Advertisement
Opinion

ಹೃದಯ-ಶ್ವಾಸ ಪ್ರಚೋದನೆ ಕ್ರಿಯೆ | ಆಸ್ಪತ್ರೆಯಲ್ಲಿ ಹೃದಯ ಬಡಿತ ನಿಂತುಹೋದ ರೋಗಿಯ ಎದೆಯನ್ನು ವೈದ್ಯರು ಪದೇ ಪದೇ ಏಕೆ ಒತ್ತುತ್ತಾರೆ?

Share

ಇದನ್ನು ನೀವು ಆಸ್ಪತ್ರೆಯಲ್ಲಿ(Hospital) ನೋಡಿರದಿದ್ದರೂ ಸಿನಿಮಾದಲ್ಲಿ(Cinema) ಖಂಡಿತಾ ನೋಡಿರುತ್ತೀರಿ. ಹೃದಯವು(Heart) ಹೇಗೆ ಕೆಲಸ ಮಾಡುತ್ತದೆ ಎಂದು ನಿಮಗೆ ತಿಳಿದಿದೆ. ಪಂಪ್‌ನಂತೆ, ಹೃದಯವು ದೇಹದಾದ್ಯಂತ ಒತ್ತಡದಲ್ಲಿ ರಕ್ತವನ್ನು(Blood) ಚಲಿಸುವಂತೆ ಮಾಡುತ್ತದೆ. ಒಂದು ನಿಮಿಷದಲ್ಲಿ, ಹೃದಯವು 72 ಬಾರಿ ಸಂಕುಚಿತಗೊಳ್ಳುತ್ತದೆ. ಸಂಕೋಚನವನ್ನು ಸೃಷ್ಟಿಸುವ ಮತ್ತು ಹರಡುವ ಪ್ರಚೋದನೆಯು ಹೃದಯ ಸ್ನಾಯುವಿನ (ಪೇಸ್‌ಮೇಕರ್ ಅಥವಾ ಸೈನೋ-ಹೃತ್ಕರ್ಣದ ನೋಡ್) ಪ್ರಚೋದನೆಯ ಮೂಲದಿಂದ ಬರುತ್ತದೆ.

ಸಂಕೇತಗಳನ್ನು ಸೃಷ್ಟಿಸುವ ಈ ನೋಡ್ ಕೆಟ್ಟು ಅದರ ಕಾರ್ಯ ನಿಂತು ಹೋದರೆ ಹೃದಯವು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಕೆಲವೊಮ್ಮೆ ಹೃದಯ ಸ್ನಾಯುಗಳಿಗೆ ರಕ್ತವನ್ನು ಪೂರೈಸುವ ನಾಳಗಳಲ್ಲಿನ ಅಸಮರ್ಪಕ ಕಾರ್ಯದಿಂದಾಗಿ, ಹೃದಯವು ಪೋಷಕಾಂಶಗಳಿಂದ ವಂಚಿತವಾಗುತ್ತದೆ ಮತ್ತು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಹೃದಯದ ಪ್ರಚೋದನೆಯ ಮೂಲದ ಕಾರ್ಯವು ಎಲೆಕ್ಟ್ರೋಕೆಮಿಕಲ್ ಪ್ರಕ್ರಿಯೆಗಳ ಮೇಲೆ ಅವಲಂಬಿತವಾಗಿರುತ್ತದೆ. ನಿಲ್ಲಿಸಿದ ಹೃದಯವನ್ನು ಮರುಪ್ರಾರಂಭಿಸಲು ಹೊಸ ಪೇಸ್‌ಮೇಕರ್ ಅಥವಾ ಸ್ಫೂರ್ತಿಯ ಮೂಲವನ್ನು ಶಸ್ತ್ರಚಿಕಿತ್ಸೆಯ ಮೂಲಕ ಅಳವಡಿಸಬೇಕು. ಕೆಲವೊಮ್ಮೆ ವಿದ್ಯುತ್ ಆಘಾತ ನೀಡಿ ಹೃದಯವನ್ನು ಪ್ರಾರಂಭಿಸಲು ಪ್ರಯತ್ನಿಸಲಾಗುತ್ತದೆ.

ಎದೆಯ ಮೇಲೆ ಕೈಯಿಂದ ಬಲವಾಗಿ ಒತ್ತಿದಾಗ, ಹೃದಯದ ಮೇಲೆ ಒತ್ತಡ ಬರುತ್ತದೆ ಮತ್ತು ಅದು ಸಂಕುಚಿತಗೊಳ್ಳುತ್ತದೆ. ಇದರಿಂದ ದೇಹದಲ್ಲಿ ರಕ್ತವು ಹರಿಯುತ್ತದೆ. ಈ ರೀತಿಯ ಪುನರಾವರ್ತಿತ ಸಂಕೋಚನಗಳು ಕೆಲವೊಮ್ಮೆ ಸ್ಥಗಿತಗೊಂಡ ಹೃದಯವನ್ನು ಮರುಪ್ರಾರಂಭಿಸಬಹುದು. ಮುಖ್ಯ ವಿಷಯವೆಂದರೆ ಈ ಚಿಕಿತ್ಸೆಯನ್ನು ಎಲ್ಲಿ ಬೇಕಾದರೂ ಮಾಡಬಹುದು. ಏಕೆಂದರೆ, ಇದನ್ನು ಮಾಡಲು ಯಾವುದೇ ಉಪಕರಣಗಳು ಅಥವಾ ಔಷಧಿಗಳ ಅಗತ್ಯವಿಲ್ಲ.

ಡಾ. ಅಂಜಲಿ ದೀಕ್ಷಿತ್ ಮತ್ತು ಡಾ. ಜಗನ್ನಾಥ ದೀಕ್ಷಿತರ ಪುಸ್ತಕದಿಂದ ಕನ್ನಡಕ್ಕೆ: ಡಾ. ಪ್ರ. ಅ. ಕುಲಕರ್ಣಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ

ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…

5 hours ago

ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?

ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…

5 hours ago

ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುತ್ತಿದೆಯೇ? – ಹೊಸ ಅಧ್ಯಯನದ ಎಚ್ಚರಿಕೆ

ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುವ ಕ್ಯಾಂಪಿಲೋಬ್ಯಾಕ್ಟರ್ ಬ್ಯಾಕ್ಟೀರಿಯಾದ ಹರಡುವಿಕೆಯನ್ನು ವೇಗಗೊಳಿಸುತ್ತಿದೆ…

5 hours ago

ಹವಾಮಾನ ಬದಲಾವಣೆಯಿಂದ ರೈತರ ರಕ್ಷಣೆಗೆ ಸರ್ಕಾರದ ತಂತ್ರ – 310 ಜಿಲ್ಲೆಗಳು ಅಪಾಯದಲ್ಲಿ, 2,661 ಸಹಿಷ್ಣು ತಳಿಗಳ ಅಭಿವೃದ್ಧಿ

ದೇಶದ 651 ಕೃಷಿ ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ದುರ್ಬಲವೆಂದು…

15 hours ago

ಗುಟ್ಕಾ ನಿಷೇಧದ ಹೆಸರಿನಲ್ಲಿ ಅಡಿಕೆ ಬೆಳೆಗಾರರಿಗೆ ತೊಂದರೆ ಆಗದಂತೆ ಸರ್ಕಾರ ಸ್ಪಷ್ಟ ಮಾರ್ಗಸೂಚಿ ನೀಡಲಿ

ಗುಟ್ಕಾ ಮತ್ತು ಪಾನ್‌ಮಸಾಲಾ ನಿಷೇಧವನ್ನು ಅಡಿಕೆ ನಿಷೇಧದೊಂದಿಗೆ ಸಂಬಂಧಿಸಬಾರದು, ಅಡಿಕೆ ಬೆಳೆಗಾರರು ಗಾಬರಿಯಾಗಬಾರದು…

15 hours ago

ತಂಬಾಕು ನಿಷೇಧ ಜಾರಿ: ಅಡಿಕೆ ಬೆಳೆಗಾರರ ಹಿತ ಕಾಪಾಡಲು ಸ್ಪಷ್ಟ ಚೌಕಟ್ಟು ರೂಪಿಸಿ – ಕ್ಯಾಂಪ್ಕೊ

ತಂಬಾಕು ಮತ್ತು ನಿಕೋಟಿನ್ ಅಂಶವುಳ್ಳ ಉತ್ಪನ್ನಗಳ ನಿಷೇಧ ಜಾರಿಯಲ್ಲಿ ಅಡಿಕೆ ಬೆಳೆಗಾರರು ಹಾಗೂ…

16 hours ago