Advertisement
MIRROR FOCUS

ಬೆಟ್ಟದಲ್ಲಿ ಹಾರಿದ ತಿರಂಗಾ | ಸಮುದ್ರ ಮಟ್ಟದಿಂದ 2250 ಅಡಿ ಎತ್ತರದಲ್ಲಿ ಹಾರಾಡಿದ ರಾಷ್ಟ್ರಧ್ವಜ | ಪರಿಸರದ ನಡುವೆ ಕೇಳಿತು ಜನಗಣಮನ… |

Share

ಇಡೀ ದೇಶದಲ್ಲಿ ಅಮೃತ ಮಹೋತ್ಸವದ ಸ್ವಾತಂತ್ರ್ಯ ಸಂಭ್ರಮ ಮುಗಿಯಿತು. ಇಡೀ ವರ್ಷ ಈ ಆಚರಣೆ ನಡೆಯುತ್ತದೆ. ವಿವಿಧ ಕಡೆ ಹೆಮ್ಮೆಯಿಂದ, ಸಡಗರದಿಂದ ಈ ಆಚರಣೆ ನಡೆಯಿತು. ಸುಳ್ಯದ ಸಂಪಾಜೆಯ ನಾಟೆಕಲ್ಲು ಗುಡ್ಡದ ಮೇಲೆಯೂ ರಾಷ್ಟ್ರಧ್ವಜ ಹಾರಾಡಿತು. ಸಮುದ್ರ ಮಟ್ಟದಿಂದ 2250 ಅಡಿ ಎತ್ತರ ಇರುವ ಈ ಬೆಟ್ಟದಲ್ಲಿ ಜನಗಣಮನ ಕೇಳಿತು.ಸುಂದರ ಪರಿಸರದಲ್ಲಿ ಕೇಳಿದ ರಾಷ್ಟ್ರಗೀತೆ ಎಲ್ಲೆಡೆಯೂ ಮಾರ್ಧನಿಸಿತು. 

ಸುಳ್ಯದ ಸಂಪಾಜೆ ಬಳಿಯ ಲೈನ್ಕಜೆಯ ಹತ್ತಿರದ ನಾಟೆಕಲ್ಲು ಗುಡ್ಡದ ಮೇಲೆ ಅಂದರೆ ಸಮುದ್ರ ಮಟ್ಟದಿಂದ 2250 ಅಡಿ ಎತ್ತರದಲ್ಲಿ ಚಾರಣದ ಮೂಲಕ ತೆರಳಿದ ತಂಡ ಸ್ವಾತಂತ್ರೋತ್ಸವವನ್ನು ಆಚರಣೆ ಮಾಡಿತು. ಸುತ್ತಲೂ ಸುಂದರ ಪರಿಸರ, ಈ ಪರಿಸರದ ನಡುವೆ ರಾಷ್ಟ್ರಧ್ವಜ ಹಾರಾಡಿದ್ದು ಹೆಮ್ಮೆಯಾಗಿ ಕಂಡಿತು. ಈ ಸುಂದರ ಪರಿಸರದಲ್ಲಿ ಹಕ್ಕಿ ಕಲರವ, ಜೀರುಂಡೆಗಳ ಸದ್ದು, ಗಾಳಿಯ ಸದ್ದಿನ ನಡುವೆ ಕೇಳಿದ ರಾಷ್ಟ್ರಗೀತೆ ಬೆಟ್ಟಗಳ ನಡುವೆ ಮಾರ್ಧನಿಸಿತು.

ಸಂಪಾಜೆಯ ಲೈನ್ಕಜೆ ಮನೆಯವರು ಹಾಗೂ ಯುವಕರ ತಂಡ ಈ ಸಾಹಸ ಯಾತ್ರೆ ಮಾಡಿದೆ. ಸಂಪಾಜೆಯಿಂದ ಮುಂದೆ ಅತ್ಯಂತ ಪ್ರಸಿದ್ಧವಾ ಅರೆಕಲ್ಲು ಮೂಲಕವಾಗಿ ಈ ನಾಟೆಕಲ್ಲು ಬೆಟ್ಟಕ್ಕೆ ತೆರಳಬೇಕಾಗುತ್ತದೆ. ಹರಿದ್ವರ್ಣ ಕಾಡಿನ ನಡುವೆ ಈ ಜಾಗ ಇದೆ.  ಅತ್ಯಂತ ಸುಂದರವಾದ ಜಾಗ ಇದಾಗಿದ್ದು ಬೆಟ್ಟ ಕೆಳಭಾಗ ಕೆಲವು ಮನೆಗಳೂ ಇದೆ. ಬೆಟ್ಟದಲ್ಲಿ ಕಡವೆ, ಕಾಡಕೋಣ, ಹುಲಿ, ಚಿರತೆ, ಆನೆಗಳು ಆಗಾಗ ಓಡಾಡುತ್ತವೆ. ಬೆಟ್ಟದ ಮೇಲ್ಭಾಗದಲ್ಲೂ ವರ್ಷದ ಎಲ್ಲಾ ದಿನವೂ ನೀರು ಇರುತ್ತದೆ. ಏರುವ ದಾರಿ ಅತ್ಯಂತ ಕಠಿಣವಾಗಿದೆ. ಜಿಗಣೆ ಕಾಟ ಇದೆ. ಬೆಟ್ಟ ಏರುವುದೇ ತ್ರಾಸದಾಯಕ. ಚಾರಣದ ಪ್ರದೇಶ ಇದು. ಲೈನ್ಕಜೆಯಿಂದ ಸುಮಾರು ಎರಡು ಗಂಟೆಯ ನಡಿಗೆ ಇದೆ. ಕಲ್ಲುಗಳು, ಮರಗಳ ನಡುವೆ ಏರುತ್ತಾ ಸಾಗಬೇಕಿದೆ. ಬೆಟ್ಟದ ತುದಿ ತಲುಪಿದ ಬಳಿಕ ಮನೋಹರವಾದ ಜಾಗ ಕಾಣುತ್ತದೆ. ಸುತ್ತಲೂ ಹಸಿರಿನಿಂದ ಕೂಡಿದ ಪ್ರದೇಶ. ಹೀಗಾಗಿ ಮನಸ್ಸು ಉಲ್ಲಾಸವಾಗುತ್ತದೆ.  ಸುಂದರವಾದ ಈ ಬೆಟ್ಟಕ್ಕೆ ಪ್ರತೀ ಸಲ ಚಾರಣಕ್ಕೆ ಲೈನ್ಕಜೆ ರಾಮಚಂದ್ರ ಹಾಗೂ ಮನೆಯವರು ಹೋಗುತ್ತಾರೆ. ಲೈನ್ಕಜೆ ಮನೆಯವರು ಈ ಬಾರು ಬೆಟ್ಟ ಹತ್ತಿ ಸ್ವಾತಂತ್ರ್ಯ ದಿನಾಚರಣೆ ಮಾಡಿದ್ದಾರೆ. ಈ ತಂಡದಲ್ಲಿ ಆದಿತ್ಯ ಲೈನ್ಕಜೆ, ಅರ್ಜುನ ಲೈನ್ಕಜೆ, ಅವಿನಾಶ್ ಲೈನ್ಕಜೆ, ರವಿ ಎಲಿಕ್ಕಳ, ಸಂದೀಪ್ ಎಲಿಕ್ಕಳ, ವಿಜೇತ ಪೆರುಂಬಾರು, ವಿಷ್ಣು ಕಾರ್ಮಾರು ಇದ್ದರು. ಲೈನ್ಕಜೆ ರಾಮಚಂದ್ರ ಅವರ ಪುತ್ರ ಭಾರತೀಯ ಸೇನೆಯಲ್ಲಿ ಮೇಜರ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಎಚ್ಚರಿಕೆ ಇದೆ...
ಈ ಬೆಟ್ಟ ಸುಂದರವಾಗಿರುವುದರಿಂದ ಹಾಗೂ ಕೆಲವರು ಚಾರಣಕ್ಕೆ ಆಗಮಿಸುತ್ತಾರೆ. ಆದರೆ ಪ್ಲಾಸ್ಟಿಕ್‌ ಬಳಕೆ, ಪ್ಲಾಸ್ಟಿಕ್‌ ಬಾಟಲಿ ಎಸೆಯುವುದು ಇತ್ಯಾದಿಗಳು ಕಂಡರೆ ಸ್ಥಳೀಯರೇ ಗಮನಿಸಿ ಎಚ್ಚರಿಸುತ್ತಾರೆ. ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್‌, ತ್ಯಾಜ್ಯಗಳು ಬೆಟ್ಟದ ಮೇಲೆ ಹೋಗದಂತೆ ತಡೆಯನ್ನೂ ಮಾಡುತ್ತಾರೆ. ಮಳೆಗಾಲ ಈ ಬೆಟ್ಟದ ಕಡೆಗೆ ಪಯಣ ಕಷ್ಟವಾಗಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹಿಂದೂ ಮಹಾಸಾಗರದ ಹವಾಮಾನದಲ್ಲಿ ಹಠಾತ್ ಬದಲಾವಣೆ – ಮತ್ತೆ ಮಹಾಮಳೆಗೆ ಕಾರಣವಾಗುತ್ತಿದೆಯೇ?

ಹಿಂದೂ ಮಹಾಸಾಗರದ ಹವಾಮಾನ ಬದಲಾವಣೆ ಹಾಗೂ ಸಕಾರಾತ್ಮಕ IOD ಪರಿಣಾಮದಿಂದ ಕರ್ನಾಟಕದಲ್ಲಿ ಮುಂಗಾರು…

3 hours ago

ರಾಜ್ಯದಲ್ಲಿ ಭಾರೀ ಮಳೆ ಆರ್ಭಟ – ಕೆಲವು ಜಿಲ್ಲೆಗಳಲ್ಲಿ ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ರಾಜ್ಯದ ಹಲವೆಡೆ ಭಾರೀ ಮಳೆಯ ಹಿನ್ನೆಲೆಯಲ್ಲಿ ಕೆಲವು ಜಿಲ್ಲೆಗಳಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.…

8 hours ago

ಆಹಾರ-ನಿದ್ರೆ ಪರಸ್ಪರ ಪೂರಕ; ಉತ್ತಮ ನಿದ್ರೆಗೆ ಹಸಿವು ಅಗತ್ಯ: ರಾಘವೇಶ್ವರ ಶ್ರೀ

ಉತ್ತಮ ಆರೋಗ್ಯಕ್ಕೆ ಸರಿಯಾದ ಆಹಾರ ಮತ್ತು ನಿದ್ರೆ ಎರಡೂ ಅವಿಭಾಜ್ಯ ಎಂದು ಶ್ರೀ…

18 hours ago

ಕೃಷಿಕರ ಮಿತ್ರ ಸಾಯಿಶೇಖರ್‌ ಕರಿಕಳ ಅವರಿಗೆ ರೈತ ರತ್ನ ಪ್ರಶಸ್ತಿ

ಮಳೆ ಮಾಹಿತಿ ಮೂಲಕ ಕೃಷಿಕರಿಗೆ ನೆರವಾಗುತ್ತಿರುವ ಸಾಯಿಶೇಖರ್‌ ಕರಿಕಳ ಅವರಿಗೆ ರೈತ ರತ್ನ…

18 hours ago

ಮಂಗಳೂರಿನಲ್ಲಿ ರಾಷ್ಟ್ರೀಯ ಚೆಸ್ ಚಾಂಪಿಯನ್ ಶಿಪ್‌ಗೆ ಚಾಲನೆ – 28 ರಾಜ್ಯ–ಕೇಂದ್ರಾಡಳಿತ ಪ್ರದೇಶಗಳಿಂದ 644 ಬಾಲಕಿ-ಬಾಲಕಿಯರು

ಮಂಗಳೂರಿನಲ್ಲಿ ರಾಷ್ಟ್ರೀಯ ಅಂಡರ್‌-11 ಚೆಸ್ ಚಾಂಪಿಯನ್ಶಿಪ್‌ಗೆ ಭವ್ಯ ಚಾಲನೆ ದೊರೆತಿದ್ದು, ದೇಶದ 28…

19 hours ago

ಹವಾಮಾನ ವರದಿ | 02-08-2026 | ಕರಾವಳಿಯಲ್ಲಿ ಮಳೆ ಇಳಿಮುಖ ..? ರಾಜ್ಯದಲ್ಲಿ ಮುಂಗಾರು ಸ್ಥಿತಿ ಏನು..?

ರಾಜ್ಯದ ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆಯ ತೀವ್ರತೆ ಇಳಿಮುಖವಾಗಲಿದ್ದು, ಆಗಸ್ಟ್‌ 3ರಿಂದ ತೋಟದ…

20 hours ago