ಭಾರತದಲ್ಲಿ(India) ನಮ್ಮ ಹಿರಿಯರು(ancestors) ಬೆಳಿಗ್ಗೆ ಹೊಟ್ಟೆ ತುಂಬಾ ಊಟ(Meals) ಮಾಡುತ್ತಿದ್ದರು. ಬ್ರಿಟಿಷ್(British) ಪ್ರಭಾವದಿಂದಾಗಿ ಮತ್ತು ಬ್ರಿಟಿಷ್ ಆಹಾರಗಳ(Food) ಪರಿಚಯದಿಂದಾಗಿ ರಾತ್ರಿ ಊಟ ಮಾಡಿ ಮಲಗಿದ ನಂತರ ಯಾವುದೇ ಕೆಲಸಗಳಲ್ಲಿ ನಾವು ತೊಡಗಿಸಿಕೊಂಡಿರುವುದಿಲ್ಲ, ಹೀಗಾಗಿ ಬೆಳಿಗ್ಗೆ ಹೆಚ್ಚು ತಿನ್ನುವ ಅವಶ್ಯಕತೆ ಇಲ್ಲ ಎಂಬ ವಾದದಿಂದಾಗಿ, ನಮ್ಮ ಆಹಾರ ಪದ್ಧತಿಯಲ್ಲಿ(Food style) ಬದಲಾವಣೆ ಉಂಟಾಗಿ, ನಾವು ಕೂಡ ಬೆಳಿಗ್ಗೆ ತಿಂಡಿಗೆ ಜೋತುಬಿದ್ದೆವು.
ಆಯುರ್ವೇದ ದಿನಕ್ಕೆ ಎರಡು ಬಾರಿ ಊಟ ಎಂದು ಹೇಳುತ್ತದೆ. ಆಧುನಿಕ ವಿಜ್ಞಾನದ ಪ್ರಕಾರ ಪ್ರತಿಯೊಬ್ಬ ಮನುಷ್ಯನ ಮೆದುಳಿನಲ್ಲಿರುವ ಪೈನಿಯಲ್ ಎಂಬ ಗ್ರಂಥಿ ನಮ್ಮ ದೇಹದ ಎಲ್ಲಾ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ. ನಿರ್ದಿಷ್ಟ ವೇಳೆಯಲ್ಲಿ, ನಿರ್ದಿಷ್ಟ ಚಟುವಟಿಕೆಗಳಲ್ಲಿ ಪೈನಿಯಲ್ ಗ್ರಂಥಿಯ ಆದೇಶದ ಮೇರೆಗೆ ನಮ್ಮ ದೇಹ ನಿರತವಾಗಿರುತ್ತದೆ. ಇದನ್ನು ಜೈವಿಕ ಗಡಿಯಾರ ಎನ್ನುತ್ತಾರೆ. ನಮ್ಮ ದೇಹದ ಜೀರ್ಣಾಂಗಗಳು ಬೆಳಿಗ್ಗೆ 7 ರಿಂದ 9ರ ವರೆಗೆ ಅತ್ಯಂತ ಹೆಚ್ಚು ಕ್ರಿಯಾಶೀಲವಾಗಿರುತ್ತವೆ. ಅಂದರೆ ಆ ವೇಳೆಯಲ್ಲಿ ನಾವು ಹೆಚ್ಚು ತಿಂದರೂ ಕೂಡ ಅದೆಲ್ಲವೂ ಜೀರ್ಣವಾಗಿ, ಪೋಷಕಾಂಶವಾಗಿ ದೇಹಕ್ಕೆ ದೊರೆಯುತ್ತದೆ. ಕಡಿಮೆ ತಿಂದರೆ ಕಡಿಮೆ ಪೋಷಕಾಂಶಗಳು ದೇಹಕ್ಕೆ ದೊರೆಯುತ್ತವೆ. ಅಂದರೆ ವೈಜ್ಞಾನಿಕವಾಗಿ ಕೂಡ ನಾವು ಬೆಳಿಗ್ಗೆ ಹೆಚ್ಚು ತಿನ್ನಲೇಬೇಕು.
ನೀವೂ ತಿಂಡಿ ಬಿಟ್ಟು ಊಟ ಮಾಡಲು ಪ್ರಾರಂಭಿಸಿ, ಉತ್ತಮ ಆರೋಗ್ಯ ಹೊಂದಿ, ಮಕ್ಕಳಲ್ಲಿ ಈ ರೂಡಿ ಬೆಳೆಸಿ.
ಸೆಪ್ಟೆಂಬರ್ 5–10ರ ನಂತರ ದೇಶದ ಹಲವು ಭಾಗಗಳಲ್ಲಿ ಮುಂಗಾರು ಮಳೆ ಗಣನೀಯವಾಗಿ ಕಡಿಮೆಯಾಗುವ…
ಕರ್ನಾಟಕದಲ್ಲಿ ಆಗಸ್ಟ್ 23ರಿಂದ 25ರವರೆಗೆ ಹಲವೆಡೆ ಅಲ್ಲಲ್ಲಿ ಸಾಮಾನ್ಯ ಮಳೆಯಷ್ಟೇ ನಿರೀಕ್ಷಿಸಲಾಗಿದ್ದು, ಕರಾವಳಿ…
PM-Kisan ಯೋಜನೆಯ 24ನೇ ಕಂತಿನ ಹಣ ಪಡೆಯಲು ಅರ್ಹ ರೈತರು ಬಯೋಮೆಟ್ರಿಕ್ ಅಥವಾ…
ಮುಂಗಾರು ಹಂಗಾಮಿನ ಭತ್ತ ಸೇರಿದಂತೆ ಬೆಳೆಗಳಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ…
ಕರಾವಳಿ ಕರ್ನಾಟಕದಲ್ಲಿ ಆ.23ರಿಂದ 25ರವರೆಗೆ ಮಳೆಯ ಪ್ರಮಾಣ ಸ್ವಲ್ಪ ಹೆಚ್ಚಾಗುವ ಸಾಧ್ಯತೆಯಿದ್ದು, ಆ.26ರವರೆಗೂ…
ಆಗಸ್ಟ್ 24ರಿಂದ ಒಬ್ಬ ವ್ಯಕ್ತಿಯ ಹೆಸರಿನಲ್ಲಿ 9 ಮೊಬೈಲ್ ಸಂಪರ್ಕಗಳ ಮಿತಿಯನ್ನು ಮೀರಿ…