Advertisement
MIRROR FOCUS

ದೀಪಾವಳಿ ಬಳಿಕ ಚುರುಕಾಯ್ತು ಅಡಿಕೆ ಮಾರುಕಟ್ಟೆ | ಚಾಲಿ ಅಡಿಕೆ ಈಗ ಹೇಗಿದೆ..? ಏನಾದೀತು ಈ ಬಾರಿಯ ಅಡಿಕೆ ಧಾರಣೆ..?

Share

ದೀಪಾವಳಿ ಬಳಿಕ ಅಡಿಕೆ ಮಾರುಕಟ್ಟೆಯಲ್ಲಿ ಪ್ರತೀ ವರ್ಷದಂತೆಯೇ ಸಂಚಲನ ಆರಂಭವಾಗಿದೆ. ಹೊಸ ಅಡಿಕೆಯ ಆವಕ-ಹಳೆ ಅಡಿಕೆಯ ಟ್ರೆಂಡ್- ಚೋಲ್-ಡಬಲ್‌ ಚೋಲ್‌ ಅಡಿಕೆಯ ಸದ್ದು ಜೋರಾಗುತ್ತಿದೆ. ಈ ಬಾರಿ ಅಡಿಕೆ ಮಾರುಕಟ್ಟೆಯಲ್ಲಿ ಆಶಾದಾಯಕ ವಾತಾವರಣ ಇದೆ.…..ಮುಂದೆ ಓದಿ….

ಹೊಸ ಅಡಿಕೆ ಮಾರುಕಟ್ಟೆ ಪ್ರವೇಶ ಮಾಡುತ್ತಿದೆ. ಆರಂಭದಲ್ಲಿ ಈ ಬಾರಿ ಹೊಸ ಅಡಿಕೆಯ ಧಾರಣೆ  330-340 ರೂಪಾಯಿ ನಿಗದಿಯಾಗಿದ್ದು ಕ್ಯಾಂಪ್ಕೋ 330 ರೂಪಾಯಿ ದರ ನಿಗದಿ ಮಾಡಿದೆ. ಇದೇ ವೇಳೆ ಚೋಲ್‌ ಅಡಿಕೆ ಧಾರಣೆಯು 420-425 ರೂಪಾಯಿವರೆಗೆ  ಇದ್ದು, ಡಬಲ್‌ ಚೋಲ್‌ ಅಡಿಕೆ 500-505 ರೂಪಾಯಿವರೆಗೆ ತಲಪಿದೆ.

ಈ ಬಾರಿ ಆರಂಭದಲ್ಲಿಯೇ ಹೊಸ ಅಡಿಕೆ ಧಾರಣೆ ನಿರೀಕ್ಷೆಯಂತೆಯೇ ಉತ್ತಮ ದರಕ್ಕೆ ನಿಗದಿಯಾಗಿದೆ. ಹೀಗಾಗಿ ಮುಂದಿನ ಒಂದೆರಡು ತಿಂಗಳಲ್ಲಿ 360-370 ರೂಪಾಯಿಗೆ ಏರಿಕೆಯಾಗುವ ನಿರೀಕ್ಷೆ ಇದೆ. ಚೋಲ್‌ ಅಡಿಕೆ ಮಾರುಕಟ್ಟೆ ಪ್ರವೇಶ ಕಡಿಮೆಯಾಗಲು ಆರಂಭವಾಗಿದೆ. ಹೀಗಾಗಿ ಧಾರಣೆ ಏರಿಕೆ ನಿರೀಕ್ಷೆ ಮಾಡಲಾಗಿದೆ. ಡಿಸೆಂಬರ್‌ ನಂತರ ಹೊಸ ಅಡಿಕೆ ಧಾರಣೆಯೂ ಏರಿಕೆಯಾಗುತ್ತದೆ. ಈ ನಡುವೆ ಕೆಂಪಡಿಕೆ ಮಾರುಕಟ್ಟೆಯೂ ಈಗ ಚೇತರಿಕೆ ಕಾಣುತ್ತಿದೆ.

ಈ ಬಾರಿ ಅಡಿಕೆ ಬೆಳೆಯೇ ಶೇ.50 ರಷ್ಟು ಕಡಿಮೆಯಾಗಿದೆ. ಬೇಸಗೆಯಲ್ಲಿ ತಾಪಮಾನದ ಕಾರಣದಿಂದ ಎಳೆ ಅಡಿಕೆ ವಿಪರೀತವಾಗಿ  ಉದುರಿದೆ. ಈ ಬಾರಿ ಮಳೆ ಬಂದ ಬಳಿಕವೂ ಹಲವು ಕಡೆ ಎಳೆ ಅಡಿಕೆ ಬಿದ್ದು ಹೋಗಿದೆ. ಮಳೆ ಆರಂಭವಾದ ಬಳಿಕ ವಿಪರೀತವಾಗಿ ಸುರಿದ ಕಾರಣ ಕೊಳೆರೋಗವೂ ಹಲವು ಕಡೆ ಬಾಧಿಸಿದೆ. ಈ ಎಲ್ಲಾ ಕಾರಣದಿಂದ ಇಳುವರಿ ಕಡಿಮೆಯಾಗಿದೆ. ಈ ಕಾರಣದಿಂದ ಮಾರುಕಟ್ಟೆಗೆ ಅಡಿಕೆ ಬರುವುದು ಈ ಬಾರಿ ಕಡಿಮೆಯಾಗಲಿದೆ.  ಕಳೆದ ಬಾರಿಯ ಹಳೆ ಅಡಿಕೆ ಇರಬಹುದು ಎನ್ನುವ ಯೋಚನೆಯೂ ತಪ್ಪಾಗಿದೆ. ಎರಡು ವರ್ಷಗಳಿಂದ ಅಡಿಕೆ ಧಾರಣೆ ಉತ್ತಮವಾಗಿತ್ತು. ಕಳೆದ ವರ್ಷದ ಅಡಿಕೆ ಧಾರಣೆ ನಿರೀಕ್ಷೆಯಂತೆ ಏರಿಕೆ ಕಂಡಿಲ್ಲ. ಹೀಗಾಗಿ ಮಾರುಕಟ್ಟೆಗೆ ಹೆಚ್ಚು ಅಡಿಕೆ ಪ್ರವೇಶ ಕಂಡಿದೆ. ಕೆಲವು ಅಡಿಕೆ ಬೆಳೆಗಾರರಲ್ಲಿ ಮಾತ್ರವೇ ಅಡಿಕೆ ದಾಸ್ತಾನು ಇದೆಯಷ್ಟೆ ಬಿಟ್ಟರೆ, ಸಾಮಾನ್ಯ ಕೃಷಿಕರಲ್ಲಿ ಹಳೆ ಅಡಿಕೆ ದಾಸ್ತಾನು ಸೀಮಿತವಾಗಿದೆ.  ಹೀಗಾಗಿ ಈ ಬಾರಿ ಹೊಸ ಅಡಿಕೆ ಧಾರಣೆ ಉತ್ತಮವಾಗಲಿದೆ. ಬೇಡಿಕೆಯಷ್ಟು ಪೂರೈಕೆಯಾಗುವುದು ಈ ಬಾರಿ ಸಂಶಯ. ಈ ಕಾರಣದಿಂದಲೇ ಈಗ ಅಡಿಕೆ ಅಕ್ರಮ ಆಮದು ಚಟುವಟಿಕೆ ಈಗಲೇ ಆರಂಭಗೊಂಡಿದೆ. ಅಡಿಕೆ ಆಮದು ತಡೆಗೆ ಈಗಲೇ ಸೂಕ್ತವಾದ ಕ್ರಮಗಳನ್ನು ಕೈಗೊಂಡರೆ ಅಡಿಕೆ ಧಾರಣೆ ಏರಿಕೆ ನಿಶ್ಚಿತವಾಗಿಯೂ ಬೆಳೆಗಾರರಿಗೆ ಪ್ರಯೋಜನವಾಗಲಿದೆ.

ಬಾಂಗ್ಲಾದೇಶದಿಂದ ಅಕ್ರಮವಾಗಿ ಅಡಿಕೆ ಸಾಗಾಣೆ ನಡೆಯುದನ್ನು ತಡೆಯಬೇಕು ಎಂದು ಮೇಘಾಲಯದ ಅಡಿಕೆ ಬೆಳೆಗಾರರು ಕೂಡಾ ಒತ್ತಾಯಿಸಿದ್ದಾರೆ. ಅಡಿಕೆ, ಗೋಡಂಬಿ, ಕರಿಮೆಣಸು ಮತ್ತು ರಬ್ಬರ್  ಪ್ರಧಾನ ಬೆಳೆಗಳೊಂದಿಗೆ ಮೇಘಾಲಯದ ಹಲವು ಕಡೆ ಹಳ್ಳಿಗರು ಕೃಷಿ ಮತ್ತು ತೋಟಗಾರಿಕೆಯನ್ನು ತಮ್ಮ ಪ್ರಾಥಮಿಕ ಆದಾಯದ ಮೂಲವಾಗಿ ಅವಲಂಬಿಸಿದ್ದಾರೆ. ಹೀಗಾಗಿ ಅಡಿಕೆ ಅಕ್ರಮ ಆಮದು ಅಲ್ಲೂ ಸಮಸ್ಯೆಯಾಗುತ್ತಿದೆ. ಹೀಗಾಗಿ ಈ ಬಾರಿ ಅಡಿಕೆ ಆಮದು ತಡೆಗೆ ಈಶಾನ್ಯ ರಾಜ್ಯದ ಕೃಷಿಕರೂ ಒತ್ತಾಯ ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ರಾಜ್ಯದಿಂದ ಅಡಿಕೆ ಆಮದು ಸ್ಥಗಿತಕ್ಕೆ ಒತ್ತಡವಾದರೆ ಅಡಿಕೆ ಬೆಳೆಗಾರರಿಗೆ ಈ ಬಾರಿ ಉತ್ತಮ ಧಾರಣೆಯ ನಿರೀಕ್ಷೆ ಇದೆ. ಆದರೆ ಈಗಾಗಲೇ ಬೆಳೆ ವಿಸ್ತರಣೆಯಾಗಿರುವ ಹಿನ್ನೆಲೆಯಲ್ಲಿ ಈ ಧಾರಣೆ ಮುಂದಿನ ಕೆಲವು ವರ್ಷಗಳಲ್ಲೂ ಇರುವ ಸಾಧ್ಯತೆ ಕಡಿಮೆ ಇದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

ಬೇಸಿಗೆಯಲ್ಲಿ ನಿಮ್ಮ ಕಿಡ್ನಿಯನ್ನು ಕಾಪಾಡಿ..! ಮೂತ್ರಪಿಂಡದ ಕಲ್ಲು ಸಮಸ್ಯೆ ಏಕೆ ಹೆಚ್ಚುತ್ತಿದೆ?

ಬೇಸಿಗೆಯಲ್ಲಿ ದೇಹದಲ್ಲಿ ನೀರಿನಾಂಶ ಕಡಿಮೆಯಾಗುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.…

1 day ago

ಮಳೆಗಾಲ ಆರಂಭ- ಜೂನ್‌ 1ರಿಂದ ರಸ್ತೆ, ಗುಡ್ಡ, ಮಣ್ಣು ಅಗೆತ ಕಾಮಗಾರಿಗೆ ನಿರ್ಬಂಧ – ನಗರಪಾಲಿಕೆ ಎಚ್ಚರಿಕೆ

ಮಂಗಳೂರು ನಗರದಲ್ಲಿ ಮಳೆಗಾಲದ ಹಿನ್ನೆಲೆ ಜೂನ್‌ 1ರಿಂದ ಸೆಪ್ಟೆಂಬರ್‌ 30ರವರೆಗೆ ರಸ್ತೆ, ಗುಡ್ಡ…

1 day ago

ಅಸ್ಸಾಂನಲ್ಲಿ ಭಾರೀ ಅಕ್ರಮ ಅಡಿಕೆ ವಶ : ಡಿಆರ್‌ಐ ದಾಳಿ, 60 ಸಾವಿರ ಕೆಜಿ ವಿದೇಶಿ ಅಡಿಕೆ ಜಪ್ತಿ

ಈಶಾನ್ಯ ಭಾರತದಲ್ಲಿ ಡಿಆರ್‌ಐ ನಡೆಸಿದ ದಾಳಿಯಲ್ಲಿ ಸುಮಾರು 60 ಸಾವಿರ ಕೆಜಿ ಅಕ್ರಮ…

2 days ago

“ಒಂದು ದಿನ ಅಡಿಕೆ ಮಾರುಕಟ್ಟೆಗೆ ‘ಏಲಿಯನ್ಸ್’ ಬಂದರೆ?” ರೈತನ ಭವಿಷ್ಯದ ಬಗ್ಗೆ ಎಚ್ಚರಿಸುವ ಕಲ್ಪಿತ ಕಥೆ

ಅಡಿಕೆ ಮಾರುಕಟ್ಟೆಗೆ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ಬಂದರೆ ರೈತರಿಗೆ ಆರಂಭದಲ್ಲಿ ಲಾಭದ ಅನುಭವ…

3 days ago

“ಕಾಕ್ರೋಚ್‌ ಜನತಾ ಪಾರ್ಟಿ”ಗೆ ಹೊಸ ಎದುರಾಳಿ..! ವೈರಲ್‌ ಆಗುತ್ತಿದೆ “ನ್ಯಾಷನಲ್‌ ಪ್ಯಾರಾಸಿಟಿಕ್‌ ಫ್ರಂಟ್‌”

“ಕಾಕ್‌ರೋಚ್‌ ಜನತಾ ಪಾರ್ಟಿ” ಬಳಿಕ ಇದೀಗ “ನ್ಯಾಷನಲ್‌ ಪ್ಯಾರಾಸಿಟಿಕ್‌ ಫ್ರಂಟ್‌” ಎಂಬ ಹೊಸ…

3 days ago