ಅಡಿಕೆ ಸಿಂಗಾರ ಒಣಗುತ್ತಿದೆಯೇ..? ನಿಮ್ಮ ತೋಟದ ಶತ್ರು ನೀವು ಬಳಸುವ ಬೇವಿನ ಎಣ್ಣೆಯೇ ಇರಬಹುದು…!

January 10, 2026
7:24 AM
ಅಡಿಕೆ ತೋಟಗಳಲ್ಲಿ ಹೂಗೊಂಚಲುಗಳು ಅರಳಿದರೂ ಕಾಯಿ ಕಟ್ಟದಿರುವುದಕ್ಕೆ ರೈತರು ಬಳಸುವ ಬೇವಿನ ಎಣ್ಣೆಯೇ ಪ್ರಮುಖ ಕಾರಣವಾಗಿರಬಹುದು. ಸಂಶೋಧನೆಯ ಪ್ರಕಾರ, ಹೂಗೊಂಚಲು ಅರಳುವ ಹಂತದಲ್ಲಿ ಎಣ್ಣೆ ಸಿಂಪಡಣೆ ಪರಾಗಸ್ಪರ್ಶವನ್ನು ಸಂಪೂರ್ಣವಾಗಿ ತಡೆದು ಇಳುವರಿ ಕುಸಿತಕ್ಕೆ ಕಾರಣವಾಗುತ್ತಿದೆ. ಹೀಗಾಗಿ ಈ ಹಂತದಲ್ಲಿ ಎಣ್ಣೆ ಆಧಾರಿತ ಕೀಟನಾಶಕ ಬಳಕೆಯನ್ನು ತಪ್ಪಿಸುವುದು ಅತ್ಯವಶ್ಯ.

ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ಅಡಿಕೆ ಬೆಳೆಗಾರರು ಕಳೆದ ಹಲವು ವರ್ಷಗಳಿಂದ ಇಳುವರಿಯಲ್ಲಿ ಭಾರಿ ಕುಸಿತವನ್ನು ಅನುಭವಿಸುತ್ತಿದ್ದಾರೆ. ಹೂ ಗೊಂಚಲು (ಸಿಂಗಾರ)ಗಳು ಸಮೃದ್ಧವಾಗಿ ಅರಳಿದರೂ, ಕಾಯಿ ಕಟ್ಟದೆ ಒಣಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ವೈಜ್ಞಾನಿಕ ಕಾರಣಗಳನ್ನು ಹುಡುಕುತ್ತಾ ಹೋದಾಗ ‘ಇಂಡಿಯನ್ ಜರ್ನಲ್ ಆಫ್ ಅರೆಕಾನಟ್, ಸ್ಪೈಸಸ್ ಮತ್ತು ಮೆಡಿಸಿನಲ್ ಪ್ಲಾಂಟ್ಸ್‘ (2000, ಸಂಚಿಕೆ 2:1) ಪತ್ರಿಕೆಯಲ್ಲಿ ಪ್ರಕಟವಾದ ಸಂಶೋಧನಾ ವರದಿಯು ಬೆಚ್ಚಿಬೀಳಿಸುವ ಸತ್ಯವೊಂದನ್ನು ಹೊರಹಾಕಿರುವುದು ಗಮನಕ್ಕೆ ಬಂದಿದೆ.
ಅದೇನೆಂದರೆ, ರೈತರು ಕೀಟಬಾಧೆ ತಡೆಯಲು ಬಳಸುವ ಬೇವಿನ ಎಣ್ಣೆಯೇ ಅಡಿಕೆಯ ಇಳುವರಿಗೆ ಮಾರಕವಾಗಿದೆ!

ಸಂಶೋಧನೆಯ ಹಿನ್ನೆಲೆ ಮತ್ತು ಪ್ರಯೋಗ : 1997 ರಿಂದ 2000ರ ಅವಧಿಯಲ್ಲಿ ಅಡಿಕೆ ತೋಟಗಳಲ್ಲಿ ಕಾಣಿಸಿಕೊಂಡ ‘ಕಜ್ಜಿ ಕೀಟ’ (Scale insects) ಮತ್ತು ‘ಹಿಟ್ಟು ತಿಗಣೆ’ (Mealy bugs) ಬಾಧೆಯನ್ನು ನಿಯಂತ್ರಿಸಲು ರೈತರು ಬೇವಿನ ಎಣ್ಣೆಯನ್ನು ನೇರವಾಗಿ ಹೂಗೊಂಚಲುಗಳಿಗೆ ಸಿಂಪಡಿಸುತ್ತಿದ್ದರು. ಇದರ ಪರಿಣಾಮವನ್ನು ತಿಳಿಯಲು ಸಿ.ಪಿ.ಸಿ.ಆರ್.ಐ (CPCRI) ವಿಟ್ಲ ಕೇಂದ್ರದಲ್ಲಿ ಮೂರು ವಿಧದ ದ್ರವಗಳನ್ನು ಪರೀಕ್ಷಿಸಲಾಯಿತು:

  • ನೀಮಾಜಲ್ (Neemazal – 10,000 ppm ಅಜಾಡಿರಾಕ್ಟಿನ್)
  •  ಸಾಮಾನ್ಯ ಬೇವಿನ ಎಣ್ಣೆ ಮಿಶ್ರಣ
  •  ಗೇರುಬೀಜದ ಸಿಪ್ಪೆಯ ಎಣ್ಣೆ

ಈ ದ್ರವಗಳನ್ನು 0.02% ರಿಂದ 6% ವರೆಗಿನ ವಿವಿಧ ಸಾಂದ್ರತೆಗಳಲ್ಲಿ ಪರಾಗದ ಮೊಳಕೆಯೊಡೆಯುವಿಕೆಯ ಮೇಲೆ ಪ್ರಯೋಗಿಸಲಾಯಿತು.

ಘಾತಕ ಫಲಿತಾಂಶಗಳು :  ಪ್ರಯೋಗಾಲಯದ ವರದಿಯ ಪ್ರಕಾರ, ಬೇವಿನ ಎಣ್ಣೆ ಅಥವಾ ಗೇರುಬೀಜದ ಸಿಪ್ಪೆಯ ಎಣ್ಣೆಯ ಅಲ್ಪ ಸಂಪರ್ಕಕ್ಕೆ ಬಂದ ಪರಾಗದ ಕಣಗಳು 24 ಗಂಟೆಗಳ ನಂತರವೂ ಮೊಳಕೆಯೊಡೆಯಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಯಾವುದೇ ಎಣ್ಣೆ ಇರದ ಮಾಧ್ಯಮದಲ್ಲಿ ಶೇ. 51.93 ರಷ್ಟು ಪರಾಗಗಳು ಕೇವಲ 4 ಗಂಟೆಗಳಲ್ಲಿ ಮೊಳಕೆಯೊಡೆದವು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಇಳುವರಿ ಕುಂಠಿತವಾಗಲು ಪ್ರಮುಖ ಕಾರಣಗಳು: 

  • ನೈಸರ್ಗಿಕ ಪರಾಗಸ್ಪರ್ಶಕ್ಕೆ ಅಡ್ಡಿ: ಅಡಿಕೆಯು ಗಾಳಿಯ ಮೂಲಕ ಪರಾಗಸ್ಪರ್ಶವಾಗುವ ಬೆಳೆ. ಬೇವಿನ ಎಣ್ಣೆಯು ಗಂಡು ಹೂವುಗಳು ಅರಳದಂತೆ ಮಾಡುತ್ತದೆ ಅಥವಾ ಅವು ಬೇಗನೆ ಒಣಗುವಂತೆ ಮಾಡುತ್ತದೆ.
  • ಕೃತಕ ಹರ್ಕೋಗಾಮಿ (Artificial Herkogamy): ಎಣ್ಣೆಯ ಜಿಗುಟಾದ ಪದರವು ಹೆಣ್ಣು ಹೂವುಗಳ ಮೇಲೆ ತಡೆಗೋಡೆಯನ್ನು ನಿರ್ಮಿಸಿ, ಪರಾಗವು ಗರ್ಭವನ್ನು ತಲುಪದಂತೆ ಮಾಡುತ್ತದೆ.
  • ರೋಗದ ಉಲ್ಬಣ: ಎಣ್ಣೆ ಸಿಂಪಡಿಸಿದ ಹೂಗೊಂಚಲುಗಳಲ್ಲಿ ‘ಹೂಗೊಂಚಲು ಒಣಗುವ ರೋಗ’ (Inflorescence die-back/Colletotrichum infection) ಕೇವಲ 15 ದಿನಗಳಲ್ಲಿ ಇಡೀ ಗೊಂಚಲನ್ನು ನಾಶಪಡಿಸುತ್ತದೆ.
  • ಶಾಖದ ಪರಿಣಾಮ: ಸಸ್ಯಜನ್ಯ ತೈಲಗಳು ಸೂರ್ಯನ ಶಾಖವನ್ನು ಹೀರಿಕೊಂಡು ತಾಪಮಾನವನ್ನು ಹೆಚ್ಚಿಸುತ್ತವೆ, ಇದರಿಂದ ಎಳೆಯ ಅಡಿಕೆಗಳು (Buttons) ತಕ್ಷಣ ಉದುರಿಹೋಗುತ್ತವೆ.

ಬೆಳೆಗಾರರಿಗೆ ಸಲಹೆ : ಬೇವಿನ ಉತ್ಪನ್ನಗಳು ಸುರಕ್ಷಿತ ಎಂಬುದು ಕೀಟಗಳ ವಿಷಯದಲ್ಲಿ ನಿಜವಿರಬಹುದು, ಆದರೆ, ಅಡಿಕೆಯ ಪರಾಗಸ್ಪರ್ಶದ ವಿಷಯದಲ್ಲಿ ಅವು ವಿಷಕಾರಿಯಾಗಿವೆ. ರೈತರು ಅಡಿಕೆ ಹೂಗೊಂಚಲು (ಸಿಂಗಾರ) ಅರಳುವ ಸಮಯದಲ್ಲಿ (Spathe opening stage) ಯಾವುದೇ ಕಾರಣಕ್ಕೂ ಎಣ್ಣೆ ಆಧಾರಿತ ಕೀಟನಾಶಕಗಳನ್ನು ಸಿಂಪಡಿಸಬಾರದು.

ವೈಜ್ಞಾನಿಕವಾಗಿ ಶಿಫಾರಸು ಮಾಡದ ಇಂತಹ ಕ್ರಮಗಳು ಇಡೀ ವರ್ಷದ ಇಳುವರಿಯನ್ನು ಶೂನ್ಯಕ್ಕೆ ತರಬಲ್ಲವು. ತೋಟದಲ್ಲಿ ಕಜ್ಜಿ ಕೀಟ/ಶಿಲೀಂದ್ರದ ಬಾಧೆ ಕಂಡರೆ ಹೂಗೊಂಚಲಿಗೆ ಹಾನಿಯಾಗದ ಪರ್ಯಾಯ ಕ್ರಮಗಳಿಗಾಗಿ ತಜ್ಞರನ್ನು ಸಂಪರ್ಕಿಸುವುದು ಸೂಕ್ತ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಎತ್ತುಗಳಿಂದ ಡ್ರೋನ್‌ವರೆಗೆ… ಇದು ಭಾರತದ ಕೃಷಿಯ 79 ವರ್ಷಗಳ ಪಯಣ..!
August 15, 2026
7:42 AM
by: ದ ರೂರಲ್ ಮಿರರ್.ಕಾಂ
ತೀವ್ರ ವಿರೋಧದ ಹಿನ್ನೆಲೆ – ರಾಜ್ಯದಲ್ಲಿ ಗುಟ್ಕಾ ನಿಷೇಧ ಹಿಂತೆಗೆದುಕೊಳ್ಳಲು ಸರ್ಕಾರ ನಿರ್ಧಾರ – ಹೊರಬೀಳದ ಅಧಿಕೃತ ಆದೇಶ..!
August 15, 2026
7:18 AM
by: ದ ರೂರಲ್ ಮಿರರ್.ಕಾಂ
ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?
August 14, 2026
7:14 AM
by: ಮಹೇಶ್ ಪುಚ್ಚಪ್ಪಾಡಿ
ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ
August 13, 2026
2:01 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror