ಅಡಿಕೆ ಹಳದಿಎಲೆ ರೋಗ ನಿರೋಧಕ ತಳಿ ಅಭಿವೃದ್ಧಿಯ ಮೊದಲ ಹೆಜ್ಜೆ ಯಶಸ್ವಿಯಾಗಿ ಪೂರೈಸಿದೆ. ಶುಕ್ರವಾರ ಸಿಪಿಸಿಐಆರ್ ವಿಜ್ಞಾನಿಗಳು ರೋಗಣು ನಿರೋಧಕ ಅಡಿಕೆ ಮರದಿಂದ ಹಿಂಗಾರ ಸಂಗ್ರಹ ಮಾಡಿದ್ದಾರೆ. ಈ ಹಿಂಗಾರದಲ್ಲಿ ಟಿಶ್ಯು ಕಲ್ಚರ್ ಗಿಡಗಳ ಅಭಿವೃದ್ಧಿಯನ್ನು ಮುಂದೆ ಕಾಸರಗೋಡು ಸಿಪಿಸಿಐಆರ್ ನಲ್ಲಿ ನಡೆಸಲಾಗುತ್ತದೆ.
ಅಡಿಕೆ ಹಳದಿ ಎಲೆರೋಗ ನಿರೋಧಕ ತಳಿ ಅಭಿವೃದ್ಧಿ ಬಗ್ಗೆ ಕಳೆದ ಕೆಲವು ಸಮಯಗಳಿಂದ ಅಧ್ಯಯನ ನಡೆಯುತ್ತಿತ್ತು. ಇದೀಗ ಹಳದಿ ಎಲೆರೋಗ ಹಾಟ್ಸ್ಫಾಟ್ ಪ್ರದೇಶದಲ್ಲಿರುವ ರೋಗಣು ರಹಿತವಾದ ಮರದಿಂದ ಟಿಶ್ಯೂ ಕಲ್ಚರ್ ಹಾಗೂ ಕೃತಕ ಪರಾಗಸ್ಪರ್ಶದ ಮೂಲಕ ಗಿಡ ಅಭಿವೃದ್ಧಿ ಮಾಡುವ ಯೋಜನೆಗೆ ಈಗ ಚಾಲನೆ ದೊರೆತಿದೆ. ಶುಕ್ರವಾರ ಸಂಪಾಜೆ ಹಾಗೂ ಚೆಂಬು ಪ್ರದೇಶದಿಂದ ಸಿಪಿಸಿಐಆರ್ ನಿರ್ದೇಶಕಿ ಡಾ.ಅನಿತಾ ಕರುಣ್ ನಿರ್ದೇಶನದಲ್ಲಿ ರೋಗಣು ರಹಿತ ಅಡಿಕೆ ಮರದಿಂದ ಹಿಂಗಾರ ಸಂಗ್ರಹಿಸುವ ಕಾರ್ಯ ನಡೆಯಿತು. ಈ ಹಿಂಗಾರದ ಮೂಲಕ ಟಿಶ್ಯೂ ಕಲ್ಚರ್ ಅಡಿಕೆ ಗಿಡ ಅಭಿವೃದ್ಧಿ ಮಾಡುವ ಕಾರ್ಯ ನಡೆಯಲಿದೆ.
ಈ ಹಿಂದೆ ವಿಜ್ಞಾನಿ ಡಾ.ಭವಿಷ್ ಅವರ ನೇತೃತ್ವದಲ್ಲಿ ಸಂಪಾಜೆ ಹಾಗೂ ಚೆಂಬು ಪ್ರದೇಶದಲ್ಲಿ ಅಡಿಕೆ ಹಳದಿಎಲೆ ರೋಗ ಪೀಡಿತ ತೋಟಗಳಲ್ಲಿರುವ ರೋಗ ಲಕ್ಷಣಗಳು ಇಲ್ಲದ ಮರಗಳ ಗುರುತಿಸುವಿಕೆ ಕಾರ್ಯ ನಡೆದಿತ್ತು. ಅದಾದ ಬಳಿಕ ಅವುಗಳು ಸ್ಯಾಂಪಲ್ ತೆಗೆದು ಕಯಂಗುಲಂ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿ ಹಳದಿಎಲೆ ರೋಗಣು ರಹಿತ ಮರ ಎಂದು ಖಚಿತವಾದ ಬಳಿಕ ಅಂತಹ ಮರಗಳಿಂದ ಹಿಂಗಾರ ತೆಗೆಯಲಾಯಿತು.
ಸಂಪಾಜೆ ಹಾಗೂ ಚೆಂಬು ಪ್ರದೇಶದಲ್ಲಿ ಗುರುತಿಸಿದ 5 ರೋಗಲಕ್ಷಣ ಇಲ್ಲದ ಅಡಿಕೆ ಮರಗಳಿಂದ ವಾರದ ಹಿಂದೆ ಸ್ಯಾಂಪಲ್ ತೆಗೆದು ಕುಯ್ಯಂಕುಳಂಗೆ ಕಳುಹಿಸಲಾಗಿತ್ತು. ಅವುಗಳಲ್ಲಿ 3 ಅಡಿಕೆ ಮರಗಳಲ್ಲಿಮಾತ್ರಾ ರೋಗ ರಹಿತವಾದ ವರದಿ ಪ್ರಯೋಗಾಲಯದಿಂದ ಗುರುವಾರ ಸಂಜೆ ಲಭ್ಯವಾಗಿತ್ತು. ಶುಕ್ರವಾರ ಸಿಪಿಸಿಐಆರ್ ಕಾಸರಗೋಡಿನ ಹಿರಿಯ ತಾಂತ್ರಿಕ ಸಹಾಯಕ ಡಾ.ಮುರಳಿಕೃಷ್ಣ ಹಾಗೂ ತಂಡ ಆಗಮಿಸಿ ಕೃಷಿಕ ಭವ್ಯಾನಂದ ಕುಯಿಂತೋಡಿ ಸಹಕಾರದೊಂದಿಗೆ ಸಂಪಾಜೆ ಹಾಗೂ ಚೆಂಬು ಭಾಗದ 3 ಅಡಿಕೆ ಮರಗಳಿಂದಲೂ ಹಿಂಗಾರ ತೆಗೆದು ಟಿಶ್ಯು ಕಲ್ಚರ್ ಗಿಡ ಅಭಿವೃದ್ಧಿಗೆ ಕಾಸರಗೋಡು ಪ್ರಯೋಗಾಲಯಕ್ಕೆ ಕೊಂಡೊಯ್ದಿದ್ದಾರೆ.
ಸಂಪಾಜೆಯ ಕೃಷಿಕ ಲೈನ್ಕಜೆ ಪ್ರಭಾಕರ ಹಾಗೂ ಚೆಂಬು ಭಾಗದ ಕೃಷಿಕ ಮಾಧವ ನಡುಬೆಟ್ಟ ಅವರ ತೋಟದಿಂದ ಈ ಮರಗಳ ಆಯ್ಕೆ ನಡೆದಿದೆ. ವಾರದ ಹಿಂದೆ ವಿಜ್ಞಾನಿ ಡಾ.ಭವಿಷ್ ಹಾಗೂ ತಂಡ ಅಡಿಕೆ ಹಳದಿಎಲೆ ರೋಗ ಪೀಡಿತ ತೋಟಗಳಲ್ಲಿರುವ ರೋಗ ಲಕ್ಷಣಗಳು ಇಲ್ಲದ ಮರಗಳ ಗುರುತಿಸಿ ಆ ಮರದ ಕುಬೆಯ ಸುಳಿಯ ಭಾಗದಿಂದ ಸ್ಯಾಂಪಲ್ ಸಂಗ್ರಹಿಸಿ ಐಸ್ ಪ್ಯಾಕ್ ಮೂಲಕ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.
ಮುಂದೆ ಹಳದಿ ರೋಗನಿರೋಧಕ ಅಡಿಕೆ ಮರಗಳ ನಡುವೆ ಕೃತಕ ಪರಾಸ್ಪರ್ಶ ನಡೆಸುವ ಕಾರ್ಯ ನಡೆಯಲಿದೆ. ಈ ಮೂಲಕ ಅಡಿಕೆ ರೋಗನಿರೋಧಕ ಅಡಿಕೆ ಗಿಡಗಳ ಅಭಿವೃದ್ಧಿ ನಡೆಯಲಿದೆ.
17.12.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…
ಚಳಿಗಾಲ ಎಂದರೆ ಒಂದು ರೀತಿಯಲ್ಲಿ ಕಿರಿಕಿರಿ. ವಯಸ್ಸಾದವರಂತೆ ಚರ್ಮ ಸುಕ್ಕು ಕಟ್ಟುವುದು, ಆರೋಗ್ಯದಲ್ಲಿ…
ಚಳಿಗಾಲದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಣುತ್ತದೆ. ಆದರಲ್ಲೂ ಹೃದಯದ ಸಮಸ್ಯೆಗಳ ಬಗ್ಗೆ ಕಾಳಜಿ…
ಮಹಿಳೆಯರು ಸಹ ಉದ್ಯೋಗವನ್ನು ಮಾಡಬೇಕೆಂದು ಸರ್ಕಾರವು ಅನೇಕ ರೀತಿಯ ಯೋಜನೆಯನ್ನು ಜಾರಿಗೊಳಿಸಿದ್ದು, ಟ್ರೈಲರಿಂಗ್…
ಮೊಟ್ಟೆಗಳು ಉತ್ತಮ ಗುಣಮಟ್ಟದ ಪ್ರೋಟೀನ್ ಅಂಶ ವಾಗಿದ್ದು, ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ನೀಡುತ್ತಿದ್ದರು.…
ಹಣದ ಅವಶ್ಯಕತೆಯಿರುವ ಎಲ್ಲರೂ ಬ್ಯಾಂಕ್ ಗಳಲ್ಲಿ ಸಾಲಕ್ಕೆ ಮೊರೆ ಹೋಗಿ ಅಧಿಕ ಬಡ್ಡಿಯನ್ನು…