ ತಗುಲುವ ಮೂಲ ಬೆಲೆ ಸುಮಾರು ರೂ 16,000/ ಗಳು,ಈ ಪ್ರಕಾರ 01 ಟನ್ ಕೃಷಿ ತ್ಯಾಜ್ಯದ ಮೌಲ್ಯವನ್ನು ಕೇವಲ ರಸಗೊಬ್ಬರಕ್ಕೆ(NPK) ಸರಿಸಾಮಾನವಾಗಿ ನೋಡಿದಾಗ ರೂ 4000/,ಪ್ರತಿ ಎಕರೆವಾರು ಉತ್ಪಾದನೆಯಾಗುತ್ತಿರುವ ಕೃಷಿ ತ್ಯಾಜ್ಯದ ಮೌಲ್ಯ ರೂ 6500/.
  • ಉದಾಹರಣೆಗೆ ಪ್ರತಿ ಎಕರೆಯಲ್ಲಿ ಕಬ್ಬಿನ ಸೋಗು/ರವದಿ 03 ರಿಂದ 04 ಟನ್ ಉತ್ಪಾದನೆಯಾಗುತ್ತದೆ, ಇದನ್ನು ಬೆಂಕಿಯಲ್ಲಿ ಸುಡದೆ ಭೂಮಿಯಲ್ಲಿ ಸೇರಿಸಿದಾಗ ರಾಸಾಯನಿಕ ಗೊಬ್ಬರದ ಮೂಲಕ ನೀಡುವ 12 ರಿಂದ 16 ಸಾವಿರ ರೂಪಾಯಿ ಉಳಿತಾಯವಾಗುತ್ತದೆ.
  • 01 ಟನ್ ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಾಕಿ ಸುಟ್ಟರೆ 1460 ಕೆಜಿ Co2 ಜೊತೆಗೆ Methane,Carbon manoxide, Nitrous oxide ಮತ್ತು ಇನ್ನಿತರೇ ವಿಷಕಾರಕ ಅನಿಲಗಳು ವಾತಾವರಣಕ್ಕೆ ಸೇರುವುದರಿಂದ ಹವಾಮಾನ ಬದಲಾವಣೆಗೆ ಕಾರಣವಾಗಿ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತದೆ.ಕೃಷಿ ತ್ಯಾಜ್ಯಗಳಿಗೆ ಬೆಂಕಿ ಹಾಕುವುದರಿಂದ ಮಣ್ಣಿನಲ್ಲಿರುವ ಸೊಕ್ಷ್ಮಜೀವಿಗಳು ಸಾಯುತ್ತದೆ,ಮಣ್ಣಿನ ಫಲವತ್ತತೆ ಕುಂಠಿತವಾಗುತ್ತದೆ,ಮಣ್ಣಿನಲ್ಲಿ ಸಾವಯವ ಅಂಶ ಕಡಿಮೆಯಾಗಿ ನೀರನ್ನು ಹಿಡಿದಿಟ್ಟುಕೊಳ್ಳಲು ವಿಫಲವಾಗುತ್ತದೆ,ಕೃಷಿ ತ್ಯಾಜ್ಯವನ್ನು ಸುಡುವುದರಿಂದ ಮತ್ತು ಮಣ್ಣಿಗೆ ಸೇರಿಸುವುದರಿಂದ ಪರಿಸರದ ಮೇಲೆ ಆಗುವ ನಷ್ಟ ಮತ್ತು ಲಾಭವನ್ನು ಹಣದ ರೂಪದಲ್ಲಿ ಲೆಕ್ಕ ಹಾಕಲಾಗದು.
  • ನಮ್ಮ ಕೃಷಿ ಜಮೀನಿನಲ್ಲಿ ದೊರೆಯುವ ಕೃಷಿ ತ್ಯಾಜ್ಯಗಳನ್ನು ಜಾನುವಾರುಗಳಿಗೆ ಮೇವಾಗಿ ಉಪಯೋಗಿಸಿಕೊಂಡು ಅವುಗಳ ಮಲ-ಮೂತ್ರವನ್ನು ಭೂಮಿಗೆ ಸೇರಿಸುವುದು ಅಥವಾ ಮುಚ್ಚಿಗೆ ಅಥವಾ ಗೊಬ್ಬರ ಮಾಡಿಕೊಂಡು ಕೃಷಿ ಭೂಮಿಗೆ

ಮರಳಿಸುವುದರಿಂದ ಬೆಳೆ ಬೆಳೆಯಲು ಹೊರಗಿನಿಂದ ಯಾವುದೇ ರೀತಿಯ ರಸಗೊಬ್ಬರ ಕೊಡುವ ಅವಶ್ಯಕತೆಯಿರುವುದಿಲ್ಲ ಮತ್ತು ಭೂಮಿಯ ಫಲವತ್ತತೆಯನ್ನು ನಿರಂತರವಾಗಿ ಕಾಯ್ದುಕೊಳ್ಳಬಹುದು.

  • ಸಂಗ್ರಹ ಮಾಹಿತಿ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮಳೆ ಕೊರತೆ ತೀವ್ರ – ಬೆಂಗಳೂರು ಗ್ರಾಮಾಂತರದಲ್ಲಿ ಕೇವಲ ಶೇ. 3 ಬಿತ್ತನೆ; ನೀರಿನ ಬಳಕೆಗೆ ಕಟ್ಟುನಿಟ್ಟಿನ ಕ್ರಮ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇಕಡಾ 66 ರಷ್ಟು ಮಳೆ ಕೊರತೆಯಿಂದ ಕೇವಲ ಶೇ.…

3 hours ago

ಹವಾಮಾನ ವರದಿ | 28-07-2026 | ಮುಂದಿನ 10 ದಿನ ಸಾಮಾನ್ಯ ಮಳೆ – ಆಗಸ್ಟ್ ಆರಂಭದಲ್ಲಿ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು ಸಾಧ್ಯತೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಸಾಮಾನ್ಯ ಮಳೆ ಮುಂದುವರಿಯುವ ನಿರೀಕ್ಷೆಯಿದ್ದು,…

23 hours ago

200 ಹಸುಗಳಿಂದ ₹2 ಕೋಟಿ ವಾರ್ಷಿಕ ಆದಾಯ…! ಗಮನ ಸೆಳೆದ ಉತ್ತರ ಪ್ರದೇಶದ ಮಾದರಿ

ಉತ್ತರ ಪ್ರದೇಶದಲ್ಲಿ 200 ಹಸುಗಳನ್ನು ಆಧರಿಸಿದ ಸಮಗ್ರ ಗೋ ಆರ್ಥಿಕತೆ ಮಾದರಿಯಲ್ಲಿ ಗೋಮಯದಿಂದ…

24 hours ago

ರಬ್ಬರ್ ತೋಟ ಹಸಿರಾಗಿರಬಹುದು… ಆದರೆ ಕಾಡಿಗೆ ಪರ್ಯಾಯವಲ್ಲ…! ಮಲೇಷ್ಯಾ ಅಧ್ಯಯನ ವರದಿ

ರಬ್ಬರ್ ತೋಟಗಳು ಹಸಿರಾಗಿದ್ದರೂ ಅವು ನೈಸರ್ಗಿಕ ಮಳೆಕಾಡಿನ ಜೀವವೈವಿಧ್ಯವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು…

1 day ago

ಅಡುಗೆ ಎಣ್ಣೆ ಆಮದು 7% ಏರಿಕೆ – ಭಾರತ ಇನ್ನೂ ಆಮದು ಅವಲಂಬಿತ

ಭಾರತದ ಅಡುಗೆ ಎಣ್ಣೆ ಆಮದು ಎಂಟು ತಿಂಗಳಲ್ಲಿ ಶೇ.7ರಷ್ಟು ಏರಿಕೆಯಾಗಿದೆ. ಜೂನ್‌ನಲ್ಲಿ ಆಮದು…

1 day ago

ಕೇರಳದಲ್ಲಿ ಪ್ರತಿವರ್ಷ ₹1,200 ಕೋಟಿ ಮೌಲ್ಯದ ಹಲಸು ವ್ಯರ್ಥ..! ಮೌಲ್ಯವರ್ಧನೆಗೆ ಸರ್ಕಾರ ಮುಂದಾಗಲಿ ಎಂಬ ಒತ್ತಾಯ

ಕೇರಳದಲ್ಲಿ ಉತ್ಪಾದನೆಯಾಗುವ ಬಹುತೇಕ ಹಲಸು ಬಳಕೆಯಾಗದೆ ವ್ಯರ್ಥವಾಗುತ್ತಿದ್ದು, ವರ್ಷಕ್ಕೆ ಸುಮಾರು ₹1,200 ಕೋಟಿ…

1 day ago