Advertisement
MIRROR FOCUS

ಜಾನುವಾರು ಮಾರಾಟಕ್ಕೆ ನಿಂತ ಬೆಂಗಳೂರಿನ ಗೆಳತಿಯರು | ನಾಲ್ಕೇ ವರ್ಷದಲ್ಲಿ ವಾರ್ಷಿಕ 550 ಕೋಟಿ ವಹಿವಾಟು ..! | ಹಿಂದಿನ ಕುಲ್ಕುಂದ ಜಾತ್ರೆಯ ವೈಭವ ಮೀರಿಸಿದ ನಾರಿಮಣೀಯರು ಯಾರು…? |

Share

ಸುಬ್ರಹ್ಮಣ್ಯ(Subrahmanya) ಕುಲ್ಕುಂದ ಜಾತ್ರೆ(Kulkunda jatre) ಅಂದ್ರೆ ಅದು ಜಾನುವಾರು ವ್ಯಾಪಾರ ಮೇಳ(Cattle Fair). ಇಲ್ಲಿ ಜಾನುವಾರುಗಳ ಕೊಡು-ಕೊಳ್ಳುವಿಕೆ ಹಿಂದಿನ ಕಾಲದಿಂದಲೂ ಭಾರಿ ಜೋರಾಗೆ ನಡೆಯುತ್ತಿತ್ತು. ಕಾಲಾನಂತರ ಈ ವ್ಯಾಪಾರ ಸ್ಥಗಿತಗೊಂಡಿತು. ಆದರೆ ಅಂತಹದ್ದೇ ಮಾದರಿಯಲ್ಲಿ ಜಾನುವಾರು ವ್ಯಾಪಾರವನ್ನು(Business) ಯಾವುದೇ ಜಾತ್ರೆ ಮಾಡದೇ ಕೇವಲ ಡಿಜಿಟಲ್‌(Digital) ಮೂಲಕ ನಡೆದಿದೆ. ಈ ವ್ಯಾಪಾರಕ್ಕೆ ಕೈ ಹಾಕಿದವರು ಬೆಂಗಳೂರು(Bengaluru) ಮೂಲದ  ಇಬ್ಬರು ಹುಡುಗಿಯರು(Girls) ಅನ್ನೋದೆ ವಿಶೇಷ. ಇದು ಸ್ಟಾರ್ಟ್ ಅಪ್(Start up) ಜಗತ್ತು. ಯಾರು ಏನು ಬೇಕಾದರು ಸ್ಟಾರ್ಟ್‌ ಮಾಡಬಹುದು. ಹಾಗಾಗಿ, ಗೆಳತಿಯರಿಬ್ಬರು ರೈತರಿಗೆ(Farmer) ಜಾನುವಾರು ಖರೀದಿ-ಮಾರಾಟಕ್ಕೆ(Cattle buy and sale) ನೆರವು ನೀಡಲು ಈ ಸ್ಟಾರ್ಟ್ ಅಪ್ ಅನ್ನು ಆರಂಭಿಸಿದರು. ಅದೀಗ ಈಗ ವಾರ್ಷಿಕ  550 ಕೋಟಿ ರೂ. ವಹಿವಾಟು ನಡೆಸುತ್ತಿದೆ.

ಉದ್ಯಮ ಪ್ರಾರಂಭಿಸುವ ಸಂದರ್ಭದಲ್ಲಿ ಸಾಕಷ್ಟು ಅಡೆತಡೆಗಳು ಎದುರಾಗೋದು ಸಹಜ. ಆದರೆ, ಅವೆಲ್ಲವನ್ನೂ ಎದುರಿಸಿ ಮುನ್ನಡೆದಾಗ ಯಶಸ್ಸು ಸಿಗುತ್ತದೆ. ಪುಟ್ಟದಾಗಿ ಉದ್ಯಮ ಪ್ರಾರಂಭಿಸಿ, ಆ ಬಳಿಕ ದೊಡ್ಡ ಯಶಸ್ಸು ಕಂಡವರು ಅನೇಕರಿದ್ದಾರೆ. ಇದು ಸ್ಟಾರ್ಟ್ ಅಪ್ ಗಳಿಗೂ ಅನ್ವಯಿಸುತ್ತದೆ. ಪುಟ್ಟದಾಗಿ ಪ್ರಾರಂಭಿಸಿದ ಸ್ಟಾರ್ಟ್ ಅಪ್ ದೊಡ್ಡ ಮಟ್ಟದ ಯಶಸ್ಸು ಕಂಡ ಅನೇಕ ನಿದರ್ಶನಗಳು ಕಾಣಸಿಗುತ್ತವೆ. ಬೆಂಗಳೂರು ಮೂಲದ  ‘ಆನಿಮಲ್'(Animall) ಕೂಡ ಇದಕ್ಕೆ ಉತ್ತಮ ನಿದರ್ಶನ.

ಬೆಂಗಳೂರು ಮೂಲದ ಈ ಸ್ಟಾರ್ಟ್ ಅಪ್ ಒಂದು ಪುಟ್ಟ ಕೋಣೆಯಲ್ಲಿ ಪ್ರಾರಂಭವಾಯಿತು. ಇಬ್ಬರು ಗೆಳತಿಯರು ಪ್ರಾರಂಭಿಸಿದ ಈ ಸಂಸ್ಥೆ ಇಂದು ವಾರ್ಷಿಕ 550 ಕೋಟಿ ರೂ. ವಹಿವಾಟು ನಡೆಸುತ್ತಿದೆ. 2019ರಲ್ಲಿ ಆನಿಮಲ್ ಪ್ರಾರಂಭವಾದ ಬಳಿಕ ಈ ತನಕ 8.5 ಲಕ್ಷ ಪ್ರಾಣಿಗಳನ್ನು ಈ ಪ್ಲಾಟ್ ಫಾರ್ಮ್ ಮೂಲಕ ಮಾರಾಟ ಮಾಡಲಾಗಿದೆ. 2019ರಲ್ಲಿ ಪ್ರಾರಂಭವಾದ ಬಳಿಕ ಆನಿಮಲ್ ಅಪ್ಲಿಕೇಷನ್ ಮೂಲಕ ಈ ತನಕ ಒಟ್ಟು ಅಂದಾಜು 4,000 ಕೋಟಿ ರೂ. ಮೌಲ್ಯದ ವಹಿವಾಟು ನಡೆದಿದೆ.

ರೈತರು ಹಾಗೂ ಅವರ ಜಾನುವಾರುಗಳ ನಡುವಿನ ಬಾಂಧವ್ಯ ಭಾರತದ ಗ್ರಾಮೀಣ ಪ್ರದೇಶದಲ್ಲಿ ಕಾಣಸಿಗುತ್ತದೆ. ಆದರೂ ದೇಶದಲ್ಲಿ ಜಾನುವಾರು ಮಾರುಕಟ್ಟೆ ಮಾತ್ರ ಸಂಘಟಿತ ರೂಪದಲ್ಲಿ ಕಾಣಸಿಗೋದಿಲ್ಲ. ಇದನ್ನು ಅರ್ಥೈಸಿಕೊಂಡ ಐಐಟಿ ದೆಹಲಿ ಹಳೆಯ ವಿದ್ಯಾರ್ಥಿಗಳಾದ ನೀತು ಯಾದವ್ ಹಾಗೂ ಕೀರ್ತಿ ಜಾಂಗ್ರ ಡಿಜಿಟಲ್ ಪ್ಲಾಟ್ ಫಾರ್ಮ್ ಮೂಲಕ ಜಾನುವಾರು ಮಾರಾಟಕ್ಕೆ ಅವಕಾಶ ಕಲ್ಪಿಸುವ ಹೊಸ ಯೋಚನೆಯೊಂದನ್ನು ಮಾಡಿದರು. ಇದರ ಫಲವಾಗಿ ‘ಆನಿಮಲ್’ ಎಂಬ ಸಂಸ್ಥೆ ರೂಪ ತಾಳಿತು. ಗುರುಗ್ರಾಮವನ್ನು ಮೂಲವಾಗಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಹಾಲಿನ ಉದ್ಯಮದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತಂದಿದೆ.

ಆನಿಮಲ್ ಸಂಸ್ಥೆಯನ್ನು ಸ್ನೇಹಿತೆಯರಾದ ನೀತು ಯಾದವ್ ಹಾಗೂ ಕೀರ್ತಿ ಜಂಗ್ರ ಜೊತೆಗೆ ಅನುರಾಗ್ ಬಿಸೋಯಿ, ಲಿಬಿನ್ ವಿ ಬಾಬು, ನೀತು ವೈ ಹಾಗೂ ಸಂದೀಪ್ ಮಹಾಪಾತ್ರ ಎಂಬ ಆರು ಮಂದಿ ಸೇರಿ ಸ್ಥಾಪಿಸಿದರು. ಈ ಸಂಸ್ಥೆಯ ಏಂಜೆಲ್ ಹೂಡಿಕೆದಾರರು ಶಾದಿ ಡಾಟ್ ಕಾಮ್ ಸ್ಥಾಪಕರಾದ ಅನುಪಮ್ ಮಿತ್ತಲ್, ಝೊಮ್ಯಾಟೋ ಸ್ಥಾಪಕ ಹಾಗೂ ಸಿಇಒ ದೀಪೇಂದ್ರ ಗೋಯೆಲ್ . ಇವರ ಜೊತೆಗೆ ಅಂಜಲಿ ಬನ್ಸಾಲ್, ಮೋಹಿತ್ ಕುಮಾರ್ ಹಾಗೂ ಶಹಿಲ್ ಬರೌ ಕೂಡ ಸೇರಿದ್ದಾರೆ.

ಕೇವಲ ಮೂರು ತಿಂಗಳ ಅವಧಿಯಲ್ಲಿ 50 ಲಕ್ಷ ರೂ. ಬಂಡವಾಳದೊಂದಿಗೆ ನೀತು ಹಾಗೂ ಕೀರ್ತಿ 2019ರ ನವೆಂಬರ್ ನಲ್ಲಿ ‘ಆನಿಮಲ್’ ಸ್ಟಾರ್ಟ್ ಅಪ್ ಪ್ರಾರಂಭಿಸಿದರು. ಇವರಿಬ್ಬರ ತಂಡಕ್ಕೆ ಅನುರಾಗ್ ಬಿಸೋಯ್ ಹಾಗೂ ಲಿಬಿನ್ ವಿ. ಬಾಬು ಸೇರ್ಪಡೆಗೊಂಡರು.  ಹೈನುಗಾರರ ಜೀವನಮಟ್ಟ ಸುಧಾರಿಸುವ ಹಾಗೂ ಜಾನುವಾರುಗಳ ಮಾರಾಟವನ್ನು ಸರಳಗೊಳಿಸೋದು ಆನಿಮಲ್ ಸಂಸ್ಥೆ ಉದ್ದೇಶ. ‘

ಆನಿಮಲ್’ ಸಂಸ್ಥೆಯ ಪೂರ್ಣ ಹೆಸರು ‘ಆನಿಮಲ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್’. ಹಸುಗಳು ಹಾಗೂ ಎಮ್ಮೆಗಳ ಖರೀದಿ ಹಾಗೂ ಮಾರಾಟದ ಆನ್ ಲೈನ್ ವ್ಯವಹಾರಕ್ಕೆ ಈ ಪ್ಲಾರ್ಟ್ ಫಾರ್ಮ್ ಅವಕಾಶ ಕಲ್ಪಿಸಿದೆ. ಇದು ಜಾನುವಾರುಗಳ ಟ್ರೇಡಿಂಗ್ ಹಾಗೂ ‘ಲಿಸ್ಟಿಂಗ್ ಗೆ’ ಇರುವ ಆನ್ ಲೈನ್ ಮಾರುಕಟ್ಟೆ ಆಗಿದೆ. ಈ ಅಪ್ಲಿಕೇಷನ್ ಮೂಲಕ ನೀವು ಇರುವ ಪ್ರದೇಶದ 100 ಕಿ.ಮೀ. ವ್ಯಾಪ್ತಿಯಲ್ಲಿ ಮಾರಾಟಕ್ಕಿರುವ ಪ್ರಾಣಿಗಳ ಹಾಗೂ ಖರೀದಿದಾರರ ಮಾಹಿತಿ ಪಡೆಯಬಹುದು. ಅವರೊಂದಿಗೆ ಸಂಪರ್ಕ ಕೂಡ ಸಾಧಿಸಬಹುದು.

ಆನಿಮಲ್ ಪ್ರಾರಂಭಿಕ ದಿನಗಳಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿತ್ತು. ನಂತರದ ದಿನಗಳಲ್ಲಿ ಎಮ್ಮೆಗಳನ್ನು ಖರೀದಿಸಲು ಆಸಕ್ತಿ ಹೊಂದಿರುವ ಜನರು ಇವರಿಗೆ ಹೆಚ್ಚಿನ ಆರ್ಡರ್ ನೀಡಲು ಪ್ರಾರಂಭಿಸಿದರು. ಇದರಿಂದ ಉದ್ಯಮದಲ್ಲಿ ಸಾಕಷ್ಟು ಪ್ರಗತಿ ಕಂಡುಬಂತು. ಈ ಸಂಸ್ಥೆಯ ಏಂಜೆಲ್ ಹೂಡಿಕೆದಾರರಲ್ಲಿ ಶಾದಿ ಡಾಟ್ ಕಾಮ್ ಸ್ಥಾಪಕರಾದ ಅನುಪಮ್ ಮಿತ್ತಲ್, ಝೊಮ್ಯಾಟೋ ಸ್ಥಾಪಕ ಹಾಗೂ ಸಿಇಒ ದೀಪೇಂದ್ರ ಗೋಯೆಲ್ . ಇವರ ಜೊತೆಗೆ ಅಂಜಲಿ ಬನ್ಸಾಲ್, ಮೋಹಿತ್ ಕುಮಾರ್ ಹಾಗೂ ಶಹಿಲ್ ಬರೌ ಕೂಡ ಸೇರಿದ್ದಾರೆ. ಪ್ರಸ್ತುತ ಅಂದಾಜು 80ಲಕ್ಷ ರೈತರು ಆನಿಮಲ್ ಜೊತೆಗೆ ತೊಡಗಿಕೊಂಡಿದ್ದಾರೆ. ಆನಿಮಲ್ ನಿಂದ ಈ ತನಕ  850,000 ಪ್ರಾಣಿಗಳನ್ನು ಖರೀದಿಸಲಾಗಿದೆ. ಅಲ್ಲದೆ, ಆನಿಮಲ್ ಮೂಲಕ ಪ್ರತಿ ತಿಂಗಳು ಅಂದಾಜು 350 ಕೋಟಿ ರೂ. ವಹಿವಾಟು ನಡೆಸಲಾಗುತ್ತಿದೆ.

  • ಅಂತರ್ಜಾಲ ಮಾಹಿತಿ

A remarkable rise in revenue has resulted from the establishment of the online cattle marketplace “Animall” by two IIT Delhi students. According to Startup Pedia, the platform’s revenue was estimated at 7.4 crore for FY22 and has now increased to an astounding Rs 565 crore.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಎಳೆಅಡಿಕೆ ಮಾತ್ರವಲ್ಲ, ಬಲಿತ ಅಡಿಕೆಯೂ ಒಡೆದು ಬೀಳುತ್ತಿದೆ…! ಕಾರಣ ಏನು?

ಎಳೆಕಾಯಿ ಹಾಗೂ ಬಲಿತ ಅಡಿಕೆ ಒಡೆದು ಬೀಳುತ್ತಿರುವ ಸಮಸ್ಯೆ ಹಲವು ಭಾಗಗಳಲ್ಲಿ ಕಂಡುಬರುತ್ತಿದೆ.…

2 hours ago

ಜಾಗತಿಕ ಮಾರುಕಟ್ಟೆಯಲ್ಲಿ ರಬ್ಬರ್‌ಗೆ ಐತಿಹಾಸಿಕ ದರ – ಕೆಜಿಗೆ ₹300 ಗಡಿ ದಾಟಿದ ಬೆಲೆ, ಭಾರತದಲ್ಲಿ RSS-4 ರಬ್ಬರ್‌ ಗೆ ಏರಿಕೆ

ಜಾಗತಿಕ ಮಾರುಕಟ್ಟೆಯಲ್ಲಿ ನೈಸರ್ಗಿಕ ರಬ್ಬರ್ ಬೆಲೆ ಮೊದಲ ಬಾರಿಗೆ ಕೆಜಿಗೆ ₹300 ಗಡಿ…

8 hours ago

ಹಣ್ಣುಗಳಲ್ಲಿ ಕೀಟನಾಶಕ ಅವಶೇಷಗಳ ಭಯವೇ? ನೈಸರ್ಗಿಕವಾಗಿ ಸ್ವಚ್ಛಗೊಳಿಸುವ ಸರಳ ವಿಧಾನಗಳು

ಬೇಸಿಗೆಯ ಹಣ್ಣುಗಳನ್ನು ತಿನ್ನುವ ಮೊದಲು ಹರಿಯುವ ನೀರು, ಬೇಕಿಂಗ್ ಸೋಡಾ ಅಥವಾ ವಿನೆಗರ್…

9 hours ago

Facebook, Instagram ಏಕಾಏಕಿ ಸ್ಥಗಿತ – ಜಾಗತಿಕವಾಗಿ ಲಕ್ಷಾಂತರ ಬಳಕೆದಾರರಿಗೆ ತೊಂದರೆ

ಮೆಟಾ ಒಡೆತನದ Facebook, Instagram ಮತ್ತು Messenger ಸೇವೆಗಳು ಜಾಗತಿಕ ಮಟ್ಟದಲ್ಲಿ ತಾಂತ್ರಿಕ…

19 hours ago

ಉತ್ತರ ಪ್ರದೇಶದಲ್ಲಿ ಅಡಿಕೆ ಮೇಲಿನ ಮಂಡಿ ತೆರಿಗೆ ರದ್ದುಪಡಿಸಿ – ಯೋಗಿ ಆದಿತ್ಯನಾಥ್‌ಗೆ ಕ್ಯಾಂಪ್ಕೊ ಮನವಿ

ಉತ್ತರ ಪ್ರದೇಶದಲ್ಲಿ ಅಡಿಕೆ ವ್ಯಾಪಾರದ ಮೇಲೆ ವಿಧಿಸಲಾಗುತ್ತಿರುವ ಮಂಡಿ ತೆರಿಗೆಯನ್ನು ರದ್ದುಗೊಳಿಸುವಂತೆ ಕ್ಯಾಂಪ್ಕೊ…

20 hours ago