Advertisement
Opinion

ಏಕೆ ಕೆಲವು ಹಿಂಡಿ ದನಗಳಿಗೆ ಹಿಡಿಸುವುದಿಲ್ಲ…?

Share

ಮೊನ್ನೆ ತಾನೆ ಆತ್ಮೀಯ ಮಿತ್ರರೊಬ್ಬರ ಮನೆಗೆ ಹೋಗಿದ್ದೆ. ಮನೆಯ ಹಟ್ಟಿಯಲ್ಲಿ ದೇವನಿ ಜಾತಿಯ ದನವನ್ನು ಕಂಡು ಬಹಳ ಸಂತೋಷವಾಯಿತು. ನಮ್ಮ ದೇಶಿ ದನಗಳೇ ಹಾಗೆ. ನಿಂತ ನಿಲುವು, ಉಬ್ಬಿದ ಭುಜ, ಓಲಾಡುವ ಗಂಗೆದೊಗಲು ಎಂತವರನ್ನೂ ಆಕರ್ಷಿಸಿಯೇ ಬಿಡುತ್ತದೆ. ಆದರೆ ಆಕರ್ಷಣೆಯುಳ್ಳ ಎಲ್ಲವೂ ಹಾಲು ಕರೆಯಲು ಬಿಡಲೇಬೇಕೆಂದೇನೂ ಇಲ್ಲ. ಹಾಲಿರುವುದು ತನ್ನ ಕರುವಿಗಾಗಿಯೇ ವಿನಃ ನಿಮಗಲ್ಲ ಅಂತ ಎಚ್ಚರಿಸುವುದರಲ್ಲಿ ಬಲು ಮುಂದು. ಹಾಗೆ ಮನೆಯವರಲ್ಲಿ ವಿಚಾರಿಸಿದೆ.

ಹಾಲು ಕರೆಯುವ ಮಟ್ಟಿಗೆ ಬಲು ಸಾಧು ದನ. ಆದರೆ ಬೇಜಾರದ ಸಂಗತಿ ಎಂದರೆ ಅದಕ್ಕೊಂದು ಎಲರ್ಜಿ. ಕೆಚ್ಚಲಿನದ್ದೆಲ್ಲ ಸಿಪ್ಪೆ ಆಗಾಗ ಹೋಗುತ್ತಲೇ ಇರುತ್ತದೆ. ಆಗ ನೋವಾದಾಗ ಸ್ವಲ್ಪ ಉಪದ್ರ ಕೊಡುತ್ತದೆ. ಪಶು ವೈದ್ಯರು ಬಂದು ಅನೇಕ ಇಂಜಕ್ಷನ್ ಗಳನ್ನು ಹಚ್ಚಲು ಮುಲಾಮ್ ಅನ್ನು ಕೊಟ್ಟಿದ್ದರು. ಹಚ್ಚಿದ ಮುಲಾಮು ಕರುವಿನ ಹೊಟ್ಟೆಗೆ ಹೋಗದಂತೆ ನೋಡಿಕೊಳ್ಳಿ ಅಂತಲೂ ಎಚ್ಚರಿಸಿದ್ದರು. ಆದರೆ ಕಡಿಮೆಯಂತು ಆಗಿಲ್ಲ ಅಂತ ಬೇಸರಿಸಿದರು.

Advertisement

ನೀವು ಯಾವ ಹಿಂಡಿಯನ್ನು ಹಾಕುವಿರಿ ಅಂತ ಕೇಳಿದೆ . ಸಂತುಲಿತ ಪಶು ಆಹಾರ ಅಂತಂದರು. ಹಳೆಯ ಅನುಭವದ ನನ್ನ ಮನ ಜಾಗೃತಿಗೊಂಡಿತು. 15 ದಿನ ಹಿಂಡಿಯನ್ನು ಬಿಟ್ಟು ನೋಡಿ. ನೆಲಗಡಲೆ ಹಿಂಡಿ ಇತ್ಯಾದಿಯಾಗಿ ಸಹಜ ಆಹಾರವನ್ನು ಕೊಡಿ ಅಂತ ಸೂಚಿಸಿದೆ.

ಹಿಂಡಿಯ ಪರಿಣಾಮ ಆಗಿರಲಾರದು ಅಂತ ಡಾಕ್ಟರ್ ಗಳು ಹೇಳುವರು ಅಂತ ಅಂದಿದ್ದರು. ಆದರೂ ಬಿಟ್ಟು ನೋಡುವೆ ಅಂತ ಹೇಳಿದ್ದರು.

Advertisement

15 ದಿನದ ನಂತರ ಫೋನಾಯಿಸಿದೆ. ಸದಾಶಿವಣ್ಣ ಪೂರ್ತಿ ಗುಣ ಆಗಿದೆ. ಹಾಲು ಕರೆಯಲು ಸರಿಯಾಗಿ ಬಿಡುತ್ತದೆ. ಆದರೆ ಯಾಕೆ ಡಾಕ್ಟರ್ ಗಳು ಒಬ್ಬರೂ ಇದನ್ನು ಹೇಳಿಲ್ಲ ಅಂತ ಆಶ್ಚರ್ಯ ವ್ಯಕ್ತಪಡಿಸಿದರು.

ಅದು ಗುಣವಾದದ್ದು ಆಶ್ಚರ್ಯ ಏನಿಲ್ಲ. ನೈಜ ಆಹಾರವಲ್ಲದ ಯೂರಿಯಾವನ್ನು ಹಿಂಡಿಯ ಖರ್ಚನ್ನು ಕಡಿಮೆಗೊಳಿಸಲು ಬಳಸುವ ದುಷ್ಟ ಯೋಚನೆಯ ಫಲ ಇದು. ದನಗಳ ಆರೋಗ್ಯವನ್ನು, ಅವುಗಳ ಹಾಲಿನ ಮುಖಾಂತರ ಮನುಷ್ಯನ ಆರೋಗ್ಯವನ್ನು ಹಾಳು ಮಾಡುವ ಇಂತಹ ಮಿಶ್ರಣಗಳನ್ನು ಇನ್ನೂ ಇನ್ನೂ ಶಿಫಾರಸು ಮಾಡುವರಲ್ಲ ಅದು ನಿಜವಾದ ಆಶ್ಚರ್ಯ ಅಂತಂದೆ. ಹತ್ತು ಜನರಿಗೆ ಇನ್ನೂ ಹೇಳೋಣ. ದನಗಳ ಆಹಾರದಲ್ಲಿ ಯೂರಿಯಾಗಳಿಂದ ದೂರವಿರೋಣ ಎಂಬ ವಿಷಯವನ್ನು ಹಂಚೋಣ. ಸಹಜ ಆಹಾರವನ್ನೇ ನೀಡೋಣ.

Advertisement
ಬರಹ :
ಎಪಿ ಸದಾಶಿವ ಮರಿಕೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಎ ಪಿ ಸದಾಶಿವ ಮರಿಕೆ

ಸಾವಯವ ಕೃಷಿಕರು, ಪುತ್ತೂರು ಕಳೆದ ಹಲವಾರು ವರ್ಷಗಳಿಂದ ಸಾವಯವ ಕೃಷಿ, ಗೋಆಧಾರಿತ ಕೃಷಿಯ ಮೂಲಕ ಗಮನ ಸೆಳೆದ ಕೃಷಿಕ ಇವರು.

Published by
ಎ ಪಿ ಸದಾಶಿವ ಮರಿಕೆ

Recent Posts

ಪೆಟ್ರೋಲ್-ಡೀಸೆಲ್ ದರ ಇಳಿಕೆಯಾಗುತ್ತಾ? ಕೇಂದ್ರ ಸಚಿವರ ಸುಳಿವಿನಿಂದ ವಾಹನ ಸವಾರರಿಗೆ ಹೊಸ ನಿರೀಕ್ಷೆ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಳೆದ ಕೆಲವು ದಿನಗಳಿಂದ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ…

15 hours ago

ನಿರಂತರ ಮಳೆ ಹಿನ್ನೆಲೆ ಜುಲೈ 3ರಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲೆ-ಕಾಲೇಜುಗಳಿಗೆ ರಜೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆ ಹಾಗೂ ಭಾರತೀಯ ಹವಾಮಾನ ಇಲಾಖೆಯ…

15 hours ago

ಗ್ರಾಮಸಭೆಗೆ ಜನ ಯಾಕೆ ಬರುತ್ತಿಲ್ಲ? ಗ್ರಾಮಸಭೆಗಳು ಔಪಚಾರಿಕತೆಗೆ ಸೀಮಿತವೇ?

ಜೀವನೋಪಾಯದ ಒತ್ತಡದಿಂದ ಗ್ರಾಮಸಭೆಗೆ 55.5% ಗ್ರಾಮೀಣರು ಹಾಜರಾಗುತ್ತಿಲ್ಲ ಎಂದು ರಾಷ್ಟ್ರೀಯ ಅಧ್ಯಯನ ತಿಳಿಸಿದೆ.…

1 day ago

ದೇಶಾದ್ಯಂತ ಚುರುಕುಗೊಂಡ ನೈಋತ್ಯ ಮುಂಗಾರು – ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆ ಮುಂದುವರಿಕೆ

ದೇಶದ ಬಹುತೇಕ ಭಾಗಗಳಲ್ಲಿ ನೈಋತ್ಯ ಮುಂಗಾರು ಚುರುಕುಗೊಂಡಿದ್ದು, ಕರ್ನಾಟಕ ಕರಾವಳಿ ಸೇರಿದಂತೆ ಹಲವು…

2 days ago