Advertisement
MIRROR FOCUS

ಅಡಿಕೆ ಕೊಳೆರೋಗ | ಇಲಾಖೆಗಳ ಮಾಹಿತಿ ತಲುಪಿದ ಕೃಷಿಕರ ಸಂಖ್ಯೆ ನೋಡಿದರೇ ಅಚ್ಚರಿ…!

Share

ಅಡಿಕೆ ಕೊಳೆರೋಗ ವ್ಯಾಪಕವಾಗಿರುವಂತೆಯೇ ಈಗ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕು ಎಂಬುದು ಅಡಿಕೆ ಬೆಳೆಗಾರರ ಒತ್ತಾಯ. ಇಡೀ ವರ್ಷದ ಬೆಳೆ ನಷ್ಟವಾಗಿರುವುದರಿಂದ ಈ ಬೇಡಿಕೆ ವ್ಯಕ್ತವಾಗಿದೆ. ಆದರೆ, ಈ ಸಮೀಕ್ಷೆ ಇಲಾಖೆಗಳ ಮೂಲಕ ನಡೆಯಬೇಕು. ಅದರಲ್ಲೂ ತೋಟಗಾರಿಕಾ ಇಲಾಖೆ ಮೂಲಕ ಸಮೀಕ್ಷೆಗಳು ನಡೆಯಬೇಕು. ಆದರೆ ಇಲಾಖೆಗಳು ಕೃಷಿಕರನ್ನು ಎಷ್ಟು ತಲುಪಿವೆ..? ಈ ಬಗ್ಗೆ ಅಚ್ಚರಿಯ ವರದಿ ಬೆಳಕಿಗೆ ಬಂದಿದೆ.

ಅಡಿಕೆ ಕೊಳೆರೋಗಕ್ಕೆ ತೋಟಗಾರಿಕಾ ಇಲಾಖೆಯಿಂದ ದೊರೆಯುವ ನೆರವಿನ ಬಗ್ಗೆ ಮಾಹಿತಿ ಕೇಳಲಾಗಿತ್ತು. ತೋಟಗಾರಿಕಾ ಇಲಾಖೆಯಿಂದ ದೊರೆಯುವ ಸಬ್ಸೀಡಿ ಬಗ್ಗೆ ಮಾಹಿತಿ ದೊರಕಿದೆಯೇ..?, ಸುಣ್ಣ-ಮೈಲುತುತ್ತ ಲಭ್ಯವಾಗಿದೆಯೇ..?   ಎಂಬುದು ಪ್ರಶ್ನೆಯಾಗಿತ್ತು. ಅಂದರೆ, ಇಲಾಖೆ ಹಾಗೂ ಕೃಷಿಕರ ನಡುವಿನ ಸಂಪರ್ಕ, ಸಹಭಾಗಿತ್ವ ತಿಳಿಯುವುದು ಇದರ ಉದ್ದೇಶವಾಗಿತ್ತು. ಇಲಾಖೆಗಳು ಇನ್ನೂ ಹೆಚ್ಚು ಜನಪರವಾಗಿ ಕೆಲಸ ಮಾಡಬೇಕು ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ. ಪ್ರಶ್ನೆಗೆ ಉತ್ತರಿಸಿದ ಶೇ.59 ರಷ್ಟು ಕೃಷಿಕರು ನಮಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಹೇಳಿದ್ದಾರೆ. ಶೇ.22.1 ರಷ್ಟು ಕೃಷಿಕರು ಮಾಹಿತಿ ಲಭ್ಯವಾಗಿದೆ ಎಂದು ಹೇಳಿದ್ದಾರೆ. ಶೇ.15.7 ರಷ್ಟು ಕೃಷಿಕರು ಸುಣ್ಣ-ಮೈಲುತುತ್ತ ಲಭ್ಯವಾಗಿಲ್ಲ ಎಂದು ಹೇಳಿದ್ದಾರೆ. ಶೇ.3.3 ಕೃಷಿಕರು ಸುಣ್ಣ ಹಾಗೂ ಮೈಲುತುತ್ತ ಲಭ್ಯವಾಗಿದೆ ಎಂದು ತಿಳಿಸಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.. 

ಈ ಹಿಮ್ಮಾಹಿತಿ ಪ್ರಕಾರ, ಇಲಾಖೆಗಳು ಇನ್ನಷ್ಟು ಕೃಷಿಕರ ಪರವಾಗಿ ಕೆಲಸ ಮಾಡಬೇಕು ಎಂಬುದು ಕಂಡುಬರುತ್ತದೆ. ಸಮಯಕ್ಕೆ ಸರಿಯಾಗಿ ಶೇ.3.3 ಕೃಷಿಕರಿಗಷ್ಟೇ ಸುಣ್ಣ -ಮೈಲುತುತ್ತ ಸಬ್ಸೀಡಿ ದರದಲ್ಲಿ ಲಭ್ಯವಾಗಿದೆ. ಉಳಿದವರಿಗೆ ಮುಂದಿನ ಹಂತದಲ್ಲಿ ಲಭ್ಯವಾಗಬಹುದು, ಅಥವಾ ಲಭ್ಯವಾಗದೇ ಇರಬಹುದು. ಆದರೆ, ಕೊಳೆರೋಗ ನಿರ್ವಹಣೆಯ ದೃಷ್ಟಿಯಿಂದ ತಕ್ಷಣವೇ ಈ ನೆರವುಗಳು ಲಭ್ಯವಾಗಬೇಕಾಗಿದೆ. ಇದಕ್ಕಾಗಿ ಕ್ರಮಗಳ ಅಗತ್ಯ ಇದೆ, ಯೋಜನೆಗಳ ಅಗತ್ಯವಿದೆ. ಶೇ.59 ರಷ್ಟು ಕೃಷಿಕರಿಗೆ ಈ ಮಾಹಿತಿಯೇ ಲಭ್ಯವಾಗಿಲ್ಲ ಎಂದಿರುವುದು ಇಲಾಖೆಗಳು, ಸರ್ಕಾರ ಗಮನಿಸಬೇಕಾದ ಅಂಶ. ಅಂದರೆ ಇಷ್ಟೆಲ್ಲಾ ಆಧುನಿಕ ವ್ಯವಸ್ಥೆಗಳು ಇರುವಾಗಲೂ ಕೃಷಿಕರಿಗೆ ಕೃಷಿ ಇಲಾಖೆಯ ಮಾಹಿತಿಗಳು ಲಭ್ಯವಾಗುತ್ತಿಲ್ಲ ಎನ್ನುವುದು ಅಚ್ಚರಿಗೆ ಕಾರಣವಾಗಿದೆ. ಹೀಗಾಗಿ ಇಲಾಖೆಗಳು ಸುಧಾರಣೆಗೆ ಇದೊಂದು ಸಂದೇಶವೂ ಆಗಿದೆ.

ತೋಟಗಾರಿಕೆ ಅಥವಾ ಕೃಷಿ ಇಲಾಖೆಗಳು ಇಂದು ರೈತ ಉತ್ಪಾದಕ ಸಂಸ್ಥೆಗಳ ಜೊತೆ, ಕೃಷಿ ಸಂಘಟನೆಗಳ ಜೊತೆ ಹೆಚ್ಚು ಸಂಪರ್ಕ ಇರಿಸಿಕೊಳ್ಳಬೇಕು. ಕೇವಲ ಒಂದೋ-ಎರಡೋ ರೈತ ಉತ್ಪಾದಕ ಸಂಸ್ಥೆಗಳ ಜೊತೆ ಸಂಪರ್ಕ ಇರಿಸಿಕೊಂಡರೆ ಸಾಕಾಗುವುದಿಲ್ಲ ಎನ್ನುವುದು ಕೂಡಾ ಇಲ್ಲಿ ಸಂದೇಶ. ರೈತ ಉತ್ಪಾದಕ ಸಂಸ್ಥೆ ತನ್ನ ಸದಸ್ಯರ ಗಮನಕ್ಕೆ ಮೊದಲ ಆದ್ಯತೆ ನೀಡಿ ಉಳಿದ ಕೃಷಿಕರಿಗೆ ನಂತರದ ಸ್ಥಾನ ನೀಡುವುದು ಸಾಮಾನ್ಯ. ಹೀಗಾಗಿ ರೈತ ಉತ್ಪಾದಕ ಸಂಸ್ಥೆಗಳು ಮಾತ್ರವಲ್ಲ ಸಹಕಾರಿ ಸಂಘಗಳು, ರೈತ ಸಂಘಟನೆಗಳು ಹಾಗೂ ಕೃಷಿ ಪರ ಮಾಧ್ಯಮಗಳ ಜೊತೆಯೂ ಸಂಪರ್ಕ ಇರಿಸಿಕೊಂಡು ಈ ಮೂಲಕವೂ ಕೃಷಿ ಸೇವೆಗಳ, ಯೋಜನೆಗಳ ಬಗ್ಗೆ ಪ್ರಚಾರ ಮಾಡುವುದು ಅಗತ್ಯ ಇದೆ.

ಈಗಾಗಲೇ ಇಲಾಖೆಗಳು ಕೃಷಿಕರ ಪರವಾಗಿ ಹಲವಾರು ಯೋಜನೆಗಳನ್ನು ಹೇಳುತ್ತಿದ್ದರೂ, ಇಲಾಖೆಗಳು ಅವರ ಕೆಲಸ ಮಾಡುತ್ತಿದ್ದರೂ ನಿಜವಾಗೂ ಅರ್ಹ ಫಲಾನುಭವಿ ಅಥವಾ ಯಾರಿಗೆ ಅಗತ್ಯವಾಗಿ ಈ ಯೋಜನೆಗಳು ಬೇಕಾಗುತ್ತವೋ ಅಂತಹವರಿಗೆ ಸೌಲಭ್ಯ , ಸಹಾಯಧನ ಸಿಗದೇ ಇರುವ ಸಾಧ್ಯತೆ ಹೆಚ್ಚು. ಇದಕ್ಕಾಗಿ ವ್ಯಾಪಕ ಪ್ರಚಾರದ ಅಗತ್ಯ ಇದೆ ಎನ್ನುವುದು ಈ ಸಮೀಕ್ಷೆಯ ಮೂಲಕ ತಿಳಿಯಬಹುದು. ತೋಟಗಾರಿಕಾ ಇಲಾಖೆ ಅಥವಾ ಕೃಷಿ ಇಲಾಖೆ , ಕೆವಿಕೆಗಳು  ಹೆಚ್ಚಾಗಿ ಯೋಜನೆಗಳ ಅನುಷ್ಟಾನ ಸಂಸ್ಥೆಗಳು. ಇದಕ್ಕಾಗಿ ರೈತರೊಂದಿಗೆ ನಿಕಟವಾದ ಸಂಪರ್ಕವೂ ಅಗತ್ಯವಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.. 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?

ಗುಟ್ಕಾ–ಪಾನ್‌ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…

22 hours ago

ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…

2 days ago

ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ

ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…

2 days ago

ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?

ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…

2 days ago

ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುತ್ತಿದೆಯೇ? – ಹೊಸ ಅಧ್ಯಯನದ ಎಚ್ಚರಿಕೆ

ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುವ ಕ್ಯಾಂಪಿಲೋಬ್ಯಾಕ್ಟರ್ ಬ್ಯಾಕ್ಟೀರಿಯಾದ ಹರಡುವಿಕೆಯನ್ನು ವೇಗಗೊಳಿಸುತ್ತಿದೆ…

2 days ago

ಹವಾಮಾನ ಬದಲಾವಣೆಯಿಂದ ರೈತರ ರಕ್ಷಣೆಗೆ ಸರ್ಕಾರದ ತಂತ್ರ – 310 ಜಿಲ್ಲೆಗಳು ಅಪಾಯದಲ್ಲಿ, 2,661 ಸಹಿಷ್ಣು ತಳಿಗಳ ಅಭಿವೃದ್ಧಿ

ದೇಶದ 651 ಕೃಷಿ ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ದುರ್ಬಲವೆಂದು…

2 days ago