Advertisement
ವಿಶೇಷ ವರದಿಗಳು

ಅಡಿಕೆ ರೇಟು ಹೀಗ್ಯಾಕೆ ? |ಸಂಸ್ಥೆಯ ಪ್ರಮುಖರಿಗೆ ಧಾರಣೆ ಹೆಚ್ಚು ಏಕೆ ? ಆರಂಭವಾಗಿದೆ ಬೆಳೆಗಾರರ ನಡುವೆ ಚರ್ಚೆ….!

Share

ಅಡಿಕೆ ಬೆಳೆಗಾರ ಸಂಸ್ಥೆಯ ಪ್ರಮುಖರಿಗೆ ಆ ದಿನದ ಅಡಿಕೆ ಮಾರುಕಟ್ಟೆಗಿಂತಲೂ ಹೆಚ್ಚಿನ ಧಾರಣೆ…!. ಸಾಮಾನ್ಯ ಸದಸ್ಯರಿಗೆ ಆ ದಿನದ ಧಾರಣೆ…!. ಹೀಗೊಂದು ಚರ್ಚೆ ಈಗ ಅಡಿಕೆ ಬೆಳೆಗಾರರ ನಡುವೆ ಆರಂಭವಾಗಿದೆ. ಏನಿದು ಚರ್ಚೆ ?

Advertisement
Advertisement

ಅಡಿಕೆ ಬೆಳೆಗಾರರಿಗೆ ಕಳೆದ ಕೆಲವು ಸಮಯಗಳಿಂದ ಉತ್ತಮ ಧಾರಣೆ ಲಭ್ಯವಾಗುತ್ತಿದೆ. ಅದರ ಜೊತೆಗೆ ಧಾರಣೆಯಲ್ಲಿ  ಏರಿಳಿತವೂ ಕಂಡುಬರುತ್ತಿದೆ. ಸಾಮಾನ್ಯ ಬೆಳೆಗಾರರು ಅಡಿಕೆ ಯಾವಾಗ ನೀಡಬೇಕು ಎಂಬ ಗೊಂದಲದಲ್ಲೇ ಇರುತ್ತಾರೆ.ವಿವಿಧ ಸಂಘ ಸಂಸ್ಥೆಗಳು , ಮಾರುಕಟ್ಟೆ ತಜ್ಞರು ಮಾಹಿತಿ ನೀಡುತ್ತಲೇ ಇರುತ್ತಾರೆ. ಹೀಗಾಗಿ ಅಡಿಕೆ ಬೆಳೆಗಾರರ ಸಂಸ್ಥೆಯ ಕಡೆಗೇ ಹೆಚ್ಚಿನ ಬೆಳೆಗಾರರು ಈಚೆಗೆ ಗಮನಹರಿಸಿದ್ದಾರೆ. ಸಂಸ್ಥೆಯ ಮೂಲಕವೇ ಅಡಿಕೆ ಮಾರುಕಟ್ಟೆಗೆ ಪ್ರಯತ್ನ ಮಾಡುತ್ತಿದ್ದಾರೆ. ಅದರಲ್ಲೂ ಕ್ಯಾಂಪ್ಕೋ ಸಂಸ್ಥೆಯನ್ನೇ ಹೆಚ್ಚಾಗಿ ಬೆಳೆಗಾರರು ಆಶ್ರಯಿಸಿದ್ದಾರೆ. ಸುಮಾರು 1000  ಕೋಟಿ ರೂಪಾಯಿಗಿಂತಲೂ ಹೆಚ್ಚಿನ ವಹಿವಾಟನ್ನು ಅಡಿಕೆಯ ಮೂಲಕವೇ ಕ್ಯಾಂಪ್ಕೋ ನಡೆಸಿದೆ. ಈಗ ಬಂದಿರುವ ಚರ್ಚೆ ಸಂಸ್ಥೆಯ ಪ್ರಮುಖರಿಗೆ ಹೆಚ್ಚಿನ ಧಾರಣೆಯಲ್ಲಿ  ಅಡಿಕೆ ಖರೀದಿ ಹೇಗೆ ಸಾಧ್ಯವಾಗುತ್ತದೆ. ಸಂಸ್ಥೆಯನ್ನು ಮುನ್ನಡೆಸಬೇಕಾದ ಹಾಗೂ ಸಂಸ್ಥೆಯನ್ನು ರಕ್ಷಣೆ ಮಾಡಬೇಕಾದವರೇ ಹೀಗೆ ಮಾಡಿದರೆ ಹೇಗೆ? ಎನ್ನುವುದು  ಈಗ ಎದ್ದಿರುವ ಪ್ರಶ್ನೆ.

Advertisement

ಅಡಿಕೆ ಮಾರುಕಟ್ಟೆಯ ಆ ದಿನದ ಧಾರಣೆಗಿಂತಲೂ ಹೆಚ್ಚಿನ ಧಾರಣೆಯಲ್ಲಿ ಸಂಸ್ಥೆಯ ಪ್ರಮುಖರ ಅಡಿಕೆಯನ್ನು ಖರೀದಿ ಮಾಡಿರುವುದು ಈಗ ಬೆಳಕಿಗೆ ಬಂದಿರುವ ಸಂಗತಿ.

ನವೆಂಬರ್‌  14  ರಂದು ಹಳೆ ಅಡಿಕೆಗೆ ಕ್ಯಾಂಪ್ಕೋ ನಿಗದಿ ಮಾಡಿರುವ ಮಾರುಕಟ್ಟೆ ದರ 385 ರಿಂದ  400 ರೂಪಾಯಿ. ಆದರೆ ಅಂದು ಕೇವಲ ದೂರವಾಣಿ ಮೂಲಕ ಮಾತುಕತೆ ನಡೆಸಿ ಸಂಸ್ಥೆಯ ಪ್ರಮುಖರೊಬ್ಬರಿಗೆ  405  ರೂಪಾಯಿ ಧಾರಣೆ ನೀಡಲಾಗಿರುವುದು  ಈಗ ಬೆಳಕಿಗೆ ಬಂದಿದೆ. ಅಂದರೆ ಕೆಜಿಯಲ್ಲಿ  5 ರೂಪಾಯಿಯಷ್ಟು ಹೆಚ್ಚು ಧಾರಣೆಯನ್ನು ನೀಡಲಾಗಿದೆ. ಬೇರೆ ಬೇರೆ ಹೆಸರಿನಲ್ಲಿ ಒಟ್ಟು ಸೇರಿಸಿ 500 ಕ್ವಿಂಟಾಲ್‌ ಗೂ ಅಧಿಕ ಅಡಿಕೆಯನ್ನು ಕ್ಯಾಂಪ್ಕೋದ ಬೈಕಂಪಾಡಿ ಬ್ರಾಂಚ್‌ ಮೂಲಕ  ಮಾರಾಟ ಮಾಡಿರುವುದು  ಬೆಳಕಿಗೆ ಬಂದಿದೆ. ಇದೇ ರೀತಿ ಹಲವು ಬಾರಿ ಮಾಡಿರುವ ಬಗ್ಗೆಯೂ ಈಗ ಗುಮಾನಿ ವ್ಯಕ್ತವಾಗಿದೆ.

Advertisement

ಅದೇ ರೀತಿ ಅಕ್ಟೋಬರ್‌  22  ರಂದು ಹಳೆ ಅಡಿಕೆಗೆ 385 ರಿಂದ  385  ರೂಪಾಯಿ ಇದ್ದ ಸಂದರ್ಭದಲ್ಲಿ 400  ರೂಪಾಯಿಗೆ   ಬೆಳ್ಳಾರೆಯ ಬ್ರಾಂಚ್‌ ಮೂಲಕ 10 ಕ್ವಿಂಟಾಲ್‌ ಅಡಿಕೆ ಮಾರಾಟ ಮಾಡಿರುವುದು  ಬೆಳಕಿಗೆ ಬಂದಿದೆ.  ಇದೇ ಮಾದರಿಯಲ್ಲಿ  ಕಾರ್ಕಳ ಬ್ರಾಂಚ್‌ ಮೂಲಕವೂ ಅಡಿಕೆಗೆ 350-398  ರೂಪಾಯಿ ಇದ್ದ ಸಂದರ್ಭದಲ್ಲಿ 405 ರೂಪಾಯಿಗೆ ಖರೀದಿ ಮಾಡಲು ಅನುಮತಿ ನೀಡಿರುವುದು ಬೆಳಕಿಗೆ ಬಂದಿದೆ. ಇದರಿಂದಾಗಿ ಸಂಸ್ಥೆಗೆ ಆಗಿರುವ ನಷ್ಟ ಎಷ್ಟು ? ಸಾಮಾನ್ಯ ಬೆಳೆಗಾರರಿಗೆ ಈ ಮಾದರಿಯಲ್ಲಿ ಧಾರಣೆ ಹೆಚ್ಚುವರಿ ಮಾಡಲು ಸಾಧ್ಯವಿದೆಯೇ ? ಎಂಬುದೂ ಈಗ ಪ್ರಶ್ನೆಯಾಗಿದೆ.

ಈ ರೀತಿಯಾಗಿ ಕ್ಯಾಂಪ್ಕೋದಲ್ಲಿ ಪ್ರಮುಖರೇ ತಮಗೆ ಬೇಕಾದಂತೆ ಅಡಿಕೆ ಧಾರಣೆ ಹಾಕಿಸಿಕೊಳ್ಳುವುದರ ಬಗ್ಗೆ ಈಗ ಬೆಳೆಗಾರರ ನಡುವೆ ಚರ್ಚೆ ಆರಂಭವಾಗಿದೆ. ಈ ರೀತಿಯಾಗಿ ಮಾರುಕಟ್ಟೆ ಧಾರಣೆಗಿಂತ ಹೆಚ್ಚುವರಿಯಾಗಿ ತಮಗೆ ಮಾತ್ರವೇ ಅಡಿಕೆ ಧಾರಣೆ ಹಾಕಿಸಿಕೊಳ್ಳುವುದು  ಹೇಗೆ ಸಾಧ್ಯ ?  ಕ್ಯಾಂಪ್ಕೋ ಚುನಾವಣೆಯ ಹೊತ್ತಿಗೆ ಪ್ರಮುಖರಿಗೆ ಮಾತ್ರಾ ಈ ಧಾರಣೆ ಹೆಚ್ಚುವರಿಯ “ಟ್ರಿಕ್ಸ್ ” ಬೆಳಕಿಗೆ ಬಂದಿದೆ.

Advertisement

ಅಡಿಕೆ ಬೆಳೆಗಾರರ ಹಿತಕ್ಕಾಗಿ ಕ್ಯಾಂಪ್ಕೋ ಸಂಸ್ಥೆಯನ್ನು ವಾರಣಾಸಿ ಸುಬ್ರಾಯ ಭಟ್ಟರು  ಯಾವುದೇ ಸ್ವಾರ್ಥ ಇಲ್ಲದೆ ಕಟ್ಟಿ ಬೆಳೆಸಿ ಇದೀಗ ಸ್ವಾರ್ಥಕ್ಕಾಗಿ ಕೆಲವರು ಸಂಸ್ಥೆಯನ್ನು ಬಳಸುತ್ತಿರುವುದರ ಬಗ್ಗೆ ವಿಷಾದ ವ್ಯಕ್ತವಾಗಿದೆ. ಸಂಘಟನೆಗಳು ಈ ಬಗ್ಗೆ ಗಮನಿಸಬೇಕು, ಅಡಿಕೆ ಬೆಳೆಗಾರರ ಸಂಘಟನೆಗಳು ಕೂಡಾ ಧಾರಣೆಯ ಈ ವ್ಯತ್ಯಾಸದ ಬಗ್ಗೆ ಖಂಡಿಸಬೇಕಾದ ಅಗತ್ಯವಿದೆ ಎಂದು ಬೆಳೆಗಾರರು ಹೇಳುತ್ತಾರೆ.

ನ.14  ರಂದು CJJ ಅಡಿಕೆ ಮಾರಾಟ ಮಾಡಿರುವ ಬಿಲ್‌ ಗೆ ‌ ಆ ದಿನದ ಮಾರುಕಟ್ಟೆಗಿಂತ 405 ರೂಪಾಯಿಗೆ ಕೋಟ್‌ ಮಾಡಿರುವುದಕ್ಕೆ ಅನುಮತಿ ಕೇಳಿರುವುದು. 

Advertisement

ಇದು ಸುಳ್ಯದ ಬೆಳ್ಳಾರೆಯಲ್ಲಿ  ಮಾರಾಟ ಮಾಡಿರುವ ಬಿಲ್.‌ ಆ ದಿನದ ಅಡಿಕೆ ಮಾರುಕಟ್ಟೆ CJJ ಕ್ವಾಲಿಟಿಗೆ ಎಷ್ಟು ಇತ್ತು ?

Advertisement
ಸುಳ್ಯದ ಬೆಳ್ಳಾರೆಯಲ್ಲಿ ಮಾರಾಟ ಮಾಡಿರುವ ಇನ್ನೊಂದು ಪ್ರಕರಣ

 

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

Karnataka Weather | 18-05-2024 | ರಾಜ್ಯದ ಹಲವು ಕಡೆ ಮಳೆ | ವಾಯುಭಾರ ಕುಸಿತದ ಲಕ್ಷಣ | ವಾಯುಭಾರ ಕುಸಿತದ ಪ್ರಭಲತೆಯ ಮೇಲೆ ಮುಂಗಾರು ಪರಿಣಾಮ |

ಈಗಿನಂತೆ ಮೇ 22ರ ಅಂದಾಜು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗುವ ಲಕ್ಷಣಗಳಿವೆ.

4 hours ago

ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಭೆ ಮತ್ತು ಕೌಶಲ್ಯಕ್ಕೆ ಬಹುಬೇಡಿಕೆ: ಸಚಿವ ಎಸ್. ಜೈಶಂಕರ್

''ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳು ಇದೀಗ ಭಾರತದೊಂದಿಗೆ(India) ಚಲನಶೀಲತೆ ಒಪ್ಪಂದಗಳನ್ನು(Mobility Agreement) ಮಾಡಿಕೊಳ್ಳಲು…

4 hours ago

ರಾಜ್ಯದ ಹಲವೆಡೆ ಮಳೆ | ತಂಪಾದ ಬರದ ನೆಲ | ಸಿಡಿಲು ಬಡಿದು ಬಾಲಕಿ ಸಾವು

ಬರದಿಂದ(Drought) ತತ್ತರಿಸಿದ್ದ ರಾಜ್ಯದ ಜನತೆಗೆ ವರುಣ(Rain) ತಂಪೆರೆದಿದ್ದಾನೆ. ರೈತರ(Farmer) ಮೊಗದಲ್ಲಿ ಮಂದಹಾಸ ಮೂಡಿದೆ.…

4 hours ago

ಸತ್ಯ……..ಸತ್ಯದ ಹುಡುಕಾಟ ನಿಮ್ಮ ಆದ್ಯತೆಯಾಗಿರಲಿ……..

ಏನೇ ಆಗಲಿ ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ...... ಸತ್ಯದಲ್ಲಿಯೂ ಹಲವಾರು ಆಯಾಮಗಳಿವೆ.

4 hours ago

ಉದ್ಯಮಿ ಮುಕೇಶ್ ​ಅಂಬಾನಿಯ ಪ್ರತಿ ಗಂಟೆಯ ಗಳಿಕೆ ಎಷ್ಟು..? | ಅಂಬಾನಿ ಸಂಭಾವನೆ ಎಷ್ಟು ಗೊತ್ತಾ?

 ಮುಕೇಶ್ ಅಂಬಾನಿ(Mukesh Ambani), ರಿಲಯನ್ಸ್‌ ಇಂಡಸ್ಟ್ರೀಸ್‌(Reliance Industries) ಮುಖ್ಯಸ್ಥ, ನಮ್ಮ ದೇಶ ಮತ್ತು…

4 hours ago

ಕೃಷಿಯಲ್ಲಿ ಯುವ ರೈತನ ಸಾಧನೆ | 200 ರೂ. ಗೆ 1 ಕೆ.ಜಿ ಬೀನ್ಸ್ ಮಾರಾಟ ಮಾಡಿ 20 ಲಕ್ಷ ಬಂಪರ್‌ ಲಾಭ |

ರಾಜ್ಯದಲ್ಲಿ ಬರಗಾಲ(Drought) ತಾಂಡವವಾಡುತ್ತಿದೆ. ಕೆಲವೆಡೆ ಕಳೆದ ದಿನಗಳಿಂದ ಮಳೆಯಾಗುತ್ತಿದೆ(Rain). ಉತ್ತರ ಕರ್ನಾಟಕ ಹಾಗೂ…

5 hours ago