Advertisement
Opinion

ಏಕೆ ಕೆಲವು ಹಿಂಡಿ ದನಗಳಿಗೆ ಹಿಡಿಸುವುದಿಲ್ಲ…?

Share

ಮೊನ್ನೆ ತಾನೆ ಆತ್ಮೀಯ ಮಿತ್ರರೊಬ್ಬರ ಮನೆಗೆ ಹೋಗಿದ್ದೆ. ಮನೆಯ ಹಟ್ಟಿಯಲ್ಲಿ ದೇವನಿ ಜಾತಿಯ ದನವನ್ನು ಕಂಡು ಬಹಳ ಸಂತೋಷವಾಯಿತು. ನಮ್ಮ ದೇಶಿ ದನಗಳೇ ಹಾಗೆ. ನಿಂತ ನಿಲುವು, ಉಬ್ಬಿದ ಭುಜ, ಓಲಾಡುವ ಗಂಗೆದೊಗಲು ಎಂತವರನ್ನೂ ಆಕರ್ಷಿಸಿಯೇ ಬಿಡುತ್ತದೆ. ಆದರೆ ಆಕರ್ಷಣೆಯುಳ್ಳ ಎಲ್ಲವೂ ಹಾಲು ಕರೆಯಲು ಬಿಡಲೇಬೇಕೆಂದೇನೂ ಇಲ್ಲ. ಹಾಲಿರುವುದು ತನ್ನ ಕರುವಿಗಾಗಿಯೇ ವಿನಃ ನಿಮಗಲ್ಲ ಅಂತ ಎಚ್ಚರಿಸುವುದರಲ್ಲಿ ಬಲು ಮುಂದು. ಹಾಗೆ ಮನೆಯವರಲ್ಲಿ ವಿಚಾರಿಸಿದೆ.

ಹಾಲು ಕರೆಯುವ ಮಟ್ಟಿಗೆ ಬಲು ಸಾಧು ದನ. ಆದರೆ ಬೇಜಾರದ ಸಂಗತಿ ಎಂದರೆ ಅದಕ್ಕೊಂದು ಎಲರ್ಜಿ. ಕೆಚ್ಚಲಿನದ್ದೆಲ್ಲ ಸಿಪ್ಪೆ ಆಗಾಗ ಹೋಗುತ್ತಲೇ ಇರುತ್ತದೆ. ಆಗ ನೋವಾದಾಗ ಸ್ವಲ್ಪ ಉಪದ್ರ ಕೊಡುತ್ತದೆ. ಪಶು ವೈದ್ಯರು ಬಂದು ಅನೇಕ ಇಂಜಕ್ಷನ್ ಗಳನ್ನು ಹಚ್ಚಲು ಮುಲಾಮ್ ಅನ್ನು ಕೊಟ್ಟಿದ್ದರು. ಹಚ್ಚಿದ ಮುಲಾಮು ಕರುವಿನ ಹೊಟ್ಟೆಗೆ ಹೋಗದಂತೆ ನೋಡಿಕೊಳ್ಳಿ ಅಂತಲೂ ಎಚ್ಚರಿಸಿದ್ದರು. ಆದರೆ ಕಡಿಮೆಯಂತು ಆಗಿಲ್ಲ ಅಂತ ಬೇಸರಿಸಿದರು.

ನೀವು ಯಾವ ಹಿಂಡಿಯನ್ನು ಹಾಕುವಿರಿ ಅಂತ ಕೇಳಿದೆ . ಸಂತುಲಿತ ಪಶು ಆಹಾರ ಅಂತಂದರು. ಹಳೆಯ ಅನುಭವದ ನನ್ನ ಮನ ಜಾಗೃತಿಗೊಂಡಿತು. 15 ದಿನ ಹಿಂಡಿಯನ್ನು ಬಿಟ್ಟು ನೋಡಿ. ನೆಲಗಡಲೆ ಹಿಂಡಿ ಇತ್ಯಾದಿಯಾಗಿ ಸಹಜ ಆಹಾರವನ್ನು ಕೊಡಿ ಅಂತ ಸೂಚಿಸಿದೆ.

ಹಿಂಡಿಯ ಪರಿಣಾಮ ಆಗಿರಲಾರದು ಅಂತ ಡಾಕ್ಟರ್ ಗಳು ಹೇಳುವರು ಅಂತ ಅಂದಿದ್ದರು. ಆದರೂ ಬಿಟ್ಟು ನೋಡುವೆ ಅಂತ ಹೇಳಿದ್ದರು.

15 ದಿನದ ನಂತರ ಫೋನಾಯಿಸಿದೆ. ಸದಾಶಿವಣ್ಣ ಪೂರ್ತಿ ಗುಣ ಆಗಿದೆ. ಹಾಲು ಕರೆಯಲು ಸರಿಯಾಗಿ ಬಿಡುತ್ತದೆ. ಆದರೆ ಯಾಕೆ ಡಾಕ್ಟರ್ ಗಳು ಒಬ್ಬರೂ ಇದನ್ನು ಹೇಳಿಲ್ಲ ಅಂತ ಆಶ್ಚರ್ಯ ವ್ಯಕ್ತಪಡಿಸಿದರು.

ಅದು ಗುಣವಾದದ್ದು ಆಶ್ಚರ್ಯ ಏನಿಲ್ಲ. ನೈಜ ಆಹಾರವಲ್ಲದ ಯೂರಿಯಾವನ್ನು ಹಿಂಡಿಯ ಖರ್ಚನ್ನು ಕಡಿಮೆಗೊಳಿಸಲು ಬಳಸುವ ದುಷ್ಟ ಯೋಚನೆಯ ಫಲ ಇದು. ದನಗಳ ಆರೋಗ್ಯವನ್ನು, ಅವುಗಳ ಹಾಲಿನ ಮುಖಾಂತರ ಮನುಷ್ಯನ ಆರೋಗ್ಯವನ್ನು ಹಾಳು ಮಾಡುವ ಇಂತಹ ಮಿಶ್ರಣಗಳನ್ನು ಇನ್ನೂ ಇನ್ನೂ ಶಿಫಾರಸು ಮಾಡುವರಲ್ಲ ಅದು ನಿಜವಾದ ಆಶ್ಚರ್ಯ ಅಂತಂದೆ. ಹತ್ತು ಜನರಿಗೆ ಇನ್ನೂ ಹೇಳೋಣ. ದನಗಳ ಆಹಾರದಲ್ಲಿ ಯೂರಿಯಾಗಳಿಂದ ದೂರವಿರೋಣ ಎಂಬ ವಿಷಯವನ್ನು ಹಂಚೋಣ. ಸಹಜ ಆಹಾರವನ್ನೇ ನೀಡೋಣ.

ಬರಹ :
ಎಪಿ ಸದಾಶಿವ ಮರಿಕೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಎ ಪಿ ಸದಾಶಿವ ಮರಿಕೆ

ಸಾವಯವ ಕೃಷಿಕರು, ಪುತ್ತೂರು ಕಳೆದ ಹಲವಾರು ವರ್ಷಗಳಿಂದ ಸಾವಯವ ಕೃಷಿ, ಗೋಆಧಾರಿತ ಕೃಷಿಯ ಮೂಲಕ ಗಮನ ಸೆಳೆದ ಕೃಷಿಕ ಇವರು.

Published by
ಎ ಪಿ ಸದಾಶಿವ ಮರಿಕೆ

Recent Posts

ಭಾರೀ ಮಳೆ ಹಿನ್ನೆಲೆ – ದಕ್ಷಿಣ ಕನ್ನಡದಲ್ಲಿ ಇಂದು ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಡಳಿತ ಆದೇಶ

ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ ಜುಲೈ 23ರಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ…

20 hours ago

ಹವಾಮಾನ ವರದಿ | 22.07.2026 | ಉತ್ತರ ಕನ್ನಡ, ಉಡುಪಿಯಲ್ಲಿ ಉತ್ತಮ ಮಳೆಯ ಸಾಧ್ಯತೆ; ರಾಜ್ಯದಲ್ಲಿ ಮಳೆ ಚಟುವಟಿಕೆ ಮುಂದುವರಿಕೆ

23.07.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ ಕರಾವಳಿ: ಕಾಸರಗೋಡು, ದಕ್ಷಿಣ…

1 day ago

ಆಮದು ಕಳಪೆ ಅಡಿಕೆ ಮಿಶ್ರಣದ ಎಚ್ಚರಿಕೆ- ಬೆಳೆಗಾರರಿಗೆ ಕ್ಯಾಂಪ್ಕೊ ಮನವಿ

ಆಮದುಗೊಂಡ ಕಳಪೆ ಅಡಿಕೆಯನ್ನು ದೇಶೀಯ ಅಡಿಕೆಯೊಂದಿಗೆ ಮಿಶ್ರಣ ಮಾಡಲಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ…

2 days ago

ಹವಾಮಾನ ವರದಿ | 21-07-2026 | ಕರಾವಳಿ-ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಕೆ, ಭಾರೀ ಮಳೆ ಸಾಧ್ಯತೆ ಕಡಿಮೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಬಿಟ್ಟು ಬಿಟ್ಟು ಸಾಧಾರಣ ಮಳೆ…

2 days ago

ಅಡಿಕೆ ರೋಗ ಸಂಕಷ್ಟಕ್ಕೆ ಸಂಸತ್ತಿನಲ್ಲಿ ಧ್ವನಿ : ನಿಯಮ 377ರಡಿ ಕ್ಯಾ. ಬ್ರಿಜೇಶ್ ಚೌಟ ಒತ್ತಾಯ

ಅಡಿಕೆ ತೋಟಗಳಲ್ಲಿ ಹೆಚ್ಚುತ್ತಿರುವ ಎಲೆ ಚುಕ್ಕೆ, ಹಳದಿ ಎಲೆ ಮತ್ತು ಕೊಳೆ ರೋಗಗಳಿಗೆ…

3 days ago

ದೇಶಾದ್ಯಂತ ಮುಂಗಾರು ಅಬ್ಬರ : ಹಲವು ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ, ಹಿಮಾಲಯ ತಪ್ಪಲಿನಲ್ಲಿ ರೆಡ್ ಅಲರ್ಟ್

ದೇಶಾದ್ಯಂತ ಮುಂಗಾರು ಮತ್ತಷ್ಟು ತೀವ್ರಗೊಂಡಿದ್ದು, ಉತ್ತರ ಭಾರತದ ಹಲವು ಭಾಗಗಳಿಗೆ ರೆಡ್ ಅಲರ್ಟ್…

4 days ago