Advertisement
MIRROR FOCUS

ಅಡಿಕೆ ಆಮದು ಭೀತಿ-ಮಾರುಕಟ್ಟೆ ಕುಸಿತದ ಚಿಂತೆ | ಈ ನಡುವೆ ಅಡಿಕೆ ಬೆಳೆ ವಿಸ್ತರಣೆ ತಡೆಯಲು ಹೀಗೊಂದು ಚಿಂತನೆ…. |

Share

ಇತ್ತೀಚಿನ ದಿನಗಳಲ್ಲಿ ವಿದೇಶಿ ಅಡಿಕೆ ಅಕ್ರಮವಾಗಿ ದೇಶದೊಳಕ್ಕೆ ಬರುತ್ತಿದ್ದು ದೇಶೀ ಅಡಿಕೆಯ ಮಾರುಕಟ್ಟೆಗೆ ತೀವ್ರ ಹೊಡೆತ ನೀಡುತ್ತಿದೆ. ವಶಪಡಿಸಿಕೊಂಡ ಅಕ್ರಮ ಆಮದು ಅಡಿಕೆಯು ಕಡಿಮೆ ದರದಲ್ಲಿ ಹರಾಜು ಮೂಲಕ ಮಾರುಕಟ್ಟೆಗೆ ಬಿಡುಗಡೆಯಾಗಿ ದೇಶದ ಅಡಿಕೆ ಮಾರುಕಟ್ಟೆಯನ್ನು ನಾಶಗೊಳಿಸುತ್ತಿರುವ ಬಗ್ಗೆ  ತೀವ್ರ ಕಳವಳ ವ್ಯಕ್ತವಾಗುತ್ತಿದೆ. ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಲಾಗುತ್ತಿದೆ.….ಮುಂದೆ ಓದಿ…..

ರಾಜ್ಯದ 31 ಜಿಲ್ಲೆಗಳ ಪೈಕಿ 17 ಜಿಲ್ಲೆಗಳ ರೈತರು ಜೀವನಾಧಾರವಾಗಿ ಅಡಿಕೆಯನ್ನೇ ಅವಲಂಬಿಸಿದ್ದಾರೆ. ವಿದೇಶಿ ಅಡಿಕೆಯ ಒಳಹರಿವು ಈ ಭಾಗದ ರೈತರ ಜೀವನವನ್ನೇ ನರಕಸದೃಶಗೊಳಿಸಿದೆ.….ಮುಂದೆ ಓದಿ…..

ಕಳೆದ 3 ವರ್ಷಗಳಿಂದ ಅಡಿಕೆ ಮಾರುಕಟ್ಟೆ ಒಂದು ಸುಸ್ತಿರ ಹಂತಕ್ಕೆ ಬಂದಿದೆ ಅಂದುಕೊಳ್ಳುವಾಗ, ಮೇಲಿನ ಘಟನೆಗಳು ಇಲ್ಲಿಯ ಕೃಷಿಕರಿಗೆ ಚಿಂತೆ ಮೂಡಿಸಿದೆ.. ಸುಸ್ಥಿರ ಮಾರುಕಟ್ಟೆಯ ಲಾಭ ಇನ್ನೇನು ಕೃಷಿಕನಿಗೆ ಸಿಗಲು ಶುರುವಾಗಿದೆ ಅನ್ನುವಷ್ಟರಲ್ಲಿ, ವಿದೇಶಿ ಅಡಿಕೆಯ ಒಳಹರಿವು ಅಡಿಕೆ ದರವನ್ನು ಕುಸಿತಗೊಳಿಸಿತು.. ಈ ಕುಸಿತ ತಾತ್ಕಾಲಿಕ ಎಂದುಕೊಂಡು ಕ್ಷಣಿಕ ಸಮಾಧಾನ ಪಡುವಂತಿಲ್ಲ.. ಯಾಕೆಂದೆರೆ ಅಡಿಕೆಯ ವಿದೇಶಿ ಒಳಹರಿವಿಗಿಂತ, ಲಕ್ಷ ಲಕ್ಷಗಳಲ್ಲಿ ಬೇರೆ ರಾಜ್ಯಗಳಿಗೆ ಅಡಿಕೆ ಗಿಡಗಳ ಹೊರಹರಿವು ಆಗುತ್ತಿದೆ. ಅದೂ ಕರಾವಳಿ, ಮಲೆನಾಡು ಭಾಗದಿಂದಲೇ…!. ಭವಿಷ್ಯದಲ್ಲಿ ಇಲ್ಲಿಯ ಅಡಿಕೆ ಬೆಳೆಗಾರರಿಗೆ ದೊಡ್ಡ ತಲೆ ನೋವಾಗುವುದು ನಿಸ್ಸಂದೇಹ.. ಕೆಲವೇ ಕೆಲವು ನರ್ಸರಿಗಳು ಹಲವು ಲಕ್ಷಗಳಲ್ಲಿ ಅಡಿಕೆ ಸಸಿಗಳನ್ನು ತಯಾರು ಮಾಡಿ, ತಮಿಳುನಾಡಿನಂತ ಬೇರೆ ರಾಜ್ಯಗಳಿಗೆ ಕಳುಹಿಸುತ್ತಿದ್ದಾರೆ.. ಕೇಳಿದರೆ, ಅಡಿಕೆಯನ್ನು ಯಾರು ಬೇಕಾದರೂ ಅವರ ಅನುಕೂಲಕ್ಕೆ ತಕ್ಕಂತೆ ಬೆಳೆಸಬಹುದು.. ಅದನ್ನು ನಿಯಂತ್ರಣ ಮಾಡಲು ನಾವು ನೀವು ಯಾರು ಎಂಬ ಉತ್ತರ….!….ಮುಂದೆ ಓದಿ…..

ಅಲ್ಲ, ಅಡಿಕೆ ಕೃಷಿ ಯಾರಿಗೂ ಬೇಡದ ಸಮಯದಲ್ಲಿ ಕರಾವಳಿ ಹಾಗೂ ಮಲೆನಾಡ ಕೆಲವು ಮಹನೀಯರು ಈ ಅಡಿಕೆಯ ಮಾರುಕಟ್ಟೆಯನ್ನು ಸುದೃಢ, ಸುಸ್ಥಿರಗೊಳಿಸಿದರು. ಹಾಗೆಯೇ ಕೃಷಿಯಲ್ಲಿ, ತಳಿಗಳಲ್ಲಿ ಹಲವು ಸುಧಾರಣೆ ತಂದರು.ಈಗ ಈ ಭಾಗದ ಜನರಿಗೆ ಅಡಿಕೆ ಎನ್ನುವುದು ಬೆಳೆಯಲ್ಲ, ಜೀವನಶೈಲಿ, ಬದುಕೇ ಆಗಿದೆ. ಆದರೆ ಕೆಲವು ನರ್ಸರಿಗಳು ಇಲ್ಲಿಯ ರೈತರ ಬಾಯಿಗೆ ಮಣ್ಣು ಹಾಕುವಂತಹ ಕೆಲಸ ಮಾಡುತ್ತಿರುವುದು ಸ್ಪಷ್ಟ. ಅದರಲ್ಲೂ ಯಾವುದೇ ನರ್ಸರಿಗಳು E way bill ಇಲ್ಲದೇ ಲಕ್ಷ ಬೆಲೆಯ ಗಿಡಗಳನ್ನು(ಒಂದು ಲಾರಿಯಲ್ಲಿ 3500 ಗಿಡಗಳು, ತಲಾ ರೂ 35/- ರಂತೆ)ಬೇರೆ ರಾಜ್ಯಗಳಿಗೆ ಹೇಗೆ ಕಳಿಸುತ್ತಿದ್ದಾರೆ ಎನ್ನುವುದೇ ಯಕ್ಷಪ್ರಶ್ನೆ…?….ಮುಂದೆ ಓದಿ…..

ಈಗ ತುರ್ತಲ್ಲಿ ಆಗ ಬೇಕಾದ ಕೆಲಸವೆಂದರೆ, ಪ್ರತಿಯೊಬ್ಬ ಸ್ಥಳೀಯನೂ ಸಮಾರೋಪದಿಯಲ್ಲಿ ಈ ಬಗ್ಗೆ ಎಚ್ಚೆತ್ತುಕೊಂಡು, ಕೆಲವೇ ಕೆಲವು ನರ್ಸರಿಗಳ ಅಕ್ರಮವನ್ನು ತಡೆಯಬೇಕು. ಈ ಬಗ್ಗೆ ಆಡಳಿತ ಯಂತ್ರಕ್ಕೆ ಮನವರಿಕೆ ಮಾಡಿ, ನಿಯಮ ನಿರ್ಬಂಧಗಳನ್ನು ತಂದು ಈ ಅಡಿಕೆ ಗಿಡಗಳ ಹೊರ ಹರಿವನ್ನು ತಡೆಯಬೇಕಾಗಿದೆ. ಹಾಗೆಯೇ invoice  ಮತ್ತು E-way bill ಇಲ್ಲದೇ ಸಾಗಟ ಮಾಡದಂತೆ ಮತ್ತು underbilling ಮಾಡಿ ಸಾಗಟ ಮಾಡಿದರೆ ದುಪ್ಪಟ್ಟು ದಂಡ ತೆರುವಂತಹ ಕ್ರಮಗಳನ್ನು ತರಬೇಕಾಗಿದೆ.….ಮುಂದೆ ಓದಿ…..

ಇಲ್ಲೂ ಒಂದು ಸಮಸ್ಯೆ ಇದೆ ನಿಜ. ವ್ಯಾಪಾರ-ವ್ಯವಹಾರ ತಡೆಯುವವರು ಯಾರು ಹಾಗೂ ಇನ್ನೊಂದು ವ್ಯವಹಾರವನ್ನು ತಡೆಯುವುದು ಹೇಗೆ ?. ಹೇಗೆ ಬೆಳೆ ಬೆಳೆಸುವುದು ರೈತನ ಹಕ್ಕೋ ಹಾಗೆಯೇ ಗಿಡ ಬೆಳೆಸಿ ಮಾರಾಟ ಮಾಡುವುದೂ ರೈತನ ಹಕ್ಕು. ಆದರೆ ಇಲ್ಲಿ ಗಮನಿಸಬೇಕಾದ್ದು ಹೊರ ರಾಜ್ಯಗಳಿಗೆ ವಿಪರೀತ ಪ್ರಮಾಣದಲ್ಲಿ ಅಡಿಕೆ ಗಿಡಗಳನ್ನು ಕಳುಹಿಸುವುದರ ಬಗ್ಗೆ ಮಾತ್ರಾ ಅಡಿಕೆ ಕೃಷಿಕರು ಗಮನಿಸಬೇಕಾದ್ದಾಗಿದೆ. ಒಂದು ವೇಳೆ ಇಲ್ಲಿನ ಅಡಿಕೆ ತಳಿಗಳು ಬೇರೆ ರಾಜ್ಯದಲ್ಲಿ, ಬೇರೆಯ ಹವಾಮಾನದಲ್ಲಿ ಬೆಳೆಯುತ್ತಿಲ್ಲವಾದರೆ ಅಂತಹ ಗಿಡಗಳನ್ನೂ ಅಲ್ಲಿಯ ರೈತರಿಗೂ ನೀಡಬಾರದು ಅಲ್ಲವೇ…?

ಬರಹ
ಹರಿಪ್ರಸಾದ್‌
, ಯುವಕೃಷಿಕ

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ವಿಷು ಹಬ್ಬದ ಅರ್ಥವೇನು ಗೊತ್ತಾ..? ಸೂರ್ಯ ಸಂಕ್ರಮಣದ ಈ ರಹಸ್ಯ ನಿಮ್ಮ ಜೀವನವೇ ಬದಲಾಯಿಸಬಹುದು..!

ವಿಷು ಹಬ್ಬವು ಸೂರ್ಯನ ಮೇಷ ಸಂಕ್ರಮಣದೊಂದಿಗೆ ಸಂಬಂಧಿಸಿದ ಆಧ್ಯಾತ್ಮಿಕ ಹಬ್ಬವಾಗಿದೆ. ವಿಷು ಕಣಿ…

4 hours ago

ಬೇಸಿಗೆ ಬಿತ್ತನೆ ಭರ್ಜರಿ ಏರಿಕೆ..! 64 ಲಕ್ಷ ಹೆಕ್ಟೇರ್ ದಾಟಿದ ಕೃಷಿ ವ್ಯಾಪ್ತಿ, 0.77 ಲಕ್ಷ ಹೆಕ್ಟೇರ್ ಹೆಚ್ಚಳ

ಈ ವರ್ಷ ಬೇಸಿಗೆ ಬಿತ್ತನೆ 64 ಲಕ್ಷ ಹೆಕ್ಟೇರ್ ದಾಟಿದ್ದು, ಕಳೆದ ವರ್ಷಕ್ಕಿಂತ…

5 hours ago

ಮುಂದಿನ 5 ದಿನ ತಾಪಮಾನ ಏರಿಕೆ ಎಚ್ಚರಿಕೆ ! ಉತ್ತರ-ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಬಿಸಿಗಾಳಿ ತೀವ್ರ

ಮುಂದಿನ ಐದು ದಿನಗಳಲ್ಲಿ ಉತ್ತರ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಾಗಲಿದೆ…

18 hours ago

ಹವಾಮಾನ ವರದಿ | 14-04-2026 | ಕರ್ನಾಟಕದಲ್ಲಿ ಉರಿಬಿಸಿಲು…! ಆದರೆ ಮಳೆಯೂ ಬರುತ್ತಿದೆ ! ಯಾವಾಗ ಗೊತ್ತಾ? – ಸದ್ಯ ರೈತರಿಗೆ ಸಲಹೆ ಏನು..?

ರಾಜ್ಯದಲ್ಲಿ ಬಿಸಿಲಿನ ತೀವ್ರತೆ ಮುಂದುವರಿದಿದ್ದು, ಏಪ್ರಿಲ್ 18ರಿಂದ ಮಳೆ ಆರಂಭವಾಗುವ ಸಾಧ್ಯತೆ ಇದೆ.…

22 hours ago

ಇರಾನ್-ಇಸ್ರೇಲ್ ಯುದ್ಧದ ಪರಿಣಾಮ – ಮಾವಿನ ರಫ್ತು ಕುಸಿತ, ರೈತರಿಗೆ ಹೊಡೆತ | ಅಲ್ಫೋನ್ಸೊ ಬೆಲೆ ಅರ್ಧಕ್ಕೆ ಇಳಿಕೆ

ಇರಾನ್-ಇಸ್ರೇಲ್ ಯುದ್ಧದಿಂದ ಮಾವಿನ ರಫ್ತು ಕುಸಿತಗೊಂಡು ಬೆಲೆ ತೀವ್ರವಾಗಿ ಇಳಿಕೆಯಾಗಿದೆ. ರೈತರು ನಷ್ಟದಲ್ಲಿ…

1 day ago

ಬೇಸಿಗೆಯ ತಾಪಕ್ಕೆ ತುತ್ತಾದ ವನ್ಯಜೀವಿಗಳಿಗೆ ನೀರಿನ ಜೀವಧಾರೆ | ಕೋಲಾರ ಬಲಮಂದೆ ಗ್ರಾಮ ಪಂಚಾಯಿತಿ ಮಾದರಿ ಕಾರ್ಯ

ಬೇಸಿಗೆಯಲ್ಲಿ ವನ್ಯಜೀವಿಗಳಿಗೆ ನೀರಿನ ವ್ಯವಸ್ಥೆ ಮಾಡಿ ಬಲಮಂದೆ ಗ್ರಾಮ ಪಂಚಾಯಿತಿ ಮಾದರಿಯಾಗಿದೆ. ಟ್ಯಾಂಕರ್,…

1 day ago