ಪ್ರತಿ ವರ್ಷದಂತೆ ಮಾಘ ಮಾಸದಲ್ಲಿ ಬರುವ ಶುಕ್ಲ ಪಕ್ಷದ ಸಪ್ತಮಿ ತಿಥಿಯನ್ನು, ರಥಸಪ್ತಮಿ(Ratha Saptami) ಎಂದು ಆಚರಿಸಲಾಗುತ್ತದೆ, ರಥಸಪ್ತಮಿಯ ದಿನದಂದು ಭಗವಂತ ಶ್ರೀ ಸೂರ್ಯನಾರಾಯಣನನ್ನು(Sun), ಪೂಜಿಸಲಾಗುತ್ತದೆ. ಅಲ್ಲದೇ ರಥಸಪ್ತಮಿಯ ಮತ್ತೊಂದು ವಿಶೇಷವೇನೆಂದರೆ, ಕರ್ನಾಟಕದ ಕೆಲವು ದೇವಸ್ಥಾನಗಳಲ್ಲಿ(Temple) ಈ ದಿನ ವಿಶೇಷ ಪೂಜೆ ನಡೆಯುತ್ತದೆ.
ರಥಸಪ್ತಮಿಯು ಪಂಚಾಂಗದ ಪ್ರಕಾರ ಫೆ.15 ರಂದು ಗುರುವಾರ ಬೆಳಗ್ಗೆ ಬೆಳಿಗ್ಗೆ,10:12ರಿಂದ, ಫೆ.16 ಶುಕ್ರವಾರ ಬೆಳಿಗ್ಗೆ 08:54ರ ವರೆಗೆ ಇರುತ್ತದೆ. ಉದಯ ತಿಥಿಯ ಪ್ರಕಾರ ರಥಸಪ್ತಮಿಯನ್ನು ಫೆಬ್ರವರಿ 16ರಂದು ಆಚರಿಸಲಾಗುತ್ತದೆ.
ಈ ದಿನ ಸ್ನಾನದ ಸಮಯ ಈ ರೀತಿ ಇರುತ್ತದೆ: ಬೆಳಿಗ್ಗೆ 05: 17am ರಿಂದ06:59am ರ ನಡುವೆ ಪವಿತ್ರ ನದಿಯಲ್ಲಿ ಸ್ನಾನ ಮಾಡುವುದು ಮಂಗಳಕರವಾಗಿರುತ್ತದೆ, ಈ ದಿನದಂದು ಸ್ನಾನ ಮತ್ತು ದಾನಕ್ಕೆ ಮಹತ್ವವಿದೆ, ರಥಸಪ್ತಮಿಯ ಶುಭ ಯೋಗ ಈ ರೀತಿ ಇರುತ್ತದೆ, ರಥಸಪ್ತಮಿಯ ದಿನ ಮಧ್ಯಾಹ್ನ 03:18pm ರವರೆಗೆ ಬ್ರಹ್ಮ ಯೋಗವು ರೂಪುಗೊಳ್ಳುತ್ತದೆ. ಈ ದಿನ ಇಂದ್ರ ಯೋಗವು ಸಹರೂಪಗೊಳ್ಳುತ್ತದೆ. ರಥಸಪ್ತಮಿಯ ದಿನದಂದು ಭದ್ರನು ಸ್ವರ್ಗದಲ್ಲಿ ನೆಲೆಸುತ್ತಾನೆ ಮತ್ತು ಭೂಲೋಕದ ಜನರಿಗೆ ಕಲ್ಯಾಣವನ್ನು ನೀಡುತ್ತಾನೆ ಎಂದು ನಂಬಲಾಗಿದೆ.
ಪೂಜಾ ನಿಯಮ: ಅಂದು ಮುಂಜಾನೆ ಪೂರ್ಣ ಹೃದಯದಿಂದ ಸೂರ್ಯ ದೇವರಿಗೆ ನಮಸ್ಕರಿಸಿ ಪೂಜಾ ಕೋಣೆಯನ್ನು ಶುದ್ಧಗೊಳಿಸಿ ಪೂಜಾ ಸಾಮಾನುಗಳನ್ನು ಹೊಂದಿಸಿಕೊಳ್ಳಿ ಹಾಗೂ ಸೂರ್ಯದೇವನನ್ನು ಸ್ಥಾಪಿಸಿ, ಹೂವು, ಹಣ್ಣು, ಕುಂಕುಮ, ನೈವೇದ್ಯ ಎಲ್ಲವನ್ನು ಅರ್ಪಿಸಬೇಕು. ಅಲ್ಲದೆ ಕೆಂಪು ಹೂಗಳನ್ನು ನೀರಿನಲ್ಲಿ ಸೇರಿಸಿ ಅರ್ಗ್ಯವನ್ನು ಅರ್ಪಿಸಬೇಕು ಹಾಗೂ ಈ ದಿನ ಹಳದಿ ಬಟ್ಟೆಗಳನ್ನು ಧರಿಸಿ ನಿಮ್ಮ ಪೂರ್ಣ ಹೃದಯದಿಂದ ಸೂರ್ಯ ಚಾಲಿಸಾ ಅಥವಾ ಸೂರ್ಯ ಕವಚವನ್ನು ಪಠಿಸಿದರೆ ಉತ್ತಮ
ಬರಹ: ಎಲ್.ವಿವೇಕಾನಂದ ಆಚಾರ್ಯ
ಗುಟ್ಕಾ–ಪಾನ್ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…
ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…
ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…
ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುವ ಕ್ಯಾಂಪಿಲೋಬ್ಯಾಕ್ಟರ್ ಬ್ಯಾಕ್ಟೀರಿಯಾದ ಹರಡುವಿಕೆಯನ್ನು ವೇಗಗೊಳಿಸುತ್ತಿದೆ…
ದೇಶದ 651 ಕೃಷಿ ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ದುರ್ಬಲವೆಂದು…