ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಗಳಲ್ಲಿ ಅಡಿಕೆಗೆ ಹಳದಿ ರೋಗ ಬಾಧಿಸಿದೆ. ಇದರಿಂದ ಕೃಷಿಕರು ಕಂಗಾಲಾಗಿದ್ದರು. ಯಾವುದೇ ಪರಿಹಾರ ಇಲ್ಲದೆ ಪರ್ಯಾಯ ಬೆಳೆಯತ್ತ ಚಿಂತನೆ ಮಾಡುತ್ತಿದ್ದಾರೆ. ಈ ನಡುವೆ ಇದೀಗ ಜೈವಿಕ ಗೊಬ್ಬರವೊಂದು ಪರಿಹಾರವಾಗುತ್ತದೆ ಎನ್ನುವ ಆಶಾವಾದ ಗರಿಗೆದರಿದೆ.
ಸುಳ್ಯ ತಾಲೂಕಿನ ಮಡಪ್ಪಾಡಿ ಪ್ರದೇಶದಲ್ಲಿ ಅಡಿಕೆ ಹಳದಿ ರೋಗ ಬಾಧಿಸಿದೆ. ಹಲವು ವರ್ಷಗಳಿಂದ ಹಳದಿ ರೋಗದಿಂದ ಪೀಡಿತವಾಗಿದ್ದ ಮಡಪ್ಪಾಡಿ ಗ್ರಾಮದ ಯತೀಶ್ ಗೋಳ್ಯಾಡಿ ಅವರ ತೋಟದಲ್ಲಿ ಇದೀಗ ಪ್ರಾಯೋಗಿಕವಾಗಿ ಈ ಜೈವಿಕ ಗೊಬ್ಬರ ಬಳಕೆಯ ಪ್ರಾತ್ಯಕ್ಷಿಕೆ ನಡೆಸಲಾಯಿತು. ಈ ಜೈವಿಕ ಗೊಬ್ಬರ ಬಳಕೆಯಿಂದ ಹಳದಿಯಾಗಿರುವ ಎಲೆಗಳು 6 ತಿಂಗಳಲ್ಲಿ ಮರು ಸ್ಥಿತಿಗೆ ಬರುತ್ತದೆ ಎನ್ನುವುದು ಈ ಜೈವಿಕ ಗೊಬ್ಬರದ ಫಲಿತಾಂಶ ಎಂದು ಹೇಳಲಾಗಿದೆ. ಹೀಗಾಗಿ 6 ತಿಂಗಳ ಕಾಲ ಈಗ ಕೃಷಿಕರು ಫಲಿತಾಂಶಕ್ಕಾಗಿ ಕಾಯಬೇಕಾಗಿದೆ. ಜೈವಿಕ ಗೊಬ್ಬರದ ಮೂಲಕ ಹಳದಿ ರೋಗ ನಿಯಂತ್ರಣವಾದರೆ ಜಿಲ್ಲೆಯ ಎಲ್ಲಾ ಕೃಷಿಕರು ಈ ಬಗ್ಗೆ ಯೋಚಿಸಬಹುದಾಗಿದೆ. 6 ತಿಂಗಳ ಬಳಿಕದ ಫಲಿತಾಂಶ ವೀಕ್ಷಿಸಿ ಬಳಿಕ ಅಡಿಕೆ ಕೃಷಿಕರು ನಿರ್ಧಾರ ಮಾಡಬಹುದಾಗಿದೆ.
ರಾಜ್ಯಕ್ಕೆ ಮುಂಗಾರು ಪ್ರವೇಶಿಸಿದರೂ ಅದರ ಬಲ ಇನ್ನೂ ದುರ್ಬಲವಾಗಿದೆ. ಕರಾವಳಿಯಲ್ಲಿ ಜೂನ್ 8ರಿಂದ…
ನಾರ್ವೆ ಚೆಸ್ 2026 ಟೂರ್ನಿಯನ್ನು ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಇತಿಹಾಸವನ್ನು…
ಆಸ್ಟ್ರೇಲಿಯಾದಲ್ಲಿ ವರೋವಾ ಮೈಟ್ ಹಾವಳಿಯಿಂದ ಜೇನುನೊಣಗಳ ಸಂಖ್ಯೆ ತೀವ್ರವಾಗಿ ಕುಸಿಯುತ್ತಿದ್ದು, ಆಹಾರ ಬೆಳೆಗಳ…
ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಜೂನ್ 6ರಂದು ಕಾಸರಗೋಡು ಜಿಲ್ಲೆಯ ಎಲ್ಲಾ ಶಿಕ್ಷಣ…
ಮಲೆನಾಡಿನ ಕೃಷಿ ಸಮಸ್ಯೆಗಳನ್ನು ಪ್ರವಾಸೋದ್ಯಮದ ಅವಕಾಶಗಳಾಗಿ ಪರಿವರ್ತಿಸುವ ಹೊಸ ಪರಿಕಲ್ಪನೆಯನ್ನು ಪ್ರಬಂಧ ಅಂಬುತೀರ್ಥ…
ಮಹಾರಾಷ್ಟ್ರ FDA ದಾಳಿಯಲ್ಲಿ 14 ಮಂದಿ ಬಂಧನವಾಗಿದ್ದು, ₹32 ಲಕ್ಷ ಮೌಲ್ಯದ ನಿಷೇಧಿತ…