Advertisement
MIRROR FOCUS

ಅಡಿಕೆಗೆ ಕಾಟ ನೀಡಲು ಇನ್ನೊಂದು ಕೀಟ – “ಥ್ರಿಪ್ಸ್‌” | ಅಡಿಕೆ ಬೆಳೆಗಾರರಿಗೆ ಆತಂಕ ಬೇಡ ಎಚ್ಚರ ಇರಲಿ |

Share

ಈಚೆಗೆ ಕೆಲವು ಸಮಯಗಳಿಂದ ಅಡಿಕೆ ಬೆಳೆಯ ಮೇಲೆ ಕೀಟಗಳ ಹಾವಳಿ, ರೋಗಗಳ ಹಾವಳಿ ಹೆಚ್ಚುತ್ತಿದೆ. ಎಲ್ಲದಕ್ಕೂ ಪ್ರಮುಖವಾದ ಕಾರಣ ಹವಾಮಾನ. ಇದೀಗ ಇನ್ನೊಂದು ಕೀಟವು ಅಡಿಕೆಗೆ ಹಾವಳಿ ನೀಡಲು ಆರಂಭವಾಗಿದೆ. ಥ್ರಿಪ್ಸ್‌(Thrips) ಎಂದು ಕರೆಯಲ್ಪಡುವ ಕೀಟವು ಇದೀಗ ಅಡಿಕೆಯ ಮೇಲೆ ಕಾಟ ನೀಡಲು ಆರಂಭಿಸಿದೆ. ದಾವಣಗೆರೆಯಲ್ಲಿ  ಥ್ರಿಪ್ಸ್‌ ಹುಳದ ಬಾಧೆ ಆರಂಭವಾಗಿದೆ.…..ಮುಂದೆ ಓದಿ….

ಕಳೆದ ಕೆಲವು ಸಮಯಗಳಿಂದ ಅಡಿಕೆಗೆ ಎಲೆಚುಕ್ಕಿ ರೋಗವು ತೀವ್ರವಾಗು ಬಾಧಿಸುತ್ತಿದೆ. ಈ ಬಾರಿಯೂ ಕೂಡಾ ಸೆಪ್ಟಂಬರ್‌ ತಿಂಗಳ ಅಂತ್ಯದವರೆಗೂ ಕಾಣಿಸದ ಎಲೆಚುಕ್ಕಿ ರೋಗ ಈಚೆಗೆ 10 ದಿನಗಳಿಂದ ಅಲ್ಲಲ್ಲಿ ತೀವ್ರವಾಗಿ ಕಾಣಿಸಿದೆ. ಅದರ ನಡುವೆ ರಿಂಗ್‌ಸ್ಫಾಟ್‌ ವೈರಸ್‌ ಕೂಡಾ ಶಿರಸಿ, ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆ ಬಾಧಿಸುತ್ತಿದೆ. ಇದೀಗ ದಾವಣಗೆರೆಯಲ್ಲಿ ಥ್ರಿಪ್ಸ್‌(Thrips) ಎಂದು ಕರೆಯಲ್ಪಡುವ ಕೀಟವು ಕಂಡುಬಂದಿದೆ. ದಾವಣಗೆರೆಯ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತಜ್ಞರು ಥ್ರಿಪ್ಸ್ ಹುಳದ ಬಾಧೆಯನ್ನು ಮೊದಲು ಗುರುತಿಸಿದ್ದು, ಬೆಂಗಳೂರಿನ ಐ.ಸಿ. ಎ.ಆರ್ – ಎನ್.ಬಿ.ಎ.ಐ.ಆರ್ ಸಂಸ್ಥೆಯ ಕೃಷಿ ವಿಜ್ಞಾನಿಗಳ ಸಹಾಯದಿಂದ ಕೀಟವನ್ನು Grape Vine Thrips  ಎಂದು ಗುರುತಿಸಲಾಗಿದೆ.

1956 ರಲ್ಲಿ ಕರ್ನಾಟಕ ಮತ್ತು 1959 ರಲ್ಲಿ ಕೇರಳ ರಾಜ್ಯದ ಕೆಲವು ಅಡಿಕೆ ಬೆಳೆಯುವ ಪ್ರದೇಶದಲ್ಲಿ ಈ ಮೊದಲು ಥ್ರಿಪ್ಸ್ ಕೀಟದ ಬಾಧೆಯನ್ನು ವರದಿ ಮಾಡಲಾಗಿದ್ದು, ಹಲವು ದಶಕಗಳ ನಂತರ ಮತ್ತೊಮ್ಮೆ ಈ ರಸ ಹೀರುವ ಕೀಟವನ್ನು ಅಡಿಕೆ ಸಸಿಗಳ ಸೋಗೆಯಲ್ಲಿ ಗಮನಿಸಲಾಗಿದೆ. ದ್ರಾಕ್ಷಿ, ದಾಳಿಂಬೆ, ಕ್ರೋಟನ್, ಗುಲಾಬಿ, ಮೆಣಸು, ಗೇರು ಸೇರಿದಂತೆ ಇನ್ನಿತರ ಹಲವು ಬೆಳೆಗಳಿಗೂ ಈ ಕೀಟವು ಬಾಧಿಸುತ್ತದೆ. 11 ರಿಂದ 33 ದಿನಗಳ ಜೀವನ ಚಕ್ರ ಇರುವ ಈ ಕೀಟವು, ಅಡಿಕೆ ಎಲೆಯ ಅಡಿಭಾಗದಿಂದ ರಸಹೀರಿದಾಗ, ಎಲೆ ಬಿಳುಚಾಗುವುದನ್ನು (silvery blotches) ಕಾಣಬಹುದು. ನಂತರ ಎಲೆಯು ಹಳದಿ ಮಿಶ್ರಿತ ಕಂದು ಬಣ್ಣಕ್ಕೆ ತಿರುಗಿ, ಒಣಗುತ್ತವೆ. ಇದರಿಂದ ಎಲೆಗಳು ಸುಕ್ಕುಗಟ್ಟಲು ಕಾರಣವಾಗುತ್ತದೆ. ಅಥವಾ  ಎಲೆಯು ತೆಳು ಕಂದು ಬಣ್ಣಕ್ಕೆ ತಿರುಗಬಹುದು ಮತ್ತು ಅಕಾಲಿಕವಾಗಿ ಉದುರಿಹೋಗಬಹುದು. ಮುಂದುವರಿದು ಇದು ಅಡಿಕೆ ಹೂವುಗಳು ಒಣಗಲು ಕೂಡಾ ಕಾರಣವಾಗಬಹುದು. ಎಲೆಗಳ ಮೇಲೆ ಪರಿಣಾಮ ಬೀರುವುದರಿಂದ  ಸಸ್ಯದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ ಎಂದು ಈಗಾಗಲೇ ಅಧ್ಯಯನಗಳಿಂದ ತಿಳಿದಿದೆ. ಬೇಸಿಗೆಯ ಸಮಯದಲ್ಲಿ ಈ ಕೀಟದ ಹಾವಳಿ ಹೆಚ್ಚು ಎಂದು ವರದಿಗಳಿರುವ ಹಿನ್ನಲೆಯಲ್ಲಿ, ಈಗಲೇ ಈ ಕೀಟವು ತನ್ನ ಕಾರ್ಯಚಟುವಟಿಕೆಯನ್ನು ಹೆಚ್ಚಿಕೊಂಡಿರುವ ಕಾರಣದಿಂದ ಈ ಕೀಟದ ಕುರಿತು ಗಮನ ಇಡುವುದು ಮುಖ್ಯವಾಗಿದೆ.

ದಾವಣಗೆರೆಯ ಪ್ರದೇಶದ ಕೆಲವು ಕಡೆ ಈಗಾಗಲೇ ಮೈಟ್‌ ಹಾವಳಿಯು ಅಡಿಕೆಗೆ ಕಾಣಿಸಿಕೊಂಡಿತ್ತು, ಇದರ ನಡುವೆಯೇ ಈಗ ಥ್ರಿಪ್ಸ್‌ ಕಾಣಿಸಿಕೊಂಡಿದೆ.  ಹೀಗಾಗಿ ಅಡಿಕೆ ಬೆಳೆಗಾರರು ಎಚ್ಚರ ವಹಿಸಬೇಕಿದೆ. ಇದಕ್ಕೆ ಸೂಕ್ತ ಔಷಧಿ ಸಿಂಪಡಣೆಯ ಬಗ್ಗೆ ತಜ್ಞರು ಮಾಹಿತಿ ನೀಡಲಿದ್ದಾರೆ.

The Arecanut crop has been experiencing a rise in pests and diseases due to changing weather patterns. Recently, a new pest called Thrips has emerged as a threat to the Arecanut crop in Davangere. This infestation of thrips is a concerning development for Arecanut farmers in the area.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ತಳಿಗಳ ಬಗ್ಗೆ ಹೊಸ ವೈಜ್ಞಾನಿಕ ಅಧ್ಯಯನ – ಅಡಿಕೆ ತಳಿಗಳಲ್ಲೂ ಆಲ್ಕಲಾಯ್ಡ್ ಪ್ರಮಾಣದಲ್ಲಿ ವ್ಯತ್ಯಾಸ

ICAR-CPCRI ಸಂಶೋಧನೆಯ ಪ್ರಕಾರ ಅಡಿಕೆ ತಳಿಗಳಲ್ಲಿ ಆಲ್ಕಲಾಯ್ಡ್ ಪ್ರಮಾಣದಲ್ಲಿ ಗಣನೀಯ ವ್ಯತ್ಯಾಸವಿದೆ. ಮಂಗಳ…

2 hours ago

ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ – ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಯಲ್ಲಿ ಜು.25ರಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ…

11 hours ago

ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: ಜುಲೈ 30ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

ಮಂಗಳೂರಿನಲ್ಲಿ ಜುಲೈ 30ರಂದು ವಿವಿಧ ಖಾಸಗಿ ಸಂಸ್ಥೆಗಳ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನ…

12 hours ago

ರಸಗೊಬ್ಬರದಲ್ಲಿ ಆತ್ಮನಿರ್ಭರತೆ ಅನಿವಾರ್ಯ – ಸಂಕಷ್ಟದಿಂದ ಅವಕಾಶದತ್ತ ಭಾರತ ಸಾಗಬೇಕಿದೆ

ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿರುವ ಭಾರತ, ರಸಗೊಬ್ಬರದಲ್ಲಿ ಇನ್ನೂ ಆಮದು ಅವಲಂಬಿತವಾಗಿದೆ. ದೇಶೀಯ…

16 hours ago

ಹವಾಮಾನ ವರದಿ | 24-07-2026 | ಕರಾವಳಿಯಲ್ಲಿ ಮುಂದುವರಿಯುವ ಮಳೆ, ಜುಲೈ ಅಂತ್ಯದ ವೇಳೆಗೆ ಮುಂಗಾರು ಹೇಗೆ..?

ಕರಾವಳಿ ಮತ್ತು ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಯಲಿದ್ದು, ಸುಳ್ಯ-ಮಡಿಕೇರಿ ಘಾಟಿ ಭಾಗಗಳಲ್ಲಿ ಮಳೆ…

17 hours ago