ಸುಳ್ಯ ತಾಲೂಕಿನ ಅರಂತೋಡು ಎಲಿಮಲೆ ರಸ್ತೆ ದುರಸ್ತಿಗೆ ಆಗ್ರಹಿಸಿ ಚುನಾವಣಾ ಬಹಿಷ್ಕಾರ ಬ್ಯಾನರ್ ಗಳನ್ನು ಮುಖ್ಯಮಂತ್ರಿಗಳ ಆಗಮನದ ಮುನ್ನಾ ದಿನ ಕಿಡಿಗೇಡಿಗಳು ಹೊಳೆಯಲ್ಲಿ ಎಸೆದಿದ್ದರು. ಇದೀಗ ಈ ಪ್ರಕರಣ ಹೋರಾಟದ ಕಾವು ಹೆಚ್ಚಿಸಿದೆ. ಜನರೆಲ್ಲಾ ಒಂದಾಗಿ ಊರಿನ ದೈವದ ಮುಂದೆ ಪ್ರಾರ್ಥನೆ ಮಾಡಿದ್ದಾರೆ.
ಬ್ಯಾನರ್ ತೆಗೆದ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಹಾಗೂ ನಮ್ಮ ರಸ್ತೆ ಅಭಿವೃದ್ಧಿಗೆ ಆದಷ್ಟು ಬೇಗ ಕಾಲ ಕೂಡಿಬರಬೇಕು ಎಂದು ದೈವದ ಮುಂದೆ ಪ್ರಾರ್ಥನೆ ಮಾಡಲಾಯಿತು.
ಮುಖ್ಯಮಂತ್ರಿಗಳ ಆಗಮನದ ಮುನ್ನಾ ದಿನ ಬಹಿಷ್ಕಾರದ ಬ್ಯಾನರ್ ಕದ್ದು ಹೊಳೆಯಲ್ಲಿ ಎಸೆದಿದ್ದರು. ಆದರೆ ಹೋರಾಟಗಾರರು ಬ್ಯಾನರ್ ಅಳವಡಿಸಿ ಕೊಡಿ ಎಂದು ಕಿಡಿಗೇಡಿಗಳಿಗೆ ನೀಡಿದ ಸಮಯ ಮುಗಿದಿರುವುದರಿಂದ ಹಾಗೂ ಯಾವ ವ್ಯಕ್ತಿಯೂ ಈ ಬಗ್ಗೆ ತಪ್ಪು ಒಪ್ಪಿಕೊಂಡು ಬ್ಯಾನರ್ ಗಳನ್ನು ಆಳವಡಿಸಿಲ್ಲ ಆದ್ದರಿಂದ ಊರಿನ ಸರ್ವ ನಾಗರಿಕರು ಸೇರಿಕೊಂಡು ಊರಿನ ದೈವಸ್ಥಾನವಾದ ಶ್ರೀ ಉಳ್ಳಾಕುಲು ದೈವಸ್ಥಾನ ಅಡ್ತಲೆ ಇಲ್ಲಿ ಬ್ಯಾನರ್ ತೆಗೆದ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಮತ್ತು ನಮ್ಮ ರಸ್ತೆ ಅಭಿವೃದ್ಧಿಗೆ ಆದಷ್ಟು ಬೇಗ ಕಾಲ ಕೂಡಿಬರಬೇಕು ಎಂದು ಪ್ರಾರ್ಥನೆ ಮಾಡಿದರು.
ಮೇ 6 ರಿಂದ ಕೊಡಗು ಹಾಗೂ ದಕ್ಷಿಣ ಕರಾವಳಿ, ಚಿಕ್ಕಮಗಳೂರು ಭಾಗಗಳಲ್ಲಿ ಮತ್ತೆ…
ಕೊಕೋ ಧಾರಣೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ.
ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಸುಳ್ಯ,ಕಡಬ ತಾಲೂಕಿನ ಘಟ್ಟದ ತಪ್ಪಲಿನ ಪ್ರದೇಶದಲ್ಲಿ ಗುಡುಗು ಸಿಡಿಲು…
04.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…
03.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಬಿದಿರು ಕೃಷಿಯ ಬಗ್ಗೆ ಈಗ ಸಾಕಷ್ಟು ಅಧ್ಯಯನ ನಡೆಯುತ್ತಿದೆ. ಈ ನಡುವೆ ಪುತ್ತೂರು…