ಇದೊಂದು ಅಭಿಪ್ರಾಯವನ್ನು ರೂರಲ್ ಮಿರರ್ ಪ್ರಕಟಿಸಲು ಆಸಕ್ತಿ ವಹಿಸಿದೆ. ಶ್ರದ್ಧೆ ಹಾಗೂ ಆ ಪ್ರಾಮಾಣಿಕತೆ ಇಡೀ ಸಮುದಾಯಕ್ಕೆ ಮಾದರಿಯಾಗಿದೆ ಕೂಡಾ. ಬಾಳಿಲದ ವೈದ್ಯರ ಪತ್ನಿ ಬರೆದಿರುವ ಈ ಅಭಿಪ್ರಾಯ ಹೀಗಿದೆ……
ನಮ್ಮ ಬಾಳಿಲದ ಪಕ್ಕದ ಐವರ್ನಾಡಿನಲ್ಲಿ ಒಂದು ಪುಟ್ಟ ಕುಟುಂಬ.ಅಪ್ಪ,ಅಮ್ಮ,ಮಗಳು. ಮಗಳು ಪೋಲಿಯೋ ಪೀಡಿತೆ .ಕಾರಣಾಂತರಗಳಿಂದ ಆ ಕುಟುಂಬ ಪುತ್ತೂರಿನ ಪುರುಷರಕಟ್ಟೆಗೆ ಹೋಗಿ ನೆಲೆಸುತ್ತದೆ.
ಹಿಂದಿನಿಂದಲೂ ಬಾಳಿಲದ ಡಾಕ್ಟರ್ ಬಳಿಗೆ ಔಷಧಕ್ಕೆ ಬರುತ್ತಿದ್ದವರು ಊರು ಬದಲಾದರೂ ವೈದ್ಯರನ್ನು ಬದಲಿಸಿಲ್ಲ. ಈ ಮಧ್ಯೆ ಅಮ್ಮ ಕಿಡ್ನಿ ಸಮಸ್ಯೆಯಿಂದ ವಾರಕ್ಕೆರಡು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿರುತ್ತಾರೆ.ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಡುತ್ತಾರೆ.
ಬಾಳಿಲದ ವೈದ್ಯರು ವಿಧಿವಶರಾದಾಗ ಕ್ಲಿನಿಕ್ ಗೆ ಬೇರೆ ವೈದ್ಯರು ಬರುತ್ತಾರಾ ಅಂತ ವಿಚಾರಿಸಿಕೊಳ್ತಾರೆ. ನಿರಾಶರಾಗ್ತಾರೆ. ಆಗ ಅವರು ಹೇಳುತ್ತಾರೆ, ನಾವು ಸ್ವಲ್ಪ ದುಡ್ಡು ಕೊಡಲು ಇದೆ ಡಾಕ್ಟರ್ ಗೆ, ಕೊಡ್ತೇವೆ ಅಂತ ಹೇಳಿದ್ದರು.
ಆ 6 ತಿಂಗಳ ಬಳಿಕ ಮೊನ್ನೆ ಕರೆ ಮಾಡಿ ತಿಳಿಸಿದರು. ನಾಳೆ ಬಂದು ದುಡ್ಡು ಕೊಡ್ತೇವೆ ಅಂತ. ತೊಂದರೆ ಇಲ್ಲಮ್ಮ , ನೀವು ಕೊಡ್ಬೇಕಾಗಿಲ್ಲ ಅಂತ ಹೇಳಿದ್ದಕ್ಕೆ. ಇಲ್ಲ, ಕೊಡುತ್ತೇವೆ ತಕೊಳ್ಬೇಕು ಅಂತ ಉತ್ತರ ನೀಡಿದ್ದರು.
ಮರುದಿನ ಆ ಹುಡುಗಿಯ ತಂದೆ ಬಂದು, ಪಶ್ಚಾತ್ತಾಪದಿಂದ “ಆಜಿ ತಿಂಗಳಾಂಡ್ ಎಂದು ಹೇಳುತ್ತಾ 300 ರೂಪಾಯಿ ಕೊಟ್ಟಾಗ, ಒಂದು ಮಾತೂ ಬಾರದ ಸ್ಥಿತಿಯಲ್ಲಿ ಧಾರಾಕಾರ ಕಣ್ಣೀರು ಸುರಿಸಬೇಕಾಯಿತು.
ನಿಜವಾಗಿಯೂ ಡಾಕ್ಟರ್ ಗೆ ಸಲ್ಲ ಬೇಕಾದ ಹಣ ಎಷ್ಟಿದೆಯೋ. ಸಲ್ಲಿಸಬೇಕಾದವರು ಎಷ್ಟು ಜನರಿದ್ದಾರೋ ತಿಳಿಯದು….? ಆದರೆ ತಾವಾಗಿ ಹೇಳಿ ತಂದು ಕೊಟ್ಟ ಆ 300 ರೂಪಾಯಿ ಮೌಲ್ಯಕ್ಕಿಂತಲೂ ಪ್ರಾಮಾಣಿಕತೆಗೆ ಬೆಲೆ ಕಟ್ಟಲಾಗದು.
ಇಂತಹ ಪ್ರಾಮಾಣಿಕತೆಗೆ ಮನಸಾರೆ ವಂದಿಸುತ್ತಾ ಪ್ರಾರ್ಥಿಸುತ್ತಿದ್ದೇನೆ, ಈ ಕುಟುಂಬ ನೆಮ್ಮದಿಯ ಸುಖ ಸಂತೋಷದ ಬದುಕು ಕಂಡು ಕೊಳ್ಳುವಂತಾಗಲಿ.
# ಚಿಕಿತ್ಸಾ ಬಾಳಿಲ
ತೆಂಗು–ಅಡಿಕೆ ತೋಟಗಳ ನಡುವೆ ಅರಿಶಿಣ, ಏಲಕ್ಕಿ, ಮೆಣಸು ಬೆಳೆದು ತುಮಕೂರು ಜಿಲ್ಲೆಯ ರೈತರು…
ಮುಂಗಾರು ಮಳೆಯ ಕೊರತೆ ಎದುರಿಸುತ್ತಿರುವ ರಾಜ್ಯದ ಹಲವು ಭಾಗಗಳಲ್ಲಿ ಮಳೆ ಹೆಚ್ಚಿಸಲು ಸರ್ಕಾರ…
ಕಸ್ತೂರಿ ರಂಗನ್ ವರದಿ ಜಾರಿಗೆ ಕರ್ನಾಟಕ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಶಿಕ್ಷಣ…
ಭಾರತದ 126 ಪ್ರಮುಖ ನಗರಗಳ ಹವಾಮಾನ ಸಿದ್ಧತೆಯನ್ನು ಅಳೆಯಲಾಗಿದ್ದರೂ, 2021ರ ಮೌಲ್ಯಮಾಪನದಲ್ಲಿ ರಾಷ್ಟ್ರೀಯ…
ಭಾರತದ ಕಾಫಿ ರಫ್ತು ಗಳಿಕೆ 2021-22ರ ಸುಮಾರು 1 ಶತಕೋಟಿ ಡಾಲರ್ನಿಂದ 2025-26ರಲ್ಲಿ…
ಮೀನಿನ ಮುಳ್ಳು ಮತ್ತು ಹುರುಪೆಯನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಹಲ್ಲುಗಳ ಪುನರ್ ನಿರ್ಮಾಣ ಹಾಗೂ…