Advertisement
Opinion

ಏಕೆ ಕೆಲವು ಹಿಂಡಿ ದನಗಳಿಗೆ ಹಿಡಿಸುವುದಿಲ್ಲ…?

Share

ಮೊನ್ನೆ ತಾನೆ ಆತ್ಮೀಯ ಮಿತ್ರರೊಬ್ಬರ ಮನೆಗೆ ಹೋಗಿದ್ದೆ. ಮನೆಯ ಹಟ್ಟಿಯಲ್ಲಿ ದೇವನಿ ಜಾತಿಯ ದನವನ್ನು ಕಂಡು ಬಹಳ ಸಂತೋಷವಾಯಿತು. ನಮ್ಮ ದೇಶಿ ದನಗಳೇ ಹಾಗೆ. ನಿಂತ ನಿಲುವು, ಉಬ್ಬಿದ ಭುಜ, ಓಲಾಡುವ ಗಂಗೆದೊಗಲು ಎಂತವರನ್ನೂ ಆಕರ್ಷಿಸಿಯೇ ಬಿಡುತ್ತದೆ. ಆದರೆ ಆಕರ್ಷಣೆಯುಳ್ಳ ಎಲ್ಲವೂ ಹಾಲು ಕರೆಯಲು ಬಿಡಲೇಬೇಕೆಂದೇನೂ ಇಲ್ಲ. ಹಾಲಿರುವುದು ತನ್ನ ಕರುವಿಗಾಗಿಯೇ ವಿನಃ ನಿಮಗಲ್ಲ ಅಂತ ಎಚ್ಚರಿಸುವುದರಲ್ಲಿ ಬಲು ಮುಂದು. ಹಾಗೆ ಮನೆಯವರಲ್ಲಿ ವಿಚಾರಿಸಿದೆ.

ಹಾಲು ಕರೆಯುವ ಮಟ್ಟಿಗೆ ಬಲು ಸಾಧು ದನ. ಆದರೆ ಬೇಜಾರದ ಸಂಗತಿ ಎಂದರೆ ಅದಕ್ಕೊಂದು ಎಲರ್ಜಿ. ಕೆಚ್ಚಲಿನದ್ದೆಲ್ಲ ಸಿಪ್ಪೆ ಆಗಾಗ ಹೋಗುತ್ತಲೇ ಇರುತ್ತದೆ. ಆಗ ನೋವಾದಾಗ ಸ್ವಲ್ಪ ಉಪದ್ರ ಕೊಡುತ್ತದೆ. ಪಶು ವೈದ್ಯರು ಬಂದು ಅನೇಕ ಇಂಜಕ್ಷನ್ ಗಳನ್ನು ಹಚ್ಚಲು ಮುಲಾಮ್ ಅನ್ನು ಕೊಟ್ಟಿದ್ದರು. ಹಚ್ಚಿದ ಮುಲಾಮು ಕರುವಿನ ಹೊಟ್ಟೆಗೆ ಹೋಗದಂತೆ ನೋಡಿಕೊಳ್ಳಿ ಅಂತಲೂ ಎಚ್ಚರಿಸಿದ್ದರು. ಆದರೆ ಕಡಿಮೆಯಂತು ಆಗಿಲ್ಲ ಅಂತ ಬೇಸರಿಸಿದರು.

ನೀವು ಯಾವ ಹಿಂಡಿಯನ್ನು ಹಾಕುವಿರಿ ಅಂತ ಕೇಳಿದೆ . ಸಂತುಲಿತ ಪಶು ಆಹಾರ ಅಂತಂದರು. ಹಳೆಯ ಅನುಭವದ ನನ್ನ ಮನ ಜಾಗೃತಿಗೊಂಡಿತು. 15 ದಿನ ಹಿಂಡಿಯನ್ನು ಬಿಟ್ಟು ನೋಡಿ. ನೆಲಗಡಲೆ ಹಿಂಡಿ ಇತ್ಯಾದಿಯಾಗಿ ಸಹಜ ಆಹಾರವನ್ನು ಕೊಡಿ ಅಂತ ಸೂಚಿಸಿದೆ.

ಹಿಂಡಿಯ ಪರಿಣಾಮ ಆಗಿರಲಾರದು ಅಂತ ಡಾಕ್ಟರ್ ಗಳು ಹೇಳುವರು ಅಂತ ಅಂದಿದ್ದರು. ಆದರೂ ಬಿಟ್ಟು ನೋಡುವೆ ಅಂತ ಹೇಳಿದ್ದರು.

15 ದಿನದ ನಂತರ ಫೋನಾಯಿಸಿದೆ. ಸದಾಶಿವಣ್ಣ ಪೂರ್ತಿ ಗುಣ ಆಗಿದೆ. ಹಾಲು ಕರೆಯಲು ಸರಿಯಾಗಿ ಬಿಡುತ್ತದೆ. ಆದರೆ ಯಾಕೆ ಡಾಕ್ಟರ್ ಗಳು ಒಬ್ಬರೂ ಇದನ್ನು ಹೇಳಿಲ್ಲ ಅಂತ ಆಶ್ಚರ್ಯ ವ್ಯಕ್ತಪಡಿಸಿದರು.

ಅದು ಗುಣವಾದದ್ದು ಆಶ್ಚರ್ಯ ಏನಿಲ್ಲ. ನೈಜ ಆಹಾರವಲ್ಲದ ಯೂರಿಯಾವನ್ನು ಹಿಂಡಿಯ ಖರ್ಚನ್ನು ಕಡಿಮೆಗೊಳಿಸಲು ಬಳಸುವ ದುಷ್ಟ ಯೋಚನೆಯ ಫಲ ಇದು. ದನಗಳ ಆರೋಗ್ಯವನ್ನು, ಅವುಗಳ ಹಾಲಿನ ಮುಖಾಂತರ ಮನುಷ್ಯನ ಆರೋಗ್ಯವನ್ನು ಹಾಳು ಮಾಡುವ ಇಂತಹ ಮಿಶ್ರಣಗಳನ್ನು ಇನ್ನೂ ಇನ್ನೂ ಶಿಫಾರಸು ಮಾಡುವರಲ್ಲ ಅದು ನಿಜವಾದ ಆಶ್ಚರ್ಯ ಅಂತಂದೆ. ಹತ್ತು ಜನರಿಗೆ ಇನ್ನೂ ಹೇಳೋಣ. ದನಗಳ ಆಹಾರದಲ್ಲಿ ಯೂರಿಯಾಗಳಿಂದ ದೂರವಿರೋಣ ಎಂಬ ವಿಷಯವನ್ನು ಹಂಚೋಣ. ಸಹಜ ಆಹಾರವನ್ನೇ ನೀಡೋಣ.

ಬರಹ :
ಎಪಿ ಸದಾಶಿವ ಮರಿಕೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಎ ಪಿ ಸದಾಶಿವ ಮರಿಕೆ

ಸಾವಯವ ಕೃಷಿಕರು, ಪುತ್ತೂರು ಕಳೆದ ಹಲವಾರು ವರ್ಷಗಳಿಂದ ಸಾವಯವ ಕೃಷಿ, ಗೋಆಧಾರಿತ ಕೃಷಿಯ ಮೂಲಕ ಗಮನ ಸೆಳೆದ ಕೃಷಿಕ ಇವರು.

Published by
ಎ ಪಿ ಸದಾಶಿವ ಮರಿಕೆ

Recent Posts

ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುತ್ತಿದೆಯೇ? – ಹೊಸ ಅಧ್ಯಯನದ ಎಚ್ಚರಿಕೆ

ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುವ ಕ್ಯಾಂಪಿಲೋಬ್ಯಾಕ್ಟರ್ ಬ್ಯಾಕ್ಟೀರಿಯಾದ ಹರಡುವಿಕೆಯನ್ನು ವೇಗಗೊಳಿಸುತ್ತಿದೆ…

14 minutes ago

ಹವಾಮಾನ ಬದಲಾವಣೆಯಿಂದ ರೈತರ ರಕ್ಷಣೆಗೆ ಸರ್ಕಾರದ ತಂತ್ರ – 310 ಜಿಲ್ಲೆಗಳು ಅಪಾಯದಲ್ಲಿ, 2,661 ಸಹಿಷ್ಣು ತಳಿಗಳ ಅಭಿವೃದ್ಧಿ

ದೇಶದ 651 ಕೃಷಿ ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ದುರ್ಬಲವೆಂದು…

10 hours ago

ಗುಟ್ಕಾ ನಿಷೇಧದ ಹೆಸರಿನಲ್ಲಿ ಅಡಿಕೆ ಬೆಳೆಗಾರರಿಗೆ ತೊಂದರೆ ಆಗದಂತೆ ಸರ್ಕಾರ ಸ್ಪಷ್ಟ ಮಾರ್ಗಸೂಚಿ ನೀಡಲಿ

ಗುಟ್ಕಾ ಮತ್ತು ಪಾನ್‌ಮಸಾಲಾ ನಿಷೇಧವನ್ನು ಅಡಿಕೆ ನಿಷೇಧದೊಂದಿಗೆ ಸಂಬಂಧಿಸಬಾರದು, ಅಡಿಕೆ ಬೆಳೆಗಾರರು ಗಾಬರಿಯಾಗಬಾರದು…

11 hours ago

ತಂಬಾಕು ನಿಷೇಧ ಜಾರಿ: ಅಡಿಕೆ ಬೆಳೆಗಾರರ ಹಿತ ಕಾಪಾಡಲು ಸ್ಪಷ್ಟ ಚೌಕಟ್ಟು ರೂಪಿಸಿ – ಕ್ಯಾಂಪ್ಕೊ

ತಂಬಾಕು ಮತ್ತು ನಿಕೋಟಿನ್ ಅಂಶವುಳ್ಳ ಉತ್ಪನ್ನಗಳ ನಿಷೇಧ ಜಾರಿಯಲ್ಲಿ ಅಡಿಕೆ ಬೆಳೆಗಾರರು ಹಾಗೂ…

11 hours ago

ಹವಾಮಾನ ವರದಿ | 12-08-2026 | ಕರ್ನಾಟಕದಲ್ಲಿ ಮುಂದುವರಿಯಲಿದೆ ಬಿಡುವಿನ ಮಳೆ

ಕರಾವಳಿ ಹಾಗೂ ಮಲೆನಾಡಿನಲ್ಲಿ ಬಿಸಿಲು, ಮೋಡ ಮತ್ತು ಬಿಡುವಿನ ಸಾಮಾನ್ಯ ಮಳೆ ಮುಂದುವರಿಯುವ…

11 hours ago

ತೋಟಗಾರಿಕಾ ಬೆಳೆಗಾರರ ಪರ ಲೋಕಸಭೆಯಲ್ಲಿ ಧ್ವನಿ – ಹವಾಮಾನ ಆಧಾರಿತ ಬೆಳೆ ವಿಮೆ ಮರುಪರಿಷ್ಕರಣೆಗೆ ಕ್ಯಾ. ಚೌಟ ಒತ್ತಾಯ

ಅಡಿಕೆ, ತೆಂಗು, ಕೋಕೋ ಮತ್ತು ಸಾಂಬಾರು ಬೆಳೆಗಳಿಗೆ ಸ್ಥಳೀಯ ಹವಾಮಾನದಿಂದ ಉಂಟಾಗುವ ನೈಜ…

24 hours ago