ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026 ರ ಬಜೆಟ್ ಮಂಡನೆಗೆ ಸಿದ್ಧರಾಗುತ್ತಿದ್ದಂತೆ, ಭಾರತೀಯ ಕೃಷಿಯಲ್ಲಿ ಕೆಲವು ನಿರ್ಣಾಯಕ ಬದಲಾವಣೆಯ ಹಂತದಲ್ಲಿದೆ. ಹೀಗಾಗಿ ಹಣಕಾಸು ಸಚಿವರು ಹಾಗೂ ಸರ್ಕಾರ ಗಮನದಲ್ಲಿಟ್ಟುಕೊಳ್ಳಬೇಕಾದ ಹಲವು ಅಂಶಗಳು ಇವೆ. ಇದರಲ್ಲಿ ಸಬ್ಸಿಡಿಗಳಿಂದ ಹಿಡಿದು ಫಲಿತಾಂಶ ಆಧಾರಿತ, ಹವಾಮಾನ ಆಧಾರಿತ, ಸ್ಮಾರ್ಟ್ ಕೃಷಿಯವರೆಗೆ ಭಾರತದ ಕೃಷಿ-ಆರ್ಥಿಕತೆಯನ್ನು ಗಮನದಲ್ಲಿರಿಸಿಕೊಳ್ಳಬೇಕಿದೆ.
ವಿಕಸಿತ ಭಾರತದ ದೃಷ್ಟಿಕೋನದಿಂದಲೂ ಬಜೆಟ್ ಗಮನಿಸಿದರೆ, ರಚನಾತ್ಮಕ ಸುಧಾರಣೆಯ ಕಡೆಗೆ ಗಮನಹರಿಸಬೇಕಾದ ಅಗತ್ಯ ಇದೆ. ಸಬ್ಸೀಡಿ ಹಂಚಿಕೆಯಲ್ಲೇ ಕಾಲ ಕಳೆಯುವುದರ ಜೊತೆಗೇ ಕೃಷಿಯಲ್ಲಿ ಹೆಚ್ಚಿನ ಉತ್ಪಾದಕತೆ, ಹವಾಮಾನ ವೈಪರೀತ್ಯದಿಂದ ರಕ್ಷಣೆ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ಬೆಳವಣಿಗೆಯ ಕಡೆಗೆ ಕೃಷಿಯನ್ನು ಪರಿವರ್ತಿಸಲು ನೆರವು, ಮಾರುಕಟ್ಟೆಗಳು ಮತ್ತು ಆಧುನಿಕ ವಿಜ್ಞಾನವನ್ನು ಜೋಡಿಸುವುದು ಅಗತ್ಯ ಇದೆ. ಕೃಷಿ ನೀತಿ, ಶೈಕ್ಷಣಿಕ ಮತ್ತು ಕೃಷಿ ಉದ್ಯಮದ ಕಡೆಗೆ ಗಮನಹರಿಸಬೇಕಾಗಿದೆ. ಸಬ್ಸೀಡಿಗಳನ್ನು ನೀಡಿಯೂ ಕೃಷಿ ಉತ್ಪಾದಕತೆಯಲ್ಲಿ ಹೆಚ್ಚಳವಾಗಿಲ್ಲ, ಹವಾಮಾನ ವಿಪರೀತವಾಗಿ ಸಮಸ್ಯೆ ತಂದಿದೆ. ಫಲಿತಾಂಶ ಆಧಾರಿತವಾಗಿ ಕೃಷಿ ಬೆಳೆಯುತ್ತಿಲ್ಲ . ಈಗ ಡಿಜಿಟಲ್ ಆಗಿಯೂ ಕೃಷಿ ಬೆಳೆವಣಿಗೆಯನ್ನು ಪರಿಶೀಲಿಸಬಹುದಾದ ಅಗತ್ಯ ಇದೆ. ರೈತರ ಜೀವನ, ಮಣ್ಣಿನ ದೃಷ್ಟಿಯಿಂದಲೂ ಗಮನಿಸಿದಾಗ ಮಣ್ಣು ಮತ್ತು ನೀರಿನ ಆರೋಗ್ಯದ ರಕ್ಷಣೆಗೆ ಆದ್ಯತೆ ಅಗತ್ಯ ಇದೆ.
ಈ ಎಲ್ಲಾ ಕಾರಣದಿಂದ ಈ ಬಾರಿ ಹವಾಮಾನದ ನಿಖರತೆಗೆ ಎಐ, ನಿಖರ ಪೋಷಣೆ, ಡಿಜಿಟಲ್ ಭೂ ದಾಖಲೆಗಳು, ಮೌಲ್ಯವರ್ಧಿತ ರಫ್ತುಗಳನ್ನು ಸಂಯೋಜಿಸುವ ಮಿಷನ್, ಪೋಷಕಾಂಶ ದಕ್ಷತೆಯ ಸೂಚ್ಯಂಕಗಳಿಂದ ಕೃಷಿ ಡ್ರೋನ್ಗಳು, ಡಿಜಿಟಲ್ ಫಾರ್ಮ್ ಐಡಿಗಳು, ನೀರಾವರಿ ಮತ್ತು ತ್ಯಾಜ್ಯ-ಮುಕ್ತ ಮಾರುಕಟ್ಟೆ ವ್ಯವಸ್ಥೆ, ಉತ್ಪಾದಕತೆ, ಸುಸ್ಥಿರತೆ ಮತ್ತು ಆದಾಯದ ಫಲಿತಾಂಶಗಳು ಸೇರಿದಂತೆ ಭಾರತೀಯ ಕೃಷಿ ಬೆಳವಣಿಗೆಗೆ ಹೆಚ್ಚಿನ ತಾಂತ್ರಿಕ ಅಗತ್ಯಗಳೂ ಇವೆ. ಬಜೆಟ್ ರೂಪಿಸುವ ವೇಳೆ ಇಂತಹ ಆದ್ಯತೆಗಳ ಕಡೆಗೂ ಗಮನ ಅಗತ್ಯವಿದೆ.
ಮೂಲ : ಎಗ್ರೋ ಸ್ಪೆಕ್ಟ್ರಂ
ಸ್ವಾತಂತ್ರ್ಯದ 79 ವರ್ಷಗಳ ಭಾರತದ ಪಯಣದಲ್ಲಿ ಕೃಷಿ -ಎತ್ತು-ನೇಗಿಲಿನಿಂದ ಡ್ರೋನ್, ಡಿಜಿಟಲ್ ಮಾಹಿತಿ…
ತೀವ್ರ ವಿರೋಧ ಹಾಗೂ ಅಡಿಕೆ ಬೆಳೆಗಾರರ ಮೇಲಿನ ಪರಿಣಾಮದ ಆತಂಕದ ಹಿನ್ನೆಲೆಯಲ್ಲಿ ರಾಜ್ಯದ…
ಗುಟ್ಕಾ–ಪಾನ್ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…
ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…
ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…